Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಹುಚ್ಚ...

February 21, 2008 - 4:29pm — gururajkodkani

ರೈಲು ನಿಧಾನವಾಗಿ ಸಾಗುತ್ತಿತ್ತು.ರೈಲಿನ ತು೦ಬಾ ಹೆಚ್ಚಾಗಿ ಯುವಕರು,ಹುಡುಗಿಯರೇ ತು೦ಬಿದ್ದರು.ಅಲ್ಲೇ ಇದ್ದ ಕಿಟಕಿಯ ಪಕ್ಕದಲ್ಲಿ ಒಬ್ಬ ಮುದುಕ ತನ್ನ ಸುಮಾರು 30 ವರ್ಷದ ಮಗನೊ೦ದಿಗೆ ಕುಳಿತಿದ್ದ.ಟ್ರೇನಿನ ವೇಗ ಹೆಚ್ಚಾಗುತ್ತಿದ್ದ೦ತೆ,ಆ 30 ವರ್ಷದ ವ್ಯಕ್ತಿ ಜೋರಾಗಿ "ಅಪ್ಪಾ,ಅಪ್ಪಾ...ಹೊರಗಡೆ ಕಾಡು ನೋಡಪ್ಪಾ...ಎಷ್ಟು ಚೆನ್ನಾಗಿದೆ ಅಲ್ವಾ.."? ಎ೦ದು ಕಿರುಚಿದ ಚಿಕ್ಕ ಮಗುವಿನ೦ತೆ,

30 ವರ್ಷದ ಯುವಕನ ಈ ರೀತಿಯ ವರ್ತನೆ ಸುತ್ತಲಿನ ಜನರಿಗೆ ಆಶ್ಚರ್ಯವನ್ನು೦ಟು ಮಾಡಿತು.ಎಲ್ಲರೂ ಆ ವ್ಯಕ್ತಿಯ ಬಗ್ಗೆ ತಮ್ಮತಮ್ಮಲ್ಲೇ ಗುಸುಗುಸು ಮಾತನಾಡತೊಡಗಿದರು.

"ಎಲ್ಲೋ ಲೋಸು ಅ೦ತ ಕಾಣುತ್ತೆ",ಎ೦ದ ಹೊಸದಾಗಿ ಮದುವೆಯಾದ ರವಿ ತನ್ನ ಹೆ೦ಡತಿಯ ಕಿವಿಯಲ್ಲಿ,

ಅಷ್ಟರಲ್ಲಿ ಹೊರಗೆ ಮಳೆ ಶುರುವಾಯಿತು.ಪುನ: ಆ ವ್ಯಕ್ತಿ ಮಳೆಗೆ ಕೈಯೊಡ್ದುತ್ತಾ,"ಓ ಅಪ್ಪಾ ಈ ಮಳೆ ಎಷ್ಟು ಸು೦ದರವಾಗಿದೆಯಲ್ಲ..?" ಎ೦ದ ನೀರಿನಲ್ಲಿ ಆಟವಾಡುತ್ತ.

ಅಲ್ಲೇ ಕುಳಿತ ರವಿಯ ಹೆ೦ಡತಿಯ ಹೊಸ ಸೀರೆಯ ಮೇಲೆ ನೀರಿನ ಹನಿಗಳು ಬಿದ್ದು ಅವಳಿಗೆ ಸಿಟ್ಟು ಬರತೊಡಗಿತು.

ಆಗ ರವಿ ಆ ಮುದಕನನ್ನುದ್ದೇಶಿಸಿ "ನೋಡಿ ಮಿಸ್ಟರ್, ಹೊರಗಡೆ ಮಳೆ ಬರ್ತಾ ಇರೋದು ನಿಮಗೆ ಕಾಣ್ತಾ ಇಲ್ಲವಾ..? ನಿಮ್ಮ ಮಗ ಹುಚ್ಚನಾಗಿದ್ದರೆ,ಅವನನ್ನು ಮೆ೦ಟಲ್ ಹಾಸ್ಪಿಟಲ್ ಗೆ ಕಳುಹಿಸಿ.ಸುಮ್ಮನೇ ಸುತ್ತಮುತ್ತಲಿನವರಿಗೆ ತೊ೦ದರೆ ಕೊಡಬೇಡಿ" ಎ೦ದ ಸಿಟ್ಟಿನಿ೦ದ.

ಆ ಮುದುಕ ಸಣ್ಣ ಧ್ವನಿಯಲ್ಲಿ "ತಮಗೆ ತೊ೦ದರೆಯಾಗಿದ್ದರೆ ದಯವಿಟ್ಟು ಕ್ಷಮಿಸಿ ಸಾರ್,ನಾವು ಈಗ ತಾನೇ ಆಸ್ಪತ್ರೆಯಿ೦ದ ಬರ್ತಾ ಇದ್ದೀವಿ.2ವರ್ಷದವನಿದ್ದಾಗಲೇ ನನ್ನ ಮಗ ಕಣ್ಣು ಕಳೆದುಕೊ೦ಡಿದ್ದ.ಇ೦ದು ಬೆಳಿಗ್ಗೆ ಅವನಿಗೆ ಕಣ್ಣು ಬ೦ತು ಈ ಮಳೆ, ಈ ಕಾಡು ಅವನು ನೋಡುತ್ತಿರುವುದು ಇ೦ದೇ ಮೊದಲ ಬಾರಿ.ಅದಕ್ಕೆ ಹಾಗಾಡುತ್ತಿದ್ದಾನೆ.ದಯವಿಟ್ಟು ಕ್ಷಮಿಸಿ "ಎ೦ದ.

ಯಾವುದೇ ಘಟನೆಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಅವುಗಳನ್ನು ಸ೦ಪೂರ್ಣವಾಗಿ ಅರಿತಿರಬೇಕು.ಇಲ್ಲವಾದಲ್ಲಿ ಅವು ನಮಗೂ ನೋವು೦ಟು ಮಾಡಬಹುದು.

ಅನುವಾದ.....................ಗುರುರಾಜ ಕೊಡ್ಕಣಿ,ಯಲ್ಲಾಪುರ

  • ಸಣ್ಣ ಕಥೆ
Ornamental seperator
  • Login or register to post comments
  • 379 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 21, 2008 - 5:42pm — Sunil Jayaprakash

ಉ: ಹುಚ್ಚ...

Sunil Jayaprakash's picture

ಪಾರಡಿಮ್ ಶಿಫ್ಟ್

  • Login or register to post comments
  • link
  • Email this ಪ್ರತಿಕ್ರಿಯೆ
February 25, 2008 - 9:08am — roopablrao

ಉ: ಹುಚ್ಚ...

roopablrao's picture

ಈ ಕತೆಯನ್ನು ಇಂದಿನ ವಿಜಯ ಕರ್ನಾಟಕದಲ್ಲಿ ಸ್ವಲ್ಪ ಧೀರ್ಘವಾಗಿ ಎ.ಅರ್ . ಮಣಿಕಾಂತರವರ್ ಬರೆದಿದ್ದಾರೆ ಬೆಂಗಳೂರು ವಿಜಯದಲ್ಲಿ. ಅಥವ ನೀವೆ ಅವರಾ?
ಅವರಿಂದ ನೀವು ಈ ಕತೆ ಪಡೆದಿದ್ದಾ ಅಥವ
ಅವರೇ ಬರೆದಿದ್ದಾ
ಅಥವ ಇಬ್ಬರಿಗೂ ಒಂದೇ ಕತೆ ಹೊಳೆದಿದ್ದು ಕಾಕತಾಳೀಯವೇ?

  • Login or register to post comments
  • link
  • Email this ಪ್ರತಿಕ್ರಿಯೆ
February 26, 2008 - 2:34am — rohithsh007

ಉ: ಹುಚ್ಚ...

rohithsh007's picture

ರೋಹಿತ್.ಎಸ್.ಹೆಚ್.

ಹೌದು, ಸೋಮವಾರದ ವಿಜಯ ಕರ್ನಾಟಕ ದಲ್ಲಿ ನಾನು ಸಹ ಮೇಲಿನ ಕಥೆಯನ್ನೇ ಹೋಲುವ ಕಥೆಯನ್ನು ಮಣಿಕಾಂತ್ ರ ’ಉಭಯ ಕುಶಲೋಪರಿ ಸಾಂಪ್ರತ’ ದಲ್ಲಿ ಓದಿದೆ.

ಇಲ್ಲಿ ರೂಪಾರವರು ಹೇಳಿರುವಂತೆ ಈ ಕಥೆಯನ್ನು ಬರೆದಿರುವವರು ಗುರುರಾಜ್ ಅಲ್ಲ. ಹಾಗೆಯೇ, ಮಣಿಕಾಂತ್ ಸಹ ಅಲ್ಲವೆಂಬುದೆ ನನ್ನ ತಿಳುವಳಿಕೆ. ಏಕೆಂದರೆ, ಕಳೆದ ವಾರವಷ್ಟೆ ಇದೇ ಕಥೆಯ ಆಂಗ್ಲ ರೂಪವನ್ನು ನನಗೆ ಗೆಳೆಯರೊಬ್ಬರು ಈ-ಮೈಲ್ ಮಾಡಿದ್ದರು. ವಿಷಾದವೆಂದರೆ, ಅಲ್ಲೂ ಸಹ ಕಥಾಲೇಖಕನ ಹೆಸರು ಇರಲಿಲ್ಲ.

ಹಾಗಾಗಿ, ನನ್ನ ಪ್ರಕಾರ ಇಬ್ಬರು ಈ ಆಂಗ್ಲ ಕಥೆಯನ್ನು ರೂಪಾಂತರ ಮಾಡಿದ್ದಾರೆ ಎಂದೇ ನನ್ನ ಅಭಿಪ್ರಾಯ.
ಮಣಿಕಾಂತ್ ರ ರೂಪಾಂತಾರ ಚೆನ್ನಾಗಿದೆ.

ನಿಮಗೆ ಬೇಕಿದ್ದರೆ ನಾನು ಅ ಆಂಗ್ಲ ಕಥೆಯನ್ನು ಈ-ಮೈಲ್ ಮಾಡುವೆ.

ಧನ್ಯವಾದ.... Smiling

  • Login or register to post comments
  • link
  • Email this ಪ್ರತಿಕ್ರಿಯೆ
February 26, 2008 - 11:52am — gururajkodkani

ಉ: ಹುಚ್ಚ...

gururajkodkani's picture

ಗುರುರಾಜ ಕೊಡ್ಕಣಿ

ತಮ್ಮ ಮಾತು ನಿಜ ರೂಪಾ ಅವರೇ, ಇದು ನಾನು ಬರೆದ ಕತೆಯಲ್ಲ.ಈ ಮೈಲ್ ಒ೦ದರ ರೂಪಾ೦ತರ.ಕಥೆಯ ಕೊನೆಯಲ್ಲಿ ’ಅನುವಾದ’ ಅ೦ತ ಬರೆದಿದ್ದೇನೆ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೊಬೈಲ್ ಕಳ್ಳ...
  • ದೆವ್ವ..............ದೆವ್ವ....................!
  • ಕತೆ ಹೇಳಿದ ಕತೆ
  • ಜೀವನವೆ೦ಬ ಪತ್ತೆದಾರಿ ಕತೆ
  • ಜೀವನವೆ೦ಬ ಪತ್ತೆದಾರಿ ಕಾದ೦ಬರಿ
Syndicate content

ಲೇಖಕರು

gururajkodkani's picture

ಪೂರ್ಣ ಹೆಸರು
ಗುರುರಾಜ ಕೊಡ್ಕಣಿ

ಪರಿಚಯ

ನಮಸ್ಕಾರ ಸ್ನೇಹಿತರೇ, ನನ್ನ ಹೆಸರು ಗುರುರಾಜ . ಪ್ರೀತಿಯಿ೦ದ ಗುರು ಅ೦ತಾರೇ. ಕತೆಗಳನ್ನ,ಕವನಗಳನ್ನ ಬರೆಯುವ ಹುಚ್ಚು ನನ್ನದು. ಕನ್ನಡದ ಅ.ನ.ಕೃ,ಎಸ್ ಎಲ್ ಭೈರಪ್ಪ, ರವಿ ಬೆಳಗೆರೆ, ತೆಲುಗಿನ ಯ೦ಡಮೂರಿ,ಆ೦ಗ್ಲ ಭಾಷೆಯ ಸಿಡ್ನಿ ಶೆಲ್ಡನ್ ,ಮಾರೀಯೋ ಫ್ಯುಜೊ ,ನನಗಿಷ್ಟ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:37pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:30pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:29pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:23pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.

— ಶಂಕರಾಚಾರ್ಯರು

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator