Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

"ಆ ದಿನಗಳು" ಮತ್ತು ಚೇತನ್ ಕುಮಾರ್.

February 21, 2008 - 11:22pm — muralihr

Chetan

ಆವತ್ತು ಮಹಾಭಾರತದ ಕಾರ್ಯಕ್ರಮವನ್ನು ನ್ಯಾಷನಲ್ ಕಾಲೇಜಿನಲ್ಲಿ ಆಯೋಜಿಸಿದರು.ಪ್ರಪ೦ಚದಲ್ಲಿಯೇ ಅತೀ ಉದ್ದವಾದ ಚಿತ್ರ ಪ್ರದರ್ಶನವನ್ನು ನೋಡುತ್ತಾ ನಾನು ನಡೆಯುತ್ತಿದೆ.ಅಲ್ಲಿಗೆ ಒಬ್ಬ ಯುವಕ ತನ್ನೊಡನೆ ಮತ್ತೊಬ್ಬಳು ಪರದೇಶಿ ಹೆಣ್ಣಿನೊ೦ದಿಗೆ ಬ೦ದಿದ್ದಾ.ಆತ ಮಹಾಭಾರತದ ಪಾತ್ರಗಳನ್ನು ಅವಳಿಗೆ ತಿಳಿಸುತ್ತಿದ್ದಾ.ನೋಡೋಕ್ಕೆ ರಾಜ ಕುಮಾರನ೦ತಿದ್ದಾ.ಕರ್ನಾಟಕ ಕಾದ೦ಬರಿಯ ನಾಯಕನಾದ ಚ೦ದ್ರಪೀಡನ೦ತೆ ಅವನ ಭಾವ ಮತ್ತು ಚಲನೆಯಿತ್ತು."ಯಾರಪ್ಪ ಇಷ್ಟೊ೦ದು ಆಸಕ್ತಿಯಿ೦ದಾ ನಮ್ಮ ಸ೦ಸ್ಕೃತಿಯನ್ನು ಪಾಡಿ ಹೊಗಳುತ್ತಿರುವುದು ?"
ಅ೦ದು ಕೊ೦ಡು ಸುಮ್ಮನೆಯಿದ್ದೆ. ಆಷ್ಟರಲ್ಲಿ ಗಲಾಟೆಯ ಧ್ವನಿ ಹೊರಗಿನಿ೦ದಾ ಕೇಳಿ ಬ೦ತು.ಇಬ್ಬರು ಹೊರಗೆ ಬ೦ದರು.
ಹೆಚ್ಚಾಗಿ ಕಾರ್ಪೋರೇಟ್ ವಾತಾವರಣ ಇದಿದ್ದರಿ೦ದಾ ಎಲ್ಲಿಯೂ ಕನ್ನಡ ಬ್ಯಾನರ್ಗಳು ಕಾಣಲಿಲ್ಲಾ.

ಅದೇ ಕ್ಷಣಕ್ಕೆ ಕರ್ನಾಟಕ ನವೋದಯದ ಶ್ರೀ ರ೦ಗಾಚಾರ್ಯ ಅಲ್ಲಿಗೆ ಬ೦ದರು. ಅವರಿಗೆ ಸಿಕ್ಕಾಪಟ್ಟೆ ಕೋಪ ಬ೦ದು , ಕಾರ್ಯಕ್ರಮವನ್ನು ಆಯೋಜಿಸಿದವರನ್ನು ಅಲ್ಲಿಗೆ ಕರೆದು ಕನ್ನಡವನ್ನು ತಿರಾಸ್ಕಾರ ಭಾವದಿ೦ದಾ ನೋಡುವ ಕಾರ್ಪೋರೇಟ್ ಮನಸ್ಸಿನ ಬಗ್ಗೆ ಖೇದವನ್ನು ವ್ಯಕ್ತ ಪಡಿಸಿದರು. ಅಲ್ಲಿಯೇ ಉತ್ಸವನ್ನು ನೋಡುತ್ತಿದ್ದ ನಾನು ಅವರನ್ನು ಅಭಿನ೦ದಿಸಲು ಪಕ್ಕ ಹೋಗಿ ನಿ೦ತೆ.
ಆ ಯುವಕ ಕೂಡಾ "ಅವರು ಹೇಳ್ತಾಯಿರೋದು ಸರಿ ! " ಎ೦ದು ಕೆಚ್ಚಿನಿ೦ದ ಗರ್ಜಿಸಿದ.

ಶ್ರೀ ರ೦ಗಾಚಾರ್ಯ ಅವರ ಪರಿಚಯ ಮತ್ತು ಭೇಟಿ ವಸ೦ತಪುರದ ತ್ಯಾಗರಾಜ ಆರಾಧನೆಯಲ್ಲಿ ನನಗೆ ಆಗಿತ್ತು.ಶ್ರೀ ರ೦ಗಾಚಾರ್ಯರು ಕನ್ನಡದ ಪತ್ರಿಕೋದ್ಯಮದ ಭೀಷ್ಮಾಚಾರ್ಯರೆ೦ದೆನಿಸಿಕೊ೦ಡ ತಾತಾಚಾರ್ಯ ಶರ್ಮರವರ ಸುಪುತ್ರ. ಇವರು "ವಿಶ್ವ ಕರ್ನಾಟಕ" ಪತ್ರಿಕೆಯನ್ನು ಮೊಟ್ಟ ಮೊದಲಿಗೆ ಕನ್ನಡದಲ್ಲಿ ಪ್ರಾರ೦ಭಿಸಿದರು. ತ೦ದೆಯೊಡನೆ ಸ್ವಾತ೦ತ್ರ್ಯಕ್ಕೆ ಹೋರಾಡಿದ ವೀರ ಸ೦ಪ್ರದಾಯ ಅವರ ರಕ್ತದಲ್ಲಿದೆ.ಅವರು ಅ೦ದು ಮಾಡಿದ ವಾದಕ್ಕೆ ಮಣಿದು ಕಾರ್ಯಕ್ರಮದ ಎಲ್ಲೆಡೆ ಕನ್ನಡದ ಬಾನರ್ ಗಳೂ ಅರ್ಧ ಘ೦ಟೆಯಲ್ಲಿ ಸಿದ್ಧವಾಯ್ತು.
ಇವೆಲ್ಲಾ ನೋಡ್ತಾಯಿದ್ದಾ ಆ ಯುವಕ , ನನ್ನ ಹತ್ರಾ ಬ೦ದು ತನ್ನ ಪರಿಚಯ ಮಾಡ್ಕೊ೦ಡು,
"ಇವರ್ಯಾರು ಅ೦ದಾ ?"
ನಾನು ಅವರ ಬಗ್ಗೆ ತಿಳಿದಷ್ಟು ನುಡಿದೆ.
"ಇವರನ್ನು ಭೇಟಿ ಯಾಗಬೇಕಿತ್ತು . ನಾನು ಕನ್ನಡ ನಾಟಕ ರ೦ಗಕ್ಕೆ ಅಧ್ಯಾಯನ ಮಾಡೊಕ್ಕೆ ಅಮೇರಿಕಾದಿ೦ದ ಬ೦ದಿದ್ದೇನೆ.
ನನ್ನ ಹೆಸರು ಚೇತನ್ " ಅ೦ದಾ.
"ಆಯ್ತು ಬಿಡು ಅದಕ್ಕೇನು ಅವರ ಮನೆ ನ೦ಗೇ ಚೆನ್ನಾಗಿ ಗೊತ್ತು. ನಿನ್ನ ಪೋನ್ ನ೦ ಕೊಡು"
ಅ೦ದು ಹೇಳಿ ಬ೦ದೆ. ನ೦ತರ ಈ ವಿಷಯ ಪ್ರಸ್ತಾಪಿಸುವುದು ಮರೆತು ಹೋಯ್ತು. ಅವನು ಪೂನ್ ಮಾಡಲಿಲ್ಲಾ.

 

ಇದಾದ ಸುಮಾರು ಮೂರು ತಿ೦ಗಳ ನ೦ತರ ಮೇಧಾ ಪಟೇಕರ್ ಭಾಷಣ ಕೇಳೋಕ್ಕೆ ಹೋದಾಗ
ಅದೇ "ಚೇತನ್ " ಅಲ್ಲಿಗೆ ಆಗಮಿಸಿ ಮೇಧಾ ಪಟೇಕರ್ ಭಾಷಣ ವನ್ನು ಚಿತ್ರೀಕರಿಸಿದ.
ಕಾರ್ಯಕ್ರಮ ಆದ ಮೇಲೆ ಮತ್ತೆ ಭೇಟಿಯಾಗಿ MG ರೋಡ್ ನಲ್ಲಿ ಪರಿಸರ ದ ವಿಷಯ ವಾಗಿ ದೀರ್ಘ
ಚರ್ಚೆ ಮಾಡಿ ವಿದಾಯ ಹೇಳಿದೆವು. ಚೇತನ್ ಗೆ ದೇಶದ ಸ್ಥಿತಿ ಗತಿಗಳ ಜನ ಬಗ್ಗೆ ತೀರಾ ಬೇಸರವಿತ್ತು..
"ಅಲ್ಲಾ ನಮ್ಮ ದೇಶ ಎ೦ತಾ ದೇಶಾ ? ಏನಿಲ್ಲಾ ಇಲ್ಲಿ ? ಯಾಕೆ ಇವರಿಗೆ ಇಷ್ಟೊ೦ದು ನಿರ್ಲಕ್ಷ್ಯಾ?"
"ನಾವೇನ್ ಮಾಡ ಬೇಕು ?? ಏನಾದರೂ ಮಾಡಲೇ ಬೇಕು ?? "
ಅ೦ತಾ ವಿಶ್ವಾಸದ ದನಿಯಿ೦ದ ನುಡಿದ. ಕನ್ನಡ ಮತ್ತು ನಾಡಿನ ಸ೦ಸ್ಕೃತಿಗೆ ಅತ್ಯ೦ತ ಕಾಳಜಿ ಅವನ ದನಿಯಲ್ಲಿ ಮೂಡಿತ್ತು.
ಆಶ್ಚರ್ಯಕರ ಸ೦ಗತಿ ಅ೦ದರೆ , ನನ್ನ ಮಿತ್ರರೆಲ್ಲಾ ಆವಾಗಲೇ ಅಮೇರಿಕಾ ಸೇರಿ ತಮ್ಮ ಕುಟು೦ಬದ ಜೊತೆ Seatle
ನಲ್ಲಿ Settle ಆಗಿರಬೇಕಾದರೆ, ಇವನ್ಯಾರೋ ಅಮೇರಿಕಾದಲ್ಲಿ ಹುಟ್ಟಿ ಬೆಳೆದು ಬೆ೦ಗಳೂರಿನಲ್ಲಿ ಕೂಡಾ Settle
ಆಗದೇ,ಇಲ್ಲಿ ಯಾವುದೋ ಹಳ್ಳಿಯ ಶಾಲೆಯಲ್ಲಿ ಪಾಠಾ ಮಾಡ್ತಾ ಇರಬೇಕಾದರೆ ಹಾಗೂ ಕನ್ನಡವನ್ನು ಇಷ್ಟೊ೦ದು ಪ್ರೀತಿ
ಮಾಡಬೇಕಾದರೆ ಇವನಲ್ಲಿ ಏನೋ ಇರಬೇಕು ಅ೦ದ್ಕೊ೦ಡೆ..ಏನೋ ಮಾಡ್ತಾನೇ "ಈ ಹುಡುಗ " ಅ೦ದ್ಕೊ೦ಡೇ ...
ಮುರಳಿ , ಜೀವನದಲ್ಲಿ "ಪಾಷನ್ ಮುಖ್ಯಾ".. "I like passionate people..like
Medha Patekar...Indians are not passionate "

ಅಲ್ಲಿ೦ದಾ ಮಾತು ಮಕ್ಕಳ ಶಿಕ್ಷಣದತ್ತಾ ಸಾಗಿತು, ಅಮೇರಿಕಾದ ಶಿಕ್ಷಣ ಪದ್ದತಿ ಮತ್ತು ಭಾರತದ ಶಿಕ್ಷಣ ಪದ್ದತಿಯ ಏರು ಪೇರುಗಳನ್ನು ಕುರಿತು ಮಾತಾಡಿದ. ಹೀಗೆ ಹಲವಾರು ಸ್ಪೂರ್ತಿದಾಯಕವಾದ ಮಾತುಗಳನ್ನಾಡ್ತಾ ಇಬ್ಬರೂ ಟಾಟಾ ಹೇಳಿದೆವು.
ಅವರ ತ೦ದೆ ತಾಯಿ ವೃತ್ತಿಯಲ್ಲಿ ವೈದ್ಯರಾಗಿ, ಅವನಿಗೆ ಚಿಕ್ಕ ವಯಸ್ಸಿನಿ೦ದಾ ಕನ್ನಡ ಮತ್ತು ನಮ್ಮ ದೇಶದ ಸ೦ಸ್ಕೃತಿಯ ಪರಿಚಯ ಮಾಡಿಸಿದ್ದರು.ಇದರ ಪರಿಣಾಮವಾಗಿ ಅವನ ಕನ್ನಡ ಇ೦ಗ್ಲೀಷ್ ಗಿನ್ನಾ ಚೆನ್ನಾಗಿದೆ. ಕನ್ನಡ ಶುದ್ಧವಾಗಿ ಪರಿಣಾಮಕಾರಿಯಾಗಿ ಮಾತಾಡುವ ಕುಶಲತೆ ಅವನು ಅದು ಹೇಗೆ ಬೆಳೆಸಿಕೊ೦ಡನೋ ನನಗ೦ತೂ ತಿಳಿಯದು.

 

Chetan2

ನ೦ತರ ಅವನನ್ನು ಕ೦ಡಿದ್ದು ಬೆ೦ಗಳೂರಿನ ಗಲ್ಲಿ ಗಲ್ಲಿಗಳ ವಾಲ್ ಪೋಸ್ಟರ್ ಗಳ ಮೇಲೆ.
"ಆ ದಿನಗಳು " ಚಿತ್ರದಲ್ಲಿ ಚೇತನ್ ನಾಯಕನಾಗಿ ನಟಿಸಿ ಜನರ ಮೆಚ್ಚುಗೆ ಗಳಿಸಿದ್ದಾನೆ.
ನಿನ್ನೆ ಪೋನ್ ಮಾಡಿ
"ಏನ್ ಗುರು ನಿನ್ನ ಕತೆ ಯಿದು ? ಹೀರೋ ಗೀರೋ ಆಗಿದ್ದೀಯ೦ತೆ ?"
"ಏನೋ ಜೀವನದಲ್ಲಿ ಎನೇನ್ ಆಗುತ್ತೆ " -- Life is full of possibilities..u cee..
ಅ೦ದು ತನ್ನ ಕತೆಯನ್ನು ಎರಡು ವಾಕ್ಯದಲ್ಲಿ ಹೇಳಿ ಮುಗಿಸಿದ.
"ನಿನ್ನ ನಾಟಕ ಕೂಡಾ ಓದಬೇಕು . ಹೆ೦ಗೆ ನಡಿತಾ ಇದೆ.. ಏನ್ ಮಾಡ್ತಾ ಇದ್ದೀಯಾ .."
ಅ೦ತಾ ಕೆಲವು ಪ್ರೀತಿಯ ನುಡಿಗಳನ್ನು ನುಡಿದು ಮನಸ್ಸಿಗೆ ಹಿತವನ್ನು ಉ೦ಟು ಮಾಡಿದ.
"ಸದ್ಯಕ್ಕೆ ಕೆಲವು ಶೂಟಿ೦ಗ್ ಇದೆ. ಊರಾಚೆ ಇದ್ದೀನಿ , ಬ೦ದ ಮೇಲೆ ಮೀಟ್ ಆಗೋಣಾ. "

 

ಆಗ "ಮನುಷ್ಯ ಬದುಕಲು ಧೈರ್ಯ ಮಾಡಿದರೆ ಜೀವನ ತಾನೇ ತಾನಾಗಿ ಅವನ ಪಾಲಿಗೆ ಬಾಗಿಲು ತೆರೆದು ಅವನನ್ನು ಕರೆದೊಯ್ಯುತ್ತೆ"
ಎ೦ಬ ಅರಿವಾಯಿತು.

  • ಅನುಭವ ಕಥನ
Ornamental seperator
  • Login or register to post comments
  • 612 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 22, 2008 - 10:09am — varunbhatbm

ಉ: "ಆ ದಿನಗಳು" ಮತ್ತು ಚೇತನ್ ಕುಮಾರ್.

varunbhatbm's picture

ಸೊಗಸಾಗಿದೆ ನಿಮ್ಮ ಅನುಭವ..
ಚೇತನ್ ನಿಜಕ್ಕೂ ಚೆನ್ನಾಗಿ ಅಭಿನಯ ಮಾಡಿದ್ದಾರೆ ಆ ಚಿತ್ರದಲ್ಲಿ...
ಅವರು ಕನ್ನಡದ ಬಗ್ಗೆ ಇಷ್ಟು ಪ್ಯಾಷನೇಟ್ ಅಂತ ಗೊತ್ತಿರಲಿಲ್ಲ........

-ವರುಣ ಭಟ್

  • Login or register to post comments
  • link
  • Email this ಪ್ರತಿಕ್ರಿಯೆ
February 22, 2008 - 10:20pm — sindhu

ಉ: "ಆ ದಿನಗಳು" ಮತ್ತು ಚೇತನ್ ಕುಮಾರ್.

sindhu's picture

ಮುರಳಿ,

ಆಸಕ್ತಿಯುತವಾಗಿದೆ ಲೇಖನ. 'ಆ ದಿನಗಳ'ನ್ನು ನೋಡಿಲ್ಲ ನಾನು. ಚಿತ್ರದ ಬಗ್ಗೆ, ನಟರ ಸಾಮರ್ಥ್ಯದ ಬಗ್ಗೆ ಓದಿ, ಕೇಳಿ ತಿಳಿದಿದ್ದೆ.

ಒಬ್ಬ ವ್ಯಕ್ತಿ ಜನಪ್ರಿಯನಾದನೆಂದರೆ, ಅವನ ಕಾಲೆಳೆಯಲು ಮಾಧ್ಯಮಗಳು ವಿನಾಕಾರಣ ಹವಣಿಸುತ್ತವೆ. ಕೆಲವು ಸಲ ಸಮಾಜವೂ ಅದರ ಗತಿಗೆ ಹೆಜ್ಜೆ ಹಾಕುತ್ತದೆ. ಅಂತಹುದರಲ್ಲಿ, ಈ ಯುವಪ್ರತಿಭೆಯ ಅಪರೂಪದ ವೈಶಿಷ್ಟ್ಯದ ಬಗ್ಗೆ ತುಂಬ ಪ್ರೀತಿಯಿಂದ ಬರೆದ ಸಾಲುಗಳು ಇಷ್ಟವಾದವು.

ಮೆಚ್ಚುಗೆಯ ಪ್ರಾಮಾಣಿಕತೆ ಮನಮುಟ್ಟುವಂತಿದೆ.

ಪ್ರೀತಿಯಿಂದ
ಸಿಂಧು

  • Login or register to post comments
  • link
  • Email this ಪ್ರತಿಕ್ರಿಯೆ
February 22, 2008 - 11:18pm — hamsanandi

ಉ: "ಆ ದಿನಗಳು" ಮತ್ತು ಚೇತನ್ ಕುಮಾರ್.

hamsanandi's picture

ಮುರಳಿ ಅವರೆ,

ಚೇತನ್ ಅವರನ್ನು ಆತ್ಮೀಯವಾಗಿ ಪರಿಚಯಿಸಿದ್ದೀರಿ. ಧನ್ಯವಾದಗಳು.

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
February 22, 2008 - 11:49pm — sritri

ಉ: "ಆ ದಿನಗಳು" ಮತ್ತು ಚೇತನ್ ಕುಮಾರ್.

sritri's picture

ಮುರಳಿ, ನೀವು ಬರೆದಿರುವ ಚೇತನ್ ಪರಿಚಯ ಲೇಖನ ಬಹಳ ಆತ್ಮೀಯವೆನಿಸಿತು.

ಚೇತನ್ ನಮ್ಮೂರಿನ (ಶಿಕಾಗೊ) ಹುಡುಗ ಎಂದು ಹೇಳಿಕೊಳ್ಳಲು ನಮಗೆಲ್ಲಾ ಹೆಮ್ಮೆ ಮತ್ತು ಖುಷಿ.

ಚೇತನ್ ಇಲ್ಲಿದ್ದಾಗಲೂ ಇಲ್ಲಿಯ ಕನ್ನಡಕೂಟದ ನಾಟಕಗಳಲ್ಲಿ ಭಾಗವಹಿಸುತ್ತಿದ್ದರೆಂದು ಕೇಳಿ ತಿಳಿದಿದ್ದೇನೆ.

ಚೇತನ್ ಕನ್ನಡ ಚಿತ್ರರಂಗದಲ್ಲಿ ಉಳಿಯಲಿ, ಬೆಳೆಯಲಿ ಎಂದು ಹಾರೈಸುತ್ತೇನೆ.

  • Login or register to post comments
  • link
  • Email this ಪ್ರತಿಕ್ರಿಯೆ
February 24, 2008 - 1:27pm — csomsekraiah

ಉ: "ಆ ದಿನಗಳು" ಮತ್ತು ಚೇತನ್ ಕುಮಾರ್.

csomsekraiah's picture

ಪ್ರತಿ ದಿನ ಭ್ರಷ್ಟಾಚಾರ, ಬಾಂಬು ದಾಳಿ, ಕೆಟ್ಟ ರಾಜಕಾರಣ, ದೊಡ್ಡವರ ದಡ್ಡ ಜಗಳ ಇವೆಲ್ಲವುಗಳಿಂದ ತಲೆ ಕೆಟ್ಟು ಹಾಳಾಗುವ ವೇಳೆಗೆ, ಈ ನಾಡಿನ ಬಗ್ಗೆ ,ನುಡಿಯ ಬಗ್ಗೆ, ಇದನ್ನು ಉಳಿಸಿಕೊಳ್ಳುವ ಆಸಕ್ತಿಯನ್ನು ತೋರಿಸುತ್ತಾ, ಆರೋಗ್ಯವಂತ ಚಿಂತನೆಗಳಿರುವ, ಯುವ ಮನಸ್ಸುಗಳ ಬಗ್ಗೆ ಬರುವ ಲೇಖನಗಳು ಒಂದಿಷ್ಟು ಸಂತೋಷ, ಭರವಸೆಗಳನ್ನು ಬೆಳಸುತ್ತವೆ . ಅದಕ್ಕಾಗಿ ಧನ್ಯವಾದಗಳು.

  • Login or register to post comments
  • link
  • Email this ಪ್ರತಿಕ್ರಿಯೆ
February 24, 2008 - 4:29pm — ಶಿವ

ಉ: "ಆ ದಿನಗಳು" ಮತ್ತು ಚೇತನ್ ಕುಮಾರ್.

ಶಿವ's picture

'ಆ ದಿನಗಳು' ನೋಡಿದ್ದೇನೆ. ಇಷ್ಟವಾಗಿತ್ತು.ಚೇತನ್ ಕೂಡ..21 ವರ್ಶಗಳು ಅಮೇರಿಕಾದಲ್ಲಿದ್ದ ಆತ ಕನ್ನಡ ಮಾತನಾಡುವುದನ್ನು ನೋಡಿ ಆಶ್ಚರ್ಯ ಪಟ್ಟಿದ್ದೆ(ಆದರೆ ಸಿನೆಮಾದಲ್ಲಿ ಆತನ ವಾಯ್ಸನ್ನು ಬಳಸಿಕೊಂಡಿಲ್ಲ!).ನಾಟಕ, ಅದರಲ್ಲೂ ಕನ್ನಡ ನಾಟಕ ಆತನನ್ನು ಕರ್ನಾಟಕಕ್ಕೆ ಕರ್ಕೊಂಡು ಬಂತು ಅಂತಾ ಕೇಳಿ ಇನ್ನೂ ಆಶ್ಚರ್ಯ ಪಟ್ಟಿದ್ದೆ.ಇನ್ನೂ ಒಳ್ಳೆಯ ಸಿನೆಮಾಗಳಲ್ಲಿ ನಟಿಸಲಿ.

ಆ ದಿನಗಳಲ್ಲಿಯೇ ಚೇತನ್ ಗೊತ್ತಿತ್ತು ನಿಮಗೆ.Smiling

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಝೆನ ಕಥೆ ೩೬: ಛತ್ರ
  • "ಲವ್" / ಹೇಟ್ ಪದದ ಚರಿತ್ರೆ
  • ಮುಕ್ತಾಯ
  • ಝೆನ್ ಕಥೆ ೩೩: ಸಾವಧಾನ!
  • ಇವರೀಗ ಯಾವ ಕಾಲದಲ್ಲಿದ್ದಾರೆ!
Syndicate content

ಲೇಖಕರು

muralihr's picture

ಪೂರ್ಣ ಹೆಸರು
muralihr

ಪರಿಚಯ

ಸ್ವಲ್ಪ ಕಥ ಕಾವ್ಯ ಬರೆಯೋ ಹುಚ್ಚು. ಓದಿದ್ದು ಮೈಸೂರು, ಬೆಳೆದಿದ್ದು ಮಲೆನಾಡು. ಕೆಲ್ಸಕ್ಕಾಗಿ ಬೆ೦ಗಳೂರು.
ಕೊಳಲು ಕಲಿತ್ತಾ ಇದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:10pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:00pm
  • harshab
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 1:59pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 1:51pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 1:29pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 12:29pm
  • nag4pl
    ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ
    May 16, 2008 - 12:26pm
  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

— ಜಾನ್ ಅಶ್‌ಬೆರಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator