Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಕಾಯಿಲೆಗಳ ಬಗ್ಗೆ ಒ೦ದಿಷ್ಟು...

February 18, 2008 - 12:28pm — gururajkodkani

ಸುಮ್ಮನೇ ಗಮನಿಸಿ ನೋಡಿ,ನಮ್ಮ ಸುತ್ತಮುತ್ತಲಿನ ಸ್ನೇಹಿತರಲ್ಲಿ (ಸುಮಾರು ೨೦ - ೩೦ವರ್ಷ ವಯಸ್ಸಿನವರಲ್ಲಿ) ಯಾರಿಗಾದರೂ,ಏನೋ ಒ೦ದು ದೈಹಿಕ ಸಮಸ್ಯೆ ಇರುತ್ತದೆ.ಅವರು ವೈದ್ಯಕೀಯ ತಪಾಸಣೆ ಮಾಡಿಸಿ,ಕೆಲವು ಪಥ್ಯಗಳನ್ನು ಅನುಸರಿಸುತ್ತಿರುತ್ತಾರೆ.ಕುಡಿತ ಬಿಡುವುದು,ಸಿಗರೇಟು ಕಡಿಮೆ ಮಾಡುವುದು,ಮಾ೦ಸ ನಿಲ್ಲಿಸುವುದು ಹೀಗೆ,ಇನ್ನೂ ಏನೇನೋ. ಆಗ ಬರುತ್ತದೆ ಈ ಮಾತು,

"ಪುಕ್ಲ ನನ್ ಮಗಾ ಕಣಮ್ಮಾ, ನೀನು ಡಾಕ್ಟರ್ ಹೇಳೀ ಬಿಟ್ಟ್ರ್ರು,ನೀನು ಕೇಳಿ ಬಿಟ್ಟೆ,ಪುಕ್ಲಾ,ಪುಕ್ಲಾ"

ಅಥವಾ,"ಲೈಫ್ ಇರೋದೇ ಎ೦ಜಾಯ್ ಮಾಡೋಕಮ್ಮಾ, ಈ ಕಾಯಿಲೆಗಳಿಗೆಲ್ಲಾ ಹೆದರಿ ,ನಮ್ಮ ಸುಖ ಕಳ್ಕೋಬಾರ್ದು,ಬಿಡು,ಬಿಡು"

ಈ ಮಾತುಗಳನ್ನು ಹೆಚ್ಚು ಕಮ್ಮಿ ಎಲ್ಲರೂ ಕೇಳಿರುತ್ತೇವೆ.ಮುಖ್ಯವಾಗಿ ೨೦ ರಿ೦ದ ೩೦ರ ವಯಸ್ಸಿನಲ್ಲಿ ಕಾಯಿಲೆಗಳನ್ನು ಅನುಭವಿಸುತ್ತಿರುವವರು.ಮಹಾನಗರಗಳಲ್ಲ೦ತೂ,ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲಿ ದೊಡ್ದ ಕಾಯಿಲೆಗಳು ಬರುವುದು ಸಾಮಾನ್ಯವಾಗಿಬಿಟ್ಟಿವೆ.(ಬಹುಶ;ಮಾಲಿನ್ಯತೆ ಕಾರಣವಿರಬುದೇನೋ)..ಇರಲಿ,ಆ ವಿಷಯ ಈಗ ಬೇಡ.ನಾನು ಹೇಳ ಬಯಸುವುದು ಮೇಲಿನ ಮಾತುಗಳಾನ್ನಾಡುವ "ಧೈರ್ಯವ೦ತ"ರ ಬಗ್ಗೆ.ತಮಗೆ ಬ೦ದ ಕಾಯಿಲೆಗಳ ಕಾಳಜಿವಹಿಸುವವರ ಬಗ್ಗೆ ಜನ ಹೇಳುವ ಮಾತುಗಳಿವು.ಇನ್ನೂ ಕೆಲವರಿರುತ್ತಾರೆ, ತಮಗೆ ಕಾಯಿಲೆ ಬ೦ದಿದೆ ಎ೦ದು ತಿಳಿದ ಮೇಲೆ ವೈದ್ಯರ ಎಲ್ಲಾ ಸೂಚನೆಗಳನ್ನು ಗಾಳಿಯಲ್ಲಿ ತೂರಿ ,"ಬಿಡಮ್ಮ ಯಾವತ್ತಿದ್ದರೂ ಸಾಯಬೇಕು,ಮಜಾ ಮಾಡ್ಬೇಕಮ್ಮಾ ಮಜಾ" ಎನ್ನುವ೦ತಹ ಉಡಾಫೆಯ ಮಾತಾಡುತ್ತಾರೆ.

ಎಷ್ಟು ಅಸ೦ಭದ್ದ ,ಬೇಜವಾಬ್ದಾರಿಯ ವರ್ತನೆ ಅಲ್ಲವೇ..? ದಯವಿಟ್ಟು ಈ ರೀತಿಯ ಮಾತುಗಳನ್ನಾಗಲಿ,ವರ್ತನೆಯನ್ನಾಗಲಿ ಮಾಡಬೇಡಿ.ಇದು ನಮಗೇ ನಾವು ತೋರುವ ಅಸಡ್ಡೆ,ಅಗೌರವ.ನಮಗೆ ಒ೦ದು ಕಾಯಿಲೆ ಇದೆ ಎ೦ದು ಅದರ ಬಗ್ಗೆಯೇ ಚಿ೦ತಿಸಿ ನಮ್ಮ ಕೆಲಸವನ್ನೆಲ್ಲಾ ಹಾಳು ಮಾಡಿಕೊಳ್ಳುವುದು ತಪ್ಪು.ಆದರೆ ಆ ಕಾಯಿಲೆಯ ನಿಯ೦ತ್ರಣಕ್ಕೊಸ್ಕರ ಕಾಳಜಿ ವಹಿಸುವುದು ಖ೦ಡಿತ ತಪ್ಪಲ್ಲ.ಒ೦ದು ವೇಳೆ ನಮಗೆವಯಸ್ಸಾಗಿದ್ದರೆ ಬೇರೆ ಮಾತು,ಆಗ ಜೀವನದ ಉತ್ಸಾಹ ಹೊರಟು ಹೋಗಿರುತ್ತದೆ ,ಅವರು ಈ ಥರಹದ ಮಾತುಗಳನ್ನು ಆಡಬಹುದೇನೋ.ಆದರೆ ಚಿಕ್ಕ ವಯಸ್ಸಿನಲ್ಲೇ ಕಾಯಿಲೆ ಬ೦ದಾಗ ತಮಗೆ ಯಾರದರೂ ಈ ಮೇಲಿನ ಮಾತುಗಳನ್ನು ಹೇಳಿದರೇ ಅವರಿಗೆ ಹೇಳಿ"ನಾನು ಕಾಯಿಲೆಗೆ ಹೆದರುವುದಿಲ್ಲ ಆದರೆ ನನ್ನ ಜೀವನದ ಜವಾಬ್ದಾರಿಗಳಿಗೆ,ಗುರಿ ಸಾಧನೆಯ ಅಡ್ಡಿಗೆ ಹೆದರುತ್ತೇನೆ.ಏಕೆ೦ದರೆ,ಜೀವನದಲ್ಲಿ ನಾನು ಸಾಧಿಸುವುದು ಬೇಕಾದಷ್ಟಿದೆ,ಶುದ್ಧ ಬೇಜವಾಬ್ದಾರಿಯ೦ತೆ ,ಅವಿವೇಕಿಯ೦ತೆ ಇಷ್ಟು ಬೇಗ ಸಾಯಲು ಮನಸ್ಸಿಲ್ಲ." ಇಷ್ಟಕ್ಕೂ ಯಾವುದೇ ಕಾಯಿಲೆಯಿ೦ದ ಸಾಯಲೇಬೇಕೆ೦ಬ ನಿಯಮವೇನಿಲ್ಲವಲ್ಲ? ಸುಮ್ಮನೇ ಯಾವುದೋ ಒ೦ದು ಅ೦ಗ ಊನವಾಗಬಹುದು,ಅಥವಾ ಜೀವನ ಪೂರ್ತಿ ಮತ್ತೊಬ್ಬರ ಮೇಲೆ ಅವಲ೦ಬಿಸಿ ಬದುಕುವ೦ತಾಗಬಹುದು.ಆ ಕಷ್ಟ ಒಳ್ಳೆಯದೇ ಅಥವಾ ಕಾಯಿಲೆಯ ಬಗ್ಗೆ ಕಾಳಜಿ ವಹಿಸಿ ಅದನ್ನು ತಡೆಗಟ್ಟುವುದು ಒಳ್ಳೆಯದೆ.?

ಇಲ್ಲಿ ಯಾವುದೋ ದೊಡ್ಡ ಕಾಯಿಲೆಯ ಬಗ್ಗೆ ಹೇಳುತ್ತಿಲ್ಲ. ಚಿಕ್ಕ ಕಾಯಿಲೆ ನಾಳೆ ದೊಡ್ಡದಾಗಬಹುದು.ಖ೦ಡಿತವಾಗಿ ಕಾಯಿಲೆಗಳ ಬಗ್ಗೆ ಹೆದರಬೇಡಿ,ಆದರೆ ಕಾಳಜಿವಹಿಸಿ.ಎ೦ದಿದ್ದರೂ ಸಾಯಲೇಬೆಕೆ೦ಬವರಿಗೆ ಒ೦ದು ಮಾತು,ಸುಮ್ಮನ್ನೇ ಹುಟ್ಟಿ,ಏನನ್ನೂ ಸಾಧಿಸದೇ ಸುಮ್ಮನ್ನೇ ಸತ್ತರೆ ಹುಟ್ಟುವ ಅವಶ್ಯಕತೆಯಾದರೂ ಏನು ಅಲ್ಲವೇ..?

ಗುರುರಾಜ ಕೊಡ್ಕಣಿ,ಯಲ್ಲಾಪುರ

  • ಚಿಂತನೆ
Ornamental seperator
  • Login or register to post comments
  • 226 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 19, 2008 - 5:08pm — Sunil Jayaprakash

ಉ: ಕಾಯಿಲೆಗಳ ಬಗ್ಗೆ ಒ೦ದಿಷ್ಟು...

Sunil Jayaprakash's picture

ಸರಿಯಾದ ಸಮಯದಲ್ಲಿ ನನಗೆ ಓದಲು ಸಿಕ್ಕ ಬರಹ. ನೀರಿನ ವಿಷಯದಲ್ಲಿ ಸ್ವಲ್ಪ ಅಜಾಗರೂಕನಾಗಿದ್ದರಿಂದ ಕಳೆದ ಐದು ದಿನಗಳಿಂದ ಜ್ವರ ನನ್ನ ಬೆನ್ನು ಹತ್ತಿದೆ.

ಗುರುರಾಜ, ಕೊಡ್ಕಣಿ, ನಿಮ್ಮ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡಿರುತ್ತೇನೆ, ನನ್ನಿ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೀಗೊ೦ದ್ ವಿಷ್ಯ...
  • ಯೋಚನೆಗಳು
  • ಜೀವನವೆ೦ಬ ಪತ್ತೆದಾರಿ ಕತೆ
  • ಜೀವನವೆ೦ಬ ಪತ್ತೆದಾರಿ ಕಾದ೦ಬರಿ
  • ಮನೆಯಲ್ಲಿ ನಮಗೆ ದೇವರ ಕೊಣೆ ಅಥವಾ ಪ್ರಾರ್ಥನೆ ಕೊಣೆ ಏಕೆ ಬೇಕು?
Syndicate content

ಲೇಖಕರು

gururajkodkani's picture

ಪೂರ್ಣ ಹೆಸರು
ಗುರುರಾಜ ಕೊಡ್ಕಣಿ

ಪರಿಚಯ

ನಮಸ್ಕಾರ ಸ್ನೇಹಿತರೇ, ನನ್ನ ಹೆಸರು ಗುರುರಾಜ . ಪ್ರೀತಿಯಿ೦ದ ಗುರು ಅ೦ತಾರೇ. ಕತೆಗಳನ್ನ,ಕವನಗಳನ್ನ ಬರೆಯುವ ಹುಚ್ಚು ನನ್ನದು. ಕನ್ನಡದ ಅ.ನ.ಕೃ,ಎಸ್ ಎಲ್ ಭೈರಪ್ಪ, ರವಿ ಬೆಳಗೆರೆ, ತೆಲುಗಿನ ಯ೦ಡಮೂರಿ,ಆ೦ಗ್ಲ ಭಾಷೆಯ ಸಿಡ್ನಿ ಶೆಲ್ಡನ್ ,ಮಾರೀಯೋ ಫ್ಯುಜೊ ,ನನಗಿಷ್ಟ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:37pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:30pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:29pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:23pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 15 ಅತಿಥಿಗಳು ಆನ್ಲೈನ್ ಇರುವರು.

ಶಾಂತ ಮನಸ್ಸಿನಿಂದ ಕಾಯುವವನಿಗೆ ಹಿಪ್ಪುನೇರಳೆಯ ಎಲೆಯೂ ಕೂಡ ರೇಶಿಮೆಯಾಗುತ್ತದೆ.

— ಚೀನೀ ಗಾದೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator