ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ತೊಗಲುಗೊಂಬೆಯಾಟದ ಚಾಣಾಕ್ಷ - ಬೆಳಗಲ್ಲು ವೀರಣ್ಣ - ಮುಂದುವರೆದ ಲೇಖನ

January 25, 2008 - 1:15pm — agilenag
ತೊಗಲುಗೊಂಬೆ

ಬೆಳಗಲ್ಲು ವೀರಣ್ಣನವರ ತಂಡ ಸಮಕಾಲೀನ ಸಮಸ್ಯೆಗಳಿಗೆ ಅಪಾರವಾಗಿ ಸ್ಪಂಧಿಸಿದೆ. ಅದರಲ್ಲಿಯೂ ಸ್ವಾತಂತ್ರ್ಯ ಸಂಗ್ರಾಮ, ಬಾಪು, ಪ್ರವಾದಿ ಬಸವೇಶ್ವರ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ಪ್ರಯೋಗಗಳು ತೊಗಲುಗೊಂಬೆಯಾಟದಲ್ಲಿ ಪ್ರದರ್ಶನಗೊಂಡಿದ್ದು, ಮಹತ್ವದ ಸಾಧನೆಗಳಾಗಿವೆ. ಹಳೆಯ ಸಂಪ್ರದಾಯಬದ್ದ ಕಲಾಪ್ರಕಾರವನ್ನು ಹೇಗೆ ಹೊಸತನಕ್ಕೆ ಹೊಂದಿಸಿಕೊಳ್ಳಬಹುದೆಂಬುದಕ್ಕೆ ಈ ಪ್ರಯೋಗಗಳು ಸಾಕ್ಷಿಯಾಗಿವೆ. ವೀರಣ್ಣನವರು ಸದಾ ಹೊಸ ಪ್ರಯೋಗಗಳತ್ತ ಮುಖ ಮಾಡಿದವರು. ಸಧ್ಯ ಅವರು ಗೌತಮ ಬುದ್ದ ಮತ್ತು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯ ಆಟಕ್ಕೆ ಸಿದ್ದತೆ ನಡೆಸುತ್ತಿದ್ದಾರೆ.

ವೀರಣ್ಣನವರ ಗೊಂಬೆಯಾಟಕ್ಕೆ ಕರೆಗಳು ಬಂದು, ಅವರು ಪ್ರಯೋಗಿಸಿದ ಸ್ಥಳಗಳೇ ಅವರ ಕಲೆಯ ಪ್ರಭುತ್ವವನ್ನು ತೋರಿಸುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ:
ರಾಷ್ಟ್ರಪತಿ ಭವನ, ನವದೆಹಲಿ, ಗಾಂಧಿಸ್ಮೃತಿ ಮತ್ತು ಗಾಂಧಿ ದರ್ಶನ, ದೆಹಲಿ,
ಇಂದಿರಾಗಾಂದಿ ರಾಷ್ಟ್ರೀಯ ಕಲಾಕೇಂದ್ರ, ನವದೆಹಲಿ, ಚಂಡೀಗಡ ವಿಶ್ವವಿದ್ಯಾಲಯ, ಚಂಡೀಗಡ, ಪಂಜಾಬ್,
ಅಪ್ನಾ ಉತ್ಸವ್, ನವದೆಹಲಿ, ರಾಷ್ಟ್ರೀಯ ಸಾಂಸ್ಕೃತಿಕ ಹಬ್ಬ, ನಾಗಪುರ, ಮಹಾರಾಷ್ಟ್ರ,
ಭಾರತ ಉತ್ಸವ್, ಕಾಜಿಕೋಡ್, ಕೇರಳ, ಫೇತೆ ಡೇ, ಪಾಂಡಿಚೆರಿ,
ದಕ್ಷಿಣೋತ್ಸವಂ, ತಿರುವನಂತಪುರ, ಕೇರಳ, ಸಾಂಸ್ಕೃತಿಕ ತಿರುಗಾಟ, ಬಿಹಾರ ರಾಜ್ಯಾದ್ಯಂತ,
ಸಾಂಸ್ಕೃತಿಕ ತಿರುಗಾಟ, ಕೇರಳ ರಾಜ್ಯಾದ್ಯಂತ, ಪ್ರವಾದಿ ಬಸವೇಶ್ವರ, ಕರ್ನಾಟಕ ರಾಜ್ಯಾದ್ಯಂತ,
ಬಾಪು (ಹಿಂದಿ) ದೂರದರ್ಶನದಲ್ಲಿ ಬಿತ್ತರ, ದೆಹಲಿ, ಪಂಚವಟಿ, ದೂರದರ್ಶನದಲ್ಲಿ ಬಿತ್ತರ, ನವದೆಹಲಿ,
ಭಾರತ ಸ್ವಾತಂತ್ರ್ಯ ಸಂಗ್ರಾಮ, ದೂರದರ್ಶನ ಬಿತ್ತರ, ಬೆಂಗಳೂರು,
ಗಾಂಧೀಜಿ (ಕನ್ನಡ), ದೂರದರ್ಶನದಲ್ಲಿ ಬಿತ್ತರ, ಬೆಂಗಳೂರು

ತಮ್ಮ ಕಲಾಜೀವನದ ಸಾಧನೆಗಾಗಿ ವೀರಣ್ಣನವರಿಗೆ ರಾಜ್ಯ, ರಾಷ್ಟ್ರೀಯ ಮಟ್ಟದ ಹಲವಾರು ಪುರಸ್ಕಾರಗಳು, ಲೇಖನ ಗೌರವ, ಅಭಿಮಾನದ ಮಾತುಗಳು, ಮೆಚ್ಚುಗೆ ದೊರಕಿವೆ. ಅವರ ಪ್ರಯೋಗಗಳು ನಡೆದಲ್ಲೆಲ್ಲಾ "ಎಂದೂ ಮರೆಯಲಾಗದ ಕಲಾವಿದರು" ಎನಿಸಿಕೊಂಡಿರುವುದು ಅವರ ವೈಶಿಷ್ಟ್ಯ.

ಅವರು ಗಳಿಸಿರುವ ಪ್ರಮುಖ ಪ್ರಶಸ್ತಿಗಳೆಂದರೆ:
೧. ರಾಜ್ಯೋತ್ಸವ ಪ್ರಶಸ್ತಿ - ೧೯೯೨ ಕರ್ನಾಟಕ ಸರ್ಕಾರ, ೨. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ೧೯೯೧ರಲ್ಲಿ, ಕರ್ನಾಟಕ ಸರ್ಕಾರ, ೩. ವಿಶೇಷ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಕರ್ನಾಟಕ ಸರ್ಕಾರ, ೪. ಪ್ರಶಸ್ತಿ ಪತ್ರಗಳು - ನೂರಾರು ಸರಕಾರಿ ಮತ್ತು ಖಾಸಗಿ ಸಾಂಸ್ಕೃತಿಕ ಸಂಸ್ಥೆಗಳಿಂದ.

ಎರಡು ಅವಧಿಗೆ ಕರ್ನಾಟಕ ಜಾನಪದ ಮತ್ತು ನಾಟಕ ಅಕಾಡೆಮಿಯ ಸದಸ್ಯರಾಗಿದ್ದ ಗೌರವವೂ ವೀರಣ್ಣನವರಿಗೆ ಸಲ್ಲುತ್ತದೆ.

ವೀರಣ್ಣನವರಿಗೆ ಪತ್ರಿಕಾ ರಂಗ ಅಪಾರವಾದ ಲೇಖನ ಗೌರವವನ್ನೂ ಸಲ್ಲಿಸಿದೆ. ೧೯೯೦ರಿಂದಲೂ ಅವರ ಬಗ್ಗೆ ಬರೆಯದ ಪತ್ರಿಕೆಗಳೇ ಇಲ್ಲ. ಅವರ ಸಂದರ್ಶನವನ್ನು ಪ್ರಕಟಿಸಿರುವ ಪ್ರಮುಖ ಪತ್ರಿಕೆಗಳೆಂದರೆ:
ಪ್ರಜಾವಾಣಿ, ಕನ್ನಡ ಪ್ರಭ, ಉದಯವಾಣಿ, ಸಂಯುಕ್ತ ಕರ್ನಾಟಕ, ಈ ನಾಡು (ತೆಲುಗು), ದೈನಿಕ ಜಾಗರಣ್ (ಹಿಂದಿ), ಜನಸತ್ತಾ (ಹಿಂದಿ), ದಿ ಹಿಂದು (ಇಂಗ್ಲಿಷ್), ದಿ ಟೈಮ್ಸ್ ಆಫ್ ಇಂಡಿಯಾ (ಇಂಗ್ಲಿಷ್), ದಿ ಸ್ಟೇಟ್ಸ್ ಮನ್ (ಇಂಗ್ಲಿಷ್), ದಿ ಇಂಡಿಯನ್ ಎಕ್ಸ್ ಪ್ರೆಸ್ (ಇಂಗ್ಲಿಷ್), ಡೆಕ್ಕನ್ ಹೆರಾಲ್ಡ್ (ಇಂಗ್ಲಿಷ್), ದಿ ಟ್ರೈಬ್ಯೂನಲ್ (ಇಂಗ್ಲಿಷ್), ತರಂಗ ವಾರ ಪತ್ರಿಕೆ (ಕನ್ನಡ), ಸುಧಾ ವಾರ ಪತ್ರಿಕೆ (ಕನ್ನಡ), ಅಭಿಮತ - ದೆಹಲಿ ಕನ್ನಡ ಮಾಸ ಪತ್ರಿಕೆ.

ಅನಕ್ಶರಸ್ಥ ಕಲಾಕುತುಂಬದಿಂದ ಬಂದಿರುವ ಈ ಹುಟ್ಟು ಕಲಾವಿದರು ತಮ್ಮ ಸಾಧನೆಗಳ ದಾಖಲೆಗಳನ್ನು ಇಟ್ಟದ್ದು ಕಡಿಮೆ. ಕ್ರೀಯಾಶೀಲರಾಗಿ ಪ್ರಯೊಗಿಸಿದ್ದು ಹೇರಳ. ಪ್ರತಿ ಪ್ರಯೋಗದಲ್ಲಿ ಹೊಸತನ ಮೆರೆಯುವ ಈ ಕಲಾವಿದರಿಗೆ ಪರಿಚಯ ವಿವರದಲ್ಲಿ ಹಿಡಿಸಲಾರದಷ್ಟು ಪ್ರತಿಭಾ ಸಂಪತ್ತಿದೆ. ಜೀವನದುದ್ದಕ್ಕೂ ನಾಟಕ, ಬಯಲಾಟ ಮತ್ತು ತೊಗಲುಗೊಂಬೆಯಾಟ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಕಲಾ ನೈಪುಣ್ಯತೆ ಒಂದು ಸಂಸ್ಥೆಯ ಕ್ರಿಯಾಶೀಲತೆಯನ್ನು ಸರಿಗಟ್ಟಬಲ್ಲುದು. ತನ್ನ ಕುಟುಂಬದೊಂದಿಗೆ ಮೇಳ ಕಟ್ಟಿ ಮೆರೆಯುತ್ತಿರುವ ವೀರಣ್ಣನವರ ಸಾಧನೆ ಒಂದು ರಾಷ್ಟ್ರೀಯ ದಾಖಲೆ ಎಂದರೆ ಅತಿಶಯೋಕ್ತಿಯಲ್ಲ.

ಎ.ವಿ.ನಾಗರಾಜು
ಅಗಿಲೆನಾಗ್[ಎಟ್]ರಿಡಿಫ್ ಮೈಲ್.ಕಾಂ

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
~.~
  • Login or register to post comments
  • 215 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೆಳಗಲ್ಲು ವೀರಣ್ಣನವರ ತಲೆಗೊಂದು ಹೊಸ ಗರಿ ಮೂಡಿದೆ
  • ತೊಗಲುಗೊಂಬೆಯಾಟದ ಚಾಣಾಕ್ಷ - ಬೆಳಗಲ್ಲು ವೀರಣ್ಣ
  • ಬೆಳಗಲ್ ವೀರಣ್ಣನವರ ಮಕುಟಕ್ಕಿನ್ನೊಂದು ಗರಿ!!
  • ನಾಟಕ ಅಕಾಡೆಮಿ ಪ್ರಶಸ್ತಿಗಳು
  • ’ಅನಿವಾಸಿ’ - ಈ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Syndicate content

ಲೇಖಕರು

agilenag's picture

ಪೂರ್ಣ ಹೆಸರು
A.V. Nagaraju

ಪರಿಚಯ

I am a retired (VRS) Bank Officer. I have a flair for writing in Kannada as well as English.

Recently, I along with the help of my family members released a book on Family Tree of our family, commencing from 1700 AD. The book was acclaimed by many well known historians and writers like Prof. Suryanatha Kamath, Horeyala Doreswamy and Babu Krishnamurthy. Late Mathighatta Krishnamurthy who has given foreword to the book has called it as a unique contribution to Kannada literary world.

Another achievement is renovation of a 1200 year old Udbhava Kalleshwara Temple at Belavadi, Chikkamagalur Dist, Karnataka and that too was appreciated many luminaries like Sri Gowrishankar, Administrator, Shringeri Sharada and the like.

I am working presently on the Editorial Board of GEJJEHEJJE Monthly Theatre Magazine.

I also undertake translation of legal, technical and literary works from Kannada to English and vice-versa.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಯಾರ ಮುಡಿಗೆ ಸೌಂದರ್ಯ ಕಿರೀಟ...
  • ರಸ್ತೆ ನೀರಿನಿಂದ ಮಸ್ತ್ ಬೆಳೆ
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ‘ಇರುವೆ’ (ನೀ ಎಲ್ಲೆಲ್ಲೂ ಇರುವೆ)ಗಳು ಅಂತರ್ಜಲ ಮಟ್ಟ ಹೆಚ್ಚಿಸುವ ‘ಬ್ಯಾಂಕರ್’ಗಳು!
  • ‘ಸಂತೆ’ ಎಂಬ ವ್ಯಾವಹಾರಿಕ ಚೌಕಾಶಿಯ ‘ನಾಟಕ’!

ಇತ್ತೀಚಿನ ಪ್ರತಿಕ್ರಿಯೆಗಳು

  • sathishcv
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 8:40pm
  • ಮನಹ್ಪಠಲ
    ಉ: ಎಂ ಪಿ ಶಂಕರ್ - ಟಾಟಾ
    July 20, 2008 - 5:47pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:45pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:32pm
  • rasheedgm
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 4:49pm
  • anil.ramesh
    ಉ: ಧಾರವಾಡದ ನವಿಲೂರ ಕೆರೆಯಲ್ಲಿ ಆಹಾರ ಹೆಕ್ಕುತ್ತಿರುವ ಶಾಪಗ್ರಸ್ಥ ! ಟಿಟ್ಟಿಭ ಹಕ್ಕಿ ಕುಟುಂಬ. ಚಿತ್ರ: ಹರ್ಷವರ್ಧನ ಶೀಲವಂತ.
    July 20, 2008 - 11:49am
  • ASHOKKUMAR
    ಉ: ನನ್ನಜ್ಜನ ಬೆಚ್ಚಗಿನ ನೆನಪುಗಳು
    July 20, 2008 - 11:32am
  • Ananth.R
    ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
    July 20, 2008 - 11:22am
  • ರೇಖಾ
    ಉ: ಒ೦ದು ಬೆಚ್ಚನೆಯ ನೆನಪು..
    July 20, 2008 - 9:45am
  • Jayalaxmi.Patil
    ಉ: ಕತ್ತಲೆಯಿಂದ ಹೊರ ಬಂದ ಖಾದಿ
    July 19, 2008 - 11:01pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 41 ಅತಿಥಿಗಳು ಆನ್ಲೈನ್ ಇರುವರು.


ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? ।
ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।।
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator