Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಸೇರಿಗೆ ಸವಾಸೇರು

March 19, 2008 - 5:36pm — rameshbalaganchi

ಸಂಸ್ಕೃತ ಸಾಹಿತ್ಯದ ಅನೇಕ ಪ್ರಕಾರಗಳನ್ನು ಅಭ್ಯಾಸಮಾಡಿದವರಿಗೆ ಮಂಗಳ ಶ್ಲೋಕಗಳ ಪರಿಚಯ ಇದ್ದೇ ಇದೆ. ಅವುಗಳಲ್ಲಿ ಕೆಲವು ಏಕತಾನತೆಯಿಂದ ಬೇಸರ ಬರಿಸಿದರೆ ಮತ್ತೆ ಕೆಲವು ಕತ್ತಲಲ್ಲಿ ಮಿಂಚಿದಂತೆ ಹಾಯೆನಿಸುವಂತೆ ಮಾಡುತ್ತವೆ. ಕೇವಲ ಇಷ್ಟದೈವದ ಅನುಗ್ರಹ, ಆಶೀರ್ವಾದಗಳ ಬೇಡಿಕೆ, ನಮಸ್ಕಾರ ಹೆಚ್ಚಿನವುಗಳಲ್ಲಿದ್ದರೆ, ಅಲ್ಲಲ್ಲಿ ಮಾತಿನ ಚಮತ್ಕಾರಕ್ಕೂ ಸ್ಥಾನವಿದೆ. ಮಂಗಳ ಶ್ಲೋಕಗಳಲ್ಲಿ ಸಂವಾದಗಳು ಹೊಸದೇನಲ್ಲ. ಆದರೆ ಕೆಲವು ತಮ್ಮ ಕಲ್ಪನಾಚಾತುರ್ಯ, ಲವಲವಿಕೆಯ ಸಂಭಾಷಣೆ ಮೊದಲಾದ ಅಂಶಗಳಿಂದ ಆಪ್ತವಾಗಿಬಿಡುತ್ತವೆ. ಸಂಸ್ಕೃತಸಾಹಿತ್ಯದ ಸ್ವಲ್ಪ ಪರಿಚಯ ಇರುವವರಿಗೂ ಪಾರ್ವತಿ-ಬಾಲಗಣೇಶರ ಸಂವಾದರೂಪದ ಶ್ಲೋಕ " ಹೇ ಹೇರಂಬ, ಕಿಮಂಬ ರೋದಿಷಿ ಕುತ:............." ಪರಿಚಯವಿದೆ. ಅದೇ ಸಾಲಿನಲ್ಲಿ ನಿಲ್ಲುವ ಮತ್ತೊಂದು ಶ್ಲೋಕ ಇಲ್ಲಿದೆ.
कोऽयं द्वारि? हरि: प्रयाह्युपवनं शाखामृगस्यात्र किम्!
कृष्णोऽहं दयिते बिभेमि सुतरां कृष्णादहं वानरात्॥
मुग्धेऽहं मधुसूदन: पिब लतां तामेव तन्वीं अले
इत्थं निर्वचनीकृतो दयितया हीतो हरि: पातु व:॥

ಕೋsಯಂ ದ್ವಾರಿ, ಹರಿ:, ಪ್ರಯಾಹ್ಯುಪವನಂ ಶಾಖಾಮೃಗಸ್ಯಾತ್ರ ಕಿಮ್!

ಕೃಷ್ಣೋsಹಂ ದಯಿತೇ ಬಿಭೇಮಿ ಸುತರಾಂ ಕೃಷ್ಣಾದಹಂ ವಾನರಾತ್||

ಮುಗ್ಧೇSಹಂ ಮಧುಸೂದನ: ಪಿಬ ಲತಾಂ ತಾಮೇವ ತನ್ವೀಂ ಅಲೇ

ಇತ್ಥಂ ನಿರ್ವಚನೀಕೃತೋ ದಯಿತಯಾ ಹ್ರೀತೋ ಹರಿ: ಪಾತು ವ:||

ಶ್ಲೋಕದ ಹಿನ್ನೆಲೆ ಹೀಗಿದೆ: ರಾಧೆ ಕೃಷ್ಣನಿಗಾಗಿ ಕಾತರಿಸಿ ಹಂಬಲಿಸುತ್ತಿರುವ ದಿನವಿಡೀ ಆತ ಅವಳ ಸನಿಹಕ್ಕೂ ಸುಳಿದಿರುವುದಿಲ್ಲ. ಆಶಾಭಂಗ, ಸಿಟ್ಟುಗಳಿಂದ ತತ್ತರಿಸುತ್ತಿರುವ ರಾಧೆ ಮನದಲ್ಲಿಯೇ ಸೇಡಿಗೆ ಹಾತೊರೆಯುತ್ತಿರುವ ಹೊತ್ತಲ್ಲಿ ರಾತ್ರಿ ಅವಳ ಮನೆಬಾಗಿಲು ಬಡಿವ ಸದ್ದು!!
ರಾಧೆಯ ಸಂಭಾಷಣೆಯಿಂದ ಈ ಶ್ಲೋಕ ಶುರುವಾಗುತ್ತದೆ.

"ಯಾರಲ್ಲಿ ಬಾಗಿಲಲಿ?" "ನಾನು ಹರಿ, ಪ್ರಿಯತಮೆ" ತೊಲಗು ತೋಟಕೆ ಗಡವ ಕೋತಿಯಿಲ್ಲೇಕೆ?"
"ದಯವಂತೆ, ನಾ ಕೃಷ್ಣ" "ಕಪ್ಪು ಕತ್ತಲೆಯೇ? ಕೋತಿಗಿಂತಲು ನಾನು ಹೆದರುವೆನು ಅದಕೆ.
"ಮುಗುದೆಯೇ ನನ್ನನ್ನು ಮಧುಸೂದನನೆಂಬರು" ಹೋಗಾಚೆ ಎಲೆ ದುಂಬಿ, ಹೀರು ಹೂಬಳ್ಳಿಯನು"
ಈ ಪರಿಯಲಾ ಹರಿಯೆ ನಾಚಿ ಬಾಯ್ಮುಚ್ಚಿರಲು ಅವನ ಕರುಣೆಯೆ ಸಲಹಲೆಮ್ಮನನವರತ.

ತನ್ನ ಪರಿಚಯ ಹೇಳಿಕೊಳ್ಳಲು ಕೃಷ್ಣ ಬಳಸುವ ತನ್ನ ಬೇರೆ ಬೇರೆ ಹೆಸರುಗಳಿಗೆ ಬೇರೆ ಬೇರೆ ಅರ್ಥ ಕೊಟ್ಟು ಕೃಷ್ಣನನ್ನೇ ಕಿಚಾಯಿಸುತ್ತಾಳೆ ರಾಧೆ!!
ಇಲ್ಲಿರುವ ಮತ್ತೊಂದು ಸ್ವಾರಸ್ಯ ಎಂದರೆ ಸಂಸ್ಕೃತದ " ನಿರ್ವಚನ" ಪದದ ಬಳಕೆ. ನಿರ್ವಚನ ಶಬ್ದಕ್ಕೆ ಇರುವ ನಿತ್ಯದ ಅರ್ಥದೊಡನೆ "ಬಾಯ್ಮುಚ್ಚಿಸು" ಎಂಬ ಅರ್ಥವನ್ನೂ ಧ್ವನಿಸುತ್ತದೆ.

** ಕೃಷ್ಣನ ತರಹೇವಾರಿ ಹೆಸರುಗಳಿಗೆ ರಾಧೆ ಬೇಕೆಂತಲೇ ಕಲ್ಪಿಸುವ ಕೀಟಲೆಯ ಅರ್ಥಗಳು
1) ಹರಿ= ಕೋತಿ
2) ಕೃಷ್ಣ= ಕಾರ್ಗತ್ತಲೆ
3)ಮಧುಸೂದನ= ದುಂಬಿ

  • ಕಾವ್ಯ ಮತ್ತು ಕವನ
Ornamental seperator
  • Login or register to post comments
  • 310 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 20, 2008 - 4:14am — hamsanandi

ಉ: ಸೇರಿಗೆ ಸವಾಸೇರು

hamsanandi's picture

ರಮೇಶರೇ,

ಅನುವಾದ ಬಹಳ ಚೆನ್ನಾಗಿದೆ - ಕೇಳಿರಲಿಲ್ಲ ಈ ಶ್ಲೋಕವನ್ನು.

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

  • Login or register to post comments
  • link
  • Email this ಪ್ರತಿಕ್ರಿಯೆ
March 20, 2008 - 6:08pm — rameshbalaganchi

ಉ: ಸೇರಿಗೆ ಸವಾಸೇರು

rameshbalaganchi's picture

ನಿಮ್ಮ ಪ್ರೋತ್ಸಾಹಕ್ಕ್ದೆ ಧನ್ಯವಾದಗಳು, ಕೃತಜ್ಞತೆಗಳು.

  • Login or register to post comments
  • link
  • Email this ಪ್ರತಿಕ್ರಿಯೆ
March 20, 2008 - 8:11am — ವೈಭವ

ಉ: ಸೇರಿಗೆ ಸವಾಸೇರು

ವೈಭವ's picture

Smiling Smiling ಚನ್ನಾಗಿತ್ತು
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
March 20, 2008 - 7:45pm — rameshbalaganchi

ಉ: ಸೇರಿಗೆ ಸವಾಸೇರು

rameshbalaganchi's picture

ನನ್ನ ಬರಹಕ್ಕಿಂತ ನಿಮ್ಮ ಚುಟಿಕಿನ ಪ್ರತಿಕ್ರಿಯೆ ಇನ್ನೂ ಚೆನ್ನ

  • Login or register to post comments
  • link
  • Email this ಪ್ರತಿಕ್ರಿಯೆ
March 20, 2008 - 6:46pm — mahesha

ಉ: ಸೇರಿಗೆ ಸವಾಸೇರು

mahesha's picture

ಹೀಗೆ ಒಂದು ಪಾರ್ವತಿ ಮತ್ತು ಶಿವರ ನಡುವೆ ಇದೆ..

ಶಿವಾ=ಹೆಣ್ಣು ನರಿ
ಶೂಲಿ = ಹೊಟ್ಟೆನೋವಿರುವವನು
ನೀಲಕಂಠ = ನವಿಲು
ಸ್ಥಾಣು = ಮೋಟುಮರ

Smiling

  • Login or register to post comments
  • link
  • Email this ಪ್ರತಿಕ್ರಿಯೆ
March 20, 2008 - 7:47pm — rameshbalaganchi

ಉ: ಸೇರಿಗೆ ಸವಾಸೇರು

rameshbalaganchi's picture

ನಮ್ಮೊಡನೆ ಅದನ್ನುಹಂಚಿಕೊಳ್ಳಬಾರದೇಕೆ ಮಹೇಶ್?

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೆನಪು
  • ಕೃಷ್ಣ, ಕ್ರಿಸ್ತ ಮತ್ತು ಯೋಗಾಯೋಗ
  • ಸರ್ವಶುಕ್ಲಾ ಸರಸ್ವತೀ!
  • ಅಮ್ಮಜಿಖಷೆಸ್ಸ ಖನಮ ಒಜಿ
  • ಗೀತ ಗೋವಿಂದ
Syndicate content

ಲೇಖಕರು

rameshbalaganchi's picture

ಪೂರ್ಣ ಹೆಸರು
Ramesh Balaganchi

ಪರಿಚಯ

ನಾನು ಸರಳ ಮನುಷ್ಯ. ಬೆಂಗಳೂರಿನಲ್ಲಿ ಸಂಸ್ಕೃತ ಆನರ್ಸ್ ಮಾಡಿ 1979 ರಿಂದ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕನ ಕೆಲಸ ಮಾಡುತ್ತಿದ್ದೇನೆ. ಭಾಷಾ ಕಲಿಕೆ, ಪಕ್ಷಿವೀಕ್ಷಣೆ ತುಂಬಾ ಇಷ್ಟದ ಹವ್ಯಾಸಗಳು. ಇತ್ತೀಚೆಗೆ ಕಂಪ್ಯೂಟರ್ ಬಳಸಲು ಕಲಿಯುತ್ತಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ
  • ಅಮ್ಮಜಿಖಷೆಸ್ಸ ಖನಮ ಒಜಿ
  • ಅಂತಿಮ ಸಂಸ್ಕಾರ:ಹೊಸ ವಿಧಾನ
  • ದಾವೂದ್ ಇಬ್ರಾಹಿಂ ಬಂಧನ......ನಂತರ
  • ಪ್ರತ್ಯಕ್ಷ ನೋಡಿದರೂ...

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 14, 2008 - 2:45pm
  • sushil
    ಉ: ಸೃಷ್ಟಿ(ಸುಶೀಲನ ಪದ್ಯಗಳು)
    May 14, 2008 - 2:38pm
  • sushil
    ಉ: ಮುಂಗಾರು ಮಳೆಯ ಗುಂಗಿನಲ್ಲೊಂದು ಪಯಣ
    May 14, 2008 - 2:35pm
  • Vinod Pattanshetti
    ಉ: ಸೃಷ್ಟಿ(ಸುಶೀಲನ ಪದ್ಯಗಳು)
    May 14, 2008 - 1:56pm
  • rameshbalaganchi
    ಉ: ಅಮ್ಮಜಿಖಷೆಸ್ಸ ಖನಮ ಒಜಿ
    May 14, 2008 - 1:51pm
  • Shivakumar.Revadi
    ಉ: ಕಟಪಯಾದಿ ಸೂತ್ರ
    May 14, 2008 - 1:32pm
  • Shivakumar.Revadi
    ಉ: ಅಮ್ಮಜಿಖಷೆಸ್ಸ ಖನಮ ಒಜಿ
    May 14, 2008 - 1:31pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 14, 2008 - 12:42pm
  • ಶ್ರೀನಿಧಿ
    ಉ: ಅಡುಗೆಯ ಸಂಭ್ರಮ
    May 14, 2008 - 11:32am
  • ಶ್ರೀನಿಧಿ
    ಉ: ಕಟಪಯಾದಿ ಸೂತ್ರ
    May 14, 2008 - 11:18am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 21 ಅತಿಥಿಗಳು ಆನ್ಲೈನ್ ಇರುವರು.

ನುಡಿಯೊಳು ಹೊಳೆವುದು ನಾಡಿನ ನಡವಳಿ.
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator