Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಅನನ್ಯ ಅಲ್ಲಮ (೫)

March 23, 2008 - 9:36pm — csomsekraiah

ಅಲ್ಲಮನಿಗೆ ನೆಲೆ ಇಲ್ಲವೆ ? ಇದ್ದರೆ ಯಾವುದು ಅವನ ನೆಲೆ ? ಆಲೋಚನೆಗಳ ಹರಹು ಗಗನ ಸದೃಶವಾದವನಿಗೆ , ಭುವಿಯ ನೆಲೆಯ ಹಂಗೇಕೆ ? ಅವನ ಆಲೋಚನೆಯ ಕ್ಷಿತಿಜವನ್ನು ವಿಸ್ತರಿಸಲು ಪ್ರೇರಕವಾದ ಘಟನೆಗಳಾದರೂ ಯಾವುವು ? ಈ ಪ್ರಶ್ನೆಗೆ ಉತ್ತರಗಳಿರಲಿ ,ಅವನನ್ನು ಮುಖಾಮುಖಿಯಾಗುವುದೇ ಮೊದಲ ಕಷ್ಟ , ಅದಕ್ಕೆ ಅಪರಿಮಿತ ಓಜಸ್ಸು ಬೇಕಾಗುತ್ತದೆ .ಅದಕ್ಕಾಗಿ ಅಲ್ಲಮನ ಬಗೆಗಿನ ಎಲ್ಲವೂ ಪಾರ್ಶ್ವ ನೋಟಗಳೇ .

ಅವನು ಬಳ್ಳಿಗಾವಿಯ ನಾಗವಾಸಾಧಿಪನ ಮಗ ಎಂದು ಹರಿಹರನು ತನ್ನ ಕಾವ್ಯದಲ್ಲಿ ಬಣ್ಣಿಸಿದರೆ ,ಅವನು ನಿರಹಂಕಾರ , ಸುಜ್ಞಾನಿಗಳ ಮಗ ಎನ್ನುತ್ತಾನೆ , ಚಾಮರಸ .ನಿರಹಂಕಾರ ಸುಜ್ಞಾನಿ ಇವ ಗುಣ ವಾಚಕವೋ ? ನೈಜ ನಾಮಗಳೋ ? ಚಾಮರಸನೇ ಬಲ್ಲ .ಕವಿಗಳ ಈ ವಿರೋಧಾಭಾಸಗಳಿಗೂ ಅಲ್ಲಮನ ಮನಃ ಸ್ಥಿತಿಗೂ ಸಂಭಂಧವಿಲ್ಲ , ಅವನ ಸಾವಿರಾರು ವಚನಗಳಲ್ಲಿ , ಎಲ್ಲಿಯೂ ಅವನ ಸ್ವಕೀಯ ವಿವರಗಳಿಲ್ಲ .

" ನೆಲದ ಬೋಂಬೆಯ ಮಾಡಿ , ಜಲದ ಬಣ್ಣವನುಡಿಸಿ ,ಉಲಿವ ಗೆಜ್ಜೆಯ ಕಟ್ಟಿ ,ವಾಯುವನಲನ ಸಂಚಕ್ಕೆ , ಅರಳೆಲೆಯ ಶ್ರುಂಗಾರವ ಮಾಡಿ ,ಆಡಿಸುವ ಯಂತ್ರವಾಹಕನಾರೋ ? ,, ಎನ್ನುವ ಬಗೆ ಇದೆ .

ಆದರೆ ಅವನದು ಆಕರ್ಷಕ ವ್ಯಕ್ತಿತ್ವ , ಕಣ್ಮನ ಸೆಳೆಯುವ ಮೈ ಮಾಟ ,ಅವನನ್ನು ಕಂಡ ಚಾಮರಸನ ಮಾಯಾದೇವಿ , ಮರುಳಾಗಿ ಹೋಗುತ್ತಾಳೆ . ಮಾಯೆ ಸಾಮಾನ್ಯಳಲ್ಲ , ಅವಳ ರೂಪ ಸಾಮ್ರಾಜ್ಯದ ಬಲೆಗೆ ಸಿಲುಕಿದ ನರರ ಕಣ್ಣುಗಳು ಅದರಿಂದ ಬಿಡುಗಡೆ ಪಡೆಯಲಾಸಿಸಲಾರವು . ಅಂತಹವಳ ಮನಸ್ಸನ್ನು ತನ್ನ ಅಪೂರ್ವ ಕಲಾಪ್ರೌ ಢಿಮೆ ವಿಶಿಷ್ಟ ಅಂಗ ಸೌಷ್ಟವಗಳ ಬಲೆಯಿಂದ ಸೆರೆ ಹಿಡಿದು , ಆಟವಾಡಿಸಿದ ಅಲ್ಲಮನ ಅತಿ ಮಾನವ ವ್ಯಕ್ತಿತ್, ಚಾಮರಸನಂತಹ ಕವಿಯ ಲೇಖನಿಯಿಂದ ಮಾತ್ರ ರೂಪುಗೊಳ್ಳಬಲ್ಲದು .

ಚಾಮರಸನ ಪ್ರಕಾರ , ಮಾಯೆ ಮನಸಿಜನ ಮನೆದೇವಿ ; ಕುಸುಮಾಸ್ತ್ರನ ಕುಲೋತ್ತಮೆ . ಅವಳ ನಿತ್ಯದ ಮಧುಕೇಶ್ವರನ ಪೂಜೆಯೇ ಅಪೂರ್ವವಾದುದು .ಅಲ್ಲಿ ವಿಧಿಯುಕ್ತ ಪೂಜೆಯ ನಂತರ ,ಸ್ವಾಮಿಯೆದುರು ಅವಳ ನರ್ತನ . ಕುಣಿತದ ದಣಿವಿನಿಂದ ,ದೇವಾಲಯದ ಗರ್ಭ ಮಂದಿರದ ಧೂಪ ಧೂಮದಿಂದ ,ಅಲ್ಲಿನ ವಿರಳ ವಾಯುವಿನ ಧಗೆಯಿಂದ ,ಹೊರ ಬರುವ ಮಾಯಾದೇವಿಯ ಬೆವರೊಡೆದ ಮುಖ , ಕೆಂಪೇರಿದ ಕಣ್ಣುಗಳು ,ಕೆದರಿದ ಕೇಶ ರಾಸಿಯನ್ನು ಕಂಡರೆ ಇವಳೇನು ಪರ ಶಿವನೆದುರು ನಾಟ್ಯವಾಡಿ ಬಂದಳೋ ? ಶಿವನೊಡನೆ ಸುರತಗೈದು ಬಂದಳೋ ? ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾನೆ ಚಾಮರಸ .

ಇಂತಹ ಅಪ್ರತಿಮ ದೇವಸುಂದರಿ ಒಂದು ದಿನ ತನ್ನ ನರ್ತನದ ಸಮಯದಲ್ಲಿ , ಸುಮಧುರವಾದ ಮದ್ದಳೆಯ ದನಿಯನ್ನು ಕೇಳುತ್ತಾಳೆ , ಲೋಕಸಾಮಾನ್ಯದ ರೀತಿಯಲ್ಲಿರದ , ವಿಶೇಷವಾದ ಈ ರೀತಿಯ ಮದ್ದಳೆಯ ಶಬ್ದವನ್ನು ಹೊರಡಿಸುತ್ತಿರುವ ವ್ಯಕ್ತಿ ಯಾರು ? ಎಂದು ನೋಡಿದರೆ ಅಲ್ಲೊಬ್ಬ ಸುಂದರ ತರುಣ , ಲೋಕದ ಇರವಿನ ಅರಿವನ್ನೇ ಮರೆತು ತನ್ಮಯನಾಗಿ ತನ್ನ ಮದ್ದಳೆಯಲ್ಲಿ ಲೀನನಾಗಿ ಬಾರಿಸುತ್ತಿದ್ದಾನೆ .ಅವನನ್ನು ಕಾಣುತ್ತಲೇ ಅವಳ ದೃಷ್ಟಿ ಅವನಲ್ಲಿ ನೆಟ್ಟು ಹೋಗುತ್ತದೆ .ಇದು ವರೆಗೆ ಅಳಿಮನದ ಲೋಗರ ದೃಷ್ಟಿಯನ್ನುಅಸ್ಡ್ಡೆಯಿಂದ ಸೆರೆಗೈಯುತ್ತಿದ್ದ ಮಾಯೆಯ ಶರೀರ ,ಇಂದು ತಾನೇ ಇನ್ನೊಂದು ರೂಪಕ್ಕೆ ಮರುಳಾಗಿ ಭ್ರಮಾಧೀನವಾಗಿದೆ , ಇದು ಮಾಯೆಗೆ ಹೊಸ ಪರಿ . ಆದರೆ ಇಲ್ಲಿ ಮಾಯಾದೇವಿ ವಿಚಿತ್ರ ರೀತಿಯಿಂದ ಸೋಲಬೇಕಾಗುತ್ತದೆ .ತನ್ನ ಮೋಹಕ ನೋಟದ ಬಲೆಗೆ ಸಿಲುಕಿ ಆಸೆಗಣ್ಣಿಂದ ನೋಡುವ ನರರನ್ನು ತಿರಸ್ಕಾರದ ನೋಟದಿಂದ ಕೊಲ್ಲುತ್ತಿದ್ದ ಮಾಯೆ , ಇಂದು ತಾನಾಗಿ ಒಲಿದು ಕಾಮಿಸಿದ ವ್ಯಕ್ತಿಯೇ ತನ್ನನ್ನು ತಿರಸ್ಕರಿಸಿದ ರೀತಿಯನ್ನು ಕಂಡು ಚಕಿತಳಾಗುತ್ತಾಳೆ .

ಅಲ್ಲಮನಿಗೆ ತೋರುವ ಜಗತ್ತಿನ ಸೌಂದರ್ಯವು , ತನ್ನ ಕಾರ್ಯ ಸಾಧನೆಗೆ ಮಾಯೆ ಹೆಣೆದ ಜಾಲ .ತೋರುವ ಲೇಪಿತ ಸೌಂದರ್ಯದ ಹಿಂದಣದೆಲ್ಲವೂ ಬೆಂತರ . ಕಾಣುವ ಹೊರಗಿನ ಸೌಂದರ್ಯವೆನ್ನುವುದೆಲ್ಲವೂ ಕರಗಿ ಹೋಗುವಂಥದು . " ಅರಗಿನ ಪುತ್ತಳಿಗೆ ಉರಿಯ ಸೀರೆಯನುಡಿಸಿದರೆ , ಅದು ಸಿರಿಯ ಸಿಂಗಾರವಾಯಿತ್ತು ನೋಡಾ ,, ಆಛ್ಛಾದನಗೊಂಡಿರುವ ರೂಪ , ಅದನ್ನು ಕಾಣುವ ಕಣ್ಣು , ಕಂಡದ್ದನ್ನು ಪರಿಭಾವಿಸುವ ಮನಸ್ಸು ,ಇವೆಲ್ಲವುಗಳನ್ನು ಒಂದು ವ್ಯೂಹದೊಳಗೆ ಬಂಧಿಸಿ ತನ್ನ ಕಾರ್ಯ ಸಾಧನೆ ಮಾಡಿಕೊಳ್ಳುವುದು , ಮಾಯಾ ಪ್ರಕೃತಿಯ ಗುಣ ಧರ್ಮ .

" ಕಂದನ ಕೈಯ್ಯ ದರ್ಪಣವ ಪ್ರತಿಬಿಂಬ ನುಂಗಿತ್ತು , ಉದಯದ ಬೆಳಗನು ಕತ್ತಲೆ ನುಂಗಿತ್ತು ,, " ಹೊನ್ನು , ಹೆಣ್ಣು, ಮಣ್ಣ ತೋರಿ ಮುಕ್ಕಣ್ಣನಾಡಿದ ಬೇಂಟೆಯ ,, (ಮುಂದುವರಿಯುವುದು)

  • ಜ್ಞಾನವಾಹಿನಿ
Ornamental seperator
  • Login or register to post comments
  • 180 hits
  • Email this page
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅನನ್ಯ ಅಲ್ಲಮ (೬)
  • ವಚನ ಚಿಂತನ: ೭: ಮನಸ್ಸು – ಆಸೆ - ಮಾಯೆ
  • ಅನನ್ಯ ಅಲ್ಲಮ (೧)
  • ಶ್ರೀಬಸವೇಶ್ವರರ ವಚನಗಳು
  • OLN ರವರ ಪುಸ್ತಕ - ಲೋಕಾಂತ ಏಕಾಂತ
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
  • ಚಂದಮಾಮನಿಗೆ ಅರವತ್ತು......
  • ವೈನ್ ಡೋರ್ಸ್ - ವಿಂಡೋಸ್ ತಂತ್ರಾಂಶದ ಲಿನಕ್ಸ್ ಎಮ್ಯುಲೇಟರ್
  • ಶ್ರೀಬಸವೇಶ್ವರರ ವಚನಗಳು
  • ಪ್ರಭಾವ
  • ಗುರಜಿ ಹಾಡು
  • ಅಂತರ್ಜಾಲದ ಮೂಲಕ ಪದವಿ ಪರೀಕ್ಷೆಗಳು!

ಇತ್ತೀಚಿನ ಪ್ರತಿಕ್ರಿಯೆಗಳು

  • Aravind M.S
    ಉ: ಚಂದಮಾಮನಿಗೆ ಅರವತ್ತು......
    May 9, 2008 - 5:55pm
  • gururajkodkani
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 5:25pm
  • madhava_hs
    ಉ: ಡ್ರೈವರ್‌ ಎಂಬ ಆಪತ್ಬಾಂಧವ
    May 9, 2008 - 5:19pm
  • roopablrao
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 5:00pm
  • gururajkodkani
    ಉ: ಅತ್ಯಾಚಾರ ಮತ್ತು ಕಾರಣಗಳು
    May 9, 2008 - 4:47pm
  • savithru
    ಉ: ಉಳ್ಳವರು ಶಿವಾಲಯವ ಮಾಡುವರು
    May 9, 2008 - 4:32pm
  • savithru
    ಉ: ಚುನಾವಣಾ ಭವಿಷ್ಯ
    May 9, 2008 - 3:51pm
  • vinayudupa
    ಉ: ಚುನಾವಣಾ ಭವಿಷ್ಯ
    May 9, 2008 - 3:37pm
  • Chamaraj
    ಉ: ಡ್ರೈವರ್‌ ಎಂಬ ಆಪತ್ಬಾಂಧವ
    May 9, 2008 - 3:25pm
  • girish.rajanal
    ಉ: ಡ್ರೈವರ್‌ ಎಂಬ ಆಪತ್ಬಾಂಧವ
    May 9, 2008 - 3:20pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 16 ಅತಿಥಿಗಳು ಆನ್ಲೈನ್ ಇರುವರು.

ಸತ್ತೆನೆಂದೆನಬೇಡ; ಸೋತೆನೆಂದೆನಬೇಡ ।
ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ।।
ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು ।
ಮತ್ತೆ ತೋರ್ಪುದು ನಾಳೆ -- ಮಂಕುತಿಮ್ಮ ।।

— ಡಿ.ವಿ.ಜಿ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator