Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಅಮ್ಮ ನಿನಗೆ ಗೊತ್ತೇನಮ್ಮ, ನೀನಿಲ್ಲದಿದ್ದರೆ ಹೆದರಿಕೆಯಮ್ಮ...

March 16, 2008 - 10:00am — narendra
ಪ್ರಸೂನ್ ಜೋಶಿ

ಪ್ರಸೂನ್ ಜೋಶಿಯ ಬಗ್ಗೆ ನಿಮಗೆಲ್ಲ ಗೊತ್ತಿರುತ್ತದೆ. ತಾರೇ ಜಮೀನ್ ಪರ್, ಬ್ಲ್ಯಾಕ್, ರಂಗ್ ದೇ ಬಸಂತಿ ಮುಂತಾಗಿ ಹಲವು ಚಿತ್ರಗಳಲ್ಲಿ ಈತನ ಹಾಡುಗಳನ್ನು ಕೇಳಿದ್ದೀರಿ. ನನ್ನನ್ನು ಸೆಳೆದಿದ್ದು ಇತ್ತೀಚಿನ ತೆಹಲ್ಕಾ ಪತ್ರಿಕೆಯಲ್ಲಿ (15 ಮಾರ್ಚ್ 2008) ಬಂದಿರುವ ಈತನ ಸಂದರ್ಶನ. ನಸ್ರೀನ್ ಮುನ್ನಿ ಕಬೀರ್ ನಡೆಸಿದ ಈ ಸಂದರ್ಶನದಲ್ಲಿ ಪ್ರಸೂನ್ ತನ್ನ ರಕ್ತದ ಕಣಕಣದಲ್ಲೂ ತಾನು ಕವಿ ಎನ್ನುತ್ತಾನೆ! ನಮ್ಮ ಜಯಂತ್ ಕಾಯ್ಕಿಣಿ ಆಗಾಗ ಕವಿತೆಯ ಬಗ್ಗೆ ಆಡುತ್ತ ಬಂದ ಮಾತುಗಳನ್ನೇ ಹೋಲುವಂತಿರುವ ಈತನ ಮಾತುಗಳು ಬರಹಗಾರರಿಗೆ ಕುತೂಹಲ ಹುಟ್ಟಿಸುವಂತಿವೆ.

"ಜನಕ್ಕೆ ಹೇಳದೇ ಉಳಿದಿರುವುದರ ಜೊತೆ ಹೆಚ್ಚು ನಂಟು. ಹಾಡೊಂದನ್ನು ಬರೆಯುವಾಗ ನೀವು ಒಂದು ವೃತ್ತವನ್ನು ಪೂರ್ಣಗೊಳಿಸುತ್ತೀರಿ, ನಿಮಗೆ ಹೇಳಬೇಕಿರುವ ಎಲ್ಲವನ್ನೂ ಹೇಳುತ್ತೀರಿ. ಆದರೆ ಸೃಜನಶೀಲತೆಯ ಹೆಚ್ಚುಗಾರಿಕೆ ಎಂದರೆ ನೀವು ಬರೇ ಚುಕ್ಕಿಯನ್ನಿಟ್ಟಾಗಲೂ ಜನ ವೃತ್ತವನ್ನು ನೋಡುವುದು ಸಾಧ್ಯವಾಗಬೇಕು. ಕೇಳುಗರೂ ಭಾಗವಹಿಸುವುದಕ್ಕೆ ನೀವು ಬಿಟ್ಟಾಗ ಅವರು ಆ ಕಲ್ಪನೆಯನ್ನು ಪೂರ್ತಿಗೊಳಿಸುತ್ತಾರೆ." (ಹೇಳಿರುವುದರ ಮೂಲಕ ಹೇಳದೇ ಇರುವುದನ್ನೂ ಕಾಣಿಸುವುದು ಕಾವ್ಯ - ಜಯಂತ ಕಾಯ್ಕಿಣಿ).

"ಕೆಲವೊಮ್ಮೆ ಒಂದು ಶಬ್ದ ಪೇಪರ್ ವ್ಹೈಟ್ ಇದ್ದ ಹಾಗೆ. ಅದನ್ನು ತೆಗೆದುಬಿಟ್ಟರೆ ಎಲ್ಲವೂ ಹಾರಿ ಹೋಗುತ್ತದೆ!"

"ಗದ್ಯ ಆಲಸಿಗಳಿಗೆ. ಕಾವ್ಯ ಯಾರಿಗೆಂದರೆ ಸಮೃದ್ಧ ಪ್ರತಿಮಾಲೋಕವುಳ್ಳವರಿಗೆ. ಅದು ಬಫೆ ಇದ್ದ ಹಾಗೆ. ನೀವೇ ಹುಡುಕಿಕೊಳ್ಳಬೇಕು. ಯಾರೂ ನಿಮ್ಮ ತಟ್ಟೆಗೇ, ನಿಮಗೆ ಬೇಕಾದ್ದನ್ನೇ ತಂದು ಬಡಿಸುವವರಿಲ್ಲ ಅಲ್ಲಿ. ನೋವೆಂದರೆ ಕಾವ್ಯವನ್ನು ಆಸ್ವಾದಿಸುವ ಸಂವೇದನೆಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ."

ಪ್ರಸೂನ್ ಬರೇ ಕವಿಯಲ್ಲ. ಹಾಡಿನ ಚಿತ್ರೀಕರಣದ ದೃಶ್ಯ ಜಗತ್ತಿನ ಕುರಿತೂ ಸಲಹೆ ನೀಡಿದ್ದಿದೆ. (ಜಯಂತರೂ ಇದನ್ನು ಮಾಡಿದ್ದಾರೆ). ರಂಗ್ ದೇ ಬಸಂತಿಯ ಒಂದು ಸನ್ನಿವೇಶ. ಮಗನನ್ನು ಕಳೆದುಕೊಂಡ ತಾಯಿಯ ದುಃಖವನ್ನು ಚಿತ್ರಿಸಬೇಕು. ಅಲ್ಲಿ ತಾಯಿ ಮಗ ಕಣ್ಣಾಮುಚ್ಚಾಲೆಯಾಡುತ್ತಿರುವ ದೃಶ್ಯ ತೋರಿಸಿದ್ದು ನೆನಪಿರಬಹುದು ನಿಮಗೆ. ರೆಹಮಾನ್ ಮತ್ತು ಪ್ರಸೂನ್ ಐಡಿಯಾವಂತೆ ಇದು. ಆದರೆ ಇಲ್ಲಿ ಈಗ ಮಗ ಶಾಶ್ವತವಾಗಿ ಅಡಗಿ ಕುಳಿತಿರುವುದು ಮಾತ್ರ ದುರಂತ ಎನ್ನುತ್ತಾರೆ ಪ್ರಸೂನ್. ಹಾಗೆಯೇ ತಾರೇ ಜಮೀನ್ ಪರ್ ಚಿತ್ರದ ಸಂದರ್ಭ. ಮಗನನ್ನು ಬೋರ್ಡಿಂಗ್ ಸ್ಕೂಲ್‌ನಲ್ಲಿ ಬಿಟ್ಟು ಹೋಗುವ ತಾಯಿ. ಮಗು ತಾಯಿಯನ್ನು ನೋಡುತ್ತದೆ...ತಾಯಿಯ ಕಂಗಳಲ್ಲಿ ನೀರು. ಯಾರ ಭಾವನೆಯನ್ನು ಹಾಡಾಗಿಸಲಿ ನಾನು? ತಾಯಿಯದೋ ಮಗುವಿನದೋ? ನೀ ನನ್ನ ಕಂಗಳ ನಕ್ಷತ್ರದಂತೆ, ಬಹು ಪ್ರೀತಿ ನೀ ಎನಗೆ ಎಂದು ಬರೆಯಬಹುದಿತ್ತು. ಆದರೆ ಈ ಭಾವಗಳೆಲ್ಲ ಆ ದೃಶ್ಯದಲ್ಲೇ ಇವೆ. ಸೊ, ನಾನು ಆ ಕಂದನ ಹೇಳಲಾಗದ ಭಯಗಳಿಗೆ ಮಾತು ಕೊಡಲು ಬಯಸಿದೆ. ತನ್ನನ್ನು ತೊರೆಯಲಾಗುತ್ತಿದೆ ಎನ್ನುವಾಗಿನ ಭಯ...ಅಮ್ಮ ನಿನಗೆ ಗೊತ್ತೇನಮ್ಮ, ಕತ್ತಲೆಂದರೆ ಹೆದರುತ್ತೇನಮ್ಮ...

ನಿಮಗೆ ಗೊತ್ತಿದೆ, ಈ ಹಾಡು ಏನು ಮಾಡಿತು ಎಂಬುದೆಲ್ಲ.

ಈ ಸಂದರ್ಶನವನ್ನು ದಯವಿಟ್ಟು ಓದಿ. ಪುಸ್ತಕ ಸಿಗದಿದ್ದರೆ ಸೈಟಿಗೆ ಹೋಗಿ, (tehelka.com) ಇಡೀ ಸಂದರ್ಶನ ಅಲ್ಲಿ ಲಭ್ಯವಿದೆ.

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
Ornamental seperator
  • Login or register to post comments
  • 269 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 17, 2008 - 11:50am — ASHOKKUMAR

ಉ: ಅಮ್ಮ ನಿನಗೆ ಗೊತ್ತೇನಮ್ಮ, ನೀನಿಲ್ಲದಿದ್ದರೆ ಹೆದರಿಕೆಯಮ್ಮ...

ASHOKKUMAR's picture

http://www.tehelka.com/story_main38.asp?filename=hub150308prose_is.asp
*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರಸೂನ್ ಜೋಶಿ
  • ಕನ್ನಡ "ಬರಹ" ಕೀ ಮ್ಯಾಪ ತಂತ್ರಾಂಶ ಲಿನಕ್ಸ ಬಳಕೆದಾರರಿಗೆ ಲಭ್ಯವಿದೆ
  • ಖಾಸಗಿ ಸಂಸ್ಥೆಯಲ್ಲೇ ವಿದ್ಯುತ್ ಉತ್ಪಾದಿಸುವ ಬಗ್ಗೆ ನಿಮಗೆ ಗೊತ್ತೇ?
  • ಅಣ್ಣಾವ್ರಿಗೊಂದು ನುಡಿನಮನ
  • ಪುಸ್ತಕಗಳು
Syndicate content

ಲೇಖಕರು

narendra's picture

ಪರಿಚಯ

ಕನ್ನಡ ಸಾಹಿತ್ಯದಲ್ಲಿ ಆಸಕ್ತ. ಸುಮಾರು ಮುವ್ವತ್ತು ಕಥೆಗಳನ್ನು ಬರೆದಿದ್ದೇನೆ. ಉತ್ತಮ ಅಭಿರುಚಿಯ ನಾಟಕ, ಸಿನಿಮಾ, ಕಲೆ ಮುಂತಾಗಿ ಇಲ್ಲಿನ ಬದುಕನ್ನು ಸಂಪನ್ನಗೊಳಿಸಬಲ್ಲ ಎಲ್ಲದರಲ್ಲೂ ಆಸಕ್ತಿ ಇದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಂತಿಮ ಸಂಸ್ಕಾರ:ಹೊಸ ವಿಧಾನ
  • ದಾವೂದ್ ಇಬ್ರಾಹಿಂ ಬಂಧನ......ನಂತರ
  • ಪ್ರತ್ಯಕ್ಷ ನೋಡಿದರೂ...
  • ನಶಿಸುತ್ತಿರುವ ಶಬ್ದ ಬಳಕೆ
  • ಎಚ್ಚರ! ಡ್ಯೂಪ್ಲಿಕೇಟ್ Volvo ಸೇವೆ ಲಭ್ಯವಿದೆ
  • ಭಾರತದ ಜ್ಞಾನಾವತಾರ
  • ಹೆಣ್ಣು ಜೀವವಿಮುಖಿ, ಜೀವವಿರೋಧಿಯಾಗುವ ಕ್ಷಣ

ಇತ್ತೀಚಿನ ಪ್ರತಿಕ್ರಿಯೆಗಳು

  • prasannasp
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 3:32pm
  • prasannasp
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 2:58pm
  • Sunil Jayaprakash
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 12, 2008 - 2:49pm
  • madhava_hs
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 2:38pm
  • roopablrao
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 2:12pm
  • ಗಣೇಶ
    ಉ: ದಾವೂದ್ ಇಬ್ರಾಹಿಂ ಬಂಧನ......ನಂತರ
    May 12, 2008 - 2:12pm
  • Shivakumar.Revadi
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:59pm
  • vikashegde
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 1:38pm
  • vikashegde
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:23pm
  • sushil
    ಉ: ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ?
    May 12, 2008 - 1:19pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.

ಪದದೊಳಿಲ್ಲ ತಾನರ್ಥದೊಳಿಲ್ಲವು
ಪದಾರ್ಥ ಸ೦ಘಾತದೊಳಿಲ್ಲ
ಎದೆಎದೆಯನು ಪಿಸು ಮಾತೊಳಗರಳಿಸಿ
ಮುದ ಹರಡುವ ಕಲೆ ಋಷಿ ಬಲ್ಲ.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator