ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: ಓಶೋ ಕಂಡಂತೆ ಗಾಂಧಿ!

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ

ಸಾಹಿತ್ಯ ವಲಯದ ಪ್ರಾಚೀನ ಕಾಯಿಲೆ (೧)

March 6, 2008 - 11:13am — csomsekraiah

’ಕವಿಗೆ ಕವಿ ಮುನಿವ’ ಎನ್ನುವುದು ಹಳೆಯ ಮಾತು . ಮಾತು ಹಳೆಯದೇ ಆದರೂ , ಎಲ್ಲಾ ಕಾಲಕ್ಕೂ ಸಲ್ಲುವಂತಹ ಮಾತು . ಎಲ್ಲರಿಗೂ ಗೊತ್ತಿರುವ ಈ ಹಳೆಯ ಮಾತನ್ನು ಈಗ ಎತ್ತಲು ಕಾರಣ , ಇದು ಇಂದಿನ ಕಾಲಕ್ಕೆ ಹೊಸ ಹೊಸ ಅವತಾರಗಳನ್ನು ಎತ್ತಿ, ಒಂದು ರೀತಿಯ ದ್ವೇಷದ ವಾತಾವರಣವನ್ನು; ಗುಂಪುಗಾರಿಕೆಯ ಸ್ಥಿತಿಯನ್ನು ನಿರ್ಮಾಣ ಮಾಡುವ ಮಟ್ಟಿಗೆ ಬೆಳೆದು ನಿಂತಿರುವುದು .

ಪಂಪನ ಕಾಲದಿಂದಲೂ ಕವಿ ಸಂಕುಲದ ನಡುವೆ ,ಈ ಈರ್ಷೆ ಇದ್ದೇ ಇದೆ . ಕವಿ, ಕುಕವಿ,ವಿಕಟಕವಿ ಇತ್ಯಾದಿ ಪದ ಬಳಕೆಗಳೂ ಹಳೆಯವೇ .ಕೆಲವು ಅಪರಿಮಿತ ಪ್ರತಿಭಾವಂತರೂ ಸಹ , ಸಾಮಾನ್ಯ ಸಾಹಿತಿಗಳನ್ನು ಅಸಡ್ಡೆಯಿಂದ ಕಂಡುದೂ ಉಂಟು . ಅವರಿಗೆ ತಮ್ಮ ಪ್ರತಿಭೆಯ ಆಳ, ವಿಸ್ತಾರಗಳ ವಿವರವಾದ ಪರಿ ಗೊತ್ತಿತ್ತು . ಅದು ನಿಜವೂ ಆದುದರಿಂದ , ಅವರ ಮಾತು ಸರಿ ಎನಿಸುತ್ತಿತ್ತು. ಸ್ವತಃ ಕುಮಾರವ್ಯಾಸನೇ " ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ” ಎನ್ನುತ್ತಾನೆ ಆದರೆ ಇದು ಅತ್ಯುಕ್ತಿ ಎನಿಸುವುದಿಲ್ಲ.ಕುವೆಂಪು " ನಾನೇರಿದೆತ್ತರವ ನೀನೇರಿ ಬರಲಾರೆ ” ಎನ್ನುತ್ತಾರೆ . ಇದು ಅಸಹಜವೆನಿಸುವುದಿಲ್ಲ .ಸಂತೋಷದ ವಿಷಯವೆಂದರೆ ಈ ವಾದ ಪ್ರತಿವಾದಗಳು ಸಾಹಿತ್ಯ ಕ್ಷೇತ್ರವನ್ನು ವಿಸ್ತರಿಸುತ್ತಾ ಹೋಗಿರುವುದು .

ಎಲ್ಲ ಕಾಲಗಳಂತೆ ನವೋದಯದ ಕಾಲದಲ್ಲಿಯೂ ಅನೇಕ ಭಿನ್ನ ಧ್ವನಿಗಳು ವೈಚಾರಿಕ ವಲಯದಲ್ಲಿ ಮುಂದುವರಿಯುತ್ತಲೇ ಇದ್ದವು . ಎರಡು ಪ್ರಸಿದ್ದ ಚೇತನಗಳಾದ ಮಾಸ್ತಿಯವರು, ಕುವೆಂಪುರವರೂ ಭಿನ್ನ ಅಭಿಪ್ರಾಯಗಳನ್ನು ತಳೆದುದು , ಸಾಹಿತ್ಯ ಪ್ರಿಯರಿಗೆಲ್ಲಾ ತಿಳಿದ ವಿಷಯವೇ ; ಇಬ್ಬರ ನಂಬಿಕೆಗಳಲ್ಲಿ ವ್ಯತ್ಯಾಸಗಳಿದ್ದರೂ , ಎರಡೂ ಚೇತನಗಳೂ ಸಹ ಸಾಹಿತ್ಯ ಮೇರುಗಳು ಎನ್ನುವುದು ನಿರ್ವಿವಾದವಾದ ವಿಷಯ . ಈ ಎರಡೂ ಮೇರುಗಳೂ ಸೇರಿ ಸಂಪಾದಿಸಿ ಕೊಟ್ಟ ಕುಮಾರ ವ್ಯಾಸ ಭಾರತ ಎಂತಹ ಅದ್ಭುತ ಕಾರ್ಯ ಎನ್ನುವುದನ್ನು ಇಲ್ಲಿ ವಿವರಿಸಬೇಕಾಗಿಲ್ಲ.

ಶಂಬಾ ಜೋಷಿ, ದಾ.ರಾ. ಬೇಂದ್ರೆ ಈ ಎರಡು ಮೇರುಗಳ ನಡುವಣ ವಿಪರೀತ ವೈಚಾರಿಕ ವಿರೋಧ , ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಪ್ರಸಿದ್ದವಾದುದು. ಬೇಂದ್ರೆ ಸಹಜ ಕವಿ ; ಅದು ಅವರ ಜನ್ಮ ಜಾತ ಪ್ತತಿಭೆ . ಅವರಲ್ಲಿ ಒಂದಿಷ್ಟು ಮಾರ್ದವತೆ , ಹೆಚ್ಚೇ ಎನಿಸುವ ಭಾವುಕತೆ , ಇದೆಲ್ಲಾ ಸಹಜವೇ .ಅದರಿಂದಾಗಿ , ಶಂಬಾ ರೀತಿಯ ತೀರಾ ವೈಚಾರಿಕ ನಿಲುವು ಅವರಿಂದ ಸಾಧ್ಯವಾಗುವುದಿಲ್ಲ. ಶಂಬಾ ಬರಿಯ ಸಾಹಿತಿಯಲ್ಲ ,ತೀವ್ರ ರೀತಿಯ ಚಿಂತಕ ; ಸಂಶೋಧಕ . ಅಲ್ಲಿ ಕವಿ ಪ್ರಜ್ಞೆಗಿಂತ ಸಂಶೋಧನ ಪ್ರಜ್ಞೆ ಮೇಲುಗೈ ಸಾಧಿಸುತ್ತದೆ .ಆದರೆ ಇಬ್ಬರೂ ಕೂಡಿ ಅನುವಾದಿಸಿ ಕೊಟ್ಟಿರುವ ರಾನಡೆಯವರ ’ಉಪನಿಷದ್ರಹಸ್ಯ’ ಕನ್ನಡ ಸಾರಸ್ವತ ಲೋಕಕ್ಕೆ ಬಹು ದೊಡ್ಡ ಕಾಣಿಕೆ .

ಇಲ್ಲಿ ಯಾರದೇ ಆದರೂ ತಪ್ಪು ,ಸರಿ ಎನ್ನುವ ಪ್ರಶ್ನೆ ಉದ್ಭವಿಸುವುದೇ ಇಲ್ಲ . ಅದು ಅವರವರ ಜಾಯಮಾನ . ಈ ಎಲ್ಲ ಚೇತನಗಳಿಂದ, ಕನ್ನಡ ಸಾಹಿತ್ಯ ಭಾವುಕವಾಗಿ, ವೈಚಾರಿಕವಾಗಿ,ಸಂಶೋಧನಾತ್ಮಕ ದೃಷ್ಟಿಯಿಂದಲೂ ಸಹ ಅತ್ಯಂತ ಶ್ರೀಮಂತವಾಗಿ ಬೆಳೆಯಿತು ಎನ್ನುವುದು ಮಾತ್ರ ಸರಿಯಾದುದು .

ಇನ್ನಿಬ್ಬರು ಪ್ರತಿಭಾಶಾಲಿಗಳ ವೈಚಾರಿಕ ವಿರೋಧಗಳನ್ನು ದಾಖಲಿಸದಿದ್ದರೆ ಈ ಲೇಖನ ಪೂರ್ಣವಾದಂತೆ ಎನಿಸುವುದಿಲ್ಲ. ಅವರೇ ಪ್ರಸಿದ್ದ ಸಾಹಿತಿ ಜಿ.ಪಿ. ರಾಜರತ್ನಂ ; ವೈಚಾರಿಕ ಹಾಸ್ಯ ಕ್ಷೇತ್ರದಲ್ಲಿ ಅಷ್ಟೇ ಪ್ರಸಿದ್ದರಾದ ಬೀಚಿ ಅರವತ್ತರ ದಶಕದಲ್ಲಿ ಈ ಪ್ರತಿಭಾವಂತ ಹೇಮಾಹೇಮಿಗಳ ,ವಾದ ವಿವಾದಗಳನ್ನು ಓದುವುದಕ್ಕೆಂದೇ ’ಪ್ರಜಮತ’ ವಾರ ಪತ್ರಿಕೆಯನ್ನು ವಾರ ವಾರವೂ ಕಾತುರದಿಂದ ಕಾಯುತ್ತಿದ್ದುದು ಇನ್ನೂ ನೆನಪಿನಲ್ಲಿ ಹಸಿರಾಗಿದೆ .

ಬೀಚಿ , ರಾಜರತ್ನಂರನ್ನು ’ಚಕ್ರವರ್ತಿ ರತ್ನ’ ಎಂದು ಛೇಡಿಸುತ್ತಿದ್ದರೆ , ರಾಜರತ್ನಂ ಬೀಚಿಯವರನ್ನು ’ ಹಾಸ್ಯ ಬ್ರಹ್ಮ’ ಎನ್ನುತ್ತಿದ್ದರು. ಬೀಚಿ ’ಭಯಾಗ್ರಫಿ’ ಯನ್ನು ಬರೆದರೆ ;ರಾಜರತ್ನಂ ’ನಿರ್ಭಯಾಗ್ರಫಿ ’ ಯನ್ನು ಬರೆದರು .( ಮುಂದುವರಿಯುವುದು)

  • ಚಿಂತನೆ
~.~
  • Login or register to post comments
  • 232 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಾಹಿತ್ಯ ವಲಯದ ಪ್ರಾಚೀನ ಕಾಯಿಲೆ (೨)
  • ಬೇಂದ್ರೆ-ಬೀಚಿ ಚಿತ್ರ
  • ಸಾಹಿತ್ಯ ಸಮ್ಮೇಳನ ಮತ್ತು ಆಕಾಶವಾಣಿ ಸಂಸ್ಕೃತ ವಾರ್ತೆ
  • ಸಾಹಿತ್ಯ ಮೇಳ
  • ನಾವು ಮತ್ತು ಸಾಹಿತ್ಯ - ಬೇಂದ್ರೆ ವಿಚಾರ
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪ್ರೀತಿಯೇ ಇಲ್ಲದ ಮೇಲೆ..
  • "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"
  • ನಮ್ಮ ಹಾಸ್ಟೆಲ್ ಹುಡುಗರ ಕಾಫಿ ಯಾತ್ರೆ!
  • ಡಿಸ್ನಿ ಲ್ಯಾಂಡ್,' ಗೆ ನೀವೇನಾದರೂ ಭೇಟಿ ಕೊಟ್ಟರೆ, ಜಲಾಂತರ್ಗಾಮಿ-ನೌಕಾಯಾನಗಳ (Submarines) ವಿಭಾಗವನ್ನು ನೋಡಲು, ಖಂಡಿತ ಮರೆಯದಿರಿ !
  • "ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?":- ಭಾಗ ೨
  • ಓಶೋ ಕಂಡಂತೆ ಗಾಂಧಿ!
  • ಅರಮನೆ ಮೈದಾನದಲ್ಲಿ ಪುಸ್ತಕ ಸ೦ತೆ

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 22, 2008 - 12:44pm
  • mahesha
    ಉ: ಓಶೋ ಕಂಡಂತೆ ಗಾಂಧಿ!
    November 22, 2008 - 12:18pm
  • uniquesupri
    ಉ: ಓಶೋ ಕಂಡಂತೆ ಗಾಂಧಿ!
    November 22, 2008 - 12:02pm
  • mahesha
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 22, 2008 - 11:54am
  • mahesha
    ಉ: ಓಶೋ ಕಂಡಂತೆ ಗಾಂಧಿ!
    November 22, 2008 - 11:51am
  • kpbolumbu
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 22, 2008 - 11:48am
  • palachandra
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 22, 2008 - 11:37am
  • venkatesh
    ಉ: ಪ್ರೀತಿಯೇ ಇಲ್ಲದ ಮೇಲೆ..
    November 22, 2008 - 11:21am
  • venkatesh
    ಉ: ಡಿಸ್ನಿ ಲ್ಯಾಂಡ್,' ಗೆ ನೀವೇನಾದರೂ ಭೇಟಿ ಕೊಟ್ಟರೆ, ಜಲಾಂತರ್ಗಾಮಿ-ನೌಕಾಯಾನಗಳ (Submarines) ವಿಭಾಗವನ್ನು ನೋಡಲು, ಖಂಡಿತ ಮರೆಯದಿರಿ !
    November 22, 2008 - 11:16am
  • gurubaliga
    ಉ: ಪ್ರೀತಿಯೇ ಇಲ್ಲದ ಮೇಲೆ..
    November 22, 2008 - 11:14am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 106 ಅತಿಥಿಗಳು ಆನ್ಲೈನ್ ಇರುವರು.


ಕರುಣೆಯೇ ಪರಮ ಜ್ಞಾನ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator