ಉಮಾ ಭಾರತಿ
ಉಮಾ ಭಾರತಿ
ಮೇಲೇರಲು ಹಂತಹಂತ
ಕೆಳಗೆಳೆಯಲು ದಾರಿ ಅನಂತ
ಇದು ರಾಜಕೀಯ ಅಂತ
ಬೇರೆಲ್ಲ ಮತ್ತೆ ಮೊದಲು ಸ್ವಂತ
ಒಮ್ಮೆ ಕುರ್ಚಿ ಬಿಟ್ಟರೆ
ಮುಷ್ಟಿ ಬಿಟ್ಟುಕೊಟ್ಟರೆ
ತಪ್ಪಿರಲಿ ಇಲ್ಲದಿರಲಿ
ವಾಪಸಿಲ್ಲ ಒಟ್ಟಾರೆ
ಗೊತ್ತಿಲ್ಲ ಹಾಗಾದರೆ
ಸಿಕ್ಕ ಸಿಕ್ಕಲ್ಲಿ
ಮಹಾಜನಗಳಿರುವಲ್ಲಿ
ಸಿಟ್ಟಾದರೆ
ನೀವೇ ಪಕ್ಷಕ್ಕೆ ಹೊರೆ!
ಇನ್ನು ಕುಳಿತು ಭಜನೆ ಮಾಡಿ
ಅಟಲನಾಮ ಪಾಯಸಕ್ಕೆ
ಲಾಲ್ ಕೃಷ್ಣ ಸಕ್ಕರೆ!
-ಗೋಪೀನಾಥ ರಾವ್
raogopi@yahoo.com

- Login or register to post comments
- 614 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: