ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಮಹಾತ್ಮಾ ಗಾಂಧಿಯವರ ಜ್ಞಾಪಕಾರ್ಥ

January 30, 2008 - 3:39am — thewiseant

ಮಹಾತ್ಮಾ ಗಾಂಧಿಯವರ ಜ್ಞಾಪಕಾರ್ಥ

 

"ಹೇ ರಾಂ" ಎನ್ನುತ್ತಾ ರಾಮನೆಡೆ ಹೊರಟ "ರಾಮರಾಜ್ಯ"ದ ಕನಸು ಕಂಡ ಬಾಪು

"ನಿಜವಾದ ಅರ್ಥದಲ್ಲಿ ಆತ ಒಬ್ಬ ರಾಷ್ಟ್ರ ಪಿತನಾಗಿದ್ದ. ಒಬ್ಬ ಹುಚ್ಚ ಆತನನ್ನು ಕೊಂದ. ಜ್ಯೋತಿ ನಂದಿದುಕ್ಕಾಗಿ ಲಕ್ಷಾಂತರ ಜನ ದುಃಖಿಸುತ್ತಿದ್ದಾರೆ. ಈ ನಾಡಿನಲ್ಲಿ ಬೆಳಗಿದ ಜ್ಯೋತಿ ಸಾಧಾರಣ ಜ್ಯೋತಿಯಲ್ಲ. ಇನ್ನು ಸಹಸ್ರ ವರ್ಷಕಾಲ ಅದನ್ನು ಈ ನಾಡು, ಈ ವಿಶ್ವ ಕಾಣುತ್ತಿರುತ್ತದೆ "-1948 ರ ಜನವರಿ 30 ರಂದು ಹೊಸ ದಿಲ್ಲಿಯಲ್ಲಿ ಮಹಾತ್ಮಾ ಗಾಂಧಿಯವರ ಹತ್ಯೆಯಾದ ವೇಳೆಯಲ್ಲಿ ಪ್ರಧಾನಮಂತ್ರಿ ಜವಹರಲಾಲ ನೆಹರೂರವರು ಹೇಳಿದ ಮಾತು.

ಐದು ತಿಂಗಳ ಹಿಂದೆಯಷ್ಟೇ ಭಾರತ ಶಾಂತಿಯುತವಾಗಿ ತನ್ನ ಸ್ವಾತಂತ್ರ್ಯವನ್ನು ಗಳಿಸಿಕೊಂಡಿತ್ತು. 78 ವರ್ಷದ ಗಾಂಧೀಜಿಯ ಕಾರ್ಯ ಕೈಗೂಡಿತ್ತು. ತನ್ನ ಕಾಲ ಸಮೀಪಿಸಿತ್ತೆಂದು ಅವರಿಗೆ ತಿಳಿದಿತ್ತು. ಆ ದುರಂತ ನಡೆದ ದಿನ ಬೆಳಿಗ್ಗೆ ಅವರು ತಮ್ಮ ಮೊಮ್ಮಗಳಿಗೆ "ಅಭಾ, ಎಲ್ಲ ಮುಖ್ಯ ಪತ್ರಗಳನ್ನು ತಂದುಕೊಡು. ಎಲ್ಲಕ್ಕೂ ನಾನು ಇಂದೇ ಉತ್ತರ ಬೇರೆಯಬೇಕು. ನಾಳೆ ಸಾಧ್ಯವಾಗದಿರಬಹುದು." ಎಂದರು. ಅವರ ಬರವಣಿಗೆಗಳಲ್ಲಿ ಅನೇಕ ಕಡೆ ತಮ್ಮ ಅಂತಿಮ ವಿಧಿಯ ಬಗ್ಗೆ ಸೂಚನೆಗಳನ್ನು ಕೊಟ್ಟಿದ್ದಾರೆ.

ಉಪವಾಸದಿಂದ ಬಡಕಲಾಗಿ ಸವೆದುಹೋಗಿದ್ದ ಶರೀರಕ್ಕೆ ಮೂರು ಗುಂಡುಗಳು ಹೊಕ್ಕು ಆ ಮಹಾತ್ಮ ನೆಲಕ್ಕೆ ಒರಗುತ್ತಿದ್ದಂತೆ ತಮ್ಮ ಕೈಗಳನ್ನು ಮೇಲೆತ್ತಿ ಎಲ್ಲರಿಂದಲೂ ಬಿಳ್ಕೊಂಡು ಮೌನವಾಗಿ ತಮ್ಮ ಕ್ಷಮೆಯನ್ನು ಸೂಚಿಸಿದರು. ತಮ್ಮ ಬಾಳಿನ ಎಲ್ಲಾ ರೀತಿಗಳಲ್ಲಿಯೂ ಮುಗ್ಧ ಕಲೆಗಾರರಾಗಿದ್ದ ಗಾಂಧೀಜಿ ತಮ್ಮ ಮರಣದ ಸಮಯದಲ್ಲಿ ಮಹಾನ್ ಕಲೆಗಾರರಾಗಿ ಕಂಡರು. ತಮ್ಮ ನಿಸ್ವಾರ್ಥ ಜೀವನದ ಎಲ್ಲಾ ತ್ಯಾಗಗಳೂ ಆ ಅಂತಿಮ ಪ್ರೇಮ ಭಾವನೆಯನ್ನು ಸಾಧ್ಯವಾಗಿಸಿದವು.

"ಮುಂದಿನ ತಲೆಮಾರಿನವರು, ರಕ್ತ ಮಾಂಸಗಳಿಂದ ಕೂಡಿದ ಇಂಥಹ ವ್ಯಕ್ತಿಯೊಬ್ಬ ಈ ಭೂಮಿಯಲ್ಲಿ ಜನಿಸಿದನೆಂದು ನಂಬುವುದೇ ಕಷ್ಟವಾಗಬಹುದು" ಎಂದು ಆಲ್ಬರ್ಟ್ ಐನ್ಸ್ಟೈನ್ ಹೊಗಳಿ ಬರೆದರು.

"ಗಾಂದಿಯವರ ಹತ್ಯೆ ಇಲ್ಲಿ ಎಲ್ಲರಿಗೂ ಶೋಕವನ್ನುಂಟು ಮಾಡಿದೆ. ಸದ್ಗುಣ ಸಂಪನ್ನರಾದ ಕ್ರೈಸ್ತ ಧರ್ಮದೂತರಿಗೆ ನಡೆಸುವಂತೆ ಗಾಂಧಿಯವರಿಗೂ ಸಂತಾಪವನ್ನು ವ್ಯಕ್ತಪಡಿಸಲಾಯಿತು." ಎಂದು ರೋಮಿನ ಪೋಪ್ ಗುರುವಿನ ಪತ್ರ ಹೇಳಿತು.

ಒಂದು ನಿರ್ಧಿಷ್ಟ ಸತ್ಯವನ್ನು ಸಾಧಿಸಲು ಭೂಮಿಗಿಳಿದು ಬರುವ ಮಹಾನ್ ವ್ಯಕ್ತಿಗಳ ಜೀವನ ಸಾಂಕೇತಿಕ ಅರ್ಥದಿಂದ ಕೂಡಿರುತ್ತದೆ. ಭಾರತದ ಐಕ್ಯತೆಯನ್ನು ಸಾಧಿಸುವ ದಿಶೆಯಲ್ಲಿ ಗಾಂಧೀಜಿಯವರ ನಾಟಕ ಸದೃಶ ಮರಣವು ಅನೈಕ್ಯದಿಂದ ಹರಿದು ಹಂಚಿ ಹೋಗುತ್ತಿರುವ ಪ್ರಪಂಚದ ಎಲ್ಲಾ ಭೂಖಂಡಗಳಿಗೆ ಅವರ ಸಂದೇಶವನ್ನು ಪ್ರಮುಖವಾಗಿ ಎತ್ತಿ ತೋರಿಸಿದೆ. ಭವಿಷ್ಯವಾಣಿಯಲ್ಲಿ ಅವರ ಸಂದೇಶ ಹೀಗಿದೆ: "ಅಹಿಂಸೆ ಎಂಬುದು ಮಾನವರಲ್ಲಿ ಆಚರಣೆಗೆ ಬಂದಿದೆ. ಅದು ವಿಶ್ವ ಶಾಂತಿಯ ಅವಿರ್ಭಾವದ ಮುನ್ಸೂಚಕ."

 

-ಪರಮಹಂಸ ಯೋಗಾನಂದರ "ಯೋಗಿಯ ಆತ್ಮ ಕತೆ (Autobiography of a Yogi) "ಯಿಂದ ಉದ್ಧೃತ

  • ಪ್ರಚಲಿತ
~.~
  • Login or register to post comments
  • 243 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಝೆನ ಕಥೆ ೩೬: ಛತ್ರ
  • ಮೊದಲ ಅನುಭವ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
  • ವನ್ಯ ಜೀವಿ ಚಲನ ಚಿತ್ರ --- ಅರಣ್ಯಮ್
  • ಬೈಟೊ ಕಾಫಿ !!! - ೧
Syndicate content

ಲೇಖಕರು

thewiseant's picture

ಪೂರ್ಣ ಹೆಸರು
ಎನ್. ಅಂಜನ್ ಕುಮಾರ್

ಪರಿಚಯ

ಯೋಗ, ಆಧ್ಯಾತ್ಮ , ಗಾಂಧೀವಾದ, ಓದು, ಬರವಣಿಗೆ, ಮಕ್ಕಳ ಸಾಹಿತ್ಯ , ಇಂಟರ್‍ನೆಟ್ ಮುಂತಾದುವು ನನ್ನ ಆಸಕ್ತಿಯ ವಿಷಯಗಳು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು
  • ಅಭಿಮಾನಿ
  • ಬಾರೋ ಸಾಧನಕೇರಿಗೆ...
  • ಹಿಂದಿಚಲನಚಿತ್ರ, ’ಮಧುಮತಿ’ ಯನ್ನು ಗೆಳೆಯರಜೊತೆ ನೋಡುವ ಸಂದರ್ಭ ಬಂತು. ವಾ...ಎಂತಹ ಮಧುರ ಚಿತ್ರೀಕರಣ ! ಈಗ ನೋಡಿದಂತಿದೆ !

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 24, 2008 - 11:18am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 55 ಅತಿಥಿಗಳು ಆನ್ಲೈನ್ ಇರುವರು.


ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು.

— ಉಪನಿಷತ್ತುಗಳು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator