ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಸೂಳ್ಪಡೆಯಲಪ್ಪುದು ಕಾಣ ಮಹಾಜಿರಂಗದೋಳ್

December 16, 2005 - 9:47am — Sunil Jayaprakash

ಸಿಂಹದ ಮುಪ್ಪುಂ ನೆಗಳ್ದೀ ಗಾಂಗೇಯರ ಮುಪ್ಪುಮಿಳಿಕೆವಡೆಗುಮೆ,
ವನಮಾತಂಗಂ ಗಳಿನಸುರುಚ್ಚದುರಂಗ
ಬಲಂಗಳಿನದೆಂತುಮಂಗಾಧಿಪತಿ.

ಇದು ಹತ್ತನೇ ತರಗತಿಯಲ್ಲಿದ್ದಾಗ ನಾನು ಬಹಳ ಗಟ್ಟಿಯಾಗಿ ಹೇಳುತ್ತಿದ್ದ ಹಳೇಗನ್ನಡದ ಪದ್ಯ. ಕೇವಲ ೭, ವರೆ ವರ್ಷದಲ್ಲಿ ಅದನ್ನ ಮರೆತ್ತದ್ದೇನೆ.
ಇದು, ಕುರುಕ್ಷೇತ್ರ ಯುದ್ಧದಲ್ಲಿ, ಕೌರವರ ಸೇನಾಧಿಪತಿ ಯಾರಾಗಬೇಕೆಂದು ದೃತರಾಷ್ಟ್ರನ ಆಸ್ಥಾನದಲ್ಲಿ ನಡೆಯುವ ಚರ್ಚೆ.
ಯಾರಿಗಾದರು ಇನ್ನಿತರ ಸಾಲುಗಳು ತಿಳಿದಲ್ಲಿ, ದಯವಿಟ್ಟು ಸಂಪದದಲ್ಲಿ ಹಾಕಿರಿ.

  • ಕಾವ್ಯ ಮತ್ತು ಕವನ
~.~
  • Login or register to post comments
  • 1038 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 16, 2005 - 12:30pm — olnswamy

ಸಿಂಹದ ಮುಪ್ಪು ಪೂರ್ಣ ಪಾಠ

olnswamy's picture

ಪಂಪದನ ಬಗ್ಗೆ ಆಸಕ್ತಿ ಹುಟ್ಟಿರುವುದಕ್ಕೆ ಅಚ್ಚರಿ ಮತ್ತು ಸಂತೋಷ.
ನೀವು ಬಯಸಿದ ಕಂದ ಪದ್ಯದ ಪಾಠ ಹೀಗಿದೆ: ಪಂಪ ಭಾರತ, ಆಶ್ವಾಸ ೧೦, ಪದ್ಯ ೧೯. ಮೈಸೂರು ವಿವಿ. ಪ್ರಕಟಣೆ, ವಿಕ್ರಮಾರ್ಜುನ ವಿಜಯಂ, ಭಾಗ ಎರಡು, ವರ್ಷ ೧೯೬೦ (ಎರಡನೆಯ ಮುದ್ರಣ). ಇಲ್ಲಿ ಶಕಟ ರೇಫ ಮತ್ತು ಱಳಗಳನ್ನು ಬಳಸಿಲ್ಲ.
ಸಿಂಗದ ಮುಪ್ಪುಂ ನೆಗಳ್ದೀ
ಗಾಂಗೇಯರ ಮುಪ್ಪುಮಿಳಿಕೆವಡೆಗುಮೆ ವನಮಾ
ತಂಗಗಳಿನಸುಹ್ರುಚ್ಚತು
ರಂಗ ಬಲಂಗಳಿನದೆಂದು ಮಂಗಾಧಿಪತೀ

ಕ್ಷಮೆ: ಮೂರನೆಯ ಸಾಲಿನಲ್ಲಿ ಸುಹ್ರುತ್ ಎಂದು ಬೆರಳಚ್ಚಿಸಿದ್ದೇನೆ. ವಟ್ರಸುಳಿಯ ಕೀಲಿಗಳು ಮರೆತಿದ್ದೇನೆ. ಅಲ್ಲಿ [ಹ]ಗೆ ವಟ್ರಸುಳಿ ಇದೆ ಎಂದು ತಿಳಿದುಕೊಳ್ಳಿ.

ಸಾಲುಗಳನ್ನು ಬಿಡಿಸಿಕೊಂಡರೆ ಹೀಗಾಗುತ್ತದೆ:
ಸಿಂಗದ ಮುಪ್ಪುಂ
ನೆಗಳ್ದ ಈ ಗಾಂಗೇಯರ ಮುಪ್ಪುಂ
ಇಳಿಕೆವಡೆಗುಮೆ?
ವನಮಾತಂಗಗಳಿನ್ ಅಸುಹ್ರುತ್ ಚತುರಂಗ ಬಲಗಳಿನ್
ಅದೆಂದುಮ್ ಅಂಗಾಧಿಪತೀ

ಇದರ ಮುಂದಿನ ಪದ್ಯವೂ ಸುಪ್ರಸಿದ್ಧವಾದದ್ದು:
ಕುಲಜರನ್ ಉದ್ಧತರಂ ಭುಜಬಲಯುತರಂ ಹಿತರನ್ ಈ ಸಭಾ ಮಧ್ಯದೊಳಗೆ ಅಗ್ಗಲಿಸಿದ ಮದದಿಂ
ನಾಲಗೆ ಕುಲಮಂ ತುಬ್ಬುವವೊಲು ಉಱದೆ ನೀಂ ಕೆಡೆ ನುಡಿವೈ

ಇದಕ್ಕೆ ಉತ್ತರವಾಗಿ ಕರ್ಣ ಹೇಳುವ ಮಾತು ಬಹು ಉಲ್ಲೇಖಿತ:
ಕುಲಮನೆ ಮುನ್ನಂ ಉಗ್ಗಡಿಸಿಪಿರೇಂ ಗಡ
ನಿಮ್ಮ ಕುಲಂಗಳ್ ಆಂತು ಮಾರ್ಮಲೆವವನನ್ ಅಟ್ಟಿ ತಿಂಬುವೆ
ಕುಲಂ ಕುಲಮಲ್ತು
ಚಲಂ ಕುಲಂ
ಗುಣಂ ಕುಲಂ
ಅಭಿಮಾನಮ್ ಒಂದೆ ಕುಲಂ
ಅಣ್ಮು ಕುಲಂ
ಬಗೆವಾಗಳೀ ಕಲಹದೊಳ್ ಅಣ್ಣ
ನಿಮ್ಮ ಕುಲಮ್ ಆಕುಲಮಂ ನಿಮಗುಂಟು ಮಾಡುಗುಂ
(ಇಲ್ಲಿ ಗದ್ಯ ರೂಪದಲ್ಲಿ ಬೆರಳಚ್ಚು ಮಾದಿದ್ದೇನೆ. ಇದು ಚಂಪಕ ಮಾಲಾ ಛಂದಸ್ಸಿನ ವ್ರುತ್ತ
ಕಠಿಣ ಪದಗಳು: ಉಗ್ಗಡಿಸು=ಜೋರಾಗಿ ಹೇಳಿಕೊಳ್ಳು
ಮಾರ್ಮಲೆವನ್=ವಿರೋಧಿ, ಮೇಲೆ ಬಿದ್ದು ಬರುವ ಶತ್ರು
ಅಣ್ಮು=ಪರಾಕ್ರಮ, ಶೌರ್ಯ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 16, 2005 - 12:34pm — olnswamy

ಸೂಳ್ ಪಡೆಯಲಪ್ಪುದು ಕಾಣಾ: ಇಡೀ ಪದ್ಯ.

olnswamy's picture

ನೀವು ಬಯಸಿದ ಪದ್ಯ ಇಲ್ಲಿದೆ:
ಪಂಪಭಾರತ, ಆಶ್ವಾಸ ೧೦, ಪದ್ಯ ೨೩:
ಕಲಿತನದುರ್ಕು ಜವ್ವನದ ಸೊರ್ಕು ನಿಜೇಶನ ನಚ್ಚು ಮಿಕ್ಕ ತೋ
ಳ್ವಲದ ಪೊಡರ್ಪು ಕರ್ಣ ನಿನಗುಳ್ಳನಿತೇನೆನಗುಂಟೆ ಭಾರತಂ
ಕಲಹಮಿದಿರ್ಚುವಂ ಹರಿಗನಪ್ಪೊಡೆ ಮೊಕ್ಕಳಮೇಕೆ ನೀಂ ಪಳಂ
ಚಲೆದಪೆಯಣ್ಣ ಸೂಳ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್

ಈ ಪದ್ಯದಲ್ಲಿ ಮಹಾಜಿರಂಗದೊಳ್ ಅನ್ನುವ ಮಾತಿಗೆ "ಭವಾಜಿರಂಗದೊಳ್" ಎಂಬ ಪಾಠಾಂತರವೂ ಇದೆಯಂತೆ. ಅದೂ ಅರ್ಥಪೂರ್ಣವೇ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 16, 2005 - 12:57pm — Sunil Jayaprakash

ಪೂಜ್ಯ ನಮನಗಳು

Sunil Jayaprakash's picture

ಸ್ವಾಮಿಗಳೇ, ಅತೀವ ಸಂತೋಷವಾಯಿತು. ಬಹಳ ಧನ್ಯವಾದಗಳು. ಹಾಗೆಯೇ ಅಧ್ಯಾಪಕರಾದ ನಿಮಗೆ ನನ್ನ ಪೂಜ್ಯ ನಮನಗಳು ಕೂಡ. ಈ ಪದ್ಯವನ್ನ, ಅಭ್ಯಾಸವಾಗಿ ನಾವು ಶಾಲೆಯಲ್ಲಿ ಅಂದು ಆಭಿನಯಿಸಿದ್ದೆವು. ಕರ್ಣನು ಕುಲದ ಬಗ್ಗೆ ಮಾತನಾಡುವಾಗ ನಮ್ಮೆಲ್ಲರ ಕಣ್ಣಗಳು ತೇವಗೊಂಡಿದ್ದವು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 16, 2005 - 1:49pm — Sunil Jayaprakash

Re: ಸೂಳ್ ಪಡೆಯಲಪ್ಪುದು ಕಾಣಾ: ಇಡೀ ಪದ್ಯ.

Sunil Jayaprakash's picture

olnswamy wrote:
ಈ ಪದ್ಯದಲ್ಲಿ ಮಹಾಜಿರಂಗದೊಳ್ ಅನ್ನುವ ಮಾತಿಗೆ "ಭವಾಜಿರಂಗದೊಳ್" ಎಂಬ ಪಾಠಾಂತರವೂ ಇದೆಯಂತೆ. ಅದೂ ಅರ್ಥಪೂರ್ಣವೇ.

ಆಜಿರಂಗ ಎಂದರೆ, ಯುದ್ಧಭೂಮಿಯಲ್ಲವೆ .
ಕನ್ನಡ ಛಂದಸ್ಸಿನ ಪ್ರಕಾರ(ಸಂಸ್ಕೃತಕ್ಕಿಂತ ಭಿನ್ನವಾಗಿದೆ ಕೆಲವು ಕಡೆ),
ಮಹಾ ಮತ್ತು ಭವಾ, ಕ್ರಮವಾಗಿ ಲಘು ಗುರುಗಳಾಗುತ್ತವಲ್ಲವೆ
ಭವಾ ಎಂದರೆ ಆಗಲಿರುವ ಸೂಚಿಸುತ್ತಿದೆಯೇ,

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 16, 2005 - 7:58pm — tvsrinivas41

ತುಂಬಾ ಸಂತೋಷ

tvsrinivas41's picture

ಸಾರ್, ತುಂಬಾ ಒಳ್ಳೆಯ ಕಾವ್ಯದ ತುಣುಕನ್ನು ತೋರಿಸಿದ್ದಾರ. ನಾನೊಬ್ಬ ಪಾಪಿ. ಕನ್ನಡ ಕಾವ್ಯ ಓದಲೇ ಇಲ್ಲ. ಸಂಸ್ಕೃತ ಓದುವ ನೆಪದಲ್ಲಿ ಬಹಳ ಅನ್ಯಾಯ ಮಾಡಿಕೊಂಡೆ.

ಸಮಯವಾದಾಗಲೆಲ್ಲ ಹಳಗನ್ನಡ ಕಾವ್ಯದ ಪರಿಚಯ ಮಾಡಿಸಿಕೊಡಿ ಎಂದು ಕೇಳಿಕೊಳ್ಳುವೆ. ನಿಮ್ಮ ನಿರೂಪಣೆಯಂತೂ ಮನೋಜ್ಞವಾಗಿದೆ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 16, 2005 - 10:42pm — Sunil Jayaprakash

ಪಾಪಿಗಳಲ್ಲ.ಭಾಗ್ಯವಂತರು

Sunil Jayaprakash's picture

tvsrinivas41 wrote:
ನಾನೊಬ್ಬ ಪಾಪಿ. ಕನ್ನಡ ಕಾವ್ಯ ಓದಲೇ ಇಲ್ಲ

ಇದು ಖಂಡಿತ ನೀವು ಭಾವಪರವಶರಾಗಿ ಹೇಳಿಕೊಂಡುರುವುದು. ನಮಗೆಲ್ಲ ನವ್ಯ ಕಾವ್ಯದ ರುಚಿ ತೋರಿಸುತ್ತಿದ್ದೀರ. ಕಾವ್ಯ ರಚಿಸುವುದು ಎಲ್ಲರಿಗೂ ಒಲಿಯುವಂತದ್ದಲ್ಲ. ನಿಮಗೆ ಆ ಕಲೆ ಸಿದ್ದಿಸಿದೆ. ಇದೀಗ ತಾನೆ ನಿಮ್ಮ ಹೆಣ್ತನಕ್ಕೆ ನಮನ ಪದ್ಯ ಓದಿದೆ. ನಾನು ವಯಸ್ಸಿನಲ್ಲಿ ನಿಮಗಿಂತ ಚಿಕ್ಕವನು. ಆದ್ದರಿಂದ ಹೆಚ್ಚು ವಟಗುಟ್ಟುವುದಿಲ್ಲ. ಆದರೆ ಒಂದು ಮಾತು ಹೇಳಿಬಿಡುತ್ತೇನೆ. ನೀವು ಪಾಪಿಗಳಲ್ಲ.ಭಾಗ್ಯವಂತರು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದ ಬಗ್ಗೆ ಒಂದು ವಿಶಿಷ್ಟವಾದ ಪದ್ಯ - ಸುಲಿದ ಬಾಳೆಯ ಹಣ್ಣಿನಂದದಿ
  • ಸಂಪದದಲ್ಲಿ ಹೊಸತು...
  • ಸಾಹಿತ್ಯ ಸಮ್ಮೇಳನದ ವಿವರಗಳು ಬೇಕಾಗಿದೆ
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • O L Nagabhushanaswami and Yeats
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮುಂದೇನಾಗಬಹುದು ???
  • ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
  • ಕತೆಗಾರ್ತಿ ದೊಡ್ಡಮ್ಮ
  • ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!
  • ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!

ಇತ್ತೀಚಿನ ಪ್ರತಿಕ್ರಿಯೆಗಳು

  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
  • girish.rajanal
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 4:25pm
  • harshavardhan v...
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:24pm
  • shashikannada
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 4:20pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:17pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:15pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 34 ಅತಿಥಿಗಳು ಆನ್ಲೈನ್ ಇರುವರು.


ಪರಸ್ಥಳದಲ್ಲಿ ವಿದ್ಯೆಯೇ ಧನ, ವಿಪತ್ಕಾಲದಲ್ಲಿ ಬುಧ್ಧಿಯೇ ಧನ, ಪರಲೋಕದಲ್ಲಿ ಧರ್ಮವೇ ಧನ, ಒಳ್ಳೆಯ ನೆಡೆತೆಯಾದರೋ ಎಲ್ಲೆಡೆಯಲ್ಲಿಯೂ ಅಖಂಡ ಧನ.

— ಭಾರತ ಮಂಜರೀ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator