ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ನಾ ಕಂಡ ಚೆನ್ನೈ

December 9, 2005 - 9:22pm — tvsrinivas41

ಕುಡಿಯಲು ಸಿಗಲೊಲ್ಲದು ಹನಿ ಶುದ್ಧ ನೀರು
ಬೀದಿಬೀದಿಯಲೂ ಕಾಣಬರುವುದು ಬೀರು ಬಾರು
ಈಗಿಲ್ಲಿ ನಡೆದಿಹುದು ಅಮ್ಮನವರ ದರಬಾರು
ಕೆಲವೊಮ್ಮೆ ಸಾಗುವುದು ಅಣ್ಣನವರ ಕಾರುಬಾರು

ತಂಬಿ ತಂಗಚ್ಚಿಗಳು ಮತ ಯಾಚನೆಗಾಗಿಹ ಗೊಂಬೆಗಳು
ನನ್ನ ಕಣ್ಣಿಗೆ ಮಾತ್ರ ಅವರು ಉಸಿರಾಡುತಿಹ ಜೀವಿಗಳು
ಕೊಚ್ಚೆಯಲೂ ರಚ್ಚೆ ಹಿಡಿಯದ ಹಸುಗೂಸುಗಳು
ಮತ ಚಲಾಯಿಸದೇ ಸೂತ್ರ ಹಿಡಿವ ಶ್ರೀಮಂತ ಜಿಗಣೆಗಳು

ಸಣ್ಣ ಮಳೆ ಬರಲೂ ಈ ಊರಾಗುವುದೊಂದು
ದೊಡ್ಡ ಕೊಚ್ಚೆ ಗುಂಡಿ
ಸುಭಿಕ್ಷದಲಿ ಭೂಗರ್ಭ ಸೀಳಿ ಭೋರ್ಗರೆವುದು
ದುರ್ನಾತದ ಮಲನೀರೆಂಬ ಪ್ರಚಂಡಿ

ತಾನೇನು ಕಡಿಮೆ ಇಲ್ಲವೆಂದು ಎತ್ತಿ ಬಿಸಾಕುವುದು
ಸತ್ತ ಜಲಚರಗಳ ಆ ಸಮುದ್ರ ದೇವತೆ
ಇವೆಲ್ಲದರ ಗೊಡವೆ ಇಲ್ಲದ್ದೆ ಸುಖಿಸುವರು
ತಂಬಿ ತಂಗಚ್ಚಿಗಳು ನಿರ್ಲಿಪ್ತರಂತೆ

ಕೆರೆ ಕಟ್ಟೆ ಒಡೆಯೆ ಊರೊಳಗೆ ಹರಿ ಬಿಟ್ಟರು
ನೀರೊಂದಿಗೆ ಶತಮಾನದ ಗಲೀಜು
ಊರ ತುಂಬಾ ಎಲ್ಲೆಲ್ಲಿ ನೋಡಲೂ ಕೊಳಚೇ ನೀರು
ಆದರೂ ಕುಡಿಯಲು ಸಿಗಲೊಲ್ಲದು ಹನಿ ಶುದ್ಧ ನೀರು

  • ಕಾವ್ಯ ಮತ್ತು ಕವನ
~.~
  • Login or register to post comments
  • 613 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 10, 2005 - 8:35am — Sunil Jayaprakash

ಚೆನ್ನೈನಲ್ಲೂ ಬಾರುಗಳೇ.

Sunil Jayaprakash's picture

tvsrinivas41 wrote:
ಕುಡಿಯಲು ಸಿಗಲೊಲ್ಲದು ಹನಿ ಶುದ್ಧ ನೀರು ಬೀದಿಬೀದಿಯಲೂ ಕಾಣಬರುವುದು ಬೀರು ಬಾರು.

ಅಯ್ಯೋ, ಶ್ರೀನಿವಾಸರವರೇ, ನಾನು ಬರೀ ನಮ್ಮ ಬೆಂದಕಾಳೂರಿನಲ್ಲಿ ಮಾತ್ರ ಎಲ್ಲೆಂದರಲ್ಲಿ ಬಾರುಗಳು ಎಂದು ತಿಳಿದಿದ್ದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 10, 2005 - 9:03am — tvsrinivas41

ಎಲ್ಲ ಊರಲ್ಲೂ ಹೊಲಗೇರಿ

tvsrinivas41's picture

ನಮ್ಮೂರೇ ಯಾಕೆ, ಎಲ್ಲ ಊರುಗಳಲ್ಲೂ ಹೊಲಗೇರಿಗಳಿವೆ. ಬೆಂಗಳೂರಿನಲ್ಲಿ ಬಾರಿನ ಬಾಗಿಲು ಮುಚ್ಚಿದ್ದರೆ ಚೆನ್ನೈನಲ್ಲಿ ಬಾಗಿಲೇ ಇಲ್ಲದ ಛಾವಣಿ ಇರದ ಬಾರುಗಳು. ಇನ್ನು ಮುಂಬೈನಲ್ಲಿ ಸಾರ್ವತ್ರಿಕ ಬಾರುಗಳು.

ನಮ್ಮೂರೇ ಚೆನ್ನಾ ನಮ್ಮವರೇ ಚೆನ್ನ - ಅಂತೀರಾ?

ವಂದನೆಗಳೊಂದಿಗೆ
---
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 10, 2005 - 11:22am — Sunil Jayaprakash

ಹೌದು. ಇಗೋ ಇಲ್ಲಿದೆ, ಆ ಚರಣ.

Sunil Jayaprakash's picture

ಈ ದೇಶ ಚೆನ್ನ, ಈ ಮಣ್ಣು ಚಿನ್ನ, ಇನ್ನೆಲ್ಲು ನಾ ಕಾಣೆನಲ್ಲಾ,
ಇಂಥ ಅಂದ, ಇಂಥ ಚೆಂದ, ನಮ್ಮ ನಾಡಿಗೆ ಸಾಟೀ ಇಲ್ಲ.

ಈ ದೇಶ ಚೆನ್ನ, ಈ ಮಣ್ಣು ಚಿನ್ನಾ..ಆಆಆಆಆಆಆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾವೇರಿ ನೀರಿಡಾರ್ ಯೋಜನೆ
  • ರಚ್ಚೆ
  • ನಾ ಸುತ್ತಿದ ಹಳ್ಳಿಗಳು
  • ಕುಡಿಯುವ ನೀರನ್ನು ಕ್ಲೋ'ರಿನ್'ನಿಂದ ತೊಳೆಯಬಹುದೇ?
  • ಪ್ರತಿ ರಾತ್ರಿಯೂ...
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಯಾರ ಮುಡಿಗೆ ಸೌಂದರ್ಯ ಕಿರೀಟ...
  • ರಸ್ತೆ ನೀರಿನಿಂದ ಮಸ್ತ್ ಬೆಳೆ
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ‘ಇರುವೆ’ (ನೀ ಎಲ್ಲೆಲ್ಲೂ ಇರುವೆ)ಗಳು ಅಂತರ್ಜಲ ಮಟ್ಟ ಹೆಚ್ಚಿಸುವ ‘ಬ್ಯಾಂಕರ್’ಗಳು!
  • ‘ಸಂತೆ’ ಎಂಬ ವ್ಯಾವಹಾರಿಕ ಚೌಕಾಶಿಯ ‘ನಾಟಕ’!

ಇತ್ತೀಚಿನ ಪ್ರತಿಕ್ರಿಯೆಗಳು

  • sathishcv
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 8:40pm
  • ಮನಹ್ಪಠಲ
    ಉ: ಎಂ ಪಿ ಶಂಕರ್ - ಟಾಟಾ
    July 20, 2008 - 5:47pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:45pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:32pm
  • rasheedgm
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 4:49pm
  • anil.ramesh
    ಉ: ಧಾರವಾಡದ ನವಿಲೂರ ಕೆರೆಯಲ್ಲಿ ಆಹಾರ ಹೆಕ್ಕುತ್ತಿರುವ ಶಾಪಗ್ರಸ್ಥ ! ಟಿಟ್ಟಿಭ ಹಕ್ಕಿ ಕುಟುಂಬ. ಚಿತ್ರ: ಹರ್ಷವರ್ಧನ ಶೀಲವಂತ.
    July 20, 2008 - 11:49am
  • ASHOKKUMAR
    ಉ: ನನ್ನಜ್ಜನ ಬೆಚ್ಚಗಿನ ನೆನಪುಗಳು
    July 20, 2008 - 11:32am
  • Ananth.R
    ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
    July 20, 2008 - 11:22am
  • ರೇಖಾ
    ಉ: ಒ೦ದು ಬೆಚ್ಚನೆಯ ನೆನಪು..
    July 20, 2008 - 9:45am
  • Jayalaxmi.Patil
    ಉ: ಕತ್ತಲೆಯಿಂದ ಹೊರ ಬಂದ ಖಾದಿ
    July 19, 2008 - 11:01pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 28 ಅತಿಥಿಗಳು ಆನ್ಲೈನ್ ಇರುವರು.


"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."

— ಕುವೆಂಪು (ಹೀಗೆ ಪತ್ರಿಕೆ ಹಾಕುವ ಹುಡುಗನಿಗೆ ಬೈಯುತ್ತಿದ್ದರಂತೆ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator