ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಸಾಹಿತ್ಯ ವಲಯದ ಪ್ರಾಚೀನ ಕಾಯಿಲೆ (೨)

March 6, 2008 - 12:00pm — csomsekraiah

ಜಿ.ಪಿ. ರಾಜರತ್ನಂ ಮತ್ತು ಬೀಚಿ ಈ ಇಬ್ಬರು ಮಹನೀಯರು ಕನ್ನಡಕ್ಕೆ ಕೊಟ್ಟ ಕಾಣಿಕೆ ಮಾತ್ರ ಅತ್ಯಂತ ಅಮೂಲ್ಯವಾದುದು. ಈ ನಾಡಿನ ಧರ್ಮ, ದರ್ಶನಗಳನ್ನೆಲ್ಲಾ ಸುಂದರವಾದ , ಸರಳವಾದ ಸಾಹಿತ್ಯ ಪರಿಭಾಷೆಯಲ್ಲಿ ರಾಜರತ್ನಂ ಕನ್ನಡಿಗರಿಗೆ ಪರಿಚಯಿಸುತ್ತಾ ಹೋದರು .ಬರಿಯ ದಾರ್ಶನಿಕ ಸಾಹಿತ್ಯ ಮಾತ್ರವಲ್ಲ,ಜನ ಸಾಮಾನ್ಯನ , ಬಾಳನ್ನೂ; ಗೋಳನ್ನೂ ಅರ್ಥ ಮಾಡಿಕೊಂಡಿದ್ದ ಆ ಸೃಜನಶೀಲ ಮನಸ್ಸು, ’ರತ್ನನ ಪದಗಳು’ ತರಹದ ವಿಶೇಷ ಮಾದರಿಯ ಸಾಹಿತ್ಯ ಕಾಣಿಕೆಯನ್ನು ಕನ್ನಡ ಜಗತ್ತಿಗೆ ಅರ್ಪಿಸಿತು.

ಬೀಚಿ ತಮ್ಮ ಸುಪ್ರಸಿದ್ದ ಮೊನಚು ಮಾತುಗಳಿಂದ ,ಸರಳ ಶೈಲಿಯ ಆಡು ಮಾತಿನ ಬರಹಗಳಿಂದ ,ಕನ್ನಡಿಗರ ವೈಚಾರಿಕ ಪ್ರಜ್ಞೆಯನ್ನು ತುಂಬಾ ವಿಸ್ತರಿಸಿಕೊಳ್ಳಲು ಸಹಾಯ ಮಾಡಿದರು .ತಮ್ಮ ಭಯಾಗ್ರಫಿಯಲ್ಲಿ ತಮ್ಮ ಜೀವನದ ಯಾವ ಅಂಶವನ್ನೂ ಮುಚ್ಚಿಡದೆ ,ಅಪ್ಪಟ ಪ್ರಾಮಾಣಿಕತೆಯನ್ನು ಮೆರೆದರು .ಮನುಷ್ಯನ ಸಹಜ ದೌರ್ಬಲ್ಯಗಳನ್ನೂ ; ಅವನ್ನು ಗೆಲ್ಲಲಾರದ ಅವನ ಅಸಹಾಯಕತೆಯನ್ನೂ , ನಿರ್ವಂಚನೆಯಿಂದ ತೆರೆದಿಟ್ಟರು .

ಒಟ್ಟಿನಲ್ಲಿ ಇದೆಲ್ಲದರ ಪರಿಣಾಮ ಕನ್ನಡದ ಪ್ರಜ್ಞಾವಲಯ , ಅಪಾರ ಜ್ಞಾನ ಸಂಪನ್ನತೆಯನ್ನು ಪಡೆಯುವಲ್ಲಿ ತೀರಾ ಯಶಸ್ವಿಯಾಯಿತು .ಈ ಎಲ್ಲ ಮಹಾ ಚೇತನಗಳ ವೈಚಾರಿಕ ಭಿನ್ನತೆ ಎನ್ನುವುದು ,ಅವರವರ ವಿಭಿನ್ನ ಸಂಸ್ಕಾರಗಳ , ಮನಃಸ್ಥಿತಿಗಳ , ಸ್ವಾನುಭವ ಸಾಮಗ್ರಿಗಳ, ಚಿಂತನೆಯ ಸ್ವರೂಪದಲ್ಲಿದ್ದ ಭಿನ್ನತೆಯ ಕಾರಣಗಳು .ಈ ಎಲ್ಲರಿಗೂ ಸಮಾನವಾಗಿದ್ದ ಅಂಶವೆಂದರೆ ,ಮಾನವ ಸಂಭಂಧಗಳ ಮಾರ್ದವ ಸಾಮರಸ್ಯ ; ಮನುಷ್ಯತ್ವದ ಕಡೆಗೆ ಮನುಷ್ಯನ ಮನಸ್ಸುಗಳನ್ನು ಎಳೆದೊಯ್ಯುವ ಕಾಳಜಿ .ಇದರ ಪರಿಣಾಮ ಸಾಹಿತ್ಯ ಪ್ರೇಮಿಗಳ ಮನಸ್ಸುಗಳು ,ಚಿಂತನ ಶೀಲವೂ, ವೈಚಾರಿಕವೂ, ಸೂಕ್ಷ್ಮವೂ, ಸ್ಪಂದನಶೀಲವೂ ಆದವು . ಈ ಎಲ್ಲ ಸಾಹಿತ್ಯಿಕ ಇತಿಹಾಸವನ್ನು ಗಮನಿಸಿದಾಗ ,ಭಿನ್ನ ಧ್ವನಿ ಎನ್ನುವುದು , ಸಾಹಿತ್ಯ ಪ್ರಪಂಚಕ್ಕೆ ಸಹಜವಾದ, ಚೈತನ್ಯಪೂರ್ಣವಾದ ನಡವಳಿಕೆ ಎನ್ನುವುದು ಮನವರಿಕೆಯಾಗದಿರದು .

ಆದರೆ ಇಂದಿನ ಪರಿಸ್ಥಿತಿಯಲ್ಲಿ , ಸಹಜವಾದ ಭಿನ್ನ ಚಿಂತನೆಗಳ ಅಭಿವ್ಯಕ್ತಿ ಕಂಡು ಬರುತ್ತಿದ್ದರೂ ,ಎಲ್ಲೋ ಒಂದು ಕಡೆ ಅದು ತನ್ನ ಸಹಜ ಗುಣವನ್ನು ಕಳೆದುಕೊಂಡು ,ಅಪರಿಮಿತ ಈರ್ಷೆ,ಗುಂಪುಗಾರಿಕೆ , ಹಣೆ ಪಟ್ಟಿ ಅಂಟಿಸಿಕೊಳ್ಳುವಿಕೆಯ ವಿಕೃತಿಯೆಡೆಗೆ ಧಾವಿಸುತ್ತಿದೆ ಎನಿಸದಿರದು .

ಒಬ್ಬ ಪ್ರತಿಭಾವಂತನನ್ನು ಇನ್ನೊಬ್ಬ ಪ್ರತಿಭಾವಂತ ಸೋಲಿಸಬಹುದಾದುದು , ಎದುರಾಳಿಯನ್ನು ಮೀರಿಸುವ ಕಲಾಕೃತಿಯನ್ನು ;ಸಾಹಿತ್ಯವನ್ನು ನಿರ್ಮಾಣ ಮಾಡುವ ಮೂಲಕವಾದರೆ ,ಅದು ಸಮಾಜಕ್ಕೆ ಕೊಡುವ ಬಹು ದೊಡ್ಡ ಕಾಣಿಕೆ .ಸಂಸ್ಕೃತಿಯನ್ನು ಬೆಳೆಸಲು , ವಿಸ್ತರಿಸಲು ಸಹಕಾರಿಯಾಗುವ ಆರೋಗ್ಯಕರ ಸ್ಪರ್ಧೆ ,ಎಲ್ಲ ಕಾಲಕ್ಕೂ ಸ್ವಾಗತಾರ್ಹವಾದುದು .ಬದಲಾಗಿ , ಗುಂಪು ಕಟ್ಟುವುದು, ಪರಸ್ಪರ ಕೆಸರೆರೆಚುವುದು, ಇತರರಿಗೆ ಹಣೆ ಪಟ್ಟಿ ಕಟ್ಟುವುದು ಇವಾವೂ ವಿದ್ವಾಂಸರಿಗೆ ಶೋಭೆ ತರುವ ಲಕ್ಷಣಗಳಲ್ಲ.

ಯಾರೂ ಎಲ್ಲ ಕಾಲಗಳಲ್ಲೂ ಯಾವುದೇ ಒಂದು ಬ್ರಾಂಡ್ ಆಗಿರಲು ಸಾಧ್ಯವಿಲ್ಲ .ವಿಭಿನ್ನ ಚಿಂತನೆಗಳು , ಒಬ್ಬನೇ ವ್ಯಕ್ತಿಯಲ್ಲಿ ಪರಸ್ಪರ ತಾಕಲಾಡುತ್ತಿರುತ್ತವೆ. ಏಕೆಂದರೆ ಎಷ್ಟೆಂದರೂ ಮನುಷ್ಯನ ಅರಿವಿನ ವಲಯ ತುಂಬಾ ಸಣ್ಣದು .ಈ ಮಿತಿಯನ್ನು ಅರಿತರೆ ಮನುಷ್ಯನ ಗರ್ವ ಅರ್ಧ ವಾಸಿಯಾದಂತೆಯೇ. ಗೋಪಾಲ ಕೃಷ್ಣ ಆಡಿಗರ ’ ಬೆಸೆಯಲಾಗದೆದೆ ಎದೆಗಳಲ್ಲೂ ಕಂಡೀತು ಏಕ ಸೂತ್ರ, ಹಾಗೆಯೇ ಒಂದೇ ಎಂಬ ಮನಸ್ಸುಗಳಲ್ಲೂ ಭಿನ್ನತೆಯ ವಿಕಟ ಹಾಸ ’ ಎಂಬುದು ನೆನಪಿನಲ್ಲಿದ್ದರೆ ಸಾಕು .

  • ಚಿಂತನೆ
~.~
  • Login or register to post comments
  • 190 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಾಹಿತ್ಯ ವಲಯದ ಪ್ರಾಚೀನ ಕಾಯಿಲೆ (೧)
  • ಸಾಹಿತ್ಯ ಸಮ್ಮೇಳನ ಮತ್ತು ಆಕಾಶವಾಣಿ ಸಂಸ್ಕೃತ ವಾರ್ತೆ
  • ಸೌಹಾರ್ದದ ಬಂಡಾಯ
  • ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸುವ ಬಗೆ ಹೇಗೆ?
  • tejaswi avara maayaaloka
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ನೀನು ಕಳುಹಿಸಿದ ಸ್ಮೈಲಿ ಚಾಟು ಬಾಕ್ಸಿನಲ್ಲಿ ಮಿನುಗುತ್ತಿತ್ತು!
  • ಕಾಡುಕೋಳಿಯ ಜಾಡು ಹಿಡಿದು...
  • ಅನ್ ಸೈಕ್ಲೋಪೀಡಿಯಾ - (ವಿಷಯ)ಮುಕ್ತ ವಿಶ್ವಕೋಶ
  • ಕೋಸಿ-ಬಿಹಾರದ ಕಣ್ಣೀರು
  • ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
  • ಬೂದಿಕೋಟೆ
  • ಅಬ್ಬ, ರಾಷ್ತ್ರಕ್ಕೇ ಅವಮಾನ!

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:40am
  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 41 ಅತಿಥಿಗಳು ಆನ್ಲೈನ್ ಇರುವರು.


ಸತ್ ಆವುದೋ ಅದ ಸ೦ಪರ್ಕಿಸದಿರೆ
ಹತ್ತಿರ ಸುಳಿಯದು ಆನ೦ದ
ಸತ್ ಇಗು ಆನ೦ದಕು ಕಲೆ ಸೇತುವೆ
ಉತ್ತಾನಿಪನರಿವಿನ ಛ೦ದ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator