ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

'ಕಲಾಂ ಮೇಸ್ಟ್ರು ' ಪುಸ್ತಕದಿಂದ ಆಯ್ದ ಕೆಲವು, ಪುಟಗಳು !

February 14, 2008 - 7:47am — venkatesh

'ಕಲಾಂ ಮೇಸ್ಟ್ರು ', ಪ್ರೊ. ಹೆಚ್. ಆರ್. ರಾಮಕೃಷ್ಣರಾವ್ ರವರು, ಮಕ್ಕಳಿಗೋಸ್ಕರರವಾಗಿಯೇ ಬರೆದ ಕಾದಂಬರಿ. ಡಾ. ಕಲಾಂ ಮಕ್ಕಳೊಡನೆ ಮಕ್ಕಳಾಗಿ ಬೆರೆತು ಅವರಿಗೆ ಉಪಯುಕ್ತವಾದ ಸಂಗತಿಗಳನ್ನು ಅವರಿಗೆ ಪ್ರಿಯವಾಗುವಂತೆ ಹೇಳುವ ಪರಿ ಅನನ್ಯವಾಗಿದೆ. ಅಂತಹ ಒಂದು ಸ್ವಾರಸ್ಯಕರವಾದ ಘಟನೆಯನ್ನು ರಾಯರ ಪುಸ್ತಕದಿಂದ ಇಲ್ಲಿ ದಾಖಲಿಸಲಾಗಿದೆ.

’ಏನೀ ಕ್ಷಿಪಣಿ” ?

ಒಮ್ಮೆ ಕೆಲವು ಶಾಲಾಮಕ್ಕಳು ಅವರನ್ನು ಭೇಟಿಯಾಗಿದ್ದರು. ಕಲಾಂ ಬಿಡುವಿನವೇಳೆಯನ್ನು ಸಾಮಾನ್ಯವಾಗಿ ಮಕ್ಕಳಜೊತೆಯಲ್ಲಿ ಕಳೆಯುತ್ತಿದ್ದರು ಭೇಟಿಗೆ ಮುಂಚೆ ಅದ್ಯಾಪಕರು ಕಲಾಂ ಅವರನ್ನು ' ಮಿಸೈಲ್ ' ವಿಜ್ಜಾನಿ ಅಂತ ಮಕ್ಕಳಿಗೆ ಪರಿಚಯಿಸುತ್ತಿದ್ದರು. ಹೈಸ್ಕೂಲ್ ನಲ್ಲಿ ಓದುತ್ತಿದ್ದ ಅವರು 'ರಾಕೆಟ್ ' ವಿಷಯ ಕೇಳಿದ್ದರು. ಮಿಸೈಲ್ ವಿಶಯ ಅಷ್ಟಾಗಿ ತಿಳಿದಿರಲಿಲ್ಲ. ಕಲಾಂ ಅವರನ್ನೇ ಕೇಳಿದರು. ನಗುತ್ತಾ ಕಲಾಂ ಹೇಳಿದರು. " ನಿಮ್ಮಲ್ಲಿ ಹಿಂದಿನಬೆಂಚಿನಲ್ಲಿ ಕೂತಿರೋರು, ಚೇಷ್ಟೆಗೆ ಅಂತ, ಪೇಪರ್ ನ ಮಡಿಸಿ ಎರಡೂ ಕೈಗಳ ಬೆರಳುಗಳನಡುವೆ ಹಿಡಿದು, ಮುಂದಿನವರ ತಲೆಗೆ ಬಡಿಯುವಂತೆ ಗುರಿ ಯಿಟ್ಟು ಎಸೀತೀರಲ್ಲ, ಅದೇ ' ಮಿಸೈಲ್' ! 'ಹೋ' ಅಂತ ಮಕ್ಕಳು ಕೂಗಿ ಚಪ್ಪಾಳೆ ಹೊಡೆದರು.

ಗುರಿಗೆ ಹೋಗಿ ಬಡಿಯುವ ಉದ್ದೇಶದಿಂದ ಎಸೆದ, ಬೀಳಿಸಿದ ಪ್ರಕ್ಷೇಪಿಸಿದ ಇಲ್ಲವೇ ಮುಂದೆ ದೂಡಿದ ಅಥವಾ ಹಾಗೆ ವಿನ್ಯಾಸಗೊಳಿಸಿದ ಅಸ್ತ್ರಕ್ಷಿಪಣಿ. ಕಲಾಂ ತಂಡ ವಿನ್ಯಾಸಗೊಳಿಸುತ್ತಿದ್ದದ್ದು ನಿರ್ದೇಶಿತ ಕ್ಷಿಪಣಿ, ಗೈಡೆಡ್ ಮಿಸೈಲ್. ಇದರಲ್ಲಿ ಹಾರಿಬಿಟ್ಟಾಗಿನಿಂದ ಗುರಿತಲಪುವವರೆಗೂ ನಿಯಂತ್ರಿಸುವ ವ್ಯವಸ್ಥೆ ಇರುತ್ತದೆ. ಇದನ್ನು ದೂರದಿಂದ ನಿಯಂತ್ರಿಸಬಹುದು. ಗುರಿಚಲನೆಯಲ್ಲಿದ್ದರೆ ಅದನ್ನು ಹಿಂಬಾಲಿಸುವ ಸಾಮರ್ಥ್ಯ ಈ ಕ್ಷಿಪಣಿಗಿರುತ್ತದೆ. ಸ್ವಯಂಚಾಲಿತ , ಗುರಿನಿರ್ಧಾರಿತ, ಕಂಪ್ಯೂಟರ್ ಸಹಾಯದಿಂದ ತಲುಪುವಂತೆಸಂಯೋಜಿಸಬಹುದು.

ದೀರ್ಘ ಅಂತರವಿರುವ ಒಂದು ನೆಲೆಯಿಂದ ಇನ್ನೊಂದು ನೆಲೆಗೆ ಹಾರಿಬಿಡುವ ಅಸ್ತ್ರವೇ ಉತ್ ಕ್ಷೇಪಿತ ಕ್ಷಿಪಣಿ. ಇದು ಮಿಲಿಟರಿ ಕ್ಷಿಪಣಿ.ಇದನ್ನು ಎಸೆದಾಗ ಕೊಟ್ಟಿರುವ ಆವೇಗವನ್ನೂ [Mometum ] ಮತ್ತು ಚಲನೆಯಲ್ಲಿರುವಾಗ ಅದರಮೇಲೆ ವರ್ತಿಸುತ್ತಿರುವ ಗುರುತ್ವ ಬಲವನ್ನೂ ಭಾಗಶಃ ಇಲ್ಲವೇ ಪೂರ್ಣವಾಗಿ ಅವಲಂಭಿಸಿರುತ್ತದೆ. ಎಸೆದ ಚೆಂಡು ಎಷ್ಟುದೂರ ತಲಪುತ್ತದೆ ಎಂಬುದು ಎಸೆಯುವಾಗಿನ ವೇಗ ಹಾಗು ದಿಶೆಯನ್ನು ಅವಲಂಭಿಸಿರುವುದನ್ನು ಮಕ್ಕಳು ಗಮನಿಸುತ್ತಾರೆ.

ಅಧ್ಯಯನ, ಅಧ್ಯಾಪನ, ಹಾಗೂ ಸಂಶೋಧನೆ-ಹೀಗೇ ಹಲವಾರು ಕಾರ್ಯಗಳಲ್ಲಿ ತೊಡಗಿದ್ದ ಕಲಾಂ ಅವರಿಗೆ ಸಮರ್ಥ ಸಹಾಯಕರು ಸಿಕ್ಕಿದ್ದರಲ್ಲಿ ಆಶ್ಚರ್ಯವಿಲ್ಲ. ಚುಂಬಕದಂತೆ ಪರಣಿತರನ್ನು ತಮ್ಮ ಯೋಜನೆಗೆ ಸೆಳೆದುಕೊಂಡರು. ಗೆ ಬಂದವರು ಸೇನಾವಿಭಾಗದಲ್ಲಿ ಕರ್ನಲ್ ಆಗಿದ್ದ ವಿ.ಜೆ.ಸುಂದರಮ್. ಮಸ್ಯೆಗಳು ತಲೆ ಎತ್ತಿದಾಗ ಹತಾಶರಾಗಿ ಕೈಚೆಲ್ಲದೆ ಪರಿಹಾರ ಕಂಡುಹಿಡಿಯುವ ಚತುರರು. ಪೃಥ್ವಿ, ವಿನ್ಯಾಸಕ್ಕೆ ಮೊದಲ ಆದ್ಯತೆ ಎಂದು ತೀರ್ಮಾನಿಸಲಾಗಿತ್ತು. ಸುಂದರಮ್ ಸಾರಥ್ಯದಲ್ಲಿ " ಪೃಥ್ವಿ', ಪೃಥ್ವಿ ಯಿಂದ ಜಿಗಿಯುವುದರಲ್ಲಿ ಕಲಾಂ ಗೆ ವಿಶ್ವಾಸವಿತ್ತು.

  • ಚಿಂತನೆ
~.~
  • Login or register to post comments
  • 289 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಾಷ್ಟ್ರಪತಿಗಳಾಗಿ ಕಲಾಂ ಮುಂದುವರಿಯಲಿ
  • ಕಲಾಂ --ಸಲಾಂ
  • ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ?
  • ವೀಣೆ ಮತ್ತು ಡಾ. ಕಲಾಂ !
  • " ಮನಸ್ಸುಗಳ ಏಕತೆ " -ಕಲಾಂ ಮೇಷ್ಟ್ರು-ಲೇಖಕರು : ಪ್ರೊ. ಎಚ್. ಆರ್. ರಾಮಕೃಷ್ಣರಾವ್,
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕಾಡುಕೋಳಿಯ ಜಾಡು ಹಿಡಿದು...
  • ಅನ್ ಸೈಕ್ಲೋಪೀಡಿಯಾ - (ವಿಷಯ)ಮುಕ್ತ ವಿಶ್ವಕೋಶ
  • ಕೋಸಿ-ಬಿಹಾರದ ಕಣ್ಣೀರು
  • ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
  • ಬೂದಿಕೋಟೆ
  • ಅಬ್ಬ, ರಾಷ್ತ್ರಕ್ಕೇ ಅವಮಾನ!
  • ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
  • kishoreyc
    ಉ: ಚೈನಾ ೧೦೦ ನಾವು ೦
    August 29, 2008 - 10:02pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:01pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 37 ಅತಿಥಿಗಳು ಆನ್ಲೈನ್ ಇರುವರು.


ತಣ್ಣನೆ ಮನದಿ೦ ತಣ್ಣಮಾನಸಕೆ
ಮಣ್ಣಿನ ಕ೦ಪಿದು ಹರಡುತಿದೆ
ಬಣ್ಣದ ಮಾತೊಳು ಬ್ರಹ್ಮವನಾತ್ಮಕೆ
ಉಣ್ಣಬಡಿಸಿಯೌತಣಿಸುತಿದೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator