ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ವಿಧಿಯಾಟ (ವಿರೋಧಾಭಾಸ)

December 24, 2005 - 5:20pm — tvsrinivas41

ಮಾಗಿಯ ಛಳಿಯ ಹೊದಿಕೆಯ ಆಪ್ಯಾಯಮಾನತೆ
ಅಲಾರಾಂ ಹೊಡೆತವ ನಿಲಿಸ ಹೋಗೆ ತಣ್ಣನೆ ಅನುಭವ
ತೆರೆದ ಕಿಟಕಿಯ ಹೊರಗೆ ಮಂಜಿನ ಮುಸುಕು
ಮಡದಿ ಇತ್ತ ಸುಡು ಬಿಸಿ ಕಾಫಿಯ ಹಬೆ

ತಣ್ಣನೆಯ ಕಲ್ಲಿನ ಬಚ್ಚಲಲಿ
ಸುಡು ಬಿಸಿ ನೀರಿನ ಅಭಿಷೇಕ
ತಣ್ಣಗೆ ಕುಳಿತಿಹ ಸಾಲಿಗ್ರಾಮಕೆ
ಬಿಸಿ ಬಿಸಿ ಧೂಪ ದೀಪಗಳಾರತಿ

ಬೆಚ್ಚನೆಯ ಕೈ ತಯಾರಿಸಿ
ತಣ್ಣನೆ ಡಬ್ಬಿಗೆ ಹಾಕಿದ
ಬಿಸಿ ಬಿಸಿ ಅವರೆಕಾಳು ಉಪ್ಪಿಟ್ಟು
ಮನೆ ಬಿಡಲು ಮನದಲೇಕೋ ತಣ್ಣನೆ ಅನುಭವ

ದೂರದಿ ಸ್ನೇಹಿತನ ಕರೆ ಕೇಳಿಯೇ
ಮನದಲಿ ಬಿಸಿ ಬಿಸಿ ಅನುಭವ
ಛಳಿಯ ಲೆಕ್ಕಿಸದೆ ಅವನೆಡೆಗೆ ಓಡೆ
ಮುಂದಿಹ ವ್ಯಕ್ತಿಗೆ ಪಕ್ಕದವಗೆ ಢಿಕ್ಕಿ ಹೊಡೆಯೆ

ಆತ ಕೆಳಗೆ ಬೀಳಲು ಹಿಡಿದ
ತಣ್ಣನೆ ಮಂಜಿನಂತಿಹ ರೈಲ್ವೇ ಹಳಿ
ಎದುರು ಕಂಡೆ ವಿಧಿಯ ದೂತನಾಗಮನ
ಹೊರ ಚಿಮ್ಮಿತ್ತು ಬಿಸಿ ಬಿಸಿ ಹಬೆ ನೆತ್ತರ

ಆ ಬಿಸಿ ಹಬೆಯ ನೋಡುತಿರೆ
ನನ್ನ ತಣ್ಣನೆಯ ಮೈಯೂ ಬೆವರಿತ್ತು

ಇದು ನಿನ್ನೆ ಬೆಳಗ್ಗೆ ನಾ ಕಂಡ ದೃಶ್ಯ

ಇಂದು ಬರೆಯುವ ಮುನ್ನ ದಿನಪತ್ರಿಕೆಯಲಿ ಇದರದೇ ಸುದ್ದಿ
ಮರಣ ಹೊಂದಿದ ವ್ಯಕ್ತಿ ಮರಾಠಿ ಚಲನಚಿತ್ರ
ಜಗತ್ತಿನ ಪ್ರಸಿದ್ಧ ಅತಿಥಿ ನಟ, ಅರವಿಂದ ಸಾಮಂತ್.

ಆತನ ಆತ್ಮಕ್ಕೆ ಚಿರಶಾಂತಿಯನು ಕೋರುವೆ.
ಇದರಲ್ಲಿ ನನ್ನ ತಪ್ಪಿದೆಯೇ? ಅಥವಾ ಆ ವಿಧಿ
ತಾನಾಡುವ ಆಟದಲ್ಲಿ ನಮ್ಮೆಲ್ಲರನ್ನೂ ಉಪಯೋಗಿಸಿಕೊಂಡು ಆಡುವ ಆಟವೇ?
ಅಥವಾ ಜೀವನದ ಕ್ಷಣಿಕತೆಯನ್ನು ನಮಗೆ ಮನವರಿಕೆ ಮಾಡುತ್ತಿರುವುದೇ?

  • ಕಾವ್ಯ ಮತ್ತು ಕವನ
~.~
  • Login or register to post comments
  • 722 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 26, 2005 - 10:21am — Sunil Jayaprakash

ಶಾಂತಿ ಮತ್ತು ಸದ್ಗತಿ

Sunil Jayaprakash's picture

ಇದು ಪ್ರೊ.ಜಿ.ವಿ ಅವರು ಮೂರು ವಾರವೋ, ಅಥವಾ ಅದಕ್ಕೂ ಹಿಂದಿನದೋ ಗೊತ್ತಿಲ್ಲ, ಪ್ರಜಾವಾಣಿಯ ಇಗೋ ಕನ್ನಡದಲ್ಲಿ ಬರೆದದ್ದು.
ಆತ್ಮಕ್ಕೆ ಶಾಂತಿ ಕೋರುವುದು ನಮ್ಮ ಸಂಸ್ಕೃತಿಯಲ್ಲ. ನಮ್ಮ ಸಂಸ್ಕೃತಿಯಲ್ಲಿ ಆತ್ಮ ಮುಕ್ತಿ ಮತ್ತು ಸದ್ಗತಿ ಪಡೆಯಲು ಇಚ್ಛಿಸುತ್ತದೆ. ಆತ್ಮ ಶಾಂತಿಯಿಂದ ನಿದ್ರಸುವುದಿಲ್ಲ. ಅದು ತನ್ನ ಪಾಪ ಪುಣ್ಯಗಳಿಗನುಗುಣವಾಗಿ, ಮುಕ್ತಿಯನ್ನೋ ಅಥವಾ ಮತ್ತೊಂದು ಜನ್ಮವನ್ನೋ ಪಡೆಯುತ್ತದೆ.
ನೋಡಿ, ಕಾವ್ಯಗಳಿಂದ ಯಾವ ರಸವನ್ನು ಬೇಕಾದರೂ ಸ್ಫುರಿಸಬಹುದು. ಮೇಲಿನ ಕವನದಲ್ಲಿ,
ಮಡದಿಯ ಕೈ, ಶೃಂಗಾರ ರಸ ಪ್ರಸವಿಸಿದರೆ, ಬಿಸಿ ಬಿಸಿ ಹಬೆ ನೆತ್ತರ ಭಯಾನಕ ದೃಶ್ಯವನ್ನು ವಿವರಿಸುತ್ತಿದೆ. ಹಾಗೆಯೆ ವಿಧಿಯ ರುದ್ರ ನರ್ತನ (ರೌದ್ರ ರಸ) ಕೂಡ ಅಡಕವಾಗಿದೆ. (ರೌದ್ರ  ರೌದ್ರತೆ ತಪ್ಪು ಪ್ರಯೋಗ ಎಂದು ತಿಳಿದಿದ್ದೇನೆ. ತಪ್ಪುಳಿದ್ದಲ್ಲಿ ತಿಳಿಹೇಳಬೇಕು.) ತಿಳಿಸುತ್ತಿದೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?
  • ಬೇಕೇ ಬೇಕು ಬೆಳಗಾಗುತಲೇ ಬಿಸಿ ಬಿಸಿ ಕಾಫಿ . . .
  • ಬೇಕೇ ಬೇಕು ಬೆಳಗಾಗುತಲೇ ಬಿಸಿ ಬಿಸಿ ಕಾಫಿ . . .
  • ಆರ್ಕಿಮಿಡೀಸ್ ತತ್ವಕ್ಕೆ ಹೊಸ ವ್ಯಾಖ್ಯಾನ
  • ನಡೆದೇ ಹೋಗಲಿ ತೋo... ತನನ ...
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಗುರುದತ್ ಎಂಬ ದುರಂತ ನಾಯಕ
  • ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
  • ಕುಮಾರ ಪರ್ವತದಲ್ಲಿ ಚಾರಣ
  • ಒಂದು ಕಲಿತವನಿಗೆ ಇನ್ನೊಂದು ಸುಲಭ
  • ಶಬ್ದಗಳ ಮೋಡಿಗಾರ- ಜಯಂತ ಕಾಯ್ಕಿಣಿ
  • ’ಸ್ಯಾನ್ ಬಾರ್ನ್ ಸಸ್ಯ-ಪರಿಕ್ಷಣಾಹೊಲ’
  • ಮಹಾತ್ಮ ಗಾಂಧೀಜಿಯವರ ಮಾಹಿತಿಗಳು

ಇತ್ತೀಚಿನ ಪ್ರತಿಕ್ರಿಯೆಗಳು

  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:58pm
  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:56pm
  • hpn
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 10, 2008 - 11:52pm
  • hamsanandi
    ಉ: ಸಂಗೀತ ನವರಾತ್ರಿ - ವಿಜಯ ದಶಮಿ
    October 10, 2008 - 11:17pm
  • hpn
    ಉ: ಪತನದ ಕತೆ
    October 10, 2008 - 10:16pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೯
    October 10, 2008 - 10:10pm
  • hpn
    ಉ: ಪತನದ ಕತೆ
    October 10, 2008 - 10:07pm
  • hamsanandi
    ಉ: ಪತನದ ಕತೆ
    October 10, 2008 - 9:52pm
  • omshivaprakash
    ಉ: ಲಿನಕ್ಸಾಯಣ - ೨೨ - ಗ್ನೋಮ್ ಸಬ್ ಟೈಟಲ್ಸ್ - ದೃಶ್ಯಾವಳಿಯಲ್ಲಿ ಕನ್ನಡ
    October 10, 2008 - 9:30pm
  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 9:27pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 61 ಅತಿಥಿಗಳು ಆನ್ಲೈನ್ ಇರುವರು.


ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ
ಮೇರುವನು ಮರೆತಂದೆ ನಾರಕಕೆ ದಾರಿ |
ದೂರವಾದೊಡದೇನು ಕಾಲು ಕುಂಟಿರಲೇನು
ಊರ ನೆನಪೇ ಬಲವು -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator