ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಕನ್ನಡ ಭಾಷೆಯ ಅಳಿವು ಉಳಿವು

February 19, 2008 - 9:36pm — csomsekraiah

ಈಗ ಕನ್ನಡದಂತಹ ಪ್ರಾದೇಶಿಕ ಭಾಷೆಗಳ , ಉಳಿವು ಅಳಿವುಗಳ ಬಗ್ಗೆ ಹುಯಿಲೆದ್ದಿದೆ. ಆಧುನಿಕ ಜಗತ್ತಿನ ತಂತ್ರಜ್ಞಾನದ ಹುಚ್ಚು ಹೊಳೆಯಲ್ಲಿ ಅನೇಕ ಭಾಷೆಗಳು ಕೊಚ್ಚಿ ಹೋಗುತ್ತವೆನ್ನುವ ಆತಂಕ, ಆಯಾಯ ಭಾಷಿಕರ ಮನದಲ್ಲಿ ಸಂಶಯದ ಸುಳಿಗಳನ್ನು ಶೃಷ್ಟಿಸಿದೆ.

ಕನ್ನಡದಂತಹ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿರುವ , ಸಮೃದ್ದ ಶಬ್ಧ ಸಂಪತ್ತಿನಿಂದ ;ಅಪಾರ ನುಡಿಗಟ್ಟುಗಳಿಂದ ಜೀವಂತವಾಗಿರುವ ಭಾಷೆ ಅಳಿಯುವುದೆಂದರೆ,ಅದರ ಜೊತೆಯಲ್ಲಿಯೇ ಆ ಇಡೀ ಜನಾಂಗದ ಸಂಸ್ಕೃತಿ, ಜಾನಪದ ವೈಶಿಷ್ಟ್ಯಗಳು,ನಂಬಿಕೆ, ಆಚರಣೆ, ಭಾಷೆಗಿರುವ ತನ್ನದೇ ಆದ ಲಯ ,ಅಂದರೆ ಕೋಟ್ಯಾಂತರ ಜನ ಮಾನಸದ ಅನೇಕ ಮಜಲುಗಳು ವಿನಾಶವಾಗಿ ಹೋದಂತೆಯೇ ಸರಿ .

ಆದರೆ ಭಾಷಾ ನಾಶದ ಈ ಎಲ್ಲ ಗೊಂದಲಗಳು, ಕೇವಲ ಕಾಲ್ಪನಿಕ ಮತ್ತು ನಿರಾಧಾರ ಆಲೋಚನೆಗಳು ಎನ್ನುವುದೇ ಅತ್ಯಂತ ಸಮಾಧಾನದ ಸಂಗತಿ . ಯಾವ ವಿದ್ಯುನ್ಮಾನ ಮಾಧ್ಯಮಗಳು ಪ್ರಾದೇಶಿಕ ಭಾಷೆಗಳನ್ನು ಕೊಂದು ಹಾಕುತ್ತವೆಂದು ಆತಂಕಪಡಲಾಗಿತ್ತೋ ? ಅವೇ ಮಾಧ್ಯಮಗಳು ಇಂದು ಪ್ರಾದೇಶಿಕ ಭಾಷೆಗಳ ಬೆಳವಣಿಗೆಗೆ ಬಹು ವಿಧದ ಆಯಾಮಗಳನ್ನು ಒದಗಿಸಿ ಎಲ್ಲ ಕಾಲ್ಪನಿಕ ಆತಂಕಗಳನ್ನು ನಿವಾರಿಸಿವೆ. ಕಳೆದ ಶತಮಾನದಲ್ಲಿ ವಿದೇಶಗಳಿಗೆ ಹೋದವರಿಗೆ , ಸ್ವಭಾಷೆಯ ಗಂಧ ಸಹ ಸುಳಿಯುತ್ತಿರಲಿಲ್ಲ ಹತ್ತಾರು ವರ್ಷ ಅನಿವಾರ್ಯವಾಗಿ ತಾಯಿನಾಡಿನಿಂದ ದೂರವಾದವರಿಗೆ ತಮ್ಮ ಭಾಷೆಯೇ ಮರೆತು ಹೋಗುವ ಅಪಾಯವಿತ್ತು . ಇನ್ನು ಅವರ ಮಕ್ಕಳು ಮರಿಗಳ ಪಾಡನ್ನಂತೂ ಹೇಳುವುದೇ ಬೇಡ. ಅಕ್ಷರಶಃ ಅವರು ವಿದೇಶೀಯರೇ ಆಗಿಬಿಡುತ್ತಿದ್ದರು.
ಇಂದು ಕನ್ನಡಿಗರು ಯಾವ ದೇಶದಲ್ಲೇ ಇರಲಿ , ಕನ್ನಡದ ಟಿವಿ ಚಾನಲ್ ಗಳನ್ನು ನೋಡುವ ಅವಕಾಶ ಇದ್ದೇ ಇದೆ. ಅಂತರ್ಜಾಲದಲ್ಲಂತೂ ಕನ್ನಡ ತುಂಬಿಕೊಳ್ಳುತ್ತಿದೆ .ಕನ್ನಡಿಗರು ಬೆಂಗಳೂರಿನಲ್ಲಿದ್ದರೂ ಒಂದೇ ನ್ಯೂಯಾರ್ಕ್ ನಲ್ಲಿದ್ದರೂ ಒಂದೇ, ಭಾಷೆ , ಸಂಸ್ಕೃತಿ ಎಲ್ಲವೂ ಬೆರಳ ತುದಿಯಲ್ಲಿ ಲಭ್ಯ.

ಇಂತಹ ವಿದ್ಯಮಾನಕ್ಕೆ ಎಲೆಯ ಮರೆಯ ಕಾಯಿಯಂತೆ ಸದ್ದಿಲ್ಲದೆ ಕೆಲಸ ಮಾಡುತ್ತಿರುವ ಅನೇಕ ಸುಸಂಸ್ಕೃತ ಮನಸ್ಸುಗಳು ಕಾರಣವಾಗಿರುವುದು ಹೆಮ್ಮೆಯ ವಿಷಯ . ಬಹು ಹಿಂದೆಯೇ ಕನ್ನಡಕ್ಕೆ ’ಶ್ರೀಲಿಪಿ’ ಯಂತಹ ಬರಹ ಮಾಧ್ಯಮವನ್ನು ರೂಪಿಸಿದಂತಹ ಕೆ.ಪಿ. ರಾವ್, ಹಾಗೆಯೇ ’ಬರಹ’ದಂತಹ ಸರಳ ಲಿಪಿಯನ್ನು ಶೋಧಿಸಿದ ವಾಸು,(ಕನ್ನಡದಲ್ಲಿ ನಡೆದ ಈ ಬೆಳವಣಿಗೆಯೇ ಭಾರತೀಯ ಭಾಷೆಗಳ ಲಿಪಿಗಳಿಗೆ ಪ್ರೇರಣೆಯಾದುದು ಇನ್ನೂ ಹೆಮ್ಮೆಯ ವಿಷಯ)

ಅಂತರ್ಜಾಲ ಲೋಕದಲ್ಲಿ ಕನ್ನಡವನ್ನು ಕಟ್ಟಲು ಶ್ರಮಿಸಿದ ಯು.ಬಿ. ಪವನಜ, ಸಂಪದದಂತಹ ಸಂವಹನ ಮಾಧ್ಯಮವನ್ನು ಅಂತರ್ಜಾಲದಲ್ಲಿ ರೂಪಿಸಿ, ಬಹು ಜನರನ್ನು ಸೆಳೆದ ,ಹರಿಪ್ರಸಾದ್ ನಾಡಿಗರು ಮತ್ತು ಅವರ ಮಿತ್ರ ವೃಂದ ಇವರೆಲ್ಲರ ಕನ್ನಡ ಪ್ರೀತಿಯ ಪರಿಣಾಮವಾಗಿ ಇಂದು ಅಂತರ್ಜಾಲದಲ್ಲಿ ಕನ್ನಡ ತಲೆ ಎತ್ತಿ ನಿಂತಿದೆ .

ಅತಿ ದೊಡ್ಡ ವ್ಯಾಪಾರಿ ಕಂಪನಿಗಳಾದ ಗೂಗಲ್,ಯಾಹೂ,ರೆಡಿಫ್ ಮುಂತಾದವರೆಲ್ಲ ಪ್ರಾದೇಶಿಕ ಭಾಷೆಗಳ ಕಡೆಗೆ ಗಮನ ಹರಿಸಿರುವುದು,ಇದರಿಂದಾಗಿ ಕನ್ನಡ ಎಲ್ಲ ಕಡೆ ವಿಸ್ತರಿಸುತ್ತಾ ,ಹೊಸ ಜಗತ್ತಿನ ಸವಾಲಿಗೆ ಹೊಂದಿಕೊಳ್ಳುತ್ತಿರುವುದು ಎಲ್ಲವೂ ಆಶಾದಾಯಕ ವಾತಾವರಣವನ್ನು ಮೂಡಿಸಿವೆ .ಪತ್ರಿಕೆಗಳು,ಪುಸ್ತಕಗಳು,ಲೇಖನಗಳು,ವಿಕೆಪಿಡಿಯ,ಅಸಂಖ್ಯ ಬ್ಲಾಗುಗಳು ಹೀಗೆ ಅಂತರ್ಜಾಲದಲ್ಲಿ ಶ್ರೀಮಂತಗೊಳ್ಳುತ್ತಿರುವ ಸನ್ನಿವೇಶವನ್ನು ಕಂಡಮೇಲೂ ಕನ್ನಡ ಅಪಾಯದ ಅಂಚಿನಲ್ಲಿದೆ ಎಂದು ಯಾರಾದರೂ ಹೇಳಿದರೆ , ಅವರು ಗ್ರಹಿಕೆ ತಪ್ಪು ಎನ್ನದೆ ವಿಧಿ ಇಲ್ಲ.

  • ಭಾಷೆ-ಕನ್ನಡ
~.~
  • Login or register to post comments
  • 400 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 20, 2008 - 10:15am — mahesha

ಉ: ಕನ್ನಡ ಭಾಷೆಯ ಅಳಿವು ಉಳಿವು

mahesha's picture

ಸರಿಮಾತು! ನಂನಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 20, 2008 - 5:02pm — Sunil Jayaprakash

ಉ: ಕನ್ನಡ ಭಾಷೆಯ ಅಳಿವು ಉಳಿವು

Sunil Jayaprakash's picture

ಈ ದಿನ ಪ್ರಜಾವಾಣಿಯಲ್ಲಿ, ಐಟಿಯಿಂದ ಕನ್ನಡ ನಾಶ ಎಂಬುದಾಗಿ ಡಾ.ಯು.ಆರ್.ಅನಂತಮೂರ್ತಿಯವರು ಹೇಳಿರುವುದು ವರದಿಯಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 20, 2008 - 7:12pm — ವೈಭವ

ಉ: ಕನ್ನಡ ಭಾಷೆಯ ಅಳಿವು ಉಳಿವು

ವೈಭವ's picture

ಇಲ್ಲಿ ಅನಂತ ಮೂರುತಿಯವರನ್ನು ಒಪ್ಪಲಾಗದು. ಇಡೀ ಪರಪಂಚವೇ 'ಐಟಿ' ಅನ್ನುವುತ್ತಿರುವಾಗ( ಅದನ್ನು ಬಳಸುತ್ತಿರಬಹುದು ಅತವ ಬೆಳೆಸುತ್ತಿರಬೋದು) ನಾವು ಕನ್ನಡಿಗರು ಮಾತ್ರ ಬ್ಯಾಡ ಅನ್ನಕ್ಕಾಗುತ್ತ. ಅಂಗಾದರೆ ನಾವು ಬೆಳೆಯಕ್ಕಾಗುತ್ತ. ಉಳಿಯಕ್ಕಾಗುತ್ತ?

ಈ ಏನ್ಗುರು ಬರಹ ನೋಡಿ. ಸಕ್ಕತ್ತಾಗಿದೆ. http://enguru.blogspot.com/2008/02/google.html

ಇವತ್ತು ಗೂಗಲ್ ಅಂತ ದೊಡ್ಡ ಕಂಪನಿ ಕನ್ನಡಕ್ಕೆ ಕೀ-ಮಣೆ(ರೋಮನ್ನಲ್ಲಿ ಟಯ್ಪಿ, ಕನ್ನಡ ಲಿಪಿ ಬರುವುದು) ಮಾಡಿರುವುದು ಹುರುಪಿನ ವಿಶಯ ಅಲ್ಲವೆ.?
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 21, 2008 - 1:04pm — muralihr

ಉ: ಕನ್ನಡ ಭಾಷೆಯ ಅಳಿವು ಉಳಿವು

muralihr's picture

ಬಹುಶ: ಅವರು ಸಾ೦ಸ್ಖ್ರುತಿಕವಾಗಿ ಕನ್ನಡ ಸ೦ಸ್ಕೃತಿಯ ಮೇಲೆ ಐ.ಟಿ ಛಾಯೆ ಬಿದ್ದು , ನಮ್ಮ ಭಾಷೆ ಮತ್ತು ಜೀವನ ಪದ್ದತಿ
ನಶಿಸಿ ಹೋಗಿವೆ ಎನ್ನುವ ದನಿ ಮೂರ್ತಿಯವರ ಮಾತಲ್ಲಿ ಮೂಡಿರಬಹುದು. ಪೇಪರ್ ನವರು ಬರೇಯೋದು ಫಿಲ್ಟರ್ ಮಾಡಿ .
ಈಗಿನ ಸವಾಲು ನಮ್ಮ ಕರ್ನಾಟಕದ ಭಾಷೆಯ ಸಿರಿ ಕಿರಿಯದಾಗದೆ , ಲೌಕಿಕ ಸಿರಿಯೊ೦ದಿಗೆ ಬೆಳೆಸುವ ವಿಧಾನಗಳು ಯಾವುವು ?
ಅದಕ್ಕೆ ನಾವು ಯಾವ ಕಾರ್ಯ ಯೋಜನೆ ಮಾಡಬೇಕು ? ಅನ್ನೋದೆ ಪ್ರಶ್ನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 21, 2008 - 1:13pm — ವೈಭವ

ಉ: ಕನ್ನಡ ಭಾಷೆಯ ಅಳಿವು ಉಳಿವು

ವೈಭವ's picture

ಈ ಐ.ಟಿ., ಜಗತಿಸುವಿಕೆಯಿಂದ ನಾವು(ಕನ್ನಡಿಗರು,ಕನ್ನಡ) ಇನ್ನು ಹೆಚ್ಚು ಗಟ್ಟಿಯಾಗುತ್ತಿದೆ ಅನ್ಸುತ್ತೆ. ಹಿಂದೆಂದಿಗಿಂತಲೂ ನಾವು ಹೆಚ್ಚು ಒಗ್ಗಟ್ಟಾಗಿದ್ದೀವಿ.
ಬಾಶೆಯಲ್ಲಿ ಬದಲಾವಣೆಗಳಾಗುವುದು ಸಹಜ, ಹೊಸ ವಸ್ತುಗಳು, ಹೊಸ ವಿಶ್ಯಗಳು, ಹೊಸ ಸಂಗತಿಗಳು ಬಂದಾಗ ಹೀಗೆಲ್ಲ ಆಗುತ್ತವೆ. ಮೊದಲು ಟಿಪ್ಪುವಿನ ಕಾಲದಲ್ಲಿ ಕನ್ನಡಕ್ಕೆ ಅರೇಬಿಯನ್ ಪದಗಳು ಬಂದು ಸೇರಿಕೊಳ್ಳಲಿಲ್ಲವೆ.

ಹೊಸತನವನ್ನು ಬರಮಾಡಿಕೊಂದು ತನ್ನತನವನ್ನ ಉಳಿಸಿಕೊಳ್ಳುವುದ ಜಾಣತನ.

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 21, 2008 - 1:18pm — mahesha

ಉ: ಕನ್ನಡ ಭಾಷೆಯ ಅಳಿವು ಉಳಿವು

mahesha's picture

"ಕನ್ನಡ ಸ೦ಸ್ಕೃತಿಯ ಮೇಲೆ ಐ.ಟಿ ಛಾಯೆ" ಅಲ್ಲ "ಕನ್ನಡ ಸಂಸ್ಕೃತಿಯ ಮೇಲೇ ಐಟಿಯ ಕರಿನೆರಳು" ಅಂತ ಅದರ ಬಗ್ಗೆ ಬರೇರಿ.. Smiling

ಹಿಂಗೆ ಹೇಳ್ತಾ ಹೋದ್ರೆ...

ಕನ್ನಡ ಸ೦ಸ್ಕೃತಿಯ ಮೇಲೆ ಪಾಶ್ಚಿಮಾತ್ಯರ ಛಾಯ
ಕನ್ನಡ ಸ೦ಸ್ಕೃತಿಯ ಮೇಲೆ ಟಿವಿ ಛಾಯ
ಕನ್ನಡ ಸ೦ಸ್ಕೃತಿಯ ಮೇಲೆ ಬಿ.ಟಿ ಛಾಯ

ಏನ್ ಮಾಡೋದು.. ಈ ಛಾಯೆಗಳು ತಂಪಾಗೂ ಇರಬೋದಲ್ಲ!! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 21, 2008 - 1:14pm — mahesha

ಉ: ಕನ್ನಡ ಭಾಷೆಯ ಅಳಿವು ಉಳಿವು

mahesha's picture

ಹವುದು..

ಅವ್ರ ಮಾತು ಸರಿ...

ಐಟಿ ಅಂದ್ರೆ ಅಲ್ಲಿ Income Tax.. ಎಂದಾದ್ರೆ ಐಟಿ ರಿಟರ್ನನ್ನು ಕನ್ನಡದಲ್ಲಿ ಮಾಡಿದ್ದೀರ? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 22, 2008 - 8:55pm — csomsekraiah

ಉ: ಕನ್ನಡ ಭಾಷೆಯ ಅಳಿವು ಉಳಿವು

csomsekraiah's picture

ನನ್ನ ಕಂಪ್ಯುಟರ್ ಕೈ ಕೊಟ್ಟು , ಓಪನ್ ಮಾಡಲು ಸಾಧ್ಯವಾಗಿರಲಿಲ್ಲ, ಎಷ್ಟೊಂದು ಪ್ರತಿಕ್ರಿಯೆಗಳು ಬಂದಿವೆ! ಎಲ್ಲರಿಗೂ ಧನ್ಯವಾದಗಳು. ಕನ್ನಡದ ಬಗ್ಗೆ ಇರುವ ಕಾಳಜಿ ಇಲ್ಲಿ ಹೊರ ಹೊಮ್ಮಿದೆ. ಕನ್ನಡ ಬಳಸಲು ಆಸಕ್ತಿ ಇರಬೇಕು ಎನ್ನುವ ಮಾತು ನಿಜವಾದದ್ದೇ, ಆಸಕ್ತಿ ಇರುವವರಿಗೆ ಅವಕಾಶಗಳು ಹೆಚ್ಚಾಗುತ್ತಿವೆ, ಅದೇ ನನ್ನ ಸಂತೋಷಕ್ಕೆ ಕಾರಣ.ಇನ್ನೂ ಬಹಳ ಕೆಲಸ ಆಗಬೇಕು ಎನ್ನುವ ಮಾತೂ ಸಹ ಅಷ್ಟೇ ಸರಿ . ಎಲ್ಲರೂ ಮನಸ್ಸು ಮಾಡಿದರೆ ಯಾವ ಕೆಲಸ ಆಗುವುದಿಲ್ಲ ; ಇಲ್ಲಿ ಕೆಲಸ ಮಾಡುವವರನ್ನು ಹುರಿದುಂಬಿಸಿ, ಇನ್ನಷ್ಟು ಕೆಲಸ ಆಗುವಂತೆ ಮಾಡಬೇಕು, ಅದೇ ನನ್ನ ಆಸೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 22, 2008 - 8:57pm — csomsekraiah

ಉ: ಕನ್ನಡ ಭಾಷೆಯ ಅಳಿವು ಉಳಿವು

csomsekraiah's picture

ನನ್ನ ಕಂಪ್ಯುಟರ್ ಕೈ ಕೊಟ್ಟು , ಓಪನ್ ಮಾಡಲು ಸಾಧ್ಯವಾಗಿರಲಿಲ್ಲ, ಎಷ್ಟೊಂದು ಪ್ರತಿಕ್ರಿಯೆಗಳು ಬಂದಿವೆ! ಎಲ್ಲರಿಗೂ ಧನ್ಯವಾದಗಳು. ಕನ್ನಡದ ಬಗ್ಗೆ ಇರುವ ಕಾಳಜಿ ಇಲ್ಲಿ ಹೊರ ಹೊಮ್ಮಿದೆ. ಕನ್ನಡ ಬಳಸಲು ಆಸಕ್ತಿ ಇರಬೇಕು ಎನ್ನುವ ಮಾತು ನಿಜವಾದದ್ದೇ, ಆಸಕ್ತಿ ಇರುವವರಿಗೆ ಅವಕಾಶಗಳು ಹೆಚ್ಚಾಗುತ್ತಿವೆ, ಅದೇ ನನ್ನ ಸಂತೋಷಕ್ಕೆ ಕಾರಣ.ಇನ್ನೂ ಬಹಳ ಕೆಲಸ ಆಗಬೇಕು ಎನ್ನುವ ಮಾತೂ ಸಹ ಅಷ್ಟೇ ಸರಿ . ಎಲ್ಲರೂ ಮನಸ್ಸು ಮಾಡಿದರೆ ಯಾವ ಕೆಲಸ ಆಗುವುದಿಲ್ಲ ; ಇಲ್ಲಿ ಕೆಲಸ ಮಾಡುವವರನ್ನು ಹುರಿದುಂಬಿಸಿ, ಇನ್ನಷ್ಟು ಕೆಲಸ ಆಗುವಂತೆ ಮಾಡಬೇಕು, ಅದೇ ನನ್ನ ಆಸೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 22, 2008 - 8:57pm — csomsekraiah

ಉ: ಕನ್ನಡ ಭಾಷೆಯ ಅಳಿವು ಉಳಿವು

csomsekraiah's picture

ನನ್ನ ಕಂಪ್ಯುಟರ್ ಕೈ ಕೊಟ್ಟು , ಓಪನ್ ಮಾಡಲು ಸಾಧ್ಯವಾಗಿರಲಿಲ್ಲ, ಎಷ್ಟೊಂದು ಪ್ರತಿಕ್ರಿಯೆಗಳು ಬಂದಿವೆ! ಎಲ್ಲರಿಗೂ ಧನ್ಯವಾದಗಳು. ಕನ್ನಡದ ಬಗ್ಗೆ ಇರುವ ಕಾಳಜಿ ಇಲ್ಲಿ ಹೊರ ಹೊಮ್ಮಿದೆ. ಕನ್ನಡ ಬಳಸಲು ಆಸಕ್ತಿ ಇರಬೇಕು ಎನ್ನುವ ಮಾತು ನಿಜವಾದದ್ದೇ, ಆಸಕ್ತಿ ಇರುವವರಿಗೆ ಅವಕಾಶಗಳು ಹೆಚ್ಚಾಗುತ್ತಿವೆ, ಅದೇ ನನ್ನ ಸಂತೋಷಕ್ಕೆ ಕಾರಣ.ಇನ್ನೂ ಬಹಳ ಕೆಲಸ ಆಗಬೇಕು ಎನ್ನುವ ಮಾತೂ ಸಹ ಅಷ್ಟೇ ಸರಿ . ಎಲ್ಲರೂ ಮನಸ್ಸು ಮಾಡಿದರೆ ಯಾವ ಕೆಲಸ ಆಗುವುದಿಲ್ಲ ; ಇಲ್ಲಿ ಕೆಲಸ ಮಾಡುವವರನ್ನು ಹುರಿದುಂಬಿಸಿ, ಇನ್ನಷ್ಟು ಕೆಲಸ ಆಗುವಂತೆ ಮಾಡಬೇಕು, ಅದೇ ನನ್ನ ಆಸೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 20, 2008 - 6:56pm — ಶ್ಯಾಮ ಕಶ್ಯಪ

ಉ: ಕನ್ನಡ ಭಾಷೆಯ ಅಳಿವು ಉಳಿವು

ಶ್ಯಾಮ ಕಶ್ಯಪ's picture

ನಿಮ್ಮ ಆಶಾದಾಯಕ ಲೇಖನಕ್ಕೆ ಧನ್ಯವಾದಗಳು. ಒಂದೆರೆಡು ಮಾತು:

೧. ವಿದೇಶದಲ್ಲಿ ನೆಲಸಿರುವ ಕನ್ನಡಿಗರಲ್ಲಿ ಕನ್ನಡವನ್ನು ಬಳಸುವ ಆಸೆಯಿದ್ದಿದ್ದರೆ ಅವರು ಹಿಂದೆಯೂ ಕನ್ನಡ ಮರೆಯುತ್ತಿರಲಿಲ್ಲ. ಈಗಲೂ ಮರೆತಿಲ್ಲ. ಹಾಗೆಯೇ ಕನ್ನಡವನ್ನು ಬಳಸಲೇಬೇಕು ಎಂಬ ಕಾಳಜಿಯಿಲ್ಲದ ವಿದೇಶಿ ಕನ್ನಡಿಗರು ಹಿಂದೆಯೂ ಕನ್ನಡವನ್ನು ಮರೆತಿದ್ದಾರೆ, ಇಂದೂ ಮರೆಯುತ್ತಿದ್ದಾರೆ.

೨. "ಆಧುನಿಕ ಜಗತ್ತಿನ ತಂತ್ರಜ್ಞಾನದ ಹುಚ್ಚು ಹೊಳೆಯಲ್ಲಿ ಅನೇಕ ಭಾಷೆಗಳು ಕೊಚ್ಚಿ ಹೋಗುತ್ತವೆನ್ನುವ ಆತಂಕ": ಇದು ನಿಜವೋ ಸುಳ್ಳೋ ಗೊತ್ತಿಲ್ಲ.
ಆದರೆ, (with all due respect) ಸಂಪದ, ಬರಹ ಮುಂತಾದುವುಗಳ ಅಳಿಲು ಸೇವೆ ಕನ್ನಡವನ್ನು ಅಂತರ್ಜಾಲದಲ್ಲಿ ಎತ್ತಿಹಿಡಿದಿದೆ ಎಂದು ಹೇಳುವುದು ಉತ್ಪ್ರೇಕ್ಷೆಯಾದೀತು. ಇವತ್ತಿಗೂ ಲಕ್ಷಾಂತರ ಕನ್ನಡಿಗರಿಗೆ ಅಂತರ್ಜಾಲದಲ್ಲಿ ಕನ್ನಡ ಇದೆ ಎಂಬುದೇ ಗೊತ್ತಿಲ್ಲ, ಬೇಕಾಗಿಯೂ ಇಲ್ಲ. ಹಾಗೆ ನೋಡುತ್ತಾ ಹೋದರೆ, ಇಂದಿನ ದಿವಸದಲ್ಲಿ, ಅಂತರ್ಜಾಲದಲ್ಲಿ ಕನ್ನಡ ಉಳಿಯುವುದು ನಮಗೆಲ್ಲ (ಸಂಪದ, ಬರಹ ಮುಂತಾದವುಗಳ ಬಳಕೆದಾರರಿಗೆ) ವೈಯುಕ್ತಿಕ ಮಟ್ಟದಲ್ಲಿ ಬಹುಮುಖ್ಯವಾದರೂ ಕನ್ನಡದ ಇಂದಿನ ಸ್ಥಿತಿಗತಿ ಮತ್ತು ತೊಂದರೆಗಳಿಗೂ ಅಂತರ್ಜಾಲದಲ್ಲಿ ಕನ್ನಡದ ಉಳಿವು-ಅಳಿವುಗಳಿಗೂ ಅಂತಹ ದೊಡ್ಡ ಸಂಬಂಧವಿಲ್ಲ.

ಅಂದ ಮಾತ್ರಕ್ಕೆ ಸಂಪದ ಬರಹಗಳ ಕೊಡುಗೆ ಕ್ಷುಲ್ಲಕ ಖಂಡಿತಾ ಅಲ್ಲ. ಇವುಗಳ ಕೊಡುಗೆ ಅಪಾರ. ಆದರೆ ಕನ್ನಡದ ಅಳಿವು,ಉಳಿವುಗಳನ್ನು ನಿರ್ಧರಿಸುವ ಮಟ್ಟಿಗೆ ಬೆಳೆಯಲು ಇಂತಹ ತಂತ್ರಾಂಶಗಳು ಇನ್ನೂ ಬಹಳ (ಹಲವು ಪಟ್ಟು ಹೆಚ್ಚು) ಬೇಕು.

ಇಂತಿ,
ಶ್ಯಾಮ ಕಶ್ಯಪ.
--

ನೀ ಲೋಕದ ಕಾಳಜಿ ಮಾಡುತೆನಂತ್, ಯಾರ ಬ್ಯಾಡಂದಾರ ಮಾಡಪ್ಪ ಚಿಂತಿ - ಸಂತ ಶಿಶುನಾಳ ಶರೀಫ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಫೆಬ್ರವರಿ ೨೧ -ನಾಶವಾಗುತ್ತಿರುವ ಭಾಷೆಗಳು- ಕನ್ನಡ
  • ಕನ್ನಡಿಗರು ಯಾವಾಗಲೂ ಹಿಂಬಾಲಕರಲ್ಲ
  • ಬೆಂಗಳೂರು ಚಿತ್ರೋದ್ಯಮದ ಕೈಯಲ್ಲಿ ಬಡವಾಗುತ್ತಿರುವ ಕನ್ನಡ
  • ಭಾಷೆಯಲ್ಲಿ ಸರಿ ಮತ್ತು ತಪ್ಪು
  • ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
  • ಕತೆಗಾರ್ತಿ ದೊಡ್ಡಮ್ಮ
  • ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!
  • ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ

ಇತ್ತೀಚಿನ ಪ್ರತಿಕ್ರಿಯೆಗಳು

  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
  • girish.rajanal
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 4:25pm
  • harshavardhan v...
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:24pm
  • shashikannada
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 4:20pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:17pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:15pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 32 ಅತಿಥಿಗಳು ಆನ್ಲೈನ್ ಇರುವರು.


ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator