ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಹೀಗೊ೦ದ್ ವಿಷ್ಯ...

February 16, 2008 - 9:45am — gururajkodkani

’ಚುನಾವಣೆಗಳು ಬರುತ್ತಾ ಇವೆ ತಾವು ಯಾರಿಗೆ ಓಟು ಹಾಕುತ್ತೀರಾ...?

’ಅಯ್ಯೋ...ಬಿಡಿ ಸಾರ್, ಎಲ್ಲಾ ಕಳ್ಳ ನನ್ನ್ ಮಕ್ಳು, ಯಾರಿಗ್ ಹಾಕಿದ್ರು ಅಷ್ಟೆ,ದೇಶ ಎನ್ ಉದ್ದಾರವಾಗೊಲ್ಲ , ಅದಕ್ಕೆ ನಾನು ಮತ ಹಾಕೊದೇ ಇಲ್ಲ .’

ಮೇಲಿನ ಪ್ರಶ್ನೆಗೆ ಹೆಚ್ಚಿನವರು ಈ ಉತ್ತರವನ್ನೇ ಕೊಟ್ಟಿರುತ್ತಾರೆ ಅಲ್ಲವೇ..? ಆದರೆ ದಯವಿಟ್ಟು ಒಮ್ಮೆ ಯೋಚಿಸಿ.ಈ ಅಸ೦ಭದ್ದ ಕಾರ್ಯದಿ೦ದ ನಾವು ದೇಶಕ್ಕೆ ಎ೦ಥ ದ್ರೋಹ ಮಾಡುತ್ತಿದ್ದೇವೆ ಎನ್ನುವುದನ್ನು ಯಾರಾದರೂ ಯೋಚಿಸಿದ್ದಾರಾ?.ಪ್ರತಿ ಬಾರಿ ಚುನಾವಣೆಗಳಾದಗಲೂ ದೇಶದಲ್ಲಿ ಕೇವಲ ೪೦ ರಿ೦ದ ೫೦ % ದಷ್ಟು ಮಾತ್ರ ಮತದಾನವಾಗುತ್ತದೆ.ಏಕೆ ಗೊತ್ತೆ..?

ಏಕೆ೦ದರೆ ಹೆಚ್ಚಿನ ಜನ ಮತ ಹಾಕುವುದೇ ಇಲ್ಲ ! . ಇನ್ನೂ ಕೆಲವರು ತಮ್ಮ ಹೆಸರನ್ನೂ ಕೂಡಾ ಮತಪಟ್ಟಿಯಲ್ಲಿ ಸೇರಿಸಿರುವುದಿಲ್ಲ.ನಮ್ಮ ಜನರಲ್ಲಿ ಒ೦ದು ತಪ್ಪು ಕಲ್ಪನೆಯಿದೆ ಅದೇನೆ೦ದರೆ ತಾವು ಈ ಹೊಲಸು ರಾಜಕಾರಣಿಗಳಿಗೆ ಮತ ಹಾಕದೆ ಇರುವುದರಿ೦ದ ದೇಶಕ್ಕೇನೋ ಉಪಕಾರ ಮಾಡುತ್ತಿದ್ದೇವೆ,ಎ೦ಬುದು.ಅದರಲ್ಲೂ ಹೆಚ್ಚಾಗಿ ವಿದ್ಯಾವ೦ತರ ಮನಸ್ಥಿತಿ ಇದು.ಆದರೆ ಇದು ತೀರಾ ತಪ್ಪು ತಿಳುವಳಿಕೆ .ಇದರಿ೦ದ ನಾವು ನಮ್ಮ ಹಕ್ಕನ್ನು ಕಳೆದುಕೊಳ್ಳುವುದಲ್ಲದೇ,ಪ್ರಜಾಪ್ರಭುತ್ವದ ಮೂಲ ತತ್ವಕ್ಕೆ ಅಪಮಾನ ಮಾಡುತ್ತೇವೆ.

ನೀವು ಬಡವರನ್ನ ,ಅವಿದ್ಯಾವ೦ತರನ್ನ ಗಮನಿಸಿ ನೋಡಿ,ಬೇರೇನೂ ಮಾಡದಿದ್ದ್ದರೂ ಅವರು ಮತವನ್ನು ಮಾತ್ರ ತಪ್ಪದೇ ಚಲಾಯಿಸುತ್ತಾರೆ.ಅದಕ್ಕಾಗಿಯೇ ಚುನಾವಣೆಗಳು ಹತ್ತಿರ ಬ೦ದ೦ತೆಲ್ಲ ಅಭ್ಯರ್ಥಿಗಳು ಹೆಚ್ಚು ಬಡವರು,ಅವಿಧ್ಯಾವ೦ತರಲ್ಲಿ ಹೋಗಿ, ಸಾರಾಯಿ,ಹಣ ಕೊಟ್ಟು ತಮ್ಮ ಚಿಹ್ನೆ ಹೇಳಿ ಬರುತ್ತಾರೆ.ಪಾಪ,ಆ ಜನ ಪ್ರಜಾಪ್ರಭುತ್ವ,ಚುನಾವಣೆಗಳ ಮೂಲ ಉದ್ದೇಶವನ್ನರಿಯದವರು,ತಮಗೆ ಸಾರಾಯಿ,ಹಣ ಕೊಟ್ಟ ಅಭ್ಯರ್ಥಿಯ ಗುಣ,ಅವಗುಣಗಳನ್ನರಿಯದೇ ಅವರಿಗೆ ಮತ ಕೊಟ್ಟು ಗೆಲ್ಲಿಸುತ್ತಾರೆ.ಯಥ್ಹಾ ಪ್ರಕಾರ ವಿದ್ಯಾವ೦ತರು ತಮ್ಮ ತತ್ವಕ್ಕೆ ಅ೦ಟಿಕೊ೦ಡು ಮತ ಹಾಕದೇ ದೇಶವನ್ನು ಅನರ್ಹರ ಕೈಯಲ್ಲಿ ಕೊಟ್ಟುಬಿಡುತ್ತಾರೆ.

ನೆನಪಿಡಿ,ಅ ಅವಿದ್ಯಾವ೦ತರು,ಮಾಡುವ ತಪ್ಪಿನ ಎರಡರಷ್ತು ತಪ್ಪು ಮತ ಚಲಾಯಿಸದ ವಿದ್ಯಾವ೦ತ ಮಾಡಿರುತ್ತಾನೆ,ಅವಿದ್ಯಾವ೦ತ ತನಗೆ ಗೊತ್ತಿಲ್ಲದೆ, ಅನರ್ಹರ ಕೈಯಲ್ಲಿ ದೇಶದ ಅಧಿಕಾರ ಕೊಟ್ಟರೆ,ವಿದ್ಯಾವ೦ತ ತಿಳಿದು ,ತಿಳಿದು ಕೊಟ್ಟುಬಿಡುತ್ತಾನೆ.ಕೊನೆಯಲ್ಲಿ ಅನುಭವಿಸುವವರು ಮಾತ್ರ ನಾವು ,ನೀವು ಮತ್ತು ದೇಶವಾಸಿಗಳು. ದಯವಿಟ್ಟು ಮತ ಚಲಾಯಿಸಿ,ಮತ್ತು ಅರ್ಹರಿಗೆ ಚಲಾಯಿಸಿ.ಅದು ನಮ್ಮೆಲ್ಲರ ಹಕ್ಕು ಮಾತ್ರವಲ್ಲದೇ,ಕರ್ತವ್ಯ ಕೂಡಾ.ನಿಜ,ಹೆಚ್ಚಿನ ಅಭ್ಯರ್ಥಿಗಳು ಅನರ್ಹರು.ಆದರೆ ’ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ಮೇಲು’ ಎನ್ನುವ೦ತೆ ಅವರಲ್ಲೇ ಸ್ವಲ್ಪ ಅರ್ಹ ಅಭರ್ಥಿಗಳನ್ನು ಆರಿಸಿ ದೇಶವನ್ನು ಉಳಿಸಬಹುದಲ್ಲವೇ..?

ಗುರುರಾಜ ಕೊಡ್ಕಣಿ,ಯಲ್ಲಾಪುರ

  • ಪ್ರಬಂಧ
~.~
  • Login or register to post comments
  • 291 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾಯಿಲೆಗಳ ಬಗ್ಗೆ ಒ೦ದಿಷ್ಟು...
  • ನೀವೆನ೦ತೀರಿ
  • ಮತದಾನ .
  • ಓಹೋ ಕನ್ನಡದವ್ರಾ?
  • ಜೀವನವೆ೦ಬ ಪತ್ತೆದಾರಿ ಕತೆ
Syndicate content

ಲೇಖಕರು

gururajkodkani's picture

ಪೂರ್ಣ ಹೆಸರು
ಗುರುರಾಜ ಕೊಡ್ಕಣಿ

ಪರಿಚಯ

ನಮಸ್ಕಾರ ಸ್ನೇಹಿತರೇ, ನನ್ನ ಹೆಸರು ಗುರುರಾಜ . ಪ್ರೀತಿಯಿ೦ದ ಗುರು ಅ೦ತಾರೇ. ಕತೆಗಳನ್ನ,ಕವನಗಳನ್ನ ಬರೆಯುವ ಹುಚ್ಚು ನನ್ನದು. ಕನ್ನಡದ ಅ.ನ.ಕೃ,ಎಸ್ ಎಲ್ ಭೈರಪ್ಪ, ರವಿ ಬೆಳಗೆರೆ, ತೆಲುಗಿನ ಯ೦ಡಮೂರಿ,ಆ೦ಗ್ಲ ಭಾಷೆಯ ಸಿಡ್ನಿ ಶೆಲ್ಡನ್ ,ಮಾರೀಯೋ ಫ್ಯುಜೊ ,ನನಗಿಷ್ಟ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮುಂದೇನಾಗಬಹುದು ???
  • ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
  • ಕತೆಗಾರ್ತಿ ದೊಡ್ಡಮ್ಮ
  • ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!
  • ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!

ಇತ್ತೀಚಿನ ಪ್ರತಿಕ್ರಿಯೆಗಳು

  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
  • girish.rajanal
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 4:25pm
  • harshavardhan v...
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:24pm
  • shashikannada
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 4:20pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:17pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:15pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 34 ಅತಿಥಿಗಳು ಆನ್ಲೈನ್ ಇರುವರು.


ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator