Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ?

December 23, 2005 - 7:45pm — olnswamy

ನೀನಲ್ಲದನ್ಯದೈವವುಂಟೆಂಬವನ ಬಾಯ
ಕೆನ್ನೆವಾರೆ ಸೀಳಿದಲ್ಲದೆ ಎನ್ನ ಮುನಿಸು ಹೋಗದಯ್ಯಾ
ಎನ್ನ ಕೋಪವಡಗದಯ್ಯಾ
ಎನ್ನ ಬಿನ್ನಪವನವಧರಿಸು ಕೂಡಲಸಂಗಮದೇವಾ (ವಚನ ಸಂಖ್ಯೆ ೭೫೨, ಬಸವಣ್ಣನವರ ಷಟ್ಸ್ಥಲ ವಚನಗಳು, ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣೆ)
ಇದು ಬಸವಣ್ಣನ ಒಂದು ವಚನ. ಕೂಡಲಸಂಗಮನಲ್ಲದೆ ಬೇರೆಯ ದೇವರು ಉಂಟು ಎಂಬುವಾತನ ಬಾಯನ್ನು ಕೆನ್ನೆಯೆಲ್ಲ ಹರಿದುಹೋಗುವಂತೆ ಸೀಳುವವರೆಗೆ ನನ್ನ ಮುನಿಸು ಹೋಗದು, ನನ್ನ ಕೋಪ ತಣಿಯದು. ನನ್ನ ಬಿನ್ನಹವನ್ನು ಕೇಳು ಎಂಬುದು ವಚನದ ಅರ್ಥ.
ವಚನದ ಅರ್ಥದಲ್ಲಿ ತೊಡಕಿಲ್ಲ. ಆದರೆ "ದಯವೇ ಧರ್ಮದ ಮೂಲ" ಎಂದು ಹೇಳಿದ ಮನಸ್ಸು, ಹಬ್ಬಕ್ಕೆ ತಂದ ಹರಕೆಯ ಕುರಿಯನ್ನು ಕುರಿತು ಮರುಗಿದ ಮನಸ್ಸು ಈ ಮಾತನ್ನೂ ಹೇಳಲು ಸಾಧ್ಯವೇ? ಈ ಮಾತನ್ನು ಅರ್ಥಮಾಡಿಕೊಳ್ಳುವುದು, ವಿವರಿಸಿಕೊಳ್ಳುವುದು ಹೇಗೆ?
ಅನ್ಯ ಧರ್ಮದ ಬಗ್ಗೆ ಇಲ್ಲಿ ದೊಡ್ಡ ಪ್ರಮಾಣದ ಅಸಹನೆ ವ್ಯಕ್ತವಾಗಿದೆ. ನಾವೆಲ್ಲ ಇಂದು ಕಾಣುತ್ತಿರುವುದು ಇಂಥ ಅಸಹನೆಯನ್ನೇ. ಧರ್ಮದ ಇನ್ನೊಂದು ಮುಖ ಹಿಂಸೆ ಮತ್ತು ಅಸಹನೆ ಎನ್ನೋಣವೇ? ಅಥವಾ ಬಸವ ಕೂಡ ಸಾಮಾನ್ಯ ಮನುಷ್ಯರಂತೆ ಕೋಪ, ರೋಷ, ಹಿಂಸೆಗಳಿಗೆ ಒಳಗಾದವನೇ ಎನ್ನೋಣವೇ? ಅಥವಾ ಧರ್ಮದ ಆದರ್ಶ ಮತ್ತು ವಾಸ್ತವಗಳ ನಡುವೆ ದಾಟಲಾಗದ ಕಂದಕ ಇದ್ದೇ ಇರುತ್ತದೆ ಎನ್ನೋಣವೇ?
ಇಲ್ಲವೇ "ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ" ಎಂಬ ಮಾತು ಸುಮ್ಮನೆ ಹೇಳಿದ್ದು, ತನ್ನ ಧರ್ಮವನ್ನು ಒಲ್ಲದೆ ಅನ್ಯ ದೈವ ಮತ್ತು ಧರ್ಮವನ್ನು ಒಲಿದವರು "ಸಕಲ ಪ್ರಾಣಿಗಳು" ಎಂಬುವುದರಲ್ಲಿ ಸೇರುವುದಿಲ್ಲ ಎಂಬ ಸಂಕುಚಿತ ಮನೋಧರ್ಮ ಬಸವನದೂ ಆಗಿತ್ತು ಎನ್ನೋಣವೇ?
ಬಸವನ ನುಡಿಗಳ ಈ ಎರಡು ಧ್ರುವಗಳನ್ನು ನೀವು ಹೇಗೆ ವಿವರಿಸಿಕೊಳ್ಳುವಿರಿ?

  • ಚಿಂತನೆ
Ornamental seperator
  • Login or register to post comments
  • 826 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 23, 2005 - 9:08pm — tvsrinivas41

ಹೆಚ್ಚಿನ ಪ್ರೇಮ

tvsrinivas41's picture

ಸಾರ್, ನೀವು ನಮ್ಮ ಅಜ್ಞಾನದ ಪರೀಕ್ಷೆ ಮಾಡುತ್ತಿರುವಿರಾ?

ನನಗೆ ತಿಳಿದ ಅಲ್ಪಮತಿಯಂತೆ ಬಸವಣ್ಣನವರು ಹಾಗೆ ಎರಡು ತರಹದ ಮಾತುಗಳನ್ನು ನಿಜಾರ್ಥದಲ್ಲಿ ಹೇಳಿರುವುದಕ್ಕೆ ಸಾಧ್ಯವಿಲ್ಲ. ಬಹುಶ: ಕೂಡಲ ಸಂಗಮದೇವನ ಮೇಲಿನ ವಿಪರೀತ ಪ್ರೇಮದಿಂದ ಹೀಗೆ ಬರೆದಿರಬಹುದೇನೋ? ನೀವೇ ಇದನ್ನು ಸರಿಯಾಗಿ ಅರ್ಥೈಸಿ ತಿಳಿಸಬೇಕು.

ನಿಮ್ಮಲ್ಲಿ ಇನ್ನೊಂದು ಕೋರಿಕೆ. ನೀನೊಲಿದರೆ ಕೊರಡು ಕೊನರುವುದಯ್ಯಾ ... ಇದರ ಬಗ್ಗೆ ಸ್ವಲ್ಪ ತಿಳಿಸಿ ಸಾರ್.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • Email this ಪ್ರತಿಕ್ರಿಯೆ
December 23, 2005 - 10:31pm — olnswamy

ಅಜ್ಞಾನದ ಪರೀಕ್ಷೆಯಲ್ಲ, ನನಗಾದ ದಿಗ್ಭ್ರಮೆ

olnswamy's picture

ದಯವಿಟ್ಟು ಅಜ್ಞಾನದ ಪರೀಕ್ಷೆ ಇತ್ಯಾದಿಯೆಲ್ಲ ಅಂದುಕೊಳ್ಳಬೇಡಿ. ನಾವು ಕಲ್ಪಿಸಿಕೊಂಡಿರುವ ಬಸವಣ್ಣ ಹೀಗೂ ಹೇಳಿದ್ದರೆ ಅದನ್ನು ಅರ್ಥಮಾಡಿಕೊಳ್ಳುವುದು ಹೇಗೆ ಎಂದು ತಿಳಿಯದೆ ನನಗಾದ ದಿಗ್ಭ್ರಮೆಯನ್ನು ಸಂಪದದ ಗೆಳೆಯರೊಂದಿಗೆ ಹಂಚಿಕೊಂಡಿರುವೆ. ದಯವಿಟ್ಟು ಯೋಚಿಸಿ ನಿಮ್ಮ ಅನಿಸಿಕೆ ತಿಳಿಸಿ.

  • Login or register to post comments
  • link
  • Email this ಪ್ರತಿಕ್ರಿಯೆ
December 24, 2005 - 9:34am — tvsrinivas41

ಕೆಲವೊಮ್ಮೆ ಹಾಗೆ

tvsrinivas41's picture

ಕೆಲವೊಮ್ಮೆ ಹಾಗೆ ಆಗುವುದಂತೆ. ಎಷ್ಟೇ ಆಗಲಿ ಬಸವಣ್ಣನವರು ಕೂಡಲಸಂಗಮನ ಭಕ್ತರು. ಅವನ ಮೇಲಿನ ಅತೀವ ಪ್ರೇಮದಿಂದ ಹೀಗಂದಿರಬಹುದು.
ಕಾಲೇಜಿನಲ್ಲಿದ್ದಾಗ ಒಮ್ಮೆ (ಬಹುಶ: ೧೯೭೯ರಲ್ಲಿ), ಒಂದು ಪುಸ್ತಕ ಓದುತ್ತಿದ್ದೆ. ಅದರಲ್ಲಿ ತಿಳಿಸಿದಂತೆ,
ಮಹಾಭಾರತದಲ್ಲಿ ಅರ್ಜುನ ಕರ್ಣರ ವಾಗ್ಯುದ್ಧದಲ್ಲಿ ಅರ್ಜುನ ಕರ್ಣನನ್ನು ಕುಮಾರಿಯ ಮಗ ಎಂದು ಸಂಬೋಧಿಸುತ್ತಾನೆ. ಇವನಿಗೆ ಹೇಗೆ ಗೊತ್ತಿತ್ತು ಎಂಬ ಯೋಚನೆ ನನ್ನನ್ನು ಕಾಡಹತ್ತಿತು.
ನಾನು ಸಂಸ್ಕೃತದ ವಿದ್ಯಾರ್ಥಿ ಆಗಿದ್ದೆ. ನನ್ನ ಗುರುಗಳಾದ ಶ್ರೀ ಅನಂತರಂಗಾಚಾರ್ಯರನ್ನು ಕೇಳಿದೆ. ಅವರು ಕನ್ನಡದ ಬಗ್ಗೆ ಅಷ್ಟಾಗಿ ತಮಗೆ ತಿಳಿಯದೆಂದು ಕೇಶವಭಟ್ಟರನ್ನು ಕೇಳಿದರು. ಅವರು ಹೇಳಿದ್ದಿಷ್ಟೇ. ಬರಹಗಾರರು ಕೆಲವೊಮ್ಮೆ ಪೂರ್ವಾಗ್ರಹ ಪೀಡಿತರಾಗಿರುತ್ತಾರೆ. ಮನಸ್ಸಿನಲ್ಲಿ ಮುಂದಾಗುವುದು ಅಚ್ಚಳಿಯದೇ ಕುಳಿತಿದ್ದು, ತಿಳಿಯದಂತೆ ಇಂತಹ ಪದಗಳು ಬರುವ ಸಾಧ್ಯತೆ ಇದೆ. ಇದನ್ನು ತಪ್ಪು ಎಂದು ತಿಳಿಯಬೇಡ, ಎಂದಿದ್ದರು.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • Email this ಪ್ರತಿಕ್ರಿಯೆ
December 24, 2005 - 10:19am — muralihr

ಬಹುಶ:

muralihr's picture

ಈ ವಚನ ಬಸವಣ್ಣ ಬರೆದಿರುವಿದು ಅಲ್ಲವೇ ಅಲ್ಲಾ. ಬಸವಣ್ಣನವರ ಮೇಲೆ ಅಸೂಯೆ ಯಿರುವವರು
ಅವರ ಶೈಲಿಯಲ್ಲಿ ಈ ವಚನ ಬರೆದಿರಬಹುದು.

  • Login or register to post comments
  • link
  • Email this ಪ್ರತಿಕ್ರಿಯೆ
May 12, 2008 - 1:19pm — sushil

ಉ: ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ?

sushil's picture

ನಿಜ.ಹೀಗನಿಸುವುದು ಸುಳ್ಳಲ್ಲ.ಆದರೆ ಬಸವಣ್ಣನವರ ಕಾಲಾನಂತರ ವಚನಗಳು ಹಂಚಿ ಹೋಗಿದ್ದವು.ಏಳು ನೂರು ವರ್ಷಗಳ ನಂತರ ಅವು ಈಗಲೂ ಅಷ್ಟೊಂದು ಪ್ರಭಾವ ಬೀರಬಲ್ಲವಾದರೆ ಆಗ ಶರಣರ ಬಾಯಲ್ಲಿ ಉದಿಸಿದ ಈ ವಾಕ್ಯಗಳಿಗೆಂಥ ಶಕ್ತಿ ಇದ್ದಿರಬೇಡ.ಈ ಅಂತರದಲ್ಲಿ ಅವುಗಳನ್ನು ಕೆಲವಡೆ ತಮಗನುಕೂಲವಾಗುವಂತೆ ತಿರುಚಲಾಗಿದೆ/ವ್ಯಾಖ್ಯಾನಿಸಲಾಗಿದೆ.ಎಷ್ಟೋ ವಚನಗಳ ಸರಿಯಾದ ವ್ಯಾಖ್ಯಾನವೂ ಆಗಿಲ್ಲ.ಈಗ ಆ ಕಾರ್ಯ ಕೆಲವೆಡೆ ನಡೆಯುತ್ತಿದೆ ಎಂದು ಕೇಳಿದ್ದೇನೆ.ಉದಾಹರಣೆ 'ಜಂಗಮ' ಎನ್ನುವ ಪದದ ಅರ್ಥ ಎಲ್ಲರಂತೆ ನಾನು ಯಾರೋ ಸ್ವಾಮಿಗಳಿಗೆ ಹೇಳಿರಬೇಕೆಂದು ತಿಳಿದಿದ್ದೆ.ಆದರೆ ಅದರರ್ಥ 'ಸಮಾಜ' ಎಂದು ನಮ್ಮಪ್ಪಾಜಿ ಹೇಳಿದಾಗಲೇ ಗೊತ್ತಾಗಿದ್ದು.'ಜಂಗಮ ದಾಸೋಹ' ಎಂದರೆ ಸ್ವಾಮಿಗಳಿಗೆ ಊಟ ಹಾಕಿಸು ಎಂದರ್ಥವಲ್ಲ..ನೀನು ದುಡಿದಿದ್ದರಲ್ಲಿ ಕೊಂಚವಾದರೂ ಸಮಾಜಕ್ಕೆ ಮೀಸಲಿಡು ಎಂದು..ಅದು ಭಿಕ್ಷುಕನಿಗೋ,ಅನಾಥಾಶ್ರಮಕ್ಕೋ ಯಾವುದೇ ರೀತಿಯಲ್ಲಾಗಬಹುದು.

ವಚನ ಸಾಹಿತ್ಯ ಅರ್ಥಗರ್ಭಿತ.ಅದನ್ನು ಜನಸಾಮಾನ್ಯನಿಗೆ ಅರ್ಥವಾಗುವಂತೆ ಮಾಡಿದ ಬಸವಣ್ಣ ಇಂಥ ಮಾತು ಹೇಳಿರಲಾರ ಎಂಬುದು ಅವರ ವಚನ, ಜೀವನ ಚರಿತ್ರೆ ಓದಿದ ಯಾರಿಗಾದರೂ ತಿಳಿಯುವಂಥದ್ದು.ಅಷ್ಟಕ್ಕೂ ಕೋಗಿಲೆ ಮರಿಗಳೊಂದಿಗೆ ಕಾಗೆ ಮರಿಗಳನ್ನಿಟ್ಟರೂ ಎಂದಾದರೂ ಸತ್ಯ ಹೊರಬರಲೇಕಲ್ಲವೇ?

ಬಹುಶಃ ಈ ವಚನವೂ ಅರ್ಥವಾಗದಿದ್ದುದು ಸರಿಯಾದ ವ್ಯಖ್ಯಾನ ನೀಡದಿದ್ದುದಕ್ಕೆ ಎನಿಸುತ್ತದೆ.ವ್ಯಾಖ್ಯಾನ ನನಗೆ ತಿಳಿದಲ್ಲಿ ಖಂಡಿತವಾಗಿಯೂ ತಿಳಿಸುವೆ.

-ಸುಶೀಲ್.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಲ್ಲರಳಿ ಹೂವಾಗಿ - ದಯವಿಲ್ಲದ ಧರ್ಮ
  • ವಚನ ಚಿಂತನ: ೬: ಮನಸ್ಸು ಕೋತಿ
  • ಶ್ರೀಬಸವೇಶ್ವರರ ವಚನಗಳು
  • ಭಾಷೆ ಮತ್ತು ಧರ್ಮಗಳ ಸಂಬಂಧ
  • ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:37pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:30pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:29pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:23pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:10pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:00pm
  • harshab
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 1:59pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 1:51pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 19 ಅತಿಥಿಗಳು ಆನ್ಲೈನ್ ಇರುವರು.

ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ ।
ಅಭಾಸವನು ಸತ್ಯವೆಂದು ಬೆಮಿಸುವುದುಮ್ ।।
ಸೌಭಾಗ್ಯಗಳನರಸಿ ದೌರ್ಭಾಗ್ಯಕ್ಕೀಡಹುದುಮ್ ।
ಅಭಿಶಾಪ ನರಕುಲಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator