ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ದಿನಕ್ಕೊಂದು ಪ್ರಶ್ನೆ (೪)

March 13, 2008 - 8:53pm — cmariejoseph

ಕರ್ನಾಟಕದಲ್ಲಿ ಅತಿ ಹೆಚ್ಚು ಶಾಸನಗಳನ್ನು ಓದಿ ಅರ್ಥೈಸಿ ಟೀಕಾರ್ಥಗಳೊಂದಿಗೆ ಪ್ರಕಟಿಸಿ ಕರ್ನಾಟಕ ಇತಿಹಾಸಕ್ಕೆ ಹೊಸ ಮಾರ್ಗ ತೋರಿದ,ಬೆಂಗಳೂರಿನಲ್ಲೇ ಹುಟ್ಟಿದ ವಿದೇಶೀ ವಿದ್ವಾಂಸ ಯಾರು?

  • ಜ್ಞಾನವಾಹಿನಿ
~.~
  • Login or register to post comments
  • 416 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 13, 2008 - 8:55pm — ವೈಭವ

ಉ: ದಿನಕ್ಕೊಂದು ಪ್ರಶ್ನೆ (೪)

ವೈಭವ's picture

ಸರಿಯಾಗಿ ಗೊತ್ತಿಲ್ಲ. ಊಹೆ ಮಾಡುತ್ತಿರುವೆ. ಎಡ್ವರ್ಡ್ ಪಿ ರಯ್ಸ್ ?

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 14, 2008 - 7:23am — mahesha

ಉ: ದಿನಕ್ಕೊಂದು ಪ್ರಶ್ನೆ (೪)

mahesha's picture

ಚಿಮೂ ಅವರ!! ನಂಗೆ ಕಂನಡ ಶಾಸನಗಳು ಅಂದ್ರೆ ಅವರೇ ನೆನೆಪಾಗೋದು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 14, 2008 - 9:35pm — cmariejoseph

ಉ: ದಿನಕ್ಕೊಂದು ಪ್ರಶ್ನೆ (೪)

cmariejoseph's picture

ಕರ್ನಾಟಕದಲ್ಲಿ ಅತಿ ಹೆಚ್ಚು ಶಾಸನಗಳನ್ನು ಓದಿ ಅರ್ಥೈಸಿ ಟೀಕಾರ್ಥಗಳೊಂದಿಗೆ ಪ್ರಕಟಿಸಿ ಕರ್ನಾಟಕ ಇತಿಹಾಸಕ್ಕೆ ಹೊಸ ಮಾರ್ಗ ತೋರಿದ,ಬೆಂಗಳೂರಿನಲ್ಲೇ ಹುಟ್ಟಿದ ವಿದೇಶೀ ವಿದ್ವಾಂಸ ಯಾರು?

ಉತ್ತರ:
ಬೆಂಜಮಿನ್ ಲೂಯಿ ರೈಸ್ (ಬಿ ಎಲ್ ರೈಸ್)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 14, 2008 - 9:47pm — ವೈಭವ

ಉ: ದಿನಕ್ಕೊಂದು ಪ್ರಶ್ನೆ (೪)

ವೈಭವ's picture

ನನ್ನಿ ಜೋಸೆಪರೆ . ಒಳ್ಲೆಯ ಅರಿಮೆ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 15, 2008 - 1:36am — anivaasi

ಉ: ದಿನಕ್ಕೊಂದು ಪ್ರಶ್ನೆ (೪)

anivaasi's picture

ಜೋಸೆಫರೆ,
ಪ್ರಶ್ನೋತ್ತರ ಚೆನ್ನಾಗಿ ನಡೆಯುತ್ತಿದೆ.
ಆದರೆ,

Quote:
ಬೆಂಗಳೂರಿನಲ್ಲೇ ಹುಟ್ಟಿದ ವಿದೇಶೀ ವಿದ್ವಾಂಸ

ಇದನ್ನು ಸಾಂಸ್ಕೃತಿಕವಾಗಿ ಯೋಚಿಸಿ ನೋಡಿ. ನನಗೊಂದಿನಿತು ಕಸಿವಿಸಿಯಾಯಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 16, 2008 - 10:41pm — cmariejoseph

ಉ: ದಿನಕ್ಕೊಂದು ಪ್ರಶ್ನೆ (೪)

cmariejoseph's picture

ಮಾನ್ಯರೇ,
ಬಿ ಎಲ್ ರೈಸ್ ಅವರ ಅತಿ ದೊಡ್ಡ ವಿದ್ವತ್ಪೂರ್ಣ ಕೆಲಸವೆಂದರೆ ಪುರಾತತ್ವ ಇಲಾಖೆಯ ಪೂರ್ಣಕಾಲದ ಅಧಿಕಾರಿಯಾಗಿ ಹದಿನಾರು ವರ್ಷಗಳ ಕಾಲ ಹಳ್ಳಿಹಳ್ಳಿಗಳನ್ನೂ ಕಾಡುಮೇಡುಗಳನ್ನೂ ಅಲೆದು ೮೮೬೯ ಕನ್ನಡ ಶಾಸನಗಳನ್ನು ಹನ್ನೆರಡು ಸಂಪುಟಗಳಲ್ಲಿ “ಎಪಿಗ್ರಾಫಿಯಾ ಕರ್ನಾಟಿಕಾ” ಎಂಬ ಮಾಲಿಕೆಯಲ್ಲಿ ಪ್ರಕಟಿಸಿದ್ದು. ಕ್ರಿಸ್ತಶಕ ೧೮೬೦ರಿಂದ ೧೯೦೬ರವರೆಗೆ ಅವಿಶ್ರಾಂತವಾಗಿ ದುಡಿದ ಇವರು ತಮ್ಮ ೭೦ನೇ ವಯಸ್ಸಿನಲ್ಲಿ ನಿವೃತ್ತರಾಗಿ ಇಂಗ್ಲೆಂಡಿನ ಹ್ಯಾರೋ ಪಟ್ಟಣದಲ್ಲಿ ನೆಲೆನಿಂತರು. ಅವರು ಇಳಿವಯಸ್ಸಿನಲ್ಲಿರುವಾಗ ಲಂಡನ್ನಿನಲ್ಲಿ ನಡೆದ ವಿಶ್ವ ವಾಣಿಜ್ಯ ಮೇಳದಲ್ಲಿ ಮೈಸೂರು ಸಂಸ್ಥಾನದ ಮಳಿಗೆಯಲ್ಲಿ ನಮ್ಮ ಉತ್ಪನ್ನಗಳಾದ ಗಂಧದೆಣ್ಣೆ, ಕಬ್ಬಿಣ ಇತ್ಯಾದಿಗಳನ್ನು ಪ್ರದರ್ಶಿಸಲಾಗಿತ್ತು. ಅಲ್ಲಿಗೆ ಆಗಮಿಸಿದ ರೈಸ್ ಅವರು ಕನ್ನಡದಲ್ಲಿಯೇ ತಮ್ಮ ಸಂಭಾಷಣೆ ಆರಂಭಿಸಿದರು. ಮಳಿಗೆಯ ಪ್ರತಿನಿಧಿಗಳು ಇಂಗ್ಲಿಷಿನಲ್ಲಿಯೇ ಉತ್ತರಿಸುತ್ತಿದ್ದುದನ್ನು ಗಮನಿಸಿ ತಡೆದ ಅವರು “ದಯವಿಟ್ಟು ಕನ್ನಡದಲ್ಲಿ ಮಾತನಾಡಿ, ಎಷ್ಟು ಇಂಪಾದ ಭಾಷೆ ಅದು” ಎಂದರಂತೆ. ಇದು ಅವರ ಅನುಪಮ ಕನ್ನಡಪ್ರೀತಿಗೆ ಸಾಕ್ಷಿ.
ನಾನಂತೂ ಅವರನ್ನು ಬೆಂಗಳೂರಿಗ ಮೇಲಾಗಿ ಕನ್ನಡಿಗ ಎಂದೇ ಗುರುತಿಸುತ್ತೇನೆ. ನನ್ನ ಪ್ರಶ್ನೆಯಲ್ಲಿ ಅವರನ್ನು ವಿದೇಶೀ ಎಂದು ಸಂಬೋಧಿಸಿದ್ದೇನೆ, ಏಕೆಂದರೆ ನಾಡಪ್ರೇಮದಿಂದ ಅವರು ಏನೇ ಮಾಡಿದರೂ ನಮ್ಮ ದೇಶಸ್ಥರಿಗೆ ಅದು ಮತಾಂತರದ ಕ್ರಿಯೆಯಾಗಿ ತೋರುತ್ತದೆ ಅಥವಾ ಇಂಡಿಯಾವನ್ನು ಎಂದಾದರೊಂದು ದಿನ ತಮ್ಮ ಕಿಸೆಯಲ್ಲಿ ಹಾಕಿಕೊಂಡು ಓಡಿಹೋಗುವರೆಂಬಂತೆ ತೋರುತ್ತದೆ.
(ಕೆಂಪುಕಪ್ಪುಅದ್ವಾನಿ ಎಂಬ ರಾಜಕಾರಣಿ ಸ್ವತಃ ತಾವು ವಿದೇಶೀಯಾಗಿದ್ದರೂ ಇಂಡಿಯಾವು ತಮ್ಮದೆಂಬಂತೆ ವರ್ತಿಸುತ್ತಾರೆ. ಇಂಡಿಯಾದಲ್ಲಾಗುವ ಯಾವುದೇ ವಿಕೋಪವು ಅವರಿಗೆ ಪಾಕಿಸ್ತಾನದ ಕೈವಾಡ ಎಂಬಂತೆ ತೋರುತ್ತದೆ. ಇಂಡಿಯಾದ ಸೊಸೆಯಾಗಿ ಇಲ್ಲಿನ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ಒಬ್ಬ ಹೆಣ್ಣುಮಗಳು ಅವರಿಗೆ ಕನಸಿನಲ್ಲೂ ಕಾಡುತ್ತಾಳೆ. ಅದಕ್ಕಾಗಿಯೇ ಅವರು ವೋ ವಿಲಾಯ್ತೀ ಔರತ್ ಎಂದು ಆಗಾಗ್ಗೆ ಬಡಬಡಿಸುತ್ತಿರುತ್ತಾರೆ. ಈ ಮನೋಭಾವ ಇಂದು ನಮ್ಮ ದೇಶಸ್ಥರಲ್ಲಿ ಈಗೀಗ ಬಹಳವಾಗುತ್ತಿದೆ).

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 15, 2008 - 11:59am — mahesha

ಉ: ದಿನಕ್ಕೊಂದು ಪ್ರಶ್ನೆ (೪)

mahesha's picture

ಅಯ್ಯೋ..

ಇವರೇ ಮೊದಲು ’history of canarese language' ಬರೆದುದು ಅಲ್ವ ಸಾರ್‍..

ಅದರಲ್ಲಿ ಅವರು ಎಲ್ಲಾ ಕಡೆ ’kannada country' ಅಂತಾನೆ ಬರೆದಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 16, 2008 - 10:47pm — cmariejoseph

ಉ: ದಿನಕ್ಕೊಂದು ಪ್ರಶ್ನೆ (೪)

cmariejoseph's picture

ಕಿಟೆಲರು ನಾಗವರ್ಮನ ಛಂದೋಂಬುಧಿಯನ್ನು ಪ್ರಕಟಿಸುವಾಗ ಅದರ ಪ್ರಸ್ತಾವನೆಯಲ್ಲಿ ಸುಮಾರು ಹದಿನಾರು ಪುಟಗಳಷ್ಟು ದೀರ್ಘವಾಗಿ ಕನ್ನಡ ಭಾಷೆ ಮತ್ತು ಸಾಹಿತ್ಯ ಚರಿತ್ರೆಯ ಕುರಿತು ಹೇಳುತ್ತಾ ಹೋಗುತ್ತಾರೆ. ಅಂದರೆ ಕನ್ನಡದ ಚರಿತ್ರೆಗೆ ಮೊದಲು ಹೊಳಹು ತೋರಿಸಿಕೊಟ್ಟವರು ಕಿಟೆಲ್ ಎನ್ನಬಹುದು.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 17, 2008 - 10:21am — mahesha

ಉ: ದಿನಕ್ಕೊಂದು ಪ್ರಶ್ನೆ (೪)

mahesha's picture

ಸಾರ್‍...

ತೊಂದರೆ ಇಲ್ಲದಿದ್ದರೆ ಕಿಟ್ಟಲ್ಲರ ಮತ್ತು ರಯ್ಸರ ಬಗ್ಗೆ ತಿಳಿಸುವ ಬರಹ ಬರೆಯಲು ನಿಮ್ಮಲ್ಲಿ ಕೋರಿಕೆ.

ದೊಡ್ಡನನ್ನೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ದಿನಕ್ಕೊಂದು ಪ್ರಶ್ನೆ - ೩
  • ದಿನಕ್ಕೊಂದು ಪ್ರಶ್ನೆ
  • ದಿನಕ್ಕೊಂದು ಪ್ರಶ್ನೆ - - - - "ತಬರನ ಕಥೆ" ಬರೆದವರು ಯಾರು? ಈ ಚಿತ್ರದ ನಿರ್ದೇಶಕ ಯಾರು?
  • ದಿನಕ್ಕೊಂದು ಪ್ರಶ್ನೆ (೩)
  • ದಿನಕ್ಕೊಂದು ಪ್ರಶ್ನೆ
Syndicate content

ಲೇಖಕರು

cmariejoseph's picture

ಪೂರ್ಣ ಹೆಸರು
ಮರಿಜೋಸೆಫ್

ಪರಿಚಯ

ಕನ್ನಡ ಕ್ರೈಸ್ತರ ಭಾಷಾ ಚಳವಳಿಯ ಮುಂಚೂಣಿಯಲ್ಲೊಬ್ಬ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ನೀನು ಕಳುಹಿಸಿದ ಸ್ಮೈಲಿ ಚಾಟು ಬಾಕ್ಸಿನಲ್ಲಿ ಮಿನುಗುತ್ತಿತ್ತು!
  • ಕಾಡುಕೋಳಿಯ ಜಾಡು ಹಿಡಿದು...
  • ಅನ್ ಸೈಕ್ಲೋಪೀಡಿಯಾ - (ವಿಷಯ)ಮುಕ್ತ ವಿಶ್ವಕೋಶ
  • ಕೋಸಿ-ಬಿಹಾರದ ಕಣ್ಣೀರು
  • ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
  • ಬೂದಿಕೋಟೆ
  • ಅಬ್ಬ, ರಾಷ್ತ್ರಕ್ಕೇ ಅವಮಾನ!

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:40am
  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 54 ಅತಿಥಿಗಳು ಆನ್ಲೈನ್ ಇರುವರು.


ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಡೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ -- ಮಂಕುತಿಮ್ಮ ।।

— -ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator