ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಅನನ್ಯ ಅಲ್ಲಮ (೩)

March 19, 2008 - 12:23pm — csomsekraiah

ಬಸವಣ್ಣನವರು ಕಲ್ಯಾಣವನ್ನು ತಮ್ಮ ಕಾರ್ಯ ಕ್ಷೇತ್ರವನ್ನಾಗಿ ಮಾಡಿಕೊಂಡರು .ಅಂದಿನ ಇಡೀ ಸಮಾಜ ಗೊಂದಲಗಳ ಗೂಡಾಗಿತ್ತು .ಚಾಲುಕ್ಯ, ರಾಷ್ಟ್ರಕೂಟ ಇಂತಹ ಪ್ರಬಲರು ಕೊನೆಯುಸಿರೆಳೆಯುತ್ತಿದ್ದರು . ಕದಂಬರು ಕಣ್ಮರೆಯಾಗಿ ಬಹಳ ಕಾಲವೇ ಆಗಿತ್ತು . ಕರ್ನಾಟಕದ ದಕ್ಷಿಣದಲ್ಲಿಯೂ ಗಂಗರು, ಹೊಯ್ಸಳರು ತಮ್ಮ ಸುವರ್ಣ ಯುಗಗಳನ್ನು ಮುಗಿಸಿ , ಪಳೆಯುಳಿಕೆಗಳಾಗುತ್ತಿದ್ದರು .ಎಲ್ಲೆಯಿಯೂ ಮಾಂಡಳಿಕರ , ಪಾಳೆಯಗಾರರ ಸಣ್ಣಪುಟ್ಟ ಆಡಳಿತಗಳು ತಲೆಯೆತ್ತುತ್ತಿದ್ದವು .ಜನರಿಗೆ ಒಂದು ದೃಢವಾದ ರಾಜಕೀಯ ನಾಯಕತ್ವವೇ ಇಲ್ಲದಂತಾಗಿತ್ತು .ಇದರಿಂದಾಗಿ ಸಾಮಾಜಿಕ ಜೀವನ ಅಸ್ತವ್ಯಸ್ತವಾಗತೊಡಗಿತ್ತು .

ಇಂತಹ ಸಮಯದ ದುರುಪಯೋಗವನ್ನು , ಸಮಾಜದ ಬಲಾಢ್ಯ ಶಕ್ತಿಗಳು ಮತ್ತು ಮಾನವ ವಿರೋಧಿಗಳು ಸರಿಯಾಗಿಯೇ ಉಪಯೋಗಿಸಿಕೊಳ್ಳುತ್ತಿದ್ದರು . ಸಾಮಾನ್ಯರ ಕಾರ್ಪಣ್ಯಮಯ ಬದುಕು ಬದುಕಲಾರದಷ್ಟೇ ಅಸಹನೀಯವಾಗಿತ್ತು .

ಬಸವಣ್ಣನವರು ತಮ್ಮ ಸ್ವಭಾವ ಸಹಜವಾದ ಮಾರ್ದವ ಗುಣ ಮತ್ತು ಉನ್ನತ ಚಿಂತನೆಗಳಿಂದ ; ಸಂಗಮದಲ್ಲಿ ಹನ್ನೆರಡು ವರ್ಷ ನಡೆಸಿದ ಅಧ್ಯಯನದಿಂದ, ತಲುಪಿದ ತಾರ್ಕಿಕ ನಿಲುವುಗಳನ್ನು ಪ್ರಯೋಗದ ಪರೀಕ್ಷೆಗೆ ಒಡ್ಡಿ, ಫಲಾಫಲಗಳನ್ನು ಅರಿತುಕೊಳ್ಳುವ ಸಮಯ ಸನ್ನಿಹಿತವಾಗಿತ್ತು .

ತಾವು ಓದಿದ , ತಿಳಿದ ಆದರ್ಶಗಳಿಗೂ , ಎದುರಲ್ಲಿದ್ದ ಸಾಮಾಜಿಕ ಜೀವನಕ್ಕೂ , ಅರ್ಥಾರ್ಥ ಸಂಬಂಧವಿಲ್ಲದುದು ಅವರನ್ನುಚಿಂತೆಗೀಡುಮಾಡಿತ್ತು . ಸಮಾಜ ತನ್ನ ಎಲ್ಲ ಕುರೂಪದ ಮುಖಗಳನ್ನೂ ,ಯಾವ ಎಗ್ಗೂ ಇಲ್ಲದೆ ,ಎಲ್ಲ ರಂಗಗಳಲ್ಲಿ ನಾಚಿಕೆ ಬಿಟ್ಟು ಪ್ರದರ್ಶಿಸುತ್ತಿತ್ತು .

ಬಸವಣ್ಣನವರ ಎದುರಿಗಿದ್ದ ಮೊಟ್ಟ ಮೊದಲ ಆದ್ಯತೆ ಅನ್ನವಾಗಿತ್ತು .ಜಾತಿಯ ಕಾರಣಗಳಿಂದ , ಬಲಶಾಲಿಗಳಲ್ಲದ ಕಾರಣಗಳಿಂದ ,ಮನುಷ್ಯನಿಗೆ ಅನು ದಿನವೂ ಬೇಕಾದ ಅನ್ನದಿಂದಲೇ ಅನೇಕ ಸಮಾಜಗಳು ವಂಚಿತವಾಗಿದ್ದವು .ಬಡಕಲು ಶರೀರದ ಆಸೆಯ ನೋಟವನ್ನು ಬೀರುತ್ತಿದ್ದ , ಗುಳಿ ಬಿದ್ದ ಕಣ್ಣುಗಳ ,ಅಸಹಾಯಕ ಮುಖಗಳು ಅವರ ಮನಸ್ಸಿನಲ್ಲಿ ಅಚ್ಚೊತ್ತಿ, ಯಾತನೆಯನ್ನುಂಟು ಮಾಡುತ್ತಿದ್ದವು .

ಛಿನ್ನವಿಛ್ಛಿನ್ನವಾಗಿ ಒಡೆದು ಹೋಗಿರುವ , ಅಸಮಾನತೆಗಳಿಂದ ನೆಲ ಕಚ್ಚಿರುವ , ಈ ಇಡೀ ಸಮಾಜವನ್ನು ಒಂದು ಬಂಧಕ ಶಕ್ತಿಯ ಕೆಳಗೆ ಒಂದುಗೂಡಿಸಬೇಕಾದುದು ಮೊದಲ ಆದ್ಯತೆಯಾಗಿ ಅವರಿಗೆ ಕಾಣಿಸಿತು .

ಜನರು ದೇಹ ದಂಡಿಸಿ ದುಡಿಯುವ ಕೆಲಸಕ್ಕೆ , ಗೌರಪೂರ್ಣ ಪ್ರತಿಫಲ ಅವರಿಗೆ ಸಿಗಲೇಬೇಕು . ಮಾನವಂತ ಬದುಕು ಎಲ್ಲರ ಹಕ್ಕು . ಬರಿಯ ಉನ್ನತ ಸ್ತರದಲ್ಲಿರುವವರ ಹೊಟ್ಟೆ ಬೆಳೆಸಿಕೊಳ್ಳಲು, ಸಮಾಜದ ದುಡಿಮೆ ವಿನಿಯೋಗವಾಗಕೂಡದು . ಸಮಾಜದ ಸಂಪತ್ತಿಗೆ , ಅದರ ನಾಯಕ ಹೇಗೆ ಒಡೆಯನೋ , ಹಾಗೆಯೇ ಬೀದಿ ಗುಡಿಸುವ ಸಾಮಾನ್ಯನೂ ಅಷ್ಟೇ ಒಡೆಯ . ಈ ರೀತಿಯ ಅವರ ಪರಿಕಲ್ಪನೆಗಳು ಕಾಯಕ ತತ್ವದ ರೂಪ ರೇಷೆಗೆ ಕಾರಣವಾಗಿದ್ದವು .

ಜನರ ಆರ್ಥಿಕ ಅಸಮಾನತೆಯ ಜೊತೆ ಜೊತೆಗೇ ಧಾರ್ಮಿಕ ಅಸಮಾನತೆಗಳನ್ನೂ , ಸಮಾಜದಿಂದ ನಿರ್ಮೂಲಗೊಳಿಸಬೇಕಾಗಿತ್ತು . ಅದಕ್ಕಾಗಿ ಇಡೀ ಸಮಾಜದ ಚಿಂತನೆಯ ದಿಕ್ಕನ್ನೇ ಬದಲಾಯಿಸ ಬೇಕಾದ ಅನಿವಾರ್ಯತೆ ಎದುರಾಗಿತ್ತು . ಈ ರೀತಿಯ ಪ್ರಯೋಗಗಳಿಗೆ ಜನರಿಂದ ಅಭೂತಪೂರ್ವ ಬೆಂಬಲವೂ ದೊರೆಯತೊಡಗಿತು .

ಇದೆಲ್ಲ ರೀತಿಯ ಸಾಮಾಜಿಕ ಚಿಂತನೆಗಳು ಸರಿಯೇ ಸರಿ . ಆದರೆ ಮನುಷ್ಯ ಕೇವಲ ಯಂತ್ರವಲ್ಲ ; ಅವನು ಮನೋಜೀವಿ .ಮನಸ್ಸು , ಭಾವಗಳು ಮಿಶ್ರಣಗೊಂಡ ಮಾನಸಿಕ ಪರಿಕಲ್ಪನೆಗಳಿಂದ , ಅವನು ಹೊಸದನ್ನು ದರ್ಶಿಸಬಲ್ಲ: ಕಲ್ಪಿಸಬಲ್ಲ .ಈ ವಿಚಿತ್ರ ಜೀವಿಗೆ ಬರಿಯ ಹೊಟ್ಟೆ, ಬಟ್ಟೆಯ ಪ್ರಶ್ನೆ ಮಾತ್ರವಲ್ಲ ಇತರ ಅಗತ್ಯಗಳೂ ಇವೆ .

ಬರಿಯ ಭೌತಿಕ ಸಾಧನಗಳ ಲಭ್ಯತೆ , ಕೇವಲ ಮರಳುಗಾಡಿನ ಪಯಣ , ನಿರಂತರ ಏಕತಾನತೆ ಮನಸ್ಸನ್ನು ಕೊಂದುಹಾಕಬಲ್ಲ ಅಪಾಯದಿಂದ ಕೂಡಿದುದು .ಬರಿಯ ಭೌತಿಕ ಜಗತ್ತಿನ ನಿರಂತರ ಗೀಳು ,ಅದು ಹುಚ್ಚಿನಲ್ಲಿ ಪರ್ಯವಸನವಾಗಬಹುದು .

ಜಗತ್ತಿನ ಲಭ್ಯತೆಗಳಿಗೆ ಹೇಗೆ ಎಲ್ಲರೂ ಪಾಲುದಾರರೋ ? ಹಾಗೆಯೇ ಅವರವರ ಮನಸ್ಸನ್ನೂ ಸಂತೈಸಿಕೊಳ್ಳುವ ಹಕ್ಕೂ ಸಹ ಎಲ್ಲರಿಗೂ ಇದೆ .ಅದಕ್ಕಾಗಿ ಗುಡಿಯ ಪೂಜಾರಿ, ಪುರೋಹಿತನ ಮಧ್ಯಸ್ಥಿಕೆ ಬೇಕಾಗಿಲ್ಲ .ಅವರವರು ಪಡೆಯುವ ಭೌತಿಕ ಸುಖ ಸಾಧನಗಳು ಹೇಗೆ ಅವರವರ ಸ್ವಂತದ ಅನುರಕ್ತಿಗಳೋ , ಹಾಗೆಯೇ ಆಧ್ಯಾತ್ಮಿಕ ಅನುಭೂತಿಗಳೂ ಸಹ ,ಅವರವರ ಆತ್ಮಿಕ ಅನುಸಂಧಾನಗಳು ; ಮನುಷ್ಯನ ಹೊಟ್ಟೆಯ ಹಸಿವಿನಂತೆಯೇ ಆಧ್ಯಾತ್ಮಿಕ ಹಸಿವೂ ಸಹ ವೈಯುಕ್ತಿಕವಾದುದು ವಾದುದು .

ಆರ್ಥಿಕ ದಾಸ್ಯದಿಂದ ಮಾತ್ರವಲ್ಲ ಆಧ್ಯಾತ್ಮಿಕ ದಾಸ್ಯದಿಂದಲೂ ಮಾನವನ ಬಿಡುಗಡೆ ಆಗಬೇಕು .ಈ ಎರಡನ್ನೂ ಸಾಧಿಸುವುದರಿಂದ , ಈ ಎರಡರಿಂದಲೂ ವಂಚಿತರಾದ ಜನರನ್ನು ಸಮಾಜದ ಒಟ್ಟು ವ್ಯವಸ್ಥೆಯಲ್ಲಿ ಒಂದುಗೂಡಿಸಲು ಸಾಧ್ಯ , ಎಂಬ ಕಾರಣಕ್ಕಾಗಿ , ಅಲ್ಲದೆ ಮನಸ್ಸಿನ ಅಗಾಧ ಕಲ್ಪಕ ಶಕ್ತಿಯ ಸದುಪಯೋಗ ಪಡೆಯಲು ಆಧ್ಯಾತ್ಮವೂ ಅನಿವಾರ್ಯವಾದ ಅಂಶ , ಎಂಬುದನ್ನು ಮನಗಂಡಿದ್ದ ಬಸವಣ್ಣನವರು ಅದಕ್ಕಾಗಿ ಸೂಕ್ತ ಮಾರ್ಗದರ್ಶಿಯನ್ನು ಅರಸುತ್ತಿದ್ದರು .

  • ಜ್ಞಾನವಾಹಿನಿ
~.~
  • Login or register to post comments
  • 252 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 19, 2008 - 2:26pm — madhava_hs

ಉ: ಅನನ್ಯ ಅಲ್ಲಮ (೩)

madhava_hs's picture

ಉತ್ತಮವಾಗಿ ಮೂಡಿಬರುತ್ತಿದೆ ಸೋಮಶೇಖರಯ್ಯನವರೇ..ಮುಂದುವರೆಸಿ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 19, 2008 - 3:13pm — savithru

ಉ: ಅನನ್ಯ ಅಲ್ಲಮ (೩)

savithru's picture

ತುಂಬಾ ಚೆನ್ನಾಗಿ ಬರುತ್ತಾ ಇದೆ. ಯಾವುದೇ ಕಾರಣಕ್ಕೆ ಅಪೂರ್ಣ ಗೊಳಿಸಬೇಡಿ. ಓದುಗರು ಇದ್ದಾರೆ.

ನಾನು ಇದುವರೆಗೂ ಅಲ್ಲಮನನ್ನು ನೋಡಿದ್ದು ವಚನಗಳ ಮೂಲಕ. ಇಲ್ಲಿ ನೀವು ಅವನನ್ನು ಐತಿಹಾಸಿಕ / ಪುರಾಣಿಕ ವ್ಯಕ್ತಿಯಾಗಿ ನಿರೂಪಿಸುತ್ತೀದ್ದೀರಿ.

"ದೊಡ್ಡ" ವ್ಯಕ್ತಿಗಳಿಗೆ ಅತಿಮಾನುಷ ಗುಣಗಳನ್ನು ಆರೋಪಿಸುವದು ಎಲ್ಲ ಕಡೆ ನಡೆದಿದೆ. ರಾಮ ಕೃಷ್ಣರಾದಿಯಾಗಿ ಇತ್ತೀಚಿನ ಹಿಂದೂ ಧರ್ಮದ ಎಲ್ಲ ಮೇರು ವ್ಯಕ್ತಿಗಳಿಗೂ ಈ ಅತಿಮಾನುಷ ಶಕ್ತಿ / ಗುಣಗಳನ್ನು ಆರೋಪಿಸಲಾಗಿದೆ. ಅಲ್ಲಮನ ವಿಷಯದಲ್ಲೂ ಹೀಗೆ ಆಗಿದ್ದರೆ ಅದು ಮಾತ್ರ ಒಂದು ವಿಪರ್ಯಾಸ!. ಈ ಅತಿಮಾನುಷ ಗುಣಗಳನ್ನು ಆರೋಪಿಸದಿದ್ದರೂ ಅವನು ಎಲ್ಲರಿಗಿಂತ ಮೇಲೆದ್ದು ನಿಲ್ಲುತ್ತಾನೆ.

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 19, 2008 - 5:22pm — csomsekraiah

ಉ: ಅನನ್ಯ ಅಲ್ಲಮ (೩)

csomsekraiah's picture

ಮಾಧವ ಹೆಚ್.ಎಸ್. ಸವಿತೃ ಇಬ್ಬರಿಗೂ ಧನ್ಯವಾದಗಳು . ಸವಿತೃ ಅವರ ಅಭಿಪ್ರಾಯ ಸರಿಯಾಗಿದೆ .ಇಲ್ಲಿ ಸಾಮಾನ್ಯರಿಗಿಂತ ಭಿನ್ನವಾದ ವ್ಯಕ್ತಿಗಳನ್ನು ನೋಡುವವರಿಗೆ ಅವರು ಅಸಾಮಾನ್ಯರಾಗಿಯೇ ಕಾಣಿಸುತ್ತಾರೆ .ಅದರಿಂದಾಗಿಯೇ ಅಂತಹವರ ಬಿಂಬಕ್ಕೆ ಬಣ್ಣ ನೀಡುವುದು ಸಾಮಾನ್ಯರ ಸಾಮಾನ್ಯ ಸಂತೋಷ , ಉಳಿದಂತೆ ವೈಚಾರಿಕವಾಗಿ ಯೋಚಿಸುವುದೇ ಸರಿ .

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 20, 2008 - 10:52pm — hamsanandi

ಉ: ಅನನ್ಯ ಅಲ್ಲಮ (೩)

hamsanandi's picture

ಚೆನ್ನಾಗಿ ಬರುತ್ತಿದೆ - ಎಲ್ಲ ಭಾಗಗಳೂ ಬಂದಮೇಲೆ, ಒಟ್ಟಿಗೆ ಒಂದೇ ಲೇಖನವಾಗಿಯೂ ಪೋಸ್ಟ್ ಮಾಡಿದರೆ ಒಳ್ಳೆಯದು. ಒಟ್ಟಿಗೆ ಓದಲು ಅನುಕೂಲವಾಗತ್ತೆ.

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 22, 2008 - 9:38am — csomsekraiah

ಉ: ಅನನ್ಯ ಅಲ್ಲಮ (೩)

csomsekraiah's picture

ಪ್ರೀತಿಯ ಹಂಸಾನಂದಿ ಅವರಿಗೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು . ಅಲ್ಲಮನ ಬಗ್ಗೆ ಈಗಾಗಲೇ ನೂರಾರು ವಚನಕಾರರು , ಕವಿಗಳು, ಸಾಹಿತಿಗಳು ಅನೇಕ ಕೃತಿಗಳನ್ನು ರಚನೆ ಮಾಡಿದ್ದಾರೆ . ಅವರೆಲ್ಲರೂ ಅವನ ವ್ಯಕ್ತಿತ್ವದಿಂದ ಪ್ರಭಾವಿತರಾದವರೆ . ಅವರ ಕೃತಿ ತೋಟಗಳಿಂದ ಮನ ಸೆಳೆಯುವ ಹೂವುಗಳನ್ನು ಆರಿಸಿ ಮಾಲೆ ಮಾಡುತ್ತಿರುವುದಷ್ಟೇ ನನ್ನ ಕೆಲಸ .ಇಲ್ಲಿ ದಾರ ಮಾತ್ರ ನನ್ನದು , ಈ ರಚನೆ ಸಹೃದಯರ ಗಮನ ಸೆಳೆಯುತ್ತಿರುವ ಸಂತೋಷವೂ ನನ್ನದು .ತಮ್ಮ ಪ್ರೀತಿಯ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾರಂತರ ಜೀವಂತ ಪಾತ್ರಗಳು ೮ (೧)
  • ಅನನ್ಯ ಅಲ್ಲಮ (೪)
  • ಅನನ್ಯ ಅಲ್ಲಮ ೭
  • ಭಗವದ್ಗೀತೆಯ ದೃಷ್ಟಿಯಲ್ಲಿ ಮನಸ್ಸು
  • ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 24 ಅತಿಥಿಗಳು ಆನ್ಲೈನ್ ಇರುವರು.


ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator