Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಇದೆಂಥಾ ವಿಪರ್ಯಾಸ ?

March 20, 2008 - 9:21am — msprasad

ಅವತ್ತೊಂದು ದಿನ ಆಫೀಸಲ್ಲಿ ಮಾಡಕ್ಕೆ ಅಷ್ಟೊಂದು ಕೆಲ್ಸ ಇಲ್ಲ ಅಂತ ಮನೆಗೆ ಬೇಗ ಎಸ್ಕೇಪ್ ಆಗಿ ಬಂದೆ.
ಮನೇಲಿ ಕೂಡಾ ಮಾಡಕ್ಕೆ ಕೆಲ್ಸ ಇರ್ಲಿಲ್ಲಾ...ಶರೀರನಾ ಹಾಲ್ನಲ್ಲಿ ಇರೋ ದಿವಾನ ಮೇಲೆ ಬಿಸಾಕಿ ಟೀವಿ ಚಾನೆಲ್ ಗಳಲ್ಲಿ ಹಾಗೇ ಬೀಟ್ ಹಾಕ್ತಾ ಇದ್ದೆ..
START SPORTSನಲ್ಲಿ WWE (ಕುಸ್ತಿ) ಬರ್ತಾ ಇತ್ತು. ಧಡೀ ನನ್ ಮಕ್ಳು ಕಿರುಚಾಡಿ ಕೂಗಾಡೋದನ್ನ ನೋಡಿದೆ (ಹಂಗೆ ಪಕ್ಕದಲ್ಲಿ ನಿಂತ್ಕೊಳೋ ಮಸ್ತ್ ಮಸ್ತ್ ಫಾರಿನ್ ಬೇಬ್ ಗಳ್ನ ಹೆಂಡ್ತಿ ಮನೇಲಿ ಇಲ್ದೇ ಇರೋ ಟೈಂನಲ್ಲಿ ನೋಡ್ಕೊಂಡು ಬಿಡೋಣ ಅಂತ ಅನ್ಕೊಂಡು ನೋಡಕ್ಕೆ ಶುರು ಮಾಡ್ದೆ).

ಒಬ್ಬ ಇಂಡಿಯನ್ ಕುಸ್ತಿಪಟು, ಹೆಸರು ಕಾಳಿ. ಅಜಾನುಬಾಹು, ಅನಾಮತ್ತು 7 ಅಡಿ ಇದಾನೆ. ಒಂದು ಚಾಂಪಿಯನ್ ಶಿಪ್ ಗೆದ್ದಿದ್ದ. ಅವನ ಮ್ಯಾನೇಜರ್ ಕೂಡಾ ಓರ್ವ ಅಮೇರಿಕ ಸಂಜಾತ ಭಾರತೀಯ.

ಕಾಳಿ ಗೆದ್ದ ಮೇಲೆ, ರಿಂಗ್ ಒಳಗೆ ಪ್ರಶಸ್ತಿ ಕೊಟ್ಟ ಮೇಲೆ ಕಾಳಿಯ ಮ್ಯಾನೇಜರ್ ಅವನನ್ನು ಇಂದ್ರ, ಚಂದ್ರ, ದೇವೇಂದ್ರ ಅಂತೆಲ್ಲ ಹೊಗಳಿ, ಬರೀ ಅಮೇರಿಕನ್ ಕುಸ್ತಿಪಟುಗಳು ಮಾತ್ರ ಗೆಲ್ತಾ ಇದ್ದ ಪಂದ್ಯದಲ್ಲಿ ಇವನು ಗೆದ್ದಿದಾನೆ, ಭಾರತದ ಹೆಸರು ಮೇಲೇರಿಸಿದ್ದಾನೆ... (ಇದಾದ ಮೇಲೆ ಅವನು ಹೇಳಿದ್ದು ಕೇಳಿ ನಂಗೆ ಅವನ ಮಾತು ಕೇಳಿ ಉರಿ ಕಿತ್ಕೊಂಡಿದ್ದು). "ಇವತ್ತು ಈ ಗೆಲುವಿನಿಂದ, ಕಾಳಿಯು ಭಾರತೀಯ ಮಹಾನ್ ವ್ಯಕ್ತಿಗಳ ಸಾಲಿಗೆ ಸೇರುತ್ತನೆ..ಮಹಾತ್ಮ ಗಾಂಧಿ, ಭಗತ್ ಸಿಂಗ್, ಮದರ್ ತೆರೆಸಾ ಮುಂತಾದವರುಗಳ ಜೊತೆಗೆ ಇವನ ಹೆಸರೂ ಸೇರುತ್ತದೆ".

ಸರಿ, ಕಾಳಿಯೇನೋ ಗೆದ್ದ.. ಆದ್ರೆ ಆ ಅಮೇರಿಕನ್ ಜನಗಳು ಆ ಕುಸ್ತಿಯನ್ನ ನೋಡಲು ಬಂದವರಿಗೆ ಅಪ್ಪಿ ತಪ್ಪಿ ಸ್ವಲ್ಪ ನಮ್ಮ ದೇಶದ ಮಹಾನ್ ವ್ಯಕ್ತಿಗಳ ಬಗ್ಗೆ ಗೊತ್ತಿದ್ರೆ, ಅವರು ನಮ್ಮ ದೇಶದ ಜನರ ಆಲೋಚನಾಶಕ್ತಿಯ ಬಗ್ಗೆ ತಿ* ಬಡ್ಕೊಂಡು ನಗೋದಿಲ್ವಾ ??
ಮಹಾನ್ ವ್ಯಕ್ತಿಗಳ ಸಾಲಿಗೆ ಸೇರಿಸಲು ಅವನೇನು ಅಂಥಾದ್ದನ್ನ ಕಿತ್ತಿ ಹಾಕಿದ್ದು ?

ಇನ್ನು ನಮ್ಮ ಅನಿವಾಸಿ ಭಾರತೀಯರು (ABCD - Abroad Born Confused Desi's) ಅವರಿಗೆ ಭಾರತದ ಬಗ್ಗೆ ಇರೋ ಅರಿವು ಎಷ್ಟು ಅಂತ ನಾನೇನು ಹೇಳಬೇಕಾಗಿಲ್ಲ (ಎಲ್ಲಾ ಅನಿವಾಸಿ ಭಾರತೀಯರು ಹಾಗೆ ಅಲ್ಲಾ, ಕೆಲವರಿಗೆ ಭಾರತದ ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತ, ಚರಿತ್ರೆ ಬಗ್ಗೆ ಇರುವ ಪ್ರೌಢಿಮೆ ಅಪಾರವಾದದ್ದು). ಆದರೆ WWE ಕಾಳಿಯ ಮ್ಯಾನೇಜರ್ ಥರದ ಅನಿವಾಸಿ ಭಾರತೀಯರು ಪಾಶ್ಚಾತ್ಯರ ಮುಂದೆ ನಮ್ಮ ದೇಶದ ಚರಿತ್ರೆ ಹಾಗು ಮಹಾನ್ ವ್ಯಕ್ತಿಗಳನ್ನು ನಗೆಪಾಟಲು ಮಾಡ್ತಾ ಇದಾರೆ.

ಇದನ್ನೇ ವಿಪರ್ಯಾಸ (IRONY) ಅನ್ನೋದು.

-------------------------------------------------------------------------------------

ನಿಮ್ಮವನು

ಕಟ್ಟೆ ಶಂಕ್ರ

ನಮ್ಮ ಸೋಮಾರಿ ಕಟ್ಟೆಗೆ ಒಮ್ಮೆ ಭೇಟಿ ಕೊಡಿ : http://somari-katte.blogspot.com

  • ಚಿಂತನೆ
Ornamental seperator
  • Login or register to post comments
  • 171 hits
  • Email this page
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪುಟ್ಟಾ ಪುಟ್ಟಿ ಜೋಕು
  • ಮಾತು, ಸಮಯ, ಸಂದರ್ಭ..
  • ಪ್ರತಿಭೆ V/S ಎಸ್ಎಂಎಸ್
  • ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ?
  • ವಾರ್ತಾ ಮಾಧ್ಯಮದ ಈ ಪಾಡು - "ಐಟಂ ಕ್ವೀನ್ ಯಾರು ?"
Syndicate content

ಲೇಖಕರು

msprasad's picture

ಪೂರ್ಣ ಹೆಸರು
ಶಂಕರ ಪ್ರಸಾದ

ಪರಿಚಯ

ಮೂಲತಃ ಮೈಸೂರು, ಓದಿದ್ದು ಮೈಸೂರು ಹಾಗು ಹೈದ್ರಬಾದು. ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಒಂದು ಫ್ರೆಂಚ್ ಏರೋಸ್ಪೇಸ್ ಕಂಪೆನಿಯಲ್ಲಿ ಡಿಜೈನ್ ಎಂಜಿನಿಯರ್ ಆಗಿ ಕಾಯಕ.
ಮನಸ್ಸಿನ ತುಡಿತ, ಮಿಡಿತ, ಕಡಿತ ತೀರಿಸಿಕೊಳ್ಳೋಕ್ಕೆ ಬ್ಲಾಗಿಂಗ್ ಮಾಡ್ತೀನಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !
  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 15 ಅತಿಥಿಗಳು ಆನ್ಲೈನ್ ಇರುವರು.

ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ-|
ದಂತರಂಗದ ಕಡಲು ಶಾಂತಿಗೊಳಲಹುದು ||
ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |
ಸಂತಯಿಸು ಚಿತ್ತವನು -- ಮಂಕುತಿಮ್ಮ ||

— ಡಿ. ವಿ. ಜಿ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator