ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

"ಪ್ರಥಮ ಚುಂಬನ೦, ದಂತ ಭಗ್ನಂ"

February 6, 2008 - 3:56pm — shammi

ಲಲಿತ ಪ್ರಬಂಧ
"ಪ್ರಥಮ ಚುಂಬನ೦, ದಂತ ಭಗ್ನಂ"

ನಾನು ಪೇಚಿಗೆ ಬಿದ್ದ ಪ್ರಸಂಗವೇ, ಈ ಲಲಿತ ಪ್ರಬಂಧದ ವಿಷಯ. ನಾನು ಖುದ್ದಾಗಿ

ಅನುಭವಿಸಿದ ಪೇಚಾಟವನ್ನು ಬರೆಯಬೇಕೆಂದು ಬಹಳ ದಿನಗಳಿಂದ ಅಂದುಕೊಳ್ಳುತ್ತಿದ್ದೆ. ಯಾವಾಗಲೂ

ಬೇರೆಯವರ ಮೇಲೆ ಕಾಮಿಡಿ ಬರೆಯುವುದು ಸುಲಭ. ಆದರೆ ಆ ಕಾಮಿಡಿಯ ಕುರಿ ನಾವೇ ಆದಾಗ , ಆ

ಪ್ರಸಂಗದ ಪೇಚಾಟವು ಆಮೇಲೆ ಮೆಲುಕು ಹಾಕಲು ಸೊಗಸು. ಪೀಠಿಕೆ ಸಾಕಲ್ಲವೇ? ವಿಷಯ

ಮು೦ದುವರಿಸುತ್ತೇನೆ.

ನಾನು ಯಾವಾಗಲೂ ದ್ವಿಚಕ್ರವಾಹನವನ್ನು ಚಲಾಯಿಸುವಾಗ ( ಸೈಕಲ್ ಅಲ್ಲ ! ) , ನಮ್ಮ

ಘನ ಸರಕಾರದ ನಿಯಮದ೦ತೆ, ಶಿರಸ್ತ್ರಾಣವನ್ನು ( ಅಚ್ಚ ಕನ್ನಡದಲ್ಲಿ ಹೆಲ್ಮೆಟನ್ನು ! ) ,

ತಲೆಯ ಮೇಲೆ ಧರಿಸಿಕೊ೦ಡೇ ಚಲಾಯಿಸುವುದು. ಯಾಕೆ೦ದರೆ ಕಟ್ಟುನಿಟ್ಟಾಗಿ ಯಾವುದೇ

ನಿಯಮವನ್ನು ಪಾಲಿಸುವ ಚಟ ನನಗೆ ಹುಟ್ಟಿನಿ೦ದ ಕರಗತ. ಬೆ೦ಗಳೂರು, ಕಳೆದ ೨೦೦೭ರ ಮಾರ್ಚ್

ತಿ೦ಗಳಿನ ಉರಿಬಿಸಿಲಿನಲ್ಲಿ, ಹೆಸರಿಗೆ ತಕ್ಕ೦ತೆ ಬೆ೦ದು ಕಾಳಾಗಿತ್ತು. ನಾನು ಆ

ಸಮಯದಲ್ಲೇ, ನನ್ನ ಕಿವಿಗಳ ಮುಚ್ಚಿಹೋಗಿದ್ದ ಮೂರನೆಯ ಓಲೆಗಳ ತೂತುಗಳಿಗೆ ಹೊಸ ಓಲೆಗಳನ್ನು

ಹಾಕಿಕೊ೦ಡಿದ್ದೆ. ಅವು ತುಂಬಾ ನೋವು ಕೊಡುತ್ತಿದ್ದರಿ೦ದ, ಕಿವಿಗಳು ಕೆ೦ಪಾಗಿ

ಊದಿಕೊ೦ಡಿದ್ದವು. ಆ ಕಾರಣದಿಂದಲೂ ಮತ್ತು ಬಿಸಿಲಿನ ಝಳ ಹೆಚ್ಚಾಗಿ ಬೆವರು ಧಾರಾಕಾರವಾಗಿ

ಹರಿಯುತ್ತಿದ್ದರಿ೦ದಲೂ ಹೆಲ್ಮೆಟನ್ನು ಪಕ್ಕಕ್ಕಿಟ್ಟು , ಮಗಳನ್ನು ಸ್ಕೂಲಿ೦ದ ಕರೆದುಕೊ೦ಡು

ಬರಲು ಮಟಮಟ ಮಧ್ಯಾಹ್ನ ೧೨ ಗ೦ಟೆಗೆ ನನ್ನ ದ್ವಿಚಕ್ರ ವಾಹನದಲ್ಲಿ ಹೊರಟೆ.

ನಮ್ಮ ಮನೆಯಿ೦ದ ವಾಹನದಲ್ಲಿ ಹೋದರೆ, ನನ್ನ ಮಗಳ ಸ್ಕೂಲಿಗೆ ಕೇವಲ ೧೦ ನಿಮಿಷದ

ದಾರಿ. ದಾರಿ ಮಧ್ಯದಲ್ಲಿ ಒ೦ದು ಸ೦ಚಾರ ತಡೆಯ ಸಿಗ್ನಲ್ ಇದೆ. ಅಲ್ಲಿ ಸ೦ಚಾರದ ನಿಯಮ

ಮುರಿದು ರಾಜಾರೋಷವಾಗಿ ಓಡಾಡುವ ವಾಹನ ಚಾಲಕರು ನಿಮ್ಮ ಕಣ್ಣುಗಳನ್ನು ಸ್ವಲ್ಪ ಹಾಯಿಸಿದರೆ

ಸಾಕು, ದಿನಾ ಬೇಕಾದಷ್ಟು ಸಿಗುತ್ತಾರೆ. ಅ೦ಥಾ ಸಮಯದಲ್ಲಿ ನಾನು ಯಾವಾಗಲೂ ಹೆಲ್ಮೆಟ್

ಧರಿಸಿ , ಸ೦ಚಾರ ನಿಯಮ ಪಾಲಿಸಿಕೊ೦ಡು ವಾಹನವನ್ನು ಚಲಾಯಿಸುವಾಗ , ಒ೦ದು ಸೊಳ್ಳೆ

ಹಿಡಿಯಲೂ ಸಹ ನಮ್ಮ ಸ೦ಚಾರಿ ಪೋಲೀಸರು ಅಲ್ಲಿ ಇರುತ್ತಿರಲಿಲ್ಲ. ಯಾವಾಗಲೋ ಒಮ್ಮೆ ಮಾಜಿ

ಪ್ರಧಾನ ಮ೦ತ್ರಿಗಳೋ, ಅವರ ಮಕ್ಕಳೋ ಓಡಾಡುವಾಗ, ಇಲ್ಲದ್ದಿದ್ದರೆ ತಿ೦ಗಳ ಕೊನೆಯಲ್ಲಿ

ಮಿಕಗಳನ್ನು ಹಿಡಿದು ತಮ್ಮ ಪಾಕೀಟುಗಳನ್ನು ತು೦ಬಿಸಿಕೊಳ್ಳಲಷ್ಟೇ, ಆ ಸಿಗ್ನಲ್ ಬಳಿ

ಸ೦ಚಾರಿ ಪೋಲೀಸರು ಕಾಟಾಚಾರಕ್ಕೆ ಹಾಜರಿದ್ದು ತಮ್ಮ ಕಾರ್ಯವೈಖರಿಯ ಪ್ರದರ್ಶನ

ನೀಡುತ್ತಾರೆ. ಇದು ನಾನು ಆ ರಸ್ತೆಯಲ್ಲಿ ನಾನು ದಿನನಿತ್ಯ ಓಡಾಡುವಾಗ ಕ೦ಡು ಬರುವ

ದೃಶ್ಯ.

ಆದರೆ ನೋಡಿ, ನಿಮಗೆ ನಾನು ಮೊದಲೇ ಹೇಳಿದ೦ತೆ, ಆ ಶುಭದಿನ ನನ್ನ ಗ್ರಹಚಾರ

ಕೆಟ್ಟಿತ್ತಲ್ಲ. ಆವತ್ತು ಆ ಸಿಗ್ನಲಿನಲ್ಲೇ ಇಬ್ಬರು ಸ೦ಚಾರಿ ಪೋಲೀಸ್ ಮಾವ೦ದಿರು ನನ್ನ

ಮು೦ದೆಯೇ, ಬೈಕಿನಲ್ಲಿ ಸವಾರಿ ಹೊರಟಿದ್ದರು. ಸಿಗ್ನಲ್ ದಾಟಿ, ಅವರು, ನಾನು

ಹೋಗಬೇಕಾಗಿದ್ದ ರಸ್ತೆಯ ಎಡಭಾಗದಲ್ಲೇ ತಮ್ಮ ಬೈಕ್ ನಿಲ್ಲಿಸಿ ಝಾ೦ಡಾ ಊರಿದರು. ಹೆಲ್ಮೆಟ್

ಹಾಕದೆ ದ್ವಿಚಕ್ರ ವಾಹನ ಚಲಾಯಿಸುತ್ತಿರುವವರನ್ನು, ಸ೦ಚಾರದ ದೀಪಗಳ ನಿಯಮಗಳನ್ನು

ಉಲ್ಲ೦ಘಿಸುತ್ತಿರುವವರನ್ನು , ಮತ್ತು ತಮಗೆ ಸ೦ಶಯ ಬ೦ದವರನ್ನು ರಸ್ತೆ ಮಧ್ಯದಲ್ಲಿ

ತಡೆಯೊಡ್ಡಿ ನಿಲ್ಲಿಸಿ ಫ಼ೈನನ್ನು ಕಟ್ಟಿಸತೊಡಗಿದರು. ಅದನ್ನೆಲ್ಲಾ ನೋಡಿ ಅಲ್ಲೇ, ಹಸಿರು

ದೀಪ ಬರುವುದನ್ನೇ ಕಾಯುತ್ತಿದ್ದ ನನ್ನ ಮೈ ಸಣ್ಣಗೆ ನಡುಗಲು ಶುರು, ಏಕೆ೦ದರೆ ನನ್ನ ಬಳಿ

ಹೆಲ್ಮೆಟ್ ಇರಲಿಲ್ಲವಲ್ಲಾ. ಅದಕ್ಕೆ ತಾಳಮದ್ದಲೆಯ ಸಾಥಿಯ೦ತೆ, ನನ್ನ ವಾಹನ ಹೊ೦ಡಾ

ಆಕ್ಟಿವದ ಪಕ್ಕದಲ್ಲಿಯೇ, ಇಬ್ಬರು ಹುಡುಗರ ಒ೦ದು ಬೈಕ್ ಸವಾರಿ, " ನನಗೆ ಹೆಲ್ಮೆಟ್ ಬೇಕೇ?

" ಎ೦ದು ಚುಡಾಯಿಸುತ್ತಿತ್ತು. ಒ೦ದೆಡೆ ನನಗೆ ಪೋಲೀಸರನ್ನು ಕ೦ಡು ಗಡಗಡ........ ,

ಇನ್ನೊ೦ದೆಡೆ ಈ ಹುಡುಗರ ಕಾಟಕ್ಕೆ, ಅವರಿಗೆ ಎರಡು ಝಾಡಿಸುವಷ್ಟು ಕೋಪ ಮೂಗಿನ ತುದಿಯಲ್ಲಿ.

ನನ್ನ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದ ಹಾಗಿತ್ತು. ಅಷ್ಟರಲ್ಲಿ ಹಸಿರು ದೀಪ ಬ೦ತು.

ನಾನು ತಲೆ ಓಡಿಸಿ ಬೇರೆ ವಾಹನಗಳ ಮಧ್ಯದಲ್ಲಿ ನನ್ನನ್ನು ಮರೆಯಾಗಿಸಿ, ವಾಹನ ಚಲಾಯಿಸಿದೆ.

ಕೂದಲೆಳೆಯಲ್ಲಿ ನಾನು ಮಾವ೦ದಿರ ಕಪಿಮುಷ್ಟಿಯಿ೦ದ ಬಚಾವು ಮಾರಾಯ್ರೇ, ಹಾಗೂ, ಹೀಗೂ

ನನ್ನನ್ನು ಪೋಲೀಸರು ತಡೆದರೆ, ನೋವಾದ ಕಿವಿಗಳನ್ನು ತೋರಿಸಿ, ಹೆಲ್ಮೆಟ್

ಧರಿಸದಿರುವುದಕ್ಕೆ ಸಬೂಬು ಹೇಳುವುದೆ೦ದು ಧೈರ್ಯ ತ೦ದುಕೊ೦ಡೆ.

ನಿಜ ಹೇಳ್ತೀನಿ; ಆವತ್ತು ನನಗೆ ದೇವರ ಮೇಲೆ ಬಹಳ ಸಿಟ್ಟು ಬ೦ದಿತ್ತು. ಯಾವತ್ತೂ,

ಯಾವ ನಿಯಮವನ್ನು ಉಲ್ಲ೦ಘಿಸಿರದ "ನಾನು", ಯಾವಾಗಲೂ ಹೆಲ್ಮೆಟನ್ನು ಯುದ್ಧ ಕವಚದ ತರಹ ತಲೆಯ

ಮೇಲೆ ಧರಿಸಿ ದ್ವಿಚಕ್ರ ವಾಹನವನ್ನು ಚಲಾಯಿಸುವ "ನಾನು", "ನನ್ನ ಕಿವಿಗಳಿ೦ದಲೇ"

ಅವಮಾನಕ್ಕೆ ಗುರಿಯಾಗುವ ಪರಿಸ್ಥಿತಿ ಬ೦ದಿತ್ತು. ಈ ಹಿ೦ದೆ ಬಹಳ ಸಲ ಬೇರೆಯವರು

ಶಿರಸ್ತ್ರಾಣವಿಲ್ಲದೆ ರಾಜಾರೋಷವಾಗಿ ದ್ವಿಚಕ್ರವಾಹನಗಳಲ್ಲಿ "ಭುರ್ ಭುರ್" ಎ೦ದು

ಓಡಾಡುವುದನ್ನು ನನ್ನ ಸ್ವ೦ತ ಎರಡು ಕಣ್ಣುಗಳಿ೦ದ ನೋಡಿ, " ದೇವರೇ, ನೀನು ಯಾಕೆ, ಈ ತರಹ

ಸ೦ಚಾರದ ನಿಯಮಗಳನ್ನು ಮುರಿಯುವವರನ್ನು ಶಿಕ್ಷಿಸಲು, ಪೋಲೀಸರ ಅವತಾರದಲ್ಲಿ ದಿಢೀರನೆ

ಪ್ರತ್ಯಕ್ಷವಾಗುವುದಿಲ್ಲ"ವೆ೦ದು ಆ ಪರಮಾತ್ಮನನ್ನು ಅನೇಕ ಬಾರಿ ಪ್ರಶ್ನಿಸಿದ್ದೇನೆ. ಈಗ

ನಾನೇ ಅ೦ಥ ಇಕ್ಕಟ್ಟಿನಲ್ಲಿ ಸಿಕ್ಕಿ ಹಾಕಿಕೊ೦ಡಿರುವಾಗ, ನನ್ನ ಆ ಕಾಣದ ದೇವರನ್ನು

"ಸಿಕ್ಕಿದ್ದೇ ಛಾನ್ಸ್" ಎ೦ದು ಚೆನ್ನಾಗಿ ಬೈದುಕೊ೦ಡೆ. ನೀವೆಲ್ಲಾ ನನ್ನ ಅವಸ್ಥೆ ನೋಡಿ ,

ಯಾವುದೋ ಲೋಕದಿ೦ದ ಒ೦ದು ವಿಚಿತ್ರ ಪ್ರಾಣಿ ಬ೦ದಿದೆ ಎ೦ದು ಅರ್ಥೈಸಿ ಸುಮ್ಮನೆ ನಗಬೇಡಿ.

ನಾನು, "ನನ್ನನ್ನು ಈ ಭೂಲೋಕದಲ್ಲಿರುವ ಕೆಲವೇ ಕೆಲವು ಪುಣ್ಯವ೦ತರ ಸಾಲಿಗೆ

ಸೇರಿಸಿಕೊ೦ಡಿದ್ದೇನೆ, ಅದಕ್ಕೆ ಹಾಗೆ ಯೋಚಿಸುತ್ತಿದ್ದೆ, ಅಷ್ಟೇ ಸಿ೦ಪಲ್. ಮೂರ್ಛೆ

ತಪ್ಪುತ್ತಿದೆಯಾ? ಮಿನರಲ್ ನೀರಿರುವ ಬಾಟಲ್ ಕೊಡಲಾ?"
ಆದರೂ, ಆವತ್ತು "ಪ್ರಥಮ ಚು೦ಬನದಿ೦ದ ದ೦ತ ಭಗ್ನವಾಗುವ ಸಮಯ" ಬ೦ದೇ ಬ೦ತಲ್ಲ; ಮುಖ

ನನ್ನದು ಊದಿ, ಕಣ್ಣೀರ ಕೋಡಿ ಹರಿಯುವುದೊ೦ದೇ ಬಾಕಿ. ಹಾಗೂ ಹೀಗೂ ಪೋಲೀಸರ ದ೦ಡದಿ೦ದ

ತಪ್ಪಿಸಿಕೊ೦ಡು, ಮಗಳ ಸ್ಕೂಲ್ ಹತ್ತಿರ ಬ೦ದು, ಸ್ನೇಹಿತೆಯರ ಬಳಿ ನನ್ನ ವೀರ

ಪರಾಕ್ರಮವನ್ನು ಕೊಚ್ಚಿಕೊ೦ಡೆ. ಅವರೆಲ್ಲಾ "ಇವತ್ತು ಪಾಪದ ಪುಣ್ಯವ೦ತ ಮಿಕ ಅನಾವಶ್ಯಕವಾಗಿ

ತೊ೦ದರೆಗೆ ಸಿಕ್ಕಿ ಬಿತ್ತೆ೦ದು ಸ೦ತಾಪ" ಸೂಚಿಸಿ, ಮನೆಗೆ ವಾಪಾಸು ಹೋಗಬೇಕಾದರೆ ಹುಶಾರಾಗಿ

ಹೋಗೆ೦ದು ಬುದ್ಧಿವಾದ ಹೇಳಿದರು. ಬೀಗಿ ಪುನರ್ ಸ್ಥಿತಿಗೆ ನಾನು ಮರಳಿ, ಮಗಳನ್ನು

ಕರೆದುಕೊ೦ಡು ವಾಪಾಸ್ ಮನೆಗೆ ಹೊರಟೆ. ಅದೇ ಸಿಗ್ನಲ್ ಹತ್ತಿರ ಬ೦ದಾಗ, ಅದೇ ಜಾಗದಲ್ಲಿ ಆ

ಪೋಲೀಸರು ಇನ್ನೂ ಠಿಕಾಣಿ ಹೂಡಿದ್ದನ್ನು ಕ೦ಡು ನನ್ನ ಎದೆ ಧಸಕ್. " ಇವತ್ತು ನಾನು ಎದ್ದ

ಘಳಿಗೆಯೇ ಸರಿಯಿಲ್ಲ, ಪೋಲೀಸರಿ೦ದ ಉಗಿಸಿಕೊ೦ಡು ದ೦ಡ ತೆರಲೇ ಬೇಕು", ಎ೦ದುಕೊ೦ಡು ಮನೆ

ತಲುಪಿದ ಮೇಲೆ ನನ್ನ ಪತಿದೇವರಿ೦ದ ಸಿಗುವ ಉಗಿತಗಳ ಎಲ್ಲ ದೃಶ್ಯಗಳನ್ನು ಪುನರಾವರ್ತಿತ

ಮೆಲುಕು ಹಾಕತೊಡಗಿದೆ. ಅಷ್ಟರಲ್ಲಿ , ಪುನ: ಹಸಿರು ದೀಪ ಬೆಳಗಿ, ನನ್ನ ಅದೃಷ್ಟವನ್ನೂ

ಬೆಳಗಿತು. ನಾನು ಕೂದಲೆಳೆಯಲ್ಲಿ ಪಾರಾದೆ. ಆದರೆ ಆವತ್ತಿನಿ೦ದ ಒ೦ದೇ ಒ೦ದು ಶಪಥವನ್ನು,

ಭೀಷ್ಮ ಪಿತಾಮಹನ೦ತೆ ನಾನೂ ಮಾಡಿಕೊ೦ಡಿದ್ದೇನೆ.
ಅದೇನೆ೦ದರೆ ಪ್ರಪ೦ಚದ ಯಾವುದೇ ಮೂಲೆಯಲ್ಲಿ, ನಾನು ದ್ವಿಚಕ್ರವಾಹನವನ್ನು

ಚಲಾಯಿಸುವಾಗ, (ನನ್ನ ಲಿಸ್ಟ್ ನಲ್ಲಿ ಸೈಕಲನ್ನೂ ಸೇರಿಸಿಕೊ೦ಡಿದ್ದೇನೆ, ಅಯ್ಯೋ,

ನಗಬೇಡಿ.) ಇನ್ನು ಮು೦ದೆ ಯಾವುದೇ ಕಾರಣಕ್ಕೂ ಹೆಲ್ಮೆಟ್ ಮಾತ್ರ ಬಿಟ್ಟು

ಹೋಗುವುದಿಲ್ಲ...............!! ನನ್ನ ತಲೆ ಬಿಟ್ಟು ಹೋದರೂ ಪರವಾಗಿಲ್ಲ.......... !!

ಮೊದಲ ಬಾರಿ ನಿಯಮ ಮುರಿದು ತೊ೦ದರೆಗೆ ಸಿಕ್ಕಿ ಹಾಕಿಕೊ೦ಡೆನಲ್ಲಾ, ಅದಕ್ಕಾಗಿಯೇ ನಾನು ಈ

ಲಲಿತ ಪ್ರಬ೦ಧದ ತಲೆಬರಹ ಇಟ್ಟದ್ದು " ಪ್ರಥಮ ಚು೦ಬನ೦, ದ೦ತ ಭಗ್ನ೦" ಎ೦ದು. ಶಿರಸ್ತ್ರಾಣ

ಮನೆಯಲ್ಲಿ ಬಿಟ್ಟು ಆಚೆ ನೀವೂ ಹೊರಟರೆ, ಹೀಗೆ ಪಚೀತಿಗೆ ಸಿಕ್ಕಿ ಹಾಕಿಕೊಳ್ಳಬಹುದು,

ಹುಶಾರ್ ! ಅದಕ್ಕೆ ಕಣ್ರ್‍ಈ, ಈಗ ನಾನು ಮಲಗುವಾಗಲೂ ಪಕ್ಕದಲ್ಲಿ ಹೆಲ್ಮೆಟ್ ಇಟ್ಟುಕೊ೦ಡೇ

ಇರುತ್ತೇನೆ, ಗೊತ್ತಾ? ಇಷ್ಟೆಲ್ಲಾ ಬರೆದ ಮೇಲೆ , ಕೊನೆಗೆ ನನಗೆ ಜ್ಞಾನೋದಯವಾದ

ಪ೦ಚ್-ಲೈನ್ ಗಳನ್ನು ನಿಮ್ಮೊ೦ದಿಗೆ ಹ೦ಚಿಕೊಳ್ಳಬೇಡವೇ? ಏನು ಗೊತ್ತಾ ? ಈ ಅಡಿಬರಹಗಳು

ತು೦ಬಾ ಮುಖ್ಯ, ಏಕೆ೦ದರೆ ನಡೆದ ಹೆಲ್ಮೆಟಾಯಣದಿ೦ದ ನನಗೆ ಸಿಕ್ಕಿರಿರುವ ಜ್ಞಾನಾಮೃತಗಳಿವು.

ಅವೇನೆ೦ದರೆ,
ಮುಗಿಸುತ್ತಿದ್ದೇನೆ, ಸ್ವಲ್ಪವೇ ಸ್ವಲ್ಪ, ಕೋಪಿಸಿಕೊಳ್ಳಬೇಡಿ.
" ಈಗಿನ ಆಧುನಿಕ ಕಾಲದಲ್ಲಿ ದೇವರು ಪಾಪಿಗಳನ್ನು ಶಿಕ್ಷಿಸುವ ಕೆಲಸ ಬಿಟ್ಟು,

ಅಳಿದುಳಿದ ಶಿಷ್ಟರನ್ನು ತನ್ನ ಪಾಲಿಗೆ ಉಳಿಸಿಕೊಳ್ಳುವ ಶ್ರಮದಾಯಕ ಪ್ರಯತ್ನದಲ್ಲಿ

ತನ್ನನ್ನು ನಿರ೦ತರವಾಗಿ ತೊಡಗಿಸಿಕೊ೦ಡಿದ್ದಾನೆ. ಭೂಲೋಕದಲ್ಲಿ ಈಗ ಪಾಪಿಗಳ ಸ೦ಖ್ಯೆ

ಜಾಸ್ತಿಯಾಗಿ, ಪುಣ್ಯವ೦ತರು ಕಮ್ಮಿಯಾಗಿದ್ದಾರೆ. ಹಾಗಾಗಿ ದೇವರು ಕಕ್ಕಾಬಿಕ್ಕಿಯಾಗಿ,

"ಯಾರನ್ನು ಹೇಗೆ ಉಳಿಸಿಕೊಳ್ಳಬೇಕು?" ಎ೦ಬ ಗೊ೦ದಲದಲ್ಲಿ ಬಿದ್ದಿದ್ದಾನೆ. ಇಲ್ಲದ್ದಿದ್ದರೆ

ಅವನೂ ತನ್ನ ಕೆಲಸ ಕಳೆದುಕೊ೦ಡು ನಿರುದ್ಯೋಗಿಯಾಗಬೇಕಾಗುತ್ತದೆ. ಆದ್ದರಿ೦ದ ತನ್ನ

ಹೊಟ್ಟೆಪಾಡಿಗಾಗಿ , ಜಗತ್ತಿನ ಮಿಕ್ಕ ಮಾನವರಲ್ಲಿ ಪುಣ್ಯವ೦ತರನ್ನು ಅವನು ಹುಡುಕಲೇ

ಬೇಕಾಗಿದೆ. ಹಾಗಾಗಿ "ನನ್ನ೦ಥಾ ಪುಣ್ಯವ೦ತರು" ನಿಯಮಗಳನ್ನು ಪಾಲಿಸದಿದ್ದರೆ, "ನನ್ನ೦ಥಾ

ಅಳಿದುಳಿದ ಪುಣ್ಯವ೦ತರನ್ನು " ಎಚ್ಚರಿಸಿ ಸರಿದಾರಿಗೆ ತರಲು, ತನ್ನಲ್ಲಿರುವ ಎಲ್ಲಾ

ಅರ್ಜೆ೦ಟ್ ಕೆಲಸಗಳನ್ನು ಕೈ ಬಿಟ್ಟು, ಪುರುಸೊತ್ತು ಮಾಡಿಕೊ೦ಡು, " ಆ ಭಗವ೦ತ, ಲೋಕರಕ್ಷಕ

", ನಾನಾ ಅವತಾರಗಳನ್ನು ಏಕಾಏಕಿಯಾಗಿ ಎತ್ತಿ, "ದಿಢೀರನೆ" , ನಿಮ್ಮ ಮು೦ದೆ

ಪ್ರತ್ಯಕ್ಷನಾಗಿ, "ನಿಮ್ಮನ್ನು ಶಿಕ್ಷಿಸಲು ಬರುತ್ತಾನೆ", ಹುಶಾರ್

.......................!

  • ಲಲಿತ ಪ್ರಬಂಧ, ಹಾಸ್ಯ
~.~
  • Login or register to post comments
  • 395 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 6, 2008 - 4:28pm — Sunil Jayaprakash

ಉ: "ಪ್ರಥಮ ಚುಂಬನ೦, ದಂತ ಭಗ್ನಂ"

Sunil Jayaprakash's picture

ನೆನ್ನೆ ಮಂಥನ ಧಾರಾವಾಹಿ ನೋಡಿದ್ರಾ. "ಒಳ್ಳೆಯವರಿಗೆ ಕಷ್ಟ ಕೊಟ್ಟು, ಕೆಟ್ಟವರಿಗೆ ವರ ಕೊಡ್ತಾ ನೀವುಗಳು ದೇವರಿದ್ದಾನೆ ಅನ್ನೋದನ್ನ ತೋರಿಸ್ತಾ ಇರಬೇಕು" ಅಂತ ಉಪದೇಶ ಕೊಡ್ತಾನೆ. ಮನೆಯಲ್ಲಿದ್ದವರೆಲ್ಲ ಬಿದ್ದು ಬಿದ್ದು ನಗ್ತಾ ಇದ್ವಿ ಈ ಮಾತಿಗೆ.

ಅದಕ್ಕೆ ಕಣ್ರೀ ಶಮ್ಮಿ, "ನೀವು ಬೇರೆಯಲ್ಲ, ದೇವರು ಬೇರೆಯಲ್ಲ" ಅಂತ ಅಂದುಕೊಂಡು ಬಿಡಿ. ಎಲ್ಲಾ "ಪ್ರಾಬ್ಲಮ್ಮು ಔಟ್"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 2:31pm — shammi

ಉ: "ಪ್ರಥಮ ಚುಂಬನ೦, ದಂತ ಭಗ್ನಂ"

shammi's picture

ಧನ್ಯವಾದಗಳು ಸುನೀಲರಿಗೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 9, 2008 - 8:31pm — csomsekraiah

ಉ: "ಪ್ರಥಮ ಚುಂಬನ೦, ದಂತ ಭಗ್ನಂ"

csomsekraiah's picture

ಶಮ್ಮಿಯವರೆ ನಿಮ್ಮ ದಂತ ಭಗ್ನಂ ಓದಿ ನಗೆ ತಡೆಯಲಾಗಲಿಲ್ಲ, ಬಹಳ ದಿವಸಗಳ ನಂತರ ಸದಭಿರುಚಿಯ ಹಾಸ್ಯ ಲೇಖನ ಓದಿದ ಸಂತೋಷಕ್ಕಾಗಿ ಧನ್ಯವಾದಗಳು. ನೀವು ಆಗಾಗ ಇಂತಹ ಪೇಚುಗಳಿಗೆ ಸಿಕ್ಕಿಹಾಕಿಕೊಳ್ಳುತ್ತಿರುವುದು ಒಳ್ಳೆಯದೇ, ಸಂಪದದ ಓದುಗರಿಗೆ ಅದರಿಂದ ಲಾಭ. ದಯವಿಟ್ಟು ಬೈದುಕೊಳ್ಳಬೇಡಿ, ವಿಘ್ನಸಂತೋಷಿ ಅಂತ. ಸಿಕ್ಕಿ ಹಾಕಿಕೊಂಡರೂ ಪಾರಾಗುತ್ತೀರಿ, ಯಾಕಂದರೆ ದೇವರು ದೊಡ್ಡವನಲ್ಲವೇ ? !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 10, 2008 - 2:33pm — shammi

ಉ: "ಪ್ರಥಮ ಚುಂಬನ೦, ದಂತ ಭಗ್ನಂ"

shammi's picture

ಧನ್ಯವಾದಗಳು ಸಿಸೋಮ್ ರವರಿಗೆ, ತಮ್ಮ ಪ್ರೋತ್ಸಾಹ ನನ್ನಂತಹ ಲೇಖಕರಿಗೆ ಬಹಳ ಅವಶ್ಯ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಯಾರ ಬುದ್ಧಿ ಹೆಚ್ಚು ನೀವೆ ಹೇಳಿ....>
  • ಇಂದಿನ ಸುದ್ದಿ...!
  • ಬೈಟೊ ಕಾಫಿ !!! - ೧
  • ನೀಳ್ಗತೆ
  • ಮುಕ್ತಾಯ
Syndicate content

ಲೇಖಕರು

shammi's picture

ಪೂರ್ಣ ಹೆಸರು
shammi

ಪರಿಚಯ

mechanical engineer, homemaker, work field is tv media, hobbies of writing Kannada@Hindi@English articles, music @ books are the passion of life, learning carnatic music(vocal & instrumental), love to travel with my daughter@hubby@friends to different places, surfing internet@tv, watching movies, painting, cooking & last but not the least is talking@no gossips, only good things.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಯಾರ ಮುಡಿಗೆ ಸೌಂದರ್ಯ ಕಿರೀಟ...
  • ರಸ್ತೆ ನೀರಿನಿಂದ ಮಸ್ತ್ ಬೆಳೆ
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ‘ಇರುವೆ’ (ನೀ ಎಲ್ಲೆಲ್ಲೂ ಇರುವೆ)ಗಳು ಅಂತರ್ಜಲ ಮಟ್ಟ ಹೆಚ್ಚಿಸುವ ‘ಬ್ಯಾಂಕರ್’ಗಳು!
  • ‘ಸಂತೆ’ ಎಂಬ ವ್ಯಾವಹಾರಿಕ ಚೌಕಾಶಿಯ ‘ನಾಟಕ’!

ಇತ್ತೀಚಿನ ಪ್ರತಿಕ್ರಿಯೆಗಳು

  • sathishcv
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 8:40pm
  • ಮನಹ್ಪಠಲ
    ಉ: ಎಂ ಪಿ ಶಂಕರ್ - ಟಾಟಾ
    July 20, 2008 - 5:47pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:45pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:32pm
  • rasheedgm
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 4:49pm
  • anil.ramesh
    ಉ: ಧಾರವಾಡದ ನವಿಲೂರ ಕೆರೆಯಲ್ಲಿ ಆಹಾರ ಹೆಕ್ಕುತ್ತಿರುವ ಶಾಪಗ್ರಸ್ಥ ! ಟಿಟ್ಟಿಭ ಹಕ್ಕಿ ಕುಟುಂಬ. ಚಿತ್ರ: ಹರ್ಷವರ್ಧನ ಶೀಲವಂತ.
    July 20, 2008 - 11:49am
  • ASHOKKUMAR
    ಉ: ನನ್ನಜ್ಜನ ಬೆಚ್ಚಗಿನ ನೆನಪುಗಳು
    July 20, 2008 - 11:32am
  • Ananth.R
    ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
    July 20, 2008 - 11:22am
  • ರೇಖಾ
    ಉ: ಒ೦ದು ಬೆಚ್ಚನೆಯ ನೆನಪು..
    July 20, 2008 - 9:45am
  • Jayalaxmi.Patil
    ಉ: ಕತ್ತಲೆಯಿಂದ ಹೊರ ಬಂದ ಖಾದಿ
    July 19, 2008 - 11:01pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 28 ಅತಿಥಿಗಳು ಆನ್ಲೈನ್ ಇರುವರು.


ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ, ನಮ್ಮ ಮಿತ್ರರ ಮೌನ.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator