ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಕುರಿಗಳು ಸಾರ್...ನಾವು....

March 15, 2008 - 6:37pm — Nagendra.trasi

ಸದನದ ಕಲಾಪದಲ್ಲಿ ಶಿಸ್ತಿನಿಂದ ವರ್ತಿಸುವುದನ್ನು ಕಲಿತುಕೊಳ್ಳಿ,ಸದನದ ಗೌರವನ್ನು ಕಾಪಾಡಿ,ನಿಮ್ಮ ಹದ್ದು ಮೀರಿದ ವರ್ತನೆಯಿಂದಾಗಿ ಸದನದ ಮರ್ಯಾದೆ ಬೀದಿಗೆ ಬಂದಿದೆ. ನಾನು ಕೇವಲ ನನ್ನ ಅಭಿಪ್ರಾಯವನ್ನಷ್ಟೇ ವ್ಯಕ್ತಪಡಿಸುತ್ತಿದ್ದೇನೆ,ಇದು ಪ್ರಜಾಪ್ರಭುತ್ವದ ಹತ್ಯೆಯಾಗಿದೆ ಎಂಬುದಾಗಿ ಕಟುವಾದ ಶಬ್ದಗಳಲ್ಲಿ'ಮಹಾಮಂಗಳಾರತಿ'ಮಾಡಿದ್ದು ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಅವರು.

ಬುಧವಾರ(ಮಾ.12)ದಂದು ಸಂಸತ್ ಕಲಾಪದಲ್ಲಿ ಭಾರತೀಯ ಜನತಾ ಪಕ್ಷ ಹಾಗೂ ಎಡಪಕ್ಷಗಳು ಕೋಲಾಹಲ ಎಬ್ಬಿಸಿದ್ದವು.ಕಳೆದ ಮೂರು ದಿನಗಳಿಂದ ಸದನದ ಕಲಾಪದಲ್ಲಿ ಕೇರಳದ ಕಣ್ಣೂರಿನಲ್ಲಿ ನಡೆದ ಆರ್‌ಎಸ್‌‌ಎಸ್ ಕಾರ್ಯಕರ್ತರ ಹತ್ಯೆಗೆ ಸಂಬಂಧಿಸಿದಂತೆ ಎಡಪಕ್ಷ ಮತ್ತು ಬಿಜೆಪಿ ಪಕ್ಷದ ಸಂಸದರು ವಾಗ್ದಾಳಿ ನಡೆಸಿದ್ದು, ಸ್ಪೀಕರ್ ಅವರು ಇದೊಂದು ರಾಜ್ಯದ ವಿಷಯ ದಯವಿಟ್ಟು ಕಲಾಪದಲ್ಲಿ ಕೋಲಾಹಲ ಎಬ್ಬಿಸಬೇಡಿ ಎಂದು ಪರಿ,ಪರಿಯಾಗಿ ಮನವಿ ಮಾಡಿಕೊಂಡರೂ ಕೂಡ ಸಂಸದರ ಆರ್ಭಟ ಮುಂದುವರಿದಾಗ ಅವರು ತರಾಟೆಗೆ ತೆಗೆದುಕೊಂಡ ಪರಿ ಇದು.

ಜನಪ್ರತಿನಿಧಿಗಳು ಎನಿಸಿಕೊಂಡವರಿಗೆ ಚಟರ್ಜಿಯವರು ಹೇಳಿದ ಮಾತಿನಲ್ಲಿ ಯಾವ ತಪ್ಪಿದೆ ಹೇಳಿ. ಎಷ್ಟು ಬಾರಿ ಸ್ಪೀಕರ್ ಚಟರ್ಜಿ ಅವರು ಸಂಸದರನ್ನು ಶಿಸ್ತಿನಿಂದ ವರ್ತಿಸಲು ಗದರಿಸಿಲ್ಲ,ಆದರೂ ಬುದ್ಧಿ ಬಂದಂತಿಲ್ಲ.ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಯಿತು ಅಷ್ಟೇ.

ಸಂಸತ್‌‌ನಲ್ಲಿ ನಮ್ಮ ಘನಂದಾರಿ ಸಂಸದರುಗಳು ಆರೋಪ-ಪ್ರತ್ಯಾರೋಪ, ಕೋಲಾಹಲ,ವಾಗ್ವಾದಗಳಿಂದಾಗಿಯೇ ಸದನದ ಕಲಾಪಗಳು ಮುಂದೂಡಲ್ಪಡುತ್ತಿವೆ ವಿನಃ ಯಾವುದೇ ಪ್ರಯೋಜನವಾಗಿಲ್ಲ. ಆ ಕಾರಣಕ್ಕಾಗಿಯೇ ಸ್ಪೀಕರ್ ಅವರು ಕಟುವಾದ ಶಬ್ದಗಳಲ್ಲಿ ಅವರನ್ನು ಟೀಕಿಸಿದ್ದರು. ಅವರ ಟೀಕೆಯಲ್ಲಿಯೂ ಅರ್ಥವಿದೆ,ಸಂಸತ್‌‌ನಲ್ಲಿ ನಡೆಯುವ ಪ್ರತಿ ಒಂದು ನಿಮಿಷದ ಕಲಾಪಕ್ಕೆ ಸರಾಸರಿ 20ಸಾವಿರ ರೂಪಾಯಿ ಖರ್ಜಾಗುತ್ತದೆ. ಅಧಿಕೃತವಾಗಿ ಈವರೆಗೆ ಎಷ್ಷು ಹಣ ವ್ಯಯವಾಗಿದೆ ಎಂಬುದನ್ನು ಸರಕಾರ ಅಧಿಕೃತವಾಗಿ ನೀಡಿಲ್ಲವಾದರೂ ಕೂಡ ಸುಮಾರು ಆರು ತಿಂಗಳ ಹಿಂದೆ ನ್ಯಾಶನಲ್ ಸೋಶಿಯಲ್ ವಾಚ್ ಕೋಅಲಿಶನ್ ಎಂಬ ಸರಕಾರೇತರ ಸಂಸ್ಥೆಯೊಂದು ಬಿಡುಗಡೆ ಮಾಡಿದ ಸಮೀಕ್ಷಾ ವರದಿಯ ಪ್ರಕಾರ,1996-1998ರಲ್ಲಿ 11ನೇ ಲೋಕಸಭೆಯ ಸಂಸತ್ ಕಲಾಪದಲ್ಲಿ ಸಂಸದರ ಕೋಲಾಹಲದಿಂದ ಶೇ.5.28ರಷ್ಟು ಸಮಯ ನಷ್ಟವಾಗಿತ್ತು. ಈ ಅಂಕಿ-ಅಂಶ 12ಲೋಕಸಭೆಯ ಕಲಾಪದಲ್ಲಿ ಶೇ.10.66ಕ್ಕೆ ಏರಿಕೆ ಕಂಡಿದ್ದು,1999-2004ರಲ್ಲಿ 22.4ರಷ್ಟು ಸಮಯ ವ್ಯರ್ಥವಾಗಿತ್ತು.!!

14ನೇ ಲೋಕಸಭೆಯ ಚಳಿಗಾಲದ ಅಧಿವೇಶನ ಕಳೆದ ವರ್ಷ ಜುಲೈ 24ರಂದು ಆರಂಭಗೊಂಡು ಆಗೋಸ್ಟ್ 30ಕ್ಕೆ ಮುಕ್ತಾಯವಾಗಿತ್ತು.ಒಟ್ಟು 28ದಿನಗಳು ಸಂಸತ್ ಕಲಾಪಕ್ಕೆ ಲಭಿಸಿದ್ದವು.ಇದರಲ್ಲಿ ಆಗೋಸ್ಟ್ 9(ರಕ್ಷಾ ಬಂಧನ),ಆ.15(ಸ್ವಾತಂತ್ರ್ಯ ದಿನಾಚರಣೆ) ಹಾಗೂ ಆ.16(ಜನ್ಮಾಷ್ಟಮಿ)ಯ ಮೂರು ರಜಾದಿನಗಳು ಸೇರಿದ್ದರಿಂದ ಚಳಿಗಾಲದ ಅಧಿವೇಶನದಲ್ಲಿ 25ದಿನಗಳು ದೊರೆತಿದ್ದವು.ಪ್ರತಿ ದಿನ ಸರಾಸರಿ ಆರು ಗಂಟೆ ಕಲಾಪಕ್ಕೆ ಸುಸೂತ್ರವಾಗಿ ತೆಗೆದುಕೊಂಡರು 150 ಗಂಟೆಗಳಲ್ಲಿ ಪ್ರಮುಖ ರಾಷ್ಟ್ರೀಯ ವಿಷಯಗಳು,ಚರ್ಚೆ ಹಾಗೂ ಸಂವಿಧಾನ ತಿದ್ದುಪಡಿಯಂತಹ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಬಹುದಾಗಿತ್ತು.

ಆದರೆ ಅಧಿವೇಶನದ ಪ್ರಥಮ ದಿನವೇ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರಕಾರ ಭಯೋತ್ಪಾದನೆ,ಬೆಲೆ ಏರಿಕೆ ಬಗ್ಗೆ ಧ್ವನಿ ಎತ್ತಿ ಕೋಲಾಹಲ ನಡೆಸಿ, ಸಭಾತ್ಯಾಗ ಮಾಡಿದ್ದವು.ಹೀಗೆ ವಿರೋಧಪಕ್ಷಗಳು ಸಭಾತ್ಯಾಗ,ಕಲಾಪಕ್ಕೆ ಅಡ್ಡಿ, ಕೋಲಾಹಲ ಸೇರಿದಂತೆ ಎರಡೂ ಸದನಗಳಲ್ಲಿ 35ಗಂಟೆಗಳಷ್ಟು ಕಾಲ ವ್ಯರ್ಥ ಮಾಡಿದ್ದವು.ಇದು ದಾಖಲೆಯ ಮಟ್ಟದಲ್ಲಿ ಅಂದರೆ ಶೇ.38ರಷ್ಟು ಸಮಯವನ್ನು ಹಾಳುಗೆಡವಿದ್ದಾರೆ.ಕಳೆದ ಹತ್ತು ವರ್ಷಗಳಿಂದ ಸಂಸತ್ ಅಧಿವೇಶನದ ಕಲಾಪದಲ್ಲಿ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲೇ ಇಲ್ಲವಂತೆ,ಪ್ರಸ್ತುತ ಫೆಬ್ರುವರಿ 27ರಿಂದ ಆರಂಭಗೊಂಡ ಬಜೆಟ್ ಅಧಿವೇಶನದಲ್ಲಿಯೂ ಕೋಲಾಹಲ,ಹಾರಾಟ ಮಿತಿಮೀರಿದೆ.

ಸಂಸದರ ಕೋಲಾಹಲದಿಂದಾಗಿ ಈಗಾಗಲೇ 42ಮಿಲಿಯನ್(800,000ಡಾಲರ್)ನಷ್ಟು ಹಣ ನಷ್ಟವುಂಟಾಗಿದೆ. ಸಂಸತ್ ಕಲಾಪಕ್ಕೆ ಭಾರೀ ಹಣ ವ್ಯಯವಾಗುತ್ತಿದ್ದು, ನೀವು ಅಮೂಲ್ಯವಾದ ಸಮಯವನ್ನು ಕೊಲ್ಲುತ್ತಿದ್ದೀರಿ ಎಂದು ಚಟರ್ಜಿ ಅವರು ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದರಲ್ಲಿ ತಪ್ಪೇನಿದೆ,ಇಷ್ಟು ದೊಡ್ಡ ಮಟ್ಟದ ಹಣ ಪೋಲಾಗುತ್ತಿರುವುದು ಜನಸಾಮಾನ್ಯರದ್ದು!!ಆದರೂ ನಾವು ನಮ್ಮ ಸಂಸದರು ಸಂಸತ್‌‌ನಲ್ಲಿ ಅದೇನೋ ಕಡಿದು ಗುಡ್ಡೆ ಹಾಕುತ್ತಾರೆ ಅಂತ ಅವರನ್ನು ಆರಿಸಿಕಳುಹಿಸುತ್ತೇವೆ.ಎಷ್ಟಾದರೂ ನಾವು ಕವಿ ನಿಸಾರ ಕವನದಂತೆ, ಕುರಿಗಳು ಸಾರ್,ನಾವು ಕುರಿಗಳು....

  • ಪ್ರಚಲಿತ
~.~
  • Login or register to post comments
  • 255 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 17, 2008 - 9:44am — varunbhatbm

ಉ: ಕುರಿಗಳು ಸಾರ್...ನಾವು....

varunbhatbm's picture

ಅವರ ಒಂದೇ ಧ್ಯೇಯ ಎಂದರೆ, ಅಪ್ಪಿ ತಪ್ಪಿ ಕೂಡ ಜನರಿಗೆ ಒಳ್ಳೆಯದಾಗಬಾರದು.
ದೇಶದ ದುಡ್ಡು ಹಾಳು ಮಾಡುತ್ತಿದ್ದೇವೆ ಎಂಬ ಕಿಂಚಿತ್ತೂ ಅರಿವು ಇರದ ಮೂಢರೇ ಅಲ್ಲಿ ಇರೋದು.
ಅಲ್ಲಿರೋ 60% ಜನಕ್ಕೆ ಸಂಸತ್ ಇರೋದು ಏತಕ್ಕೆ ಅಥವ ಅಧಿವೇಶನ ಇರೋದು ಏತಕ್ಕೆ ಅಂತ ಗೊತ್ತಿರೋದಿಲ್ಲ. ತಿಳಿದಿದ್ರೆ ಅದೇ ನಮ್ಮ ಪುಣ್ಯ.

-ವರುಣ ಭಟ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರಾದೇಶಿಕ ಪಕ್ಷ v/s ರಾಷ್ಟ್ರೀಯ ಪಕ್ಷ
  • ಅಣು ಒಪ್ಪಂದದಿಂದ ನಮಗೇನು ಲಾಭ, ನಿಮಗೇನಾದ್ರೂ ಗೊತ್ತಿದೆಯೇ?
  • ವಿಶ್ವಾಸಮತದಲ್ಲಿ ಗೆಲುವು ಸಾಧಿಸಿದ, ಹೊಸ ಬಿಜೆಪಿ ಸರ್ಕಾರ !
  • `ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್!
  • ನಡುಗಿಸಲಿರುವ "ಮಾಮು ಫೈನು"
Syndicate content

ಲೇಖಕರು

Nagendra.trasi's picture

ಪೂರ್ಣ ಹೆಸರು
ನಾಗೇಂದ್ರ .ತ್ರಾಸಿ

ಪರಿಚಯ

ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮಿಯಾಗಿ ಕಾರ್ಯನಿರ್ವಹಿಸಿದ್ದು, ಇದೀಗ ಚೆನ್ನೈಯ ವೆಬ್ ದುನಿಯಾ ಡಾಟ್ ಕಾಮ್‌‌ನಲ್ಲಿ ಆನ್ ಲೈನ್ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ನೀನು ಕಳುಹಿಸಿದ ಸ್ಮೈಲಿ ಚಾಟು ಬಾಕ್ಸಿನಲ್ಲಿ ಮಿನುಗುತ್ತಿತ್ತು!
  • ಕಾಡುಕೋಳಿಯ ಜಾಡು ಹಿಡಿದು...
  • ಅನ್ ಸೈಕ್ಲೋಪೀಡಿಯಾ - (ವಿಷಯ)ಮುಕ್ತ ವಿಶ್ವಕೋಶ
  • ಕೋಸಿ-ಬಿಹಾರದ ಕಣ್ಣೀರು
  • ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
  • ಬೂದಿಕೋಟೆ
  • ಅಬ್ಬ, ರಾಷ್ತ್ರಕ್ಕೇ ಅವಮಾನ!

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:40am
  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 44 ಅತಿಥಿಗಳು ಆನ್ಲೈನ್ ಇರುವರು.


ಆದರ್ಶವನ್ನು ತೀರಾ ಕೆಳಗಿರಿಸುವುದು ಅಪರಾಧ. ಆದರ್ಶವನ್ನೇ ಕೆಳಗಿಳಿಸಿ ಜಯಗಳಿಸುವುದಕ್ಕಿಂತ ಉಚ್ಚ ಆದರ್ಶವನ್ನಿರಿಸಿಕೊಂಡು ಅಸಫಲಗೊಳ್ಳುವುದೇ ಮನುಷ್ಯನಿಗೆ ಶೋಭದಾಯಕ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator