ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಶಿವರಾತ್ರಿ

March 3, 2008 - 10:37am — agilenag
ಬೆಳವಾಡಿ ಶ್ರೀ ಉದ್ಭವ ಕಲ್ಲೇಶ್ವರಸ್ವಾಮಿ

ಇದೇ ತಿಂಗಳ ೫ - ೬ನೇ ದಿನಾಂಕಗಳಂದು ಬರುವ (ಪಾಲ್ಗುಣ ಚತುರ್ದಶಿ) ಶಿವರಾತ್ರಿ ನಮಗೆಲ್ಲಾ ಒಂದು ಪ್ರಮುಖ ಹಬ್ಬ. ಅಂದು ಶಿವನನ್ನು ಆರಾಧಿಸಿ ಪುಣ್ಯ ಸಂಪಾದನೆಯಲ್ಲಿ ಅತಿ ಹೆಚ್ಚಿನ ಗಳಿಕೆ ದೊರಕಿಸಿಕೊಳ್ಳುವ ಕಾತುರ, ಆತುರ ಭಕ್ತರೆಲ್ಲರಿಗೆ. ಶಿವದೇವಾಲಯಗಳಿಗೆ ಭಕ್ತರು ತಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ಹೊತ್ತು ಶಿವನ ಆರಾಧನೆಯನ್ನು ಮಾಡುವ ತವಕ.
ಈ ಸಂದರ್ಭದಲ್ಲಿ ಸಂಪದದ ಓದುಗರಿಗೆ ಕಳೆದ ವರ್ಷವಷ್ಟೇ ಜೀರ್ಣೋದ್ಧಾರಗೊಂಡ ಚಿಕ್ಕಮಗಳೂರು ಜಿಲ್ಲೆ/ತಾಲ್ಲೂಕಿನ ಲೆಖ್ಯಾ ಹೋಬಳಿ ಬೆಳವಾಡಿ ಗ್ರಾಮದಲ್ಲಿರುವ ಉದ್ಭವ ಕಲ್ಲೇಶ್ವರ ಸ್ವಾಮಿಯ ದರ್ಶನವನ್ನು ಮಾಡಿಸುವುದು ನನ್ನ ಆಸೆ. ನಮ್ಮ ಕುಟುಂಬವರ್ಗವೇ ಮುಂದಾಗಿ ನಿಂತು, ವೆಚ್ಚದ ಅತಿ ಹೆಚ್ಚು ಭಾಗವನ್ನು ಹೊತ್ತು, ಶೃಂಗೇರಿ ಶ್ರೀ ಶಂಕರಮಠ, ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರು, ಭಕ್ತರು ಹಾಗು ಆಸ್ತಿಕರೆಲ್ಲರ ಸಹಕಾರಗಳೊಂದಿಗೆ ಕೇವಲ ಒಂಭತ್ತು ತಿಂಗಳಿನಲ್ಲಿ ೧೨ನೇ ಶತಮಾನದ, ನೆಲ ಕಚ್ಚಿದ್ದ ದೇವಾಲಯವನ್ನು ಜೀರ್ಣೋದ್ಧಾರ ಕಾರ್ಯ ನಡೆಸಿ ೨೦-೦೧-೨೦೦೭ರಂದು ಸಾಂಗವಾಗಿ ನಡೆಸಲಾಯಿತು. ಮಹಿಮೆಯುಳ್ಳ ದೇವರೆನಿಸಿಕೊಂಡಿರುವ ಇಲ್ಲಿ ವರ್ಷಕ್ಕೊಂದುಬಾರಿ ಹಳ್ಳಿಗರೆಲ್ಲರೂ ಸೇರಿ "ಬಂಡಿಹಬ್ಬ"ವನ್ನು ಆಚರಿಸುತ್ತಾರೆ. ಶಿವರಾತ್ರಿಯಂದು ರಾತ್ರಿಯಿಡೀ ಜಾಗರಣೆ ಮಾಡಿ, ಶಿವನಿಗೆ ಅರ್ಚನೆಗಳನ್ನು ಸಲ್ಲಿಸಿ, ಜಾತಿ, ಮತ ಭೇದವಿಲ್ಲದೆ ಬೆರೆತು ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ. ಬನ್ನಿ, ನೀವೂ ಸ್ವಾಮಿಯ ದರ್ಶನ ಪಡೆದು ಧನ್ಯರಾಗಿರಿ. ಜೀರ್ಣೋದ್ಧಾರ ಕಾರ್ಯದ ಪ್ರಮುಖ ಘಟ್ಟಗಳಲ್ಲಿ ತೆಗೆದ ಚಿತ್ರಗಳನ್ನು ನೋಡಬೇಕೆನಿಸಿದರೆ, ಇಲ್ಲಿದೆ ಲಿಂಕ್:
http://www.flickr.com/photos/agilenag/
ನೋಡಿ, ಅನಂದಿಸಿ, ಸ್ವಾಮಿಯ ಕೃಪೆಗೆ ಪಾತ್ರರಾಗಿ, ನಿಮ್ಮ ಅನಿಸಿಕೆಗಳನ್ನು ಮರೆಯದೆ ನನ್ನ ಇ-ಮೇಲ್ ವಿಳಾಸಕ್ಕೆ ನೀಡಿರಿ.
ಎ.ವಿ. ನಾಗರಾಜು
ಅಗಿಲೆನಾಗ್[ಎಟ್]ರೀಡಿಫ್ ಮೇಲ್.ಕಾಂ

  • ಸ್ಥಳ ಮಹಿಮೆ, ಪುರಾಣ
~.~
  • Login or register to post comments
  • 350 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 3, 2008 - 12:18pm — mahesha

ಉ: ಶಿವರಾತ್ರಿ

mahesha's picture

ಒಂದು ಗೊಂದಲ..

ತಿಂಗಳು ತಿಂಗಳೂ ಶಿವರಾತ್ರಿ.. ( ಎರಡನೇ ತ್ರಯೋದಶೀ ) ಬರುವುದು ಅಲ್ವ...

ಮಹಾಶಿವರಾತ್ರಿ ಮಾಘಶಿವರಾತ್ರಿ ಅಲ್ವ..!!

ಶಿವರಾತ್ರಿ ಆದ ೧೫ ದಿನಕ್ಕೆ ಉಗಾದಿಯಾ?

ಅಯ್ಯೋ.. ಗೊಂದಲ.!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 3, 2008 - 12:22pm — mahesha

ಉ: ಶಿವರಾತ್ರಿ

mahesha's picture

ಗೊಂದಲ ಹೋಯ್ತು...

ಶಾಲಿವಾಹನ ಶಕೆಯಂತೆ ಮಾಘ-ಶಿವರಾತ್ರಿ(ತ್ರಯೋದಶಿ)
ವಿಕ್ರಮ ಶಕೆಯಂತೆ ಪಾಲ್ಗುಣ..(ಚರ್ತುದಶೀ)

ಆದ್ರೆ ಕರ್ನಾಟಕದಲ್ಲಿ ಹೆಚ್ಚು ಮಂದಿ (ಚಾಂದ್ರಮಾನದವರು) ಶಾಲಿವಾಹನ ಶಕೆಯಂತೆ ಅಲ್ವ ನಡೆಯೋದು...!

ಸರಕಾರ ರಜೆ ಕೊಡೋದು ಮಾಘ-ಎರಡನೇ-ತ್ರಯೋದಶಿ ದಿನ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 3, 2008 - 1:42pm — agilenag

ಉ: ಶಿವರಾತ್ರಿ

agilenag's picture

ಹೌದು ಸ್ವಾಮಿ, ಮಾಘ ಶಿವರಾತ್ರಿಯಂದೇ ಮಹಾಶಿವರಾತ್ರಿ ಹಬ್ಬ(೫/೬-೦೩-೨೦೦೮).
ಮಾಘ-ಪಾಲ್ಗುಣ = ಶಿಶಿರ ಋತು.
ಅನಂತರ ಬರುವುದು ಚೈತ್ರ-ವೈಶಾಖ = ವಸಂತ ಋತು. ಚೈತ್ರ ಮಾಸದ ಮೊದಲ ದಿನವೇ ಚಾಂದ್ರಮಾನ ಯುಗಾದಿ (೭-೪-೨೦೦೮).
ಕನ್ ಪ್ಯೂಸ್ ಮಾಡಿಕೊಳ್ಳಬೇಡಿ, ಕನ್ನಡ ಕ್ಯಾಲೆಂಡರ್ ನೋಡಿ, ಅಲ್ಲಿ ಬರೆದಿರುವಂತೆ ಮಾಡಿದರಾಯಿತಪ್ಪ.
ಮಹಾ ಶಿವರಾತ್ರಿ ಆಚರಿಸಲು ಬೆಳವಾಡಿಗೆ ಹೋಗಲು ಮರೆಯಬೇಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೇದಿಕಾ ಪ್ರದರ್ಶನ
  • ಯಡೆಯೂರು ಸಿದ್ದಲಿಂಗೇಶ್ವರ
  • ದೇವಸ್ಥಾನವನ್ನು ಬಚ್ಚಲುಮನೆ ಮಾಡೋದು ಹೀಗೆ
  • ತೂಗ್ತಲೆ ಗಣಪತಿ ದೇವಸ್ಥಾನ, ಹೊಳಲ್ಕೆರೆ.
  • ವೀರನಾರಾಯಣ ದೇವಸ್ಥಾನ, ಬೆಳವಾಡಿ
Syndicate content

ಲೇಖಕರು

agilenag's picture

ಪೂರ್ಣ ಹೆಸರು
A.V. Nagaraju

ಪರಿಚಯ

I am a retired (VRS) Bank Officer. I have a flair for writing in Kannada as well as English.

Recently, I along with the help of my family members released a book on Family Tree of our family, commencing from 1700 AD. The book was acclaimed by many well known historians and writers like Prof. Suryanatha Kamath, Horeyala Doreswamy and Babu Krishnamurthy. Late Mathighatta Krishnamurthy who has given foreword to the book has called it as a unique contribution to Kannada literary world.

Another achievement is renovation of a 1200 year old Udbhava Kalleshwara Temple at Belavadi, Chikkamagalur Dist, Karnataka and that too was appreciated many luminaries like Sri Gowrishankar, Administrator, Shringeri Sharada and the like.

I am working presently on the Editorial Board of GEJJEHEJJE Monthly Theatre Magazine.

I also undertake translation of legal, technical and literary works from Kannada to English and vice-versa.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು
  • ಅಭಿಮಾನಿ
  • ಬಾರೋ ಸಾಧನಕೇರಿಗೆ...

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 24, 2008 - 11:18am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 54 ಅತಿಥಿಗಳು ಆನ್ಲೈನ್ ಇರುವರು.


ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.

— ಹಿತೋಪದೇಶ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator