ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಶಂಕರ ಸ್ತುತಿ

March 7, 2008 - 11:14am — Sunil Jayaprakash

ಮುಂಗುರುಳು

೧. ಇದು ನಮ್ಮ ಮುತ್ತಜ್ಜಿ ನಮ್ಮಮ್ಮನಿಗೆ ಹೇಳಿಕೊಟ್ಟಿದ್ದಂತೆ Eye-wink
೨. ಇತ್ತೀಚೆಗೆ ಬೆನಕ ಅವರು ಚೆಂಗನ್ನಡ ಛಂದಸ್ಸು - ೨ ಎಳೆಯಲ್ಲಿ ಬೃಹದ್ದೇಶಿಯ ಬಗ್ಗೆ ಮಾತನಾಡುತ್ತಾ ಉಸಿರ್ದಾಣದ(ಯತಿಗಳ) ಪರಿಚಯ ಮಾಡಿಕೊಟ್ಟಿದ್ದರು. ಈ ಸ್ತುತಿಯ ಪ್ರತಿಪದ್ಯದಲ್ಲಿ ಪ್ರಾಸ ನಿಮಯಗಳನ್ನು ಪಾಲಿಸಲಾಗಿದೆ. ಇದಲ್ಲದೆ ಯತಿಗಳನ್ನು ಕೂಡ ತೋರಿಸಲಾಗಿದೆ.

===========ಶ್ರೀ ಗಣೇಶ ಶಾರದಾಗುರುಭ್ಯೋನಮಃ===========

ಶ್ರೀ ಗುರು ಶಂಕರ | ಚರಿತೆಯನೊರೆಯುವೆ | ರಾಗದೊಳಿದನೊಲಿದೋದುವುದು ||
ನಾಗಾಭರಣನು | ಕರುಣದೊಳೀವನು | ಲೋಗರಭೀಷ್ಟವ ತಾಮುದದಿ || ೧ ||

ಅವನಿಯೊಳಗೆ ದುರ್ಮತಗಳು ಹೆಚ್ಚುತ | ಪಾವನ ವೈದಿಕ | ಮತವಳಿಯೆ ||
ದೇವತೆಗಳು | ಮಹದೇವಗೆ ಮೊರೆಯಿಡ | ಲವತರಿಸಿದ | ಧರೆಯೊಳು ಹರನು || ೨ ||

ಆ ಶಿವನುದಿಸಲು | ಶಿವಗುರುವಿಪ್ರಗೆ | ಕ್ಲೇಶವಡಗಿತು | ಸಜ್ಜನರ ||
ಭಾಸುರತೇಜದಿ ಮೆರೆಯುವ ಶಿಶುವಿಂ | ದೂರಹಿತ | ಮಾದುದು ಶಿವಮಹಿಯು || ೩||

ಇಂದು ಕಲಾಧರನುದಿಸಿದಕರದಿಂ | ಮಂದಾನಿಲವದು | ಬೀಸುತಿರೆ ||
ಬೃಂದಳವೆಲ್ಲವು ನಿರ್ಮಲವಾದುದು | ಬೃಂದಾರಕಶತಿ | ಪೊಗಳಿದುದು || ೪ ||

ಈ ಪರಿ ಶುಭಲಕ್ಷಣದಾಮಗುವಿಗೆ | ಪಾಪಹರನು ಶಂಕರನೆಂದೂ ||
ಸ್ಥಾಪಿಸಿನಾಮವಸಂತಸ | ತಳದನು | ಶ್ರೀಪರಮೇಶಗೆ | ಶಿವಗುರುವು || ೫ ||

ಉದಿಸಿದ ಶಿಶುವಿಗೆ | ವರ್ಷಗಳೈದಿರೆ | ಸದಮಲಶಾಸ್ತ್ರಗಳನುಭವವೂ ||
ವುದಿಸಿತು ಪೇಳುವದೇನದ ನೋಡಲು ಅದುಭುತವಾಯಿತು ಶಿವಮಹಿಮೆ || ೬ ||

ಊರ್ಜಿತನಾಗುತಲಿರುವಾ ಬಾಲನ | ನಾರ್ಜಿಸಿ ಮೆರೆದಾ | ಶಿವಗುರುವೂ ||
ವರ್ಜಿಸಿ ನಶ್ವರ ದೇಹವ ಶಾಶ್ವತ | ನಿರ್ಜರ ಸೌಖ್ಯವ ತಾಪಡೆದ || ೭ ||

ಋಷಿಪಿತೃದೇವರ ಋಣವನು ಕಳೆಯಲು | ಪಶುಪತಿರೂಪನು | ಶಂಕರನೂ
ಎಸದನು ಪಾವನ | ನುಪನಯನೋತ್ಸವ | ದೊಳಸೆಯೊಳಗೆ | ಪರಶಿವನಂತೆ || ೮ ||

ಔತ್ಸುಕದವಟು ಭಿಕ್ಷೆಗೆ ಪೋಗಿರೆ | ಉತ್ಸಾಹದೊಳಾಮಲಕವನು ||
ಸತ್ಸತಿಯೋರ್ವಳು | ನೀಡಲು | ಶಂಕರ | ನುತ್ಸವಗೈನದೆಂತೆನಲು || ೯ ||

ಅಂಬರದೆಡೆಯಿಂ | ಸ್ವರ್ಣಾಮಲಕವು | ತುಂಬಿತು ವರ್ಷಿಸಿ | ಸತಿಗೃಹದೋಳ್ ||
ಅಂಬುಜನೇತ್ರನ | ರಾಣಿಯಸ್ಮರಿಸಲು | ಶಂಭುವಿನಂಶದ ಶಂಕರನೂ || ೧೦ ||

ಒಂದು ದಿನ ತಾಯ್ | ನದಿಯೊಳುಮೀಯಲು | ಕುಂದಿದದೇಹದಿ | ನೊಂದಿರಲು ||
ಬಂಧನದೂರನು | ಶಂಕರನಾಗಲೆ | ತಂದನು | ಪೂರ್ಣಿಯ ಗೃಹದೆಡೆಗೆ || ೧೧ ||

ಎಳವೆಳೆಯೊಳೊಂದಿನ | ಪೂರ್ಣಾನದಿಯೊಳ್ | ಜಳಕವ | ನಾಡುತಶಂಕರನೂ ||
ಸುಳಿಯೊಳು | ಮೊಸಳೆಗೆ | ಸಿಕ್ಕಿದೆವಮ್ಮಾ | ವುಳಿವುದುಯತಿಯಾಗಲು ನಾನು || ೧೨ ||

ಏನನು ಪೇಳುವೆ | ಎನಲಾರ್ಯಾಂಬೆಯು | ಮನಧೀಷ್ಟವು | ಸಿದ್ಧಿಸಲೆಂದು ||
ಸನುಮತವೀಯಲು | ಶಂಕರನಾಗಲೆ | ಮಾನಸಸನ್ಯಾಸವಕೊಂಡ || ೧೩ ||

ಐತರುತಾ ಗೋವಿಂದಯತೀಂದ್ರರ | ಪೂತಪದದ್ವಯ | ವನುಕಂಡು ||
ಪ್ರೀತಿಯೊಳಗೆ ಸದ್ವಿದ್ಯೆಯ | ನೆಲ್ಲವ ಭೂತಾಧೀಶನು | ನೆರೆತಿಳಿದ || ೧೪ ||

ಪದುಳದೊಳೋರ್ವನು | ಶಿಷ್ಯನು ಕುಸುಮವ | ನದಿಯಾಚೆಯೊಳಿರೆ | ತರುತಿರಲೂ ||
ಸದಮಲಶಂಕರ | ನಾತನ ಬಾರೆನೆ | ನದಿಯೊಳು ನಡೆಯಲು ಗುರುಭಕ್ತ || ೧೫ ||

ಫಲಕುಸುಮವ | ತರುತಿರುಶಿಷ್ಯನ | ಪದತಲಕಾಶ್ರಯ | ಪದುಮಗಳಿರಲು ||
ನೆಲಸಿತು ಶಿಷ್ಯಗೆ ಪದುಮಚರಣಾನೆಂಬೊಲುಮೆಯ | ನಾಮವು | ಗುರುವರನಿಂ || ೧೬ ||

ನೀನಾರೆನಲಾ | ಮೂಕನಮೋರ್ವನು | ತಾನಾಬ್ರಂಹ್ಮವೀ | ನಾ ಎನಲು ||
ಆನರನೆಸೆದನು ಶಂಕರನಿಷ್ಟದಿ | ಮೌನಿಯು | ಹಸ್ತಾಮಲಕಾಖ್ಯ || ೧೭ ||

ಭಕ್ತಿಯ ಭರದೊಳು | ತೋಟಕವೃತ್ತದಿ | ಭಕ್ತನದೋರ್ವನು | ಸ್ತುತಿಸುತಿರೆ ||
ವ್ಯಕ್ತಮದಾಯಿತು ತೋಟಕನೆಂಬುವ | ಯುಕ್ತದ ನಾಮವು ಗುರುವರನಿಂ || ೧೮ ||

ತಮವಳಿವುದೆಮೋಕ್ಷವು | ಪೆರತಿಲ್ಲವು | ಶಮದ ಮಗಳೆವರಸಾಧನವು ||
ಸುಮತಿಯೆ ತಿಳಿಯಿದನೆನ್ನುತ | ಭೋದಿಸಿ | ತಿಮಿರವ ಕಳದನು | ಜನಮನದ || ೧೯ ||

ಥಳಥಳಿಸಿವ | ಶುಕ್ತಿಯೊಳಗೆರ ಜತವು | ನೆಲಸಲು ದೊರೆಯದ | ರೀತಿಯೊಳು ||
ಅಳಿಯುವ ಭೋಗವ ಬಿಡುವುದೆ ಮೋಕ್ಷವು ತಿಳಿಯಿರಿ ನೀವೆಂದುಸುರಿದನು || ೨೦ ||

ದಿನದಿನಕ್ಕಿಂತತಿ ಜನಗಳಮನವನು | ಘನಮಹಿಮನು | ತಿದ್ದುತ ಮತ್ತೆ ||
ಮನದೊಳು ನೆನದಾ | ಮಾತೆಯ ಸನಿಹಕೆ ಕ್ಷಣದೊಳು | ಗುರುಶಂಕರ ಬಂದ || ೨೧ ||

ಧರಣಿಯೊಳುದಿಸಿದ | ಜೀವಿಗಳೆಲ್ಲವು | ಮರಣವ ಹೊಂದುವ | ಧರ್ಮದೊಳು ||
ಸುರಪುರಸೇರಲು | ಮಾತೆಯ ಶಂಕರ | ನುರುಸಂಸ್ಕಾರವವೆಸಗಿದನು || ೨೨ ||

ಝಗಝಗಿಸುವ ಮಕ್ತಾಹಾರಂಗಳ | ನಿಗಿನಿಗಹೊಳೆಯುವ | ನೂಪುರದ ||
ಮೊಗದಾವರೆಯಿಂ | ಹುಸಿನಗೆ ಸೂಸುವ | ಸೊಗಸಿನ ಶಾರದೆಯ ಕಂಡ || ೨೩ ||

ಜ್ಞಾನಾಧೀಶಳಂಕಾಣುತ ಶಂಕರತಾನಾಕೆಯನುಪತಿ | ಮಂಡನರೊಳ್ ||
ಜ್ಞಾನಾಧಿಖ್ಯವ ಸಾಧಿಸಿ ಮಿಶ್ರಿನ | ಮೌನಿಸುರೇಶನ ಮಾಡಿದನು || ೨೪ ||

ಸರಸದಕವಿತೆಯೊಳನುಪಮತೇಜನು | ನರಹರಿದೇವನ | ತಾನುತಿಸಿ ||
ಕರಗಳ ಪಡೆಯುತ | ಗುರುಶಂಕರ | ಧರೆಗಿದು ಪೊಸತೆನೆ | ತಾಮೆರೆದ || ೨೫ ||

ಢಮರುಗಧರ ನಹ | ಪರಶಿವರೂಪನು | ಹಿಮಕರವದನೆಯ ಶಾರದೆಯಾ ||
ತಮಹರೆಯನು ಶೃಂಗಾದ್ರಿಯ ಪುರದೊಳು | ಕಮನೀಯತವೇ | ನಿಲ್ಲಿಸಿದ || ೨೬ ||

ಕಲಕಲನಾದದಿ | ನರ್ಮದೆಯೊಮ್ಮೆಯು | ನೆಲಮೇರುತ | ಪರಿಯುತಜನರ ||
ಅಳವಡಿಸಲು | ಕಂಡದ ಗುರುಶಂಕರ | ನಳಡಿಸಿದ | ಗುಂಡಿಯೊಳಗೆ || ೨೭ ||

ಖಂಡಪರಶುತಾ | ಕಾಶೀಪುರಿಯೊಳು | ಚಂಡಾಲನರೂಪವ ಧರಿಸೀ ||
ಪಂಡಿತಯತಿಯನು | ಕಾಣುತ ಪರಶಿವ ಖಂಡಿಸಿಕೇಳಿದ ತತ್ವವನು || ೨೮ ||

ಗಮನಿಸೆ ಭೇದಾಭೇದವು ದೇಹಕೆ | ಸಮತೆಯು ಚೈತನ್ಯಕೆ ನಿಜವೂ ||
ನಮಿಪೆನು ಗುರುವೆಂದಂತ್ಯಗು | ವಿಪ್ತಗುಸಮತಾಭಾವದೊಳಾತ್ಮದೊಳು || ೨೯ ||

ಘನತತ್ವವಕೇಳುತ ವಿಶ್ವೇಶ್ವರ | ಮನದೊಳುಸಂತೋಷವನಾಂತು ||
ದಿನಕರಕೋಟಿ | ಪ್ರಭೆಯನು ಮೀರುವ | ತನುಕಾಂತಿಯೊಳೆಸೆದನುನಿಂದು || ೩೦ ||

ಜಮುಣಾನಮೆ | ಇಂದೊದಿರುವ | ಢಮರುಗ | ಉಮೆಯರಸನಕಾಣುತನಲಿದು ||
ನಮಿಸುತಯತಿರಾಜೇಶ್ವರ ಪರಿಪರಿ || ಸುಮಶರಹರನನು | ನುತಿಸಿದನು || ೩೧ ||

ಓಂಕಾರಾರ್ಥವ | ಲೋಕದಜನರಿಗೆ | ಓಂಕಾರಾತ್ಮನು | ತಾತಿಳುಪಿ ||
ಶಂಕೆಯುಹರಿಸುತ | ವೇದಕೆ ಭಾಷ್ಯವ | ಶಂಕರನೆಸೆದನು ತಾರಚಿಸಿ || ೩೨ ||

ಚರಿಸುತ ಚಾರ್ವಾಕರಮತ ಖಂಡಿಸಿ | ಮೆರೆಯುತ ವಾದವಿವಾದದೊಳು ||
ನೆರೆಸುಜ್ಞಾನವತೋರುತ ಜನರಿಗೆ | ಪರಶಿವಮಹಿಮೆಯ ಕಾಣಿಸಿದ || ೩೩ ||

ಛಲವಾದಿಗಳನು ಜೈಸುತ ಶಂಕರ | ಮಲಿನವಪೊದಿದ | ಶಾಸ್ತ್ರಗಳ ||
ಒಲವಿಂ ಶೋಧಿಸಿ | ಯರ್ಥವ ಪೇಳುತ | ನಿಲಿಸಿದ ನಿಳೆಯೊಳು ಚಿರಮಾಗಿ || ೩೪ ||

ಜನಗಳಿಗುರುವಿನ | ಕಣ್ಣನು ಕೊಟ್ಟನು | ತನುಧನಸತಿಸುತ | ಮೊದಲಾಗಿ ||
ಕೊನೆಗಾದರೂ | ಸುಜ್ಞಾನವ | ಪಡೆಯಿರಿ | ಮನಗಾಣಿರಿ | ಮುಕ್ತಿಯ ನೀವೆಂದು || ೩೫ ||

ಟಂಕಾರಧ್ವನಿಯಿಂದಲಿ | ರಣದೊಳು | ಶಂಕರಹಿತ | ನೃಪ | ರೆಸೆವಂತೆ ||
ಶಂಕರಮೌಳಿಯು ಶಾಸ್ತ್ರಧ್ವನಿಯಿಂ | ಶಂಕೆಯನೀಗಿಸಿ | ಬೋಧಿಸಿದ || ೩೬ ||

ಠಕ್ಕನ ವಾದಿಗಳದ್ಭುತವಾದವ | ನಿಕ್ಕಾಲು ಪೆದರದೆ ಮುನಿರಾಯ ||
ಸೊಕ್ಕನು ಮುರಿದವರತಿವಾದಿಗಳನು | ಬೊಕ್ಕಸ ಬರಿದಾಗಿಸಿ ಗೆಲಿದ || ೩೭ ||

ಢಕ್ಕನಾದೊಳಕ್ಷರಪಂಕ್ತಿಯ | ಸಿಕ್ಕಿಸಿಲೋಕಕೆ | ಭಾಷೆಯನು ||
ಅಕ್ಕರದೊಳು | ನೀಡಿದ ಶಶಿಮೌಳಿಯ | ನಕ್ಕರದೊಳು ಪೂಜಿಸಿಮೆರೆದ || ೩೮ ||

ಣಾಕಾರಾಕ್ಷರ | ತಳದಿಹಗಣಪನ | ಸಾಕಾರದ ತತ್ವೊಧರನು ||
ಶ್ರೀಕರ ನರಹರಿದೇವನ ಮುದದೊಳ | ಗೇಕಾಗ್ರತೆಯೊಳ | ಗರ್ಚಿಸಿದ || ೩೯ ||

ಭುವಿಯೊಳಗೆಸೆಯುವ | ಕಾಂಚೀ ನಗರದ | ದೇವಿಯ | ಕಾಮಾಕ್ಷಿಯ ಗುಡಿಯೊಳ್ ||
ಶಿವರೂಪನು | ಸಿರಿಚಕ್ರವನಿಲ್ಲಿಸಿ ಶಿವಯುಗ್ರವ | ತವೆ ನಿಲ್ಲಿಸಿದ || ೪೦ ||

ಮಂಗಳರೂಪನು | ಮಂತ್ರಾರ್ಥಗಳನು | ಸಾಂಗದೊಳದ್ವೈತಾಮೃತವ ||
ತುಂಗೆಯಶೋಭಿಸಿದ ಶಂಕರ ಗುರುಪುಂಗವನೊರೆದನು | ಧರೆಯೊಳಗೆ || ೪೧ ||

ಯತಿರಾಜೇಶ್ವರ | ನಾಲ್ವರ ಶಿಷ್ಯರ | ನತಿಶಯದೊಳು | ನಾಲ್ದೆಸೆಯೊಳಗೆ ||
ಯತಿಗಳಾಗಿಸಿ | ಮಠಗಳ ನಿಲ್ಲಿಸಿ | ಮತಿಯುತ ಮೆರೆದನು ತೇಜದೊಳು || ೪೨ ||

ರಜತಾಜಲಗೃಹ | ನಾಗಿಹ ಶಂಭುವ | ನಜಮೊದಲಾಗಿಹನಿರ್ಜರರೂ ||
ಭಜಿಸಿದ ಕಥದಿಂ ಕಾರ್ಯವನಾಗಿಸಿ | ಭಜಕರಭೀಷ್ಟವ ಸಲ್ಲಿಸಿದ || ೪೩ ||

ಲಕ್ಷಣಕವಿತೆಯೊಳದ್ಭುತ ವಿಷಯವ ಸುಕ್ಷಮಶೀಲನು | ತಾರಚಿಸಿ ||
ಮೋಕ್ಷದಮಾರ್ಗವ | ಜನರಿಗೆ ತಿಳುಪಿದ | ಪಕ್ಷ್ಯಪಾತಗಳೇನಿಲ್ಲದೆಲೆ || ೪೪ ||

ವ್ಯಾಕರಣದ | ಸೂತ್ರಂಗಳ | ಪಠಿಸುತ | ಡುಕುರುಂಕರಣವದೆನ್ನುತ ||
ವ್ಯಾಕುಲಪಡುತಿಹ ವೃದ್ಧಗೆನೀತಿಯನೇಕವು ಪೇಳಿದ ಗುರುವರನು || ೪೫ ||

ಶಂಕರಯತಿವರ | ಲೋಕದ ಜನರಿಗೆ | ಸಂಕಟಹರಿಸುತ | ಪರಿಪರಿಯೋಳ್ ||
ಪಂಕಜನೇತ್ರ ಪರಾಶರಮಹಿಮೆಯ | ಶಂಕೆಯನೀಗಿಸಿ ಬೋಧಿಸಿದ || ೪೬ ||

ಷಣ್ಮತಗಳ ನಿಲ್ಲಿಸಿ | ಭಾರತದೊಳು | ಷಣ್ಮತದಾತನ | ಪೂಜಿಸುತ ||
ಚಿನ್ಮಯರೂಪವ ಪೊಂದಿದ ಶಂಭು | ಜಗನ್ಮಯವೆಂಬುದ ತೋರಿದನು || ೪೭ ||

ಹರುಷದಿಯತಿವರ | ಬದರೀಕ್ಷೇತ್ರಕೆ ತೆರಳಲು ಸುರಜನವಭ್ರದೊಳು ||
ಕರದರುಪೂಮಳೆಯನು ಗುರುಶಿರದೊಳು | ಪರಿಪರಿರಾಗವ ಪಾಡಿದರು || ೪೮ ||

ಕ್ಷಿತಿಯೊಳು ಮೆರೆಯಲಿ | ಭಾರತಿರಚಿಸಿದ | ಕೃತಿಯಿದು | ಶಂಕರ ಗುರುಕಥೆಯು ||
ಮತಿಯುತರೋದಲಿ | ಯೋದಿಸಿಕೇಳಲಿ | ನುತಿಸಲಿ ಸದ್ಗುರು ಮಹಿಮೆಯನು || ೪೯ ||

ಮಂಗಳಸದ್ಗುರು | ಶಂಕರಮಹಿಮೆಗೆ | ಮಂಗಳಕೃಷ್ಣಮಹೀಪತಿಗೆ ||
ಮಂಗಳಕಂಠೀರವ ನರಸಿಂಹಗೆ | ಮಂಗಳ ಜಯಚಾಮೇಂದ್ರನಿಗೆ || ೫೦ ||

ಇತಿ ಶ್ರೀಮತ್ಪರಮಹಂಸ | ಪರಿವ್ರಾಜಿಕಾಚಾರ್ಯವರ್ಯ | ಶ್ರೀಮತ್ ಶಂಕರ ಗುರುಭಗವತ್ಪಾದಾರ್ಪಣಮಸ್ತು||

~.~
  • Login or register to post comments
  • 281 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ!
  • ಕನ್ನಡ ರಸಪ್ರಶ್ನೆ - ೬
  • ಸಾಮಾನ್ಯ ತಿಳುವಳಿಕೆ
  • ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
  • ಕನ್ನಡ ಬರಹ ಸರಿಪಡಿಸೋಣ - ಶಂಕರ್ ಭಟ್
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕಾಡುಕೋಳಿಯ ಜಾಡು ಹಿಡಿದು...
  • ಅನ್ ಸೈಕ್ಲೋಪೀಡಿಯಾ - (ವಿಷಯ)ಮುಕ್ತ ವಿಶ್ವಕೋಶ
  • ಕೋಸಿ-ಬಿಹಾರದ ಕಣ್ಣೀರು
  • ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
  • ಬೂದಿಕೋಟೆ
  • ಅಬ್ಬ, ರಾಷ್ತ್ರಕ್ಕೇ ಅವಮಾನ!
  • ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
  • kishoreyc
    ಉ: ಚೈನಾ ೧೦೦ ನಾವು ೦
    August 29, 2008 - 10:02pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:01pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 30 ಅತಿಥಿಗಳು ಆನ್ಲೈನ್ ಇರುವರು.


ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? ।
ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।।
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator