ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಮುಂಗಾರು ಮಳೆ...

February 8, 2008 - 12:08am — somashekar

ಪ್ರೀತ್ಸೋ ಹೃದಯ, ಹದಿಹರೆಯದ ಕನಸುಗಳು, ಭಾವನೆಗಳು, ನಿಸ್ವಾರ್ಥ ಒಲವು,
ನೆನಪಿನ ಕಾಣಿಕೆಯಾದ ವಸ್ತುವನ್ನು ಜೋಪಾನವಾಗಿ ಕಾಪಾಡೋದು, ಪ್ರತಿಕ್ಷಣ ಪ್ರೀತಿಯಲ್ಲೇ
ಮುಳುಗಿರುವುದು, ಪ್ರೀತಿ ಪಡೆಯುವ ಪರಿಯನ್ನು ವಿಭಿನ್ನವಾಗಿ ಯೋಚಿಸುವುದು, ಪ್ರೀತಿ ಸಿಗದೆಹೋದರೆ ಮುಂದೆ ಬದುಕು ಇಲ್ಲವೇನೋ ಎಂಬ ಭಾವನೆ...

ಈ ಎಲ್ಲ ಹಂತ ಪ್ರತಿಯೊಬ್ಬರ ಜೀವನದಲ್ಲೂ ಬರುವಂತದ್ದು, ಇದೆಲ್ಲವು ನಮ್ಮ ಜೀವನದಲ್ಲಿ ನಡೆದರೆ ಅಥವಾ ಒಂದು ಬಾರಿ ಪ್ರೀತಿಸಿದರೆ ಏನೋ ಸಾಧಿಸಿದಂತಾಗುವುದಿಲ್ಲಾ, ಹೇಗೆ ಆ ಸಂದರ್ಭವನ್ನು ನಿಭಾಯಿಸುತ್ತೇವೆ ಅನ್ನೋದು ಮುಖ್ಯ...

ನಾಯಕ ಪ್ರೀತಮ್ ಹಾಗೂ ನಾಯಕಿ ನಂದಿನಿ ನವೀನತೆಯ ಭೇಟಿ ಹಾಗೂ ಅನುರಾಗ ಹುಟ್ಟುವ ಪರಿ ಅದ್ಭುತ.
ಮಡಿಕೇರಿ ಮಳೆ, ಅಂದವಾದ ಹುಡುಗಿ, ಎದೆಯಲ್ಲಿ ತುಂಬಿಕೊಂಡಿರುವ ಪ್ರೀತಿ ಇವೆಲ್ಲಕ್ಕೂ ನಮ್ಮ ನಾಯಕ ಸಿಲುಕುತ್ತಾನೆ. ನಾಯಕನ ತಂದೆಯಾಗಿ ’ಜಯಂತ್ ರಾವ್’ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ ಹಿರಿಯ ನಟರಾದ "ಜೈ ಜಗದೀಶ್" ರವರು. ತಮ್ಮ ಪಾತ್ರ ಕೆಲನಿಮಿಶದಾದ್ದರು ಅವರ ಗಂಭೀರವಾದ ಹಾಸ್ಯದ ಅಭಿನಯ ನೆನಪಿಸಿಕೊಳ್ಳುವಂತಿತ್ತು.

ನಾಯಕಿ "ನಂದಿನಿ" ತಂದೆಯ ಪಾತ್ರವನ್ನು "ಕರ್ನಲ್ ಸುಬ್ಬಯ್ಯ"ರಾಗಿ "ಅನಂತ್ ನಾಗ್" ರವರು ಹಾಸ್ಯ ಹಾಗೂ ಗಂಭೀರ ಸನ್ನಿವೇಶಗಳಲ್ಲಿ ಅಮೋಘವಾಗಿ ಅಭಿನಯಿಸಿದ್ದಾರೆ, ತಾಯಿಯ ಪಾತ್ರವನ್ನು "ಪದ್ಮಜ ರಾವ್" ಅವರು "ಬಬ್ಲಿ ಬಬಿತ" ರಾಗಿ ನಿರ್ವಹಿಸಿದ್ದಾರೆ.

ಮುಂಗಾರು ಮಳೆಯ ಪ್ರತಿ ಹನಿಯಲ್ಲೂ ಪ್ರೇಮದ, ಪ್ರೀತಿಯ ಭಾವನೆಯನ್ನು ತುಂಬಿದ್ದಾರೆ ನಿರ್ದೇಶಕರಾದ ’ಯೋಗರಾಜ್ ಭಟ್’ರವರು. ಪ್ರೀತಮ್ ಎಂಬ ಪಾತ್ರದ ಸೃಷ್ಟಿಕರ್ತ ಇವರು, ಅದಕ್ಕೆ ಜೀವ ತುಂಬಿದ್ದಾರೆ ತಮ್ಮ ಅಮೋಘ ಅಭಿನಯದ ಮೂಲಕ ನಮ್ಮ ನಿಮ್ಮೆಲರ ’ಗಣೇಶ್’. ಒಟ್ಟಿನಲ್ಲಿ ನಿರ್ದೇಶಕರು ಹಾಗೂ ನಾಯಕ ನಟ ಬಿಸಿ ರಕ್ತದ ಹುಡುಗರು ಕೂಡ ಕಣ್ಣೀರು ಹಾಕುವಂತೆ ಮಾಡಿದ್ದಾರೆ. ಚಿತ್ರಮಂದಿರ ಪ್ರವೇಶಮಾಡುವ ಮುನ್ನ ಒಮ್ಮೆ ಸಿನಿಮಾ ನೋಡಿರುವ ಒಬ್ಬರು ಇನ್ನೊಬ್ಬರಿಗೆ ಹೇಳುತ್ತಾರೆ ’ ನಿನಗೆ ಈ ಸಿನೆಮಾ ಹೋಲುತ್ತೆ...’ ಅಂತ. ಗಣೇಶ್ ಅವರ ಅಭಿನಯ ಅದರಲ್ಲೂ ತಾವು ಪ್ರೀತಿಯನ್ನು ತ್ಯಾಗ ಮಾಡುವ ಸನ್ನಿವೇಶದಲ್ಲಿ ಬರಿ ಹುಡುಗಿಯರಲ್ಲದೆ ಹುಡುಗರ ಕಣ್ಣಲ್ಲೂ ’ಹನಿ ಹನಿ ಕಣ್ಣೀರಿನ ಹನಿ’...

ಪಟಪಟನೆ ರೋಮಾಂಚಕ ಸಂಭಾಷಣೆ "ಗಣೇಶ್" ಅವರಿಂದ ಹೊರಬೀಳುತ್ತಿದಂತೆ ನಕ್ಕುನಲಿವ ಪ್ರೇಕ್ಷಕರು.
ಚಿತ್ರದ ಮೊದಲ ಅರ್ಧ ಭಾಗದಲ್ಲಿ ಅರಳಿರುವ ಹೂವಿನಂತೆ ಹಸನ್ಮುಖರಾಗಿ ನೋಡುವ ಪ್ರೇಕ್ಷಕರು, ಎರಡನೆಯ ಭಾಗದಲ್ಲಿ ಕುತೂಹಲದಿಂದ ಮುಂದೆ ಏನಾಗಬಹುದು ಎಂಬ ಕಾತುರ ಕಾಡುತಿತ್ತು. ಹಿರಿಯ ನಟರಾದ ’ಅನಂತ ನಾಗ್’ ಅವರ ಅಮೋಘ ನಟನೆಯ ಮೂಲಕ ಪ್ರೇಕ್ಷಕರಿಗೆಲ್ಲಾ ಕಚಗುಳಿ ಇಡುತ್ತಾರೆ.

ಮದುವೆಯಾಗುತ್ತಿರುವ ನಾಯಕಿಯ ಮನಸ್ಸನ್ನು ಪರಿವರ್ತಿಸಿ ಒಲಿಸಿಕೊಳ್ಳವ ಸಂದರ್ಭ, ’ದೇವದಾಸ್’ ಎಂಬ ಮೊಲದ ಪಾತ್ರದ ಪ್ರವೇಶ ಚಿತ್ರದ ತಿರುವಿಗೆ ಕಾರಣ. ವಿಭಿನ್ನವಾಗಿ ಜೋಗಜಲಪಾತವನ್ನ ತೋರಿಸಿದಾಗ ಅಚ್ಚರಿಯಿಂದ ನೋಡುವ ಪ್ರೇಕ್ಷಕರಲ್ಲಿ ಜಲಪಾತದ ಎತ್ತರದಷ್ಟು ಸಂತೋಷ ತುಂಬಿಕೊಂಡಿತ್ತು. ನಾಯಕಿ ತನ್ನ ಪ್ರೀತಿಯನ್ನು ಬಿಚ್ಚಿಡಲು ಆ ಪ್ರತ್ಯೆಕ ಸ್ಥಳ ಆರಿಸಿಕೊಂಡಿರುವುದು ಅತಿ ರೋಮಾಂಚಕ...

ಈ ಚಿತ್ರದಲ್ಲಿ ಖಳನಾಯಕನ ಪಾತ್ರದ "ಜಾನಿ" ತನ್ನ ಪ್ರೀತೀನ ಹಿಂಸೆಯಿಂದ ಪಡೆಯುವ ಪರಿಯನ್ನು ನಿರ್ದೇಶಕರು ಚೆನ್ನಾಗಿ ಚಿತ್ರಿಸಿದ್ದಾರೆ. ನಾಯಕಿಗೆ ಬೇರೆ ಹುಡುಗನ ಜೊತೆ ಮದುವೆ. ಹಿರಿಯರ ನಂಬಿಕೆ ಉಳಿಸುವ ಸಲುವಾಗಿ ಪಡೆದ ಪ್ರೀತಿನ ಕಳೆದುಕೊಳ್ಳುವ ನಾಯಕ.

ಅಂದುಕೊಂಡಂತೆ ಜೀವನ ನಡೆದರೆ..........?...ಅದು ಎಲ್ಲೆಗೆ ಮೀರಿದ ಆಸೆ...

ತನ್ನ ಗೆಳೆಯನಾದ "ದೇವದಾಸ್" ಎಂಬ ಮೊಲದ ಬಳಿ ದುಃಖವನ್ನ ಹೇಳಿಕೊಳ್ಳುವ ರೀತಿ, ಒಂದೊಂದು ಪದದಲ್ಲೂ ಪ್ರೀತಿಕಳೆದುಕೊಂಡ ನೋವು, ಸಂಕಟ, ಬದುಕ್ಕಿದ್ದರೂ ಸತ್ತಂತೆ ವರ್ತಿಸುವ ಮನಸ್ಸು, ಮನಷ್ಯನನ್ನು ನಮ್ಮ ಈ ಚಿತ್ರದ ನಾಯಕ "ಗಣೇಶ್" ತಮ್ಮ ಅತ್ಯದ್ಭುತ ಅಭಿನಯದಿಂದ ಪ್ರೇಕ್ಷಕರ ಹೃದಯ ಮುಟ್ಟುವುದರಲ್ಲಿ ಯಶಸ್ವಿಯಾಗಿದ್ದಾರೆ.

ಪ್ರೀತಿ ಕುರುಡೋ...? ಪ್ರೀತಿಸುವವರು ಕುರುಡರೋ...? ಪ್ರೀತಿ ಎಂಬ ಭಾವನೆ ಕುರುಡೋ...?
ಪ್ರೀತಿಯಲ್ಲಿ ಮಿಂದಿರೊ ಮನಸ್ಸು ಕುರುಡೋ...?
ಮೇಲಿನ ಯಾವ ಪ್ರಶ್ನೆಗೂ ಉತ್ತರ ಸಿಕ್ಕಿಲ್ಲ... ಆದರೆ...ತಿಳಿದುಬಂದದ್ದು.....

ಪ್ರೀತಿ ಮಧುರ, ತ್ಯಾಗ ಅಮರ...

  • ಸಿನೆಮಾ ವಿಮರ್ಶೆ
~.~
  • Login or register to post comments
  • 420 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 8, 2008 - 12:27pm — uniquesupri

ಉ: ಮುಂಗಾರು ಮಳೆ...

uniquesupri's picture

ಏನ್ರಿ ಎಲ್ಲರೂ ಗಾಳಿ ಪಟ ಗೋತಾ, ಸೂತ್ರ ಹರಿದ ಗಾಳಿಪಟ ಅಂತ ಕಿತ್ತಾಡುತ್ತಿರುವಾಗ ನೀವು ‘ಅನಿಸುತಿದೆ ಯಾಕೋ ಇಂದು ಅಂತ ಮುಂಗಾರು ಮಳೆಗೆ ಹೋಗುತ್ತಿದ್ದೀರಿ?

_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://ekshanadasatya.wordpress.com
http://sadagara.mywebduniya.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • I ate nothing for 6 ಘಂಟೆ ಕಾಲ
  • ಜೆಕೆ ಹೇಳಿದ್ದು: ಆದರ್ಶವಾದಿ ಪ್ರೀತಿಯನ್ನು ಅರಿಯಲಾರ
  • ’ಅರಮನೆ’ಲಿ ಓಡಾಡಿ ಬಂದ್ರಾ...?
  • ಸಕಾಲದಲ್ಲಿ ಮುಂಗಾರು ಮಳೆ
  • ಮನಗೆಲ್ಲುವ , ಮನ ಮುಟ್ಟುವ " ಮೊಗ್ಗಿನ ಮನಸ್ಸು " ..!!!
Syndicate content

ಲೇಖಕರು

somashekar's picture

ಪೂರ್ಣ ಹೆಸರು
somashekar

ಪರಿಚಯ

i'm somu...doing my final year engg. hobbies: love to pen my thoughts, do write poems n articles in my mother tongue 'Kannada'...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು
  • ಕೊಲಂಬಿಯ ಪಟ್ಟಣದ ಸಂತೆ !
  • ವಾರಾಂತ್ಯ ಹೇಗಿತ್ತು?
  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
  • ASHOKKUMAR
    ಉ: ವಾರಾಂತ್ಯ ಹೇಗಿತ್ತು?
    September 8, 2008 - 8:10pm
  • ishwar.shastri
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:00pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:54pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:52pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:51pm
  • csomsekraiah
    ಉ: ಕೊಲಂಬಿಯ ಪಟ್ಟಣದ ಸಂತೆ !
    September 8, 2008 - 7:28pm
  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 7:22pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 135 ಅತಿಥಿಗಳು ಆನ್ಲೈನ್ ಇರುವರು.


ಮಕ್ಕಳ ಸ್ಕೂಲ್ ಮನೇಲಲ್ವೇ

— ಬೀchi

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator