Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಅನನ್ಯ ಅಲ್ಲಮ (೨)

March 18, 2008 - 6:16pm — csomsekraiah

ಅರಣ್ಯಗಳಿಂದ ಸುತ್ತುವರಿದ ಹೆಬ್ಬಂಡೆಗಳ ಆ ದುರ್ಗಮ ಪ್ರದೇಶದಲ್ಲಿ , ಯೋಗಿ ಇರುವನೆಂದು ನಂಬಿದ್ದ ಬೆಟ್ಟದ ಮೇಲಣ ಗುಹೆ ಎದುರು ,ಪರಿಮಿತ ಪರಿವಾರದೊಡನೆ ತೈಲಪ ಬಂದಾಗ ,ಸೂರ್ಯ ದಿಗಂತದ ಮಧ್ಯದಿಂದ ಪಡುವಣದತ್ತ ವಾಲುತ್ತಿದ್ದ .ಎಲ್ಲರೂ ಕಾತುರದಿಂದ ಕಾಯುತ್ತಿದ್ದಂತೆಯೇ ,ತೇಜಸ್ವಿಯಾದ ಬಿಂಬವೊಂದು ಗುಹೆಯಿಂದ ಹೊರ ಬಂದಿತು .ಆ ಆಕೃತಿಯನ್ನು ನೋಡಿ ಎಲ್ಲರೂ ಮಂತ್ರ ಮುಗ್ಧರಾದರು .ತೈಲಪನ ಆಂದೋಲಿತ ಮನಸ್ಸಿನಲ್ಲಿಯೂ ಯಾವುದೋ ಮಧುರ ತಂಗಾಳಿ ಆ ಕ್ಷಣಕ್ಕೆ ಬೀಸಿತು .ತನ್ನ ಜೀವನದಲ್ಲಿಯೇ ಎಂದೂ ಕಾಣದ ಆ ವ್ಯಕ್ತಿಯೊಡನೆ ಚಕ್ರವರ್ತಿ ತೈಲಪ ಹಸುಮಗುವಿನಂತೆ ತನ್ನೆಲ್ಲಾ ಅಳಲುಗಳನ್ನೂ ತೋಡಿಕೊಂಡ .ಮುಂದೆ ಚಾಲುಕ್ಯರ ಕರ್ತವ್ಯಗಳೇನು? ಎಂಬ ತೀಕ್ಷ್ಣ ಪ್ರಶ್ನೆಯನ್ನುತೈಲಪ ಯೋಗಿಯೆದುರು ದೀನನಾಗಿ ಕೇಳಿದ .ಎಲ್ಲವನ್ನೂ ಧೃಢ ಹಾಗೂ ಶಾಂತ ಚಿತ್ತದಿಂದ ಆಲಿಸಿದ ಯೋಗಿ , " ಚಕ್ರವರ್ತಿ ತೈಲಪ , ಹಿಂತಿರುಗಿ ನೋಡು,, ಎಂದರು ತಕ್ಷಣ ತೈಲಪ ತಿರುಗಿ ನೋಡಿದ .ತಾವು ಕುಳಿತಿದ್ದ ಎತ್ತರ ಪ್ರದೇಶದಿಂದ ಬಹು ದೂರದವರೆಗೆ ಹಬ್ಬಿ ಹರಡಿದ ಕಾಂತಾರ ; ಎಲ್ಲಿಂದ ಎಲ್ಲಿಯವರೆಗೂ ವಿಸ್ತರಿಸಿದ ಕಾನನ , ಅಲ್ಲಲ್ಲಿ ಬೆಟ್ಟದ ಮೇಲಿದ್ದ ಬಂಡೆಗಳನ್ನೂ ಸುತ್ತುವರಿದು ಹಬ್ಬಿದ ವನ ರಾಸಿ . ತೈಲಪ ಯೋಗಿಯೆಡೆಗೆ ತಿರುಗಿ ,"ಮಹಾತ್ಮ ಇದರಲ್ಲೇನು ವಿಶೇಷ ,ನಾನು ಅದನ್ನು ಹಾದೇ ತಮ್ಮ ಬಳಿ ಬಂದುದು . ಈ ಪಂಪಾನದಿಯ ಪರಿಸರ ನನಗೆ ಹೊಸದೇನೂ ಅಲ್ಲ ,ಚಿಕ್ಕವನಿದ್ದಾಗಿನಿಂದ ಕಂಡುದೇ ,, ಯೋಗಿ ನಸು ನಗುತ್ತಾ " ಹೌದೇನು ,ಈ ಪರಿಸರ ನಿಮಗೆ ತುಂಬಾ ಪರಿಚಿತವಲ್ಲವೇ ? ಇನ್ನೊಮ್ಮೆ ಹಿಂತಿರುಗಿ ನೋಡಿ ,,

ತೈಲಪ ಯೋಗಿಯ ಆಣತಿಯನ್ನು ಮೀರಲಾರದೆ ಮತ್ತೊಮ್ಮೆ ಹಿಂತಿರುಗಿ ನೋಡಿದ .ಆಶ್ಚರ್ಯ! ತಾನು ಹಿಂದೆ ಕಂಡ ಅರಣ್ಯವೇ ಇಲ್ಲ ,ಭವ್ಯ ಭವನಗಳೂ , ಜನ ಜಂಗುಳಿಗಳೂ ,ಓಡಾಡುವ ವಾಹನಗಳು,ಆನೆ , ಕುದುರೆ, ರಥಗಳು, ಆಯುಧಪಾಣಿಗಳಾದ ಸೈನಿಕರು, ವಿವಿಧ ದಿರುಸಿನ ಸರದಾರರು ,ವಿಸ್ಮಿತನಾದ ತೈಲಪ , " ತಂದೆ , ಇದೆಲ್ಲಾ ಏನು ? ಯಾವ ಇಂದ್ರ ಜಾಲ ಇದು? ,, ಯೊಗಿ ಶಾಂತ ಚಿತ್ತದಿಂದ ನಸು ನಗುತ್ತಲೇ ಹೇಳಿದ " ಇಂದ್ರಜಾಲವಲ್ಲ , ಇದು ಚಾಲುಕ್ಯರ ನಂತರ ಈ ನಾಡಿನಲ್ಲಿ ಭವ್ಯವಾಗಿ ಮೈದಳೆಯಬೇಕೆಂದು ,ಕಾದು ಕುಳಿತಿರುವ ಸಾಮ್ರಾಜ್ಯ ; ಭವಿಷ್ಯದ ಪ್ರಭುತ್ವ ,, "ಹಾಗಾದರೆ ಚಾಲುಕ್ಯರು ? ,, " ಏನಿಲ್ಲ, ಇನ್ನೊಮ್ಮೆ ಹಿಂತಿರುಗಿ ನೋಡು ,, ಹಿಂತಿರುಗಿದ ತೈಲಪ ದಿಗ್ಭ್ರಾಂತನಾಗಿ ಹೋದ ,ತಾನು ಕಂಡ ಇಡಿಯ ದೃಶ್ಯ ಸ್ಮಶಾನ ಸದೃಶವಾಗಿ ಹೋಗಿದೆ . ಶಿಥಿಲ ಕಟ್ಟಡಗಳು , ಭಗ್ನ ಮಂದಿರಗಳು ,ಜನ ಜಂಗುಳಿ ಇದ್ದ ಜಾಗದಲ್ಲಿ , ವನ್ಯ ಮೃಗಗಳು . ಇಡಿಯ ಸನ್ನಿವೇಶ ಭೀಭತ್ಸ ಮಯವಾಗಿ ಹೋಗಿದೆ ." ಇದೆಲ್ಲ ಏನು ? ನನ್ನಿಂದ ನೋಡಲೇ ಆಗುತ್ತಿಲ್ಲ , ಏನಿದು ತಂದೆ ?

ಅಷ್ಟೇ ಶಾಂತನಾಗಿ ಯೋಗಿ ಹೇಳಿದ , "ಅದು ಆ ಸಾಮ್ರಾಜ್ಯದ ಸರ್ವ ನಾಶ . ಈ ಜಗತ್ತಿನಲ್ಲಿರುವುದೆಲ್ಲವೂ ಹುಟ್ಟಿ, ಬೆಳೆದು , ಬಾಳಿ, ವಿನಾಶದೆಡೆಗೆ ನಡೆಯಲೇಬೇಕಾದ ಅನಿವಾರ್ಯತೆಗೆ ಸಿಲುಕಿರುವ ಅಸಹಾಯಕ ವಸ್ತುಗಳು .ನಿರಂತರ ವೇಗವಾಗಿ ಸರಿಯುವ ಈ ಜಗತ್ತಿನಲ್ಲಿ ,ಎಲ್ಲವೂ ತಿಳಿದುಕೊಳ್ಳುವುದು ತಾನು ಸ್ಥಿರ ಎಂದು .ಅದೇ ಜಗಕ್ಕಿದ ವಿಧಿ . ಅಸ್ಥಿರವಾದ ಜೀವಮಾನದ ಮೇಲೆ ಬಣ್ಣದ ಹೊದಿಕೆ ಎಳೆದು ಸ್ಥಿರವೆಂಬ ಭ್ರಮೆಯನ್ನು ಕಲ್ಪಿಸುವುದೇ ಮಾಯೆಯ ಕೆಲಸ ........... ಯೋಗಿ ಹೇಳುತ್ತಲೇ ಹೋದ ,ಆ ಗಂಭೀರ ವಾತಾವರಣದಲ್ಲಿ ಎರಡನೆಯ ಸ್ವರವೇ ಇರಲಿಲ್ಲ . ಯೋಗಿಯ ಮಾತುಗಳನ್ನು ಮಂತ್ರ ಮುಗ್ಧನಂತೆ ಕೇಳುತ್ತಾ ಹೋದ ಚಕ್ರವರ್ತಿಯ ಪ್ರಕ್ಷುಬ್ಧ ಕಡಲಿನಂತಹ ಮನಸ್ಸು ,ಶಾಂತವಾಗುತ್ತ ಹೋಯಿತು . ಯೋಗಿಯ ಎರಡು ಹುಬ್ಬುಗಳ ನಡುವೆ ,ಮೀಂಚಿನಂತೆ ಮೂರನೆಯ ನೋಟವೊಂದು ಮಿನುಗುತ್ತಿತ್ತು . ( ಮುಂದುವರಿಯುವುದು )

  • ಜ್ಞಾನವಾಹಿನಿ
Ornamental seperator
  • Login or register to post comments
  • 119 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 19, 2008 - 11:27am — girish.rajanal

ಉ: ಅನನ್ಯ ಅಲ್ಲಮ (೨)

girish.rajanal's picture

ತುಂಬ ಚೆನ್ನಾಗಿದೆ ಸರ್‍,
ಮುಂದಿನ ಸಂಚಿಕೆ ಬೇಗ ಬರಲಿ.

ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.

  • Login or register to post comments
  • link
  • Email this ಪ್ರತಿಕ್ರಿಯೆ
March 19, 2008 - 5:13pm — csomsekraiah

ಉ: ಅನನ್ಯ ಅಲ್ಲಮ (೨)

csomsekraiah's picture

ಪ್ರೀತಿಯ ಗಿರೀಶ್ ಮೊದಲ ಪ್ರತಿಕ್ರಿಯೆಗಾಗಿ ಧನ್ಯವಾದಗಳು , ಅಲ್ಲಮನ ಬಗ್ಗೆ ಬರೆಯುವ ಆಸೆ ಈ ರೀತಿಯಾಗಿ ಸಂಪದದ ಮೂಲಕ ತೀರುತ್ತಿರುವುದು ಸಂತಸ ತಂದಿದೆ .ಆದುದರಿಂದ ಸಂಪದಕ್ಕೂ ಅದರೆಲ್ಲ ಬಳಕೆದಾರರಿಗೂ ( ಓದುಗರಿಗೂ ಎನ್ನುವುದು ಈ ಕ್ಷೇತ್ರಕ್ಕೆ ಹೊಂದುತ್ತದೋ ಇಲ್ಲವೋ ಕಾಣೆ) ಈ ಮೂಲಕ ಧನ್ಯವಾದಗಳು . ನನ್ನಿಂದಾದಷ್ಟು ಈ ಲೇಖನವನ್ನು ವಿಸ್ತರಿಸುತ್ತೇನೆ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅನನ್ಯ ಅಲ್ಲಮ (೧)
  • ಯೋಗಿ??
  • ಮಹಾ ಮಾನವ - ಬೇರ್ ಫುಟ್ ಕಾಲೇಜಿನ ಅಧ್ಯಾಪಕ
  • ಮುಂಗೋಪಿ ಗುಂಡ
  • ಯೋಗಿಯ ಆತ್ಮ ಕಥೆ
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 13 ಅತಿಥಿಗಳು ಆನ್ಲೈನ್ ಇರುವರು.

ಆ ದೇವ ಈ ದೇವ | ಮಾದೇವನೆನಬೇಡ |
ಆ ದೇವರ ದೇವ ಭುವನದ ಪ್ರಾಣಿಗಳಿ - |
ಗಾದವನೆ ದೇವ ಸರ್ವಜ್ಞ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator