ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ನನ್ನ ಓಟದ ಹಾದಿ

December 12, 2005 - 9:50pm — tvsrinivas41

ಇಲ್ಲಿ ಬಂದಾಗ ತಿಳಿದಿದ್ದೆ
ಹಾದಿಯೇ ಇಲ್ಲದ ಬಟ್ಟ ಬಯಲು
ಅಮ್ಮ ತೋರಿಸಿದ ಹಾದಿ ತುಳಿದೆ
ಇದೊಂದೇ ಹಾದಿ ಎಂದು ತಿಳಿದೆ

ಅಪ್ಪ ಒಂದು ಹಾದಿ ತೋರಿಸೇ
ಅಣ್ಣ ಅಕ್ಕಂದಿರ ಬೇರೆ ಬೇರೆ ವರಸೆ
ಮುಂದೆ ತಿಳಿಯಿತು
ಅಂದಾಗಿದ್ದೆ ನಾನೊಂದು ಕೂಪ ಮಂಡೂಕ

ದಿನ ದಿನಕೂ ದಿಗಂತದೆಡೆಗೇ ನೋಟ
ಕಣ್ಣು ಕೀಳದೇ ಒಂದೇ ಸಮನೆ ಓಟ
ಹೆಜ್ಜೆ ಹೆಜ್ಜೆಯಲೂ ಸಿಗುವ ಕಂದಕ
ಕಾಣದಂತೆ ಹಿಂದೆ ಓಡುವುದೇ ಅದರ ಕಾಯಕ

ನೇರ ಹಾದಿಯಲ್ಲೊಮ್ಮೆ ಓಟ
ಕವಲು ಹಾದಿಯಲ್ಲೊಮ್ಮೆ ಓಟ
ಬಟ್ಟ ಬಯಲೆಂದು ತಿಳಿದ ಜಾಗದಲ್ಲಿ
ಎಲ್ಲೆಲ್ಲಿ ನೋಡಿದರೂ ಒಂದೊಂದು ಕಡೆಗೆ ಹಾದಿ

ಹಿರಿಯರಿಂದ ಸರಿದಾರಿ ಕಲಿಯುತಿಹೆನೆಂಬ
ಅನಿಸಿಕೆಗಳೆಲ್ಲ ಸುಳ್ಳಾಯಿತು ಒಮ್ಮೆ
ಕಿರಿಯರಿಗೆಲ್ಲ ದಾರಿ ಸೂಚಕನಾಗಹೋಗಿ
ತಪ್ಪರಿವಾಗಿ ಬೆಪ್ಪನಾಗಿದ್ದೆ ಇನ್ನೊಮ್ಮೆ

ಕಣ್ಣ ಮುಂದೆ ಸಹಚರರ ಬೀಳುವಿಕೆ
ನೆನಪಿನಾಳದಿಂದ ಅವರ ಮಾಸುವಿಕೆ
ತಿಳಿದಿಹೆ ನಾ ಎಲ್ಲರ ಹಿಂದೆ ಹಾಕುತಿರುವೆ
ಮುಂದೆ ಮುಂದೆ ಓಡುತಲೇ ಇರುವೆ

ಹಿನ್ನೋಡದೇ ಅಪ್ರಮತಿಮನೆಂದೆ ತಿಳಿಯುತಿರುವೆ
ಒಮ್ಮೆ ಹಿಂದಾಗಲೂ ಅಳುತ ಕೂರುವೆ
ಒಮ್ಮೆ ಸೆಳೆವುದೇ ಕಂದಕ ತನ್ನ ಬಾಹುವಿನಿಂದ?
ಅಂದು ನಾ ಹೊರಬರುವೆನೇ ಈ ಕನಸಿನಿಂದ?

  • ಕಾವ್ಯ ಮತ್ತು ಕವನ
~.~
  • Login or register to post comments
  • 765 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 14, 2005 - 9:55am — Sunil Jayaprakash

ಸಂದರ್ಭ ವಿವರಿಸಿ

Sunil Jayaprakash's picture

ತ ವ. ಶ್ರೀನಿವಾಸರೇ, ನಿಮ್ಮ ಕವನ ಬಹಳ ಚೆನ್ನಾಗಿದೆಯೆಂದು ಹೇಳಿದರೆ, ಅದು ಕೇವಲ ರೂಢಿಮಾತಾಗಿ ಬಿಡುತ್ತದೆ. ಆದ್ದರಿಂದ ನಾನೊಂದು ಉಪಾಯ ಮಾಡಿದ್ದೇನೆ. ಅದೇನೆಂದರೆ, ಸಂದರ್ಭ ವಿವರಿಸುವುದು. ಈ ಕಸರತ್ತಿನಿಂದ (ಅಥವಾ ಅಭ್ಯಾಸ)  ನಿಮ್ಮ (ಯಾವುದೇ) ಕವನಗಳು ಇನ್ನು ಹೆಚ್ಚು ನಾಟುತ್ತದೆಯೆಂದು ನಂಬಿದ್ದೇನೆ. ಏನಂತೀರಾ.

ಉದಾಹರಣೆಗೆ.

ಸಂದರ್ಭ ವಿವರಿಸಿ ೧೦ ಅಂಕಗಳು.

೧. ಮುಂದೆ ಮುಂದೆ ಓಡುತಲೇ ಇರುವೆ.
೨. ಅಂದು ನಾ ಹೊರಬರುವೆನೇ ಈ ಕನಸಿನಿಂದ.
ಉತ್ತರ ನಾನೂ ಕೂಡ ಆಮೇಲೆ ಬರೆಯುತ್ತೇನೆ. ಬೇರೆಯವರು ಪ್ರಯತ್ನಸಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 14, 2005 - 7:56pm — tvsrinivas41

ತದ್ವಿರುದ್ಧ

tvsrinivas41's picture

ಮೊದಲಿಗೆ ಸುನೀಲ್ ಅವರಿಗೆ ನನ್ನ ವಂದನೆಗಳು. ನಿಮಗೆ ಕವನ ಓದೋಕ್ಕೆ ಇಷ್ಟ ಇದೆಯೆಂದು ತಿಳಿದು ಬಹಳ ಬಹಳ ಸಂತೊಷವಾಗ್ತಿದೆ. ನಿಮ್ಮಂತಹವರು ಸಿಗೋದು ಬಹಳ ಅಪರೂಪ.

ನೀವು ಮೇಲೆ ತಿಳಿಸಿರುವ ಎರಡು ಸಂದರ್ಭಗಳೂ ತದ್ವಿರುದ್ಧ. ಕನಸಿನಿಂದ ಆಚೆಗೆ ಬಂದಾಗ ಓಟ ನಿಂತಿರುತ್ತದೆ.

ನೀವೂ ಬರೆಯಿರಿ ಸಾರ್. ನಿಮ್ಮ ಹಿಂದೆ ನಾನಿರ್ತೇನೆ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 16, 2005 - 11:38pm — Sunil Jayaprakash

ಸಂದರ್ಭ ವಿವರಣೆ - ಮುಂದೆ ಮುಂದೆ ಓಡುತಲೇ ಇರುವೆ

Sunil Jayaprakash's picture

ಈ ಕವನದ ಸಾಲನ್ನು ತ.ವಿ. ಶ್ರೀನಿವಾಸರ "ಓಟದ ಹಾದಿ" ಎಂಬ ಪದ್ಯದಿಂದ ಆರಿಸಲಾಗಿದೆ. ಈ ಸಾಲಿನಲ್ಲಿ ಕವಿಗಳು, ಮಾನವನು ತನ್ನ ಜೀವಿತದಲ್ಲಿ ಸವೆಸುವ ದಾರಿ ಹಾಗು ಆತನ ತುಡಿತಗಳನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ.
ಈ ಇಳೆಯಲ್ಲಿ ತಾಯಿಯ ಪ್ರೀತಿಗಾಗಿ ಹಂಬಲಿಸದವರು ಯಾರೂ ಇರಲಾರರು. ಚಿಕ್ಕ ಮಗುವಾಗಿದ್ದಾಗ, ಆಕೆಯೇ ನಮಗೆ ಭದ್ರಕೋಟೆಯನ್ನೊದಗಿಸಿ ರಕ್ಷಿಸಿಟ್ಟಿರುತ್ತಾಳೆ. ನಾವು ತಪ್ಪು ಮಾಡಿದಾಗ ತಿದ್ದುತ್ತಾಳೆ, ಆದ್ದರಿಂದ ನಮಗೆ ಆಕೆಯೇ ಆದರ್ಶವಾಗಿರುತ್ತಾಳೆ. ನಾವು ಅಂಬೆಗಾಲಿಡುವಾಗ, ತಾಯಿಯನ್ನೇ ಹುಡುಕಿ ಹೋಗುತ್ತೇವೆ. ಇದನ್ನೇ ಕವಿಗಳು ಅಮ್ಮ ತೋರಿಸಿದ ಹಾದಿ ಎಂದು ಹೇಳಿದ್ದಾರೆ.
ದಿನಗಳೆದಂತೆ, ನಮ್ಮ ವ್ಯಕ್ತಿತ್ವದ ಮೇಲೆ, ತಂದೆಯ ಗಾಢ ಛಾಪಿರುತ್ತದೆ. ತಂದೆಯ ಮಾತಿಗೆ ಎದುರಾಡದವರಾಗಿರುತ್ತೇವೆ. ಆತನೇ ನಮಗೆ ಆದರ್ಶನಾಗುತ್ತಾನೆ. ಅಪ್ಪ ನಮ್ಮನ್ನು ಒಂದು ದಡ ಸೇರಿಸಿದ ಮೇಲೆ, ಇಷ್ಟ್ಹೋತ್ತಿಗೆ ಒಂದು ನೆಲೆ ಕಂಡುಕೊಂಡಿರುವ ನಮ್ಮ ಅಣ್ಣ ಅಕ್ಕಂದಿರು ನಮಗೆ ದಾರಿತೋರುವವರಾಗುತ್ತಾರೆ ಅಥವಾ ನಾವು ನಮಗೆ ದಾರಿ ತೋರಿಸುತ್ತಾರೆ ಎಂದು ನಂಬಿರುತ್ತೇವೆ. ಯಾವ ದಿನ ತನ್ನತನವನ್ನು ಕಂಡುಕೊಳ್ಳುತ್ತಾನೋ ಆ ದಿನ ತನ್ನ ಇಲ್ಲಿಯ ಜೀವಿತವನ್ನು ನೋಡಿ ತಾನೇ ಗೇಲಿ ಮಾಡಿಕೊಂಡು ನಗುತ್ತಾನೆ. ಇಲ್ಲಿ ಕವಿಯು ವಿಡಂಬನಾತ್ಮಕವಾಗಿ ತಮ್ಮನ್ನು ತಾವೇ ಕಪ್ಪೆಗೆ ಹೋಲಿಸಿಕೊಳ್ಳುತ್ತಾರೆ.

ಈ ಜಗತ್ತಿನಲ್ಲಿ ತನ್ನ ಕಾಲ ಮೇಲೆ ತಾನು ನಿಂತಾಗ, ತನ್ನ ನಯನಗಳಿಂದ ಈ ಜಗತ್ತನ್ನು ಸವಿಯುತ್ತಿರಲಾಗಿ, ಈ ಪ್ರಪಂಚದ ಕದಂಬ ಬಾಹುಗಳು ಅವನನ್ನು ಆವರಿಸುತ್ತವೆ. ಆಗ ಅವನಿಗೆ ತಿಳಿಯುತ್ತದೆ ತಾನು ಕಲಿಯಬೇಕಾದ್ದು ಬಹಳಷ್ಟಿದೆಯೆಂದು. ಸ್ವಂತ ಬುದ್ಧಿಯಿಲ್ಲದೆ ಅಜ್ಜ ಹಾಕಿದ ಆಲದ ಮರಕ್ಕೆ ಜೋತು ಬೀಳುವ ತನ್ನ ಸಹಚರರು ಹೊಸ ಕಾಲದ ಸಮಸ್ಯೆಗಳನ್ನು ಎದುರಿಸಲಾಗದೇ ಸೋಲುವುದನ್ನು ಕಾಣುತ್ತಾನೆ, ಮತ್ತು ತನ್ನನ್ನು ತಾನು ತಿದ್ದಿಕೊಳ್ಳುತ್ತಾನೆ. ಈ ಹಂತದಲ್ಲಿ ಅವನ ಅರಿವಿಗೆ ಬಾರದೆ, ಅಹಂ ಅವನ ಬೆನ್ನು ತಟ್ಟಿರುತ್ತದೆ. ಇದನ್ನು ಗಮನಿಸದೇ, ಬೇರೆಯವರಿಗೆ ಬುದ್ದಿ ಹೇಳಲು ಹೋಗಿ, ತಾನೇ ನಗೆಪಾಟಲಾಗುತ್ತಾನೆ. ಇಷ್ಟೆಲ್ಲ ಆಗುವಾಗಲೂ ತನ್ನ ಆಶಯಗಳನ್ನು ಪೂರೈಸಿಕೊಳ್ಳಲು ಸದಾ ಅವನು ಪ್ರಯತ್ನಶೀಲನಾಗಿರುತ್ತಾನೆ ಎಂದು ಕವಿಗಳು ಹೇಳಿದ್ದಾರೆ.

ಇದನ್ನ ಗಮನಿಸಿದರೆ, ಮನುಷ್ಯರು ಬದಲಾವಣೆಗಳನ್ನು, ಹಿಂಜರಿಕೆಯಿಲ್ಲದೆ ಆದರೆ ಎಚ್ಚರಿಕೆಯಿಂದ ಸ್ವಾಗತಿಸಬೇಕೆಂದು ಹೇಳುವುದು ಕವಿಯ ಆಶಯವಿರಬಹುದು.

ಇನ್ನೊಂದು ಸಂದರ್ಭ ಬಾಕಿಯಿದೆ, ಬೇರೆ ಯಾರಾದರು ಪ್ರಯತ್ನಸಬಹುದು. 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 14, 2005 - 10:33am — Gopinath Rao

ನೇರ ಹಾದಿ

Gopinath Rao's picture

ನೇರ ಹಾದಿಯಲ್ಲೊಮ್ಮೆ ಓಟ
ಕವಲು ಹಾದಿಯಲ್ಲೊಮ್ಮೆ ಓಟ
ಬಟ್ಟ ಬಯಲೆಂದು ತಿಳಿದ ಜಾಗದಲ್ಲಿ
ಎಲ್ಲೆಲ್ಲಿ ನೋಡಿದರೂ ಒಂದೊಂದು ಕಡೆಗೆ ಹಾದಿ

ಇದು ಚೆನ್ನಾಗಿದೆ. ಜಗತ್ತನ್ನು ಬಯಲೆಂದು ತಿಳಿದವರಿಗೆ ಮುಂದೆ ಹಾದಿ ಕಾಣುವುದಿಲ್ಲ ಎನ್ನುವ ಹೆದರಿಕೆಯೇ ಇಲ್ಲ. ಶ್ರೀನಿವಾಸರು ಹೇಳಿದ ಹಾಗೆ ಎಲ್ಲಕಡೆಯೂ ನೇರ ಹಾದಿಯೇ!
- ಗೋಪೀನಾಥ ರಾವ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ದ ರೋಡ್ ನಾಟ್ ಟೇಕನ್ - ಅನುವಾದ
  • ಬದುಕೊಂದು ಬ್ಯಾಲೆನ್ಸ್ ಶೀಟು
  • ಬಾಳ ದಾರಿ
  • ಈಗೆಲ್ಲಿ ನಲ್ಲೆ ಈಗೆಲ್ಲಿ
  • ಬೈರಾಗಿ
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
  • ಕತೆಗಾರ್ತಿ ದೊಡ್ಡಮ್ಮ
  • ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!
  • ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ

ಇತ್ತೀಚಿನ ಪ್ರತಿಕ್ರಿಯೆಗಳು

  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
  • girish.rajanal
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 4:25pm
  • harshavardhan v...
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:24pm
  • shashikannada
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 4:20pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:17pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:15pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 33 ಅತಿಥಿಗಳು ಆನ್ಲೈನ್ ಇರುವರು.


ನಂಬಿದಂತಿರಬೇಕು, ನಂಬದಲೆ ಇರಬೇಕು |
ನಂಬಿದವ ಕೆಟ್ಟ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator