"ಸಂಪದ"ದ ಕೊನೆಯ ದಿನಗಳು
![]()
ಸದಸ್ಯರ ಗಮನಕ್ಕೆ:
ಭಾರತ ಸರ್ಕಾರ ಹೊರಡಿಸಿರುವ ವಿಶೇಷ ಆದೇಶವನ್ನು ಅನುಸರಿಸಿ ನಮ್ಮ ಸರ್ಕಾರ ಕನ್ನಡದ ಹಲವಾರು ವೆಬ್ ಸೈಟಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದೆ.
ಮೂಲ ಆದೇಶದಲ್ಲಿ "ಸಾಮಾಜಿಕ ಹಾಗು ರಾಜಕೀಯ ಅಭದ್ರತೆಗೆ ಈ ವೆಬ್ಸೈಟ್ಗಳು ಕಾರಣವಾಗಿರುವುದರಿಂದ ಈ ಕ್ರಮವನ್ನು ತ್ವರಿತವಾಗಿ ಕೈಗೊಳ್ಳಬೇಕಾಗಿದೆ" ಎಂಬ ಕಾರಣ ಕೊಡಲಾಗಿದೆ.
ಕರ್ನಾಟಕ ಸರ್ಕಾರದ ಈ ಆದೇಶವನ್ನು ತೀವ್ರವಾಗಿ ಪರಿಗಣಿಸಿ ಪಾಲಿಸದ ವೆಬ್ಸೈಟ್ ಮಾಲಿಕರನ್ನು ಬಂಧಿಸಲು ನಿರ್ಧರಿಸಿದೆ. ಈ ಸಲುವಾಗಿ 'ಸಂಪದ'ದ ನಿರ್ವಹಣೆ 'ಸಂಪದ'ದಲ್ಲಿ ನಡೆದಿರುವ ಹಲವಾರು ಮಾತು, ಚರ್ಚೆಗಳನ್ನು ಕೂಡಲೆ ಅಳಿಸಿ ಹಾಕುವುದರ ಜತೆಗೆ ಮೂರು ದಿನಗಳ ಒಳಗೆ ಇಡೀ ವೆಬ್ಸೈಟನ್ನು ಮುಚ್ಚುಹಾಕುತ್ತಿದ್ದೇವೆಂದು ಅಧಿಕೃತವಾಗಿ ಈ ಮೂಲಕ ತಿಳಿಸುತ್ತ ಖೇದ ವ್ಯಕ್ತಪಡಿಸುತ್ತಿದ್ದೇವೆ.
- 'ಸಂಪದ' ನಿರ್ವಹಣೆ
(ಈ ಸೂಚನೆ ರೆಡಿ ಮಾಡಿದ 'ಅನಿವಾಸಿ'ಯವರಿಗೆ 'ಸಂಪದ'ದ ಸಮಸ್ತ ಸದಸ್ಯರ ಪರವಾಗಿ ವಂದನೆಗಳು).

- Login or register to post comments
- 1040 hits
- Email this page





RSS:
ಪ್ರತಿಕ್ರಿಯೆಗಳು
ಉ: "ಸಂಪದ"ದ ಕೊನೆಯ ದಿನಗಳು
ಇದೊಂದು ಸರ್ಕಾರವೊಂದರ ಪರಮಾವಧಿ ಅಜ್ಞಾನದ ಕ್ರಮ , ನಾವು ಪ್ರಜಾಪ್ರಭುತ್ವದಲ್ಲಿದ್ದೆವೆಯೋ ?ಅಥವಾ ಪ್ಯಾಸಿಷ್ಟ್ ವ್ಯವಸ್ಥೆಯೊಂದರ ಚಕ್ರದ ಅಡಿಯಲ್ಲಿ ಸಿಕ್ಕು ಬಿದ್ದಿದ್ದೇವೆಯೋ ? ಎಂಬುದನ್ನು ಮೊದಲು ಪರಿಶೀಲಿಸುವ ಸಮಯ ಇದು . ಈಗ ನಾವು ಎಚ್ಚೆತ್ತು ಪ್ರತಿಭಟಿಸದಿದ್ದರೆ ಇಡೀ ಭಾರತೀಯ ಜನ ಸಮುದಾಯ ಸರ್ವಾಧಿಕಾರದ ತೆಕ್ಕೆಗೆ ಬೀಳುವ ದಿನ ದೂರವಿಲ್ಲ .ಎಲ್ಲ ನಾಗರಿಕರೂ ಸಹ ತಮ್ಮ ಭಿನ್ನಾಭಿಪ್ರಾಯವನ್ನು ಬದಿಗಿರಿಸಿ , ತೀವ್ರವಾಗಿ ಪ್ರತಿಭಟಿಸಬೇಕು ನಮ್ಮ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಕುತ್ತು ಬಂದರೆ ನಾವು ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ತಕ್ಷಣ ನೀಡಬೇಕು .
ಉ: "ಸಂಪದ"ದ ಕೊನೆಯ ದಿನಗಳು
ನನಗೂ ಆ ಸುತ್ತೋಲೆ ನೋಡಿ ನೆಲ ಕುಸಿದಂತಾಯ್ತು...
ಆದರೂ ಒಂದು ಹೋರಾಟ ಮಾಡಿ ಉಳಿಸೋಣ ಅನ್ನಿಸ್ತಿದೆ.
ಇಶ್ಟು ಬೇಕ ಎದೆಗುಂದಬೇಡ ಹರಿ.. ಮೂರುನಾಳೊಳಗೆ ಏನಾರ ಮಾಡಣ.
ಉ: "ಸಂಪದ"ದ ಕೊನೆಯ ದಿನಗಳು
ಸಂಪದದ ಬಾಗಿಲು ಮೂರು ದಿನಗಳೊಳಗೆ ಮುಚ್ಚುತ್ತದೆಂಬುದನ್ನು ತಿಳಿದು ಅತ್ಯಂತ _______ ವಾಯಿತು. ಬುಧವಾರ ೨ನೇ ಏಪ್ರಿಲ್, ಏಕಾದಶಿ ಪ್ರಶಸ್ತವಾದ ದಿನ. ನಾಲ್ಕು ಜನ ಮುತ್ತೈದೆಯರನ್ನು ಕರೆದು ಅರಿಶಿನ ಕುಂಕುಮ ಕೊಟ್ಟು, ಊಟ ಹಾಕಿ, ಸೀರೆ ಕುಪ್ಪುಸದ ಕಣಗಳನ್ನು ಕೊಟ್ಟರೆ ಮುಂದಿನ ಏಪ್ರಿಲ್ ೧ರ ವರೆಗೆ ನಿರಾತಂಕವಾಗಿ ಸಂಪದದ ಲೇಖನ ಸಂಪತ್ತನ್ನು ಮುಂದುವರೆಸಿಕೊಂಡು ಹೋಗಬಹುದೆಂದು ಪೂಜಾರಪ್ಪನವರ ಅಂಬೋಣ. ನಿಮ್ಮ ಕೈಲಾಗದಿದ್ದರೆ, ಅದಕ್ಕೆ ಸಲ್ಲುವ ಹಣವನ್ನು ನನಗೆ ರವಾನಿಸಿದರೆ, ನಾನೇ ಮುಂದೆ ನಿಂತು ಆ ಕೆಲಸ ಮಾಡುತ್ತೇನೆ. ತಕ್ಷಣ ಎಂ.ಓ. ಮಾಡಿ.
ಎ.ವಿ. ನಾಗರಾಜು
ಉ: "ಸಂಪದ"ದ ಕೊನೆಯ ದಿನಗಳು
ಏಪ್ರಿಲ್ ಫೂಲ್ ನ್ಯೂಸ್.
ರೂಪ
ಉ: "ಸಂಪದ"ದ ಕೊನೆಯ ದಿನಗಳು
ಎಷ್ಟು ಚನ್ನಾಗಿ ಫೂಲ್ ಮಾಡಿದಿರಿ ! ನನಗಂತೂ ಸ್ವಲ್ಪ ಹೊತ್ತೂ ಏನೂ ಅರ್ಥವಾಗಲಿಲ್ಲ
ಉ: "ಸಂಪದ"ದ ಕೊನೆಯ ದಿನಗಳು
ಸರ್ಕಾರ ನೇ ನಮ್ಮ್ ದೇಶದಾಗೆ ಇಲ್ಲದಿರುವಾಗ ಇದ್ಯಾವ್ ಸರ್ಕಾರ ಹಿ೦ಗೆ ಮಾಡೈತೆ ಅನ್ಸಿಸ್ ಲಿಲ್ವಾ ?
ಅಲ್ರೀ ನಮ್ಮ ಸರ್ಕಾರದ ರಾಜಕಾರಣಿಗಳು ನಮ್ಗೇ ವರ್ಷ ಇಡಿ ಫೂಲ್ ಮಾಡ್ತಾರಲ್ವಾ ..ಅದಕ್ಕೇನ್ ಮಾಡೋದು ?
ನನ್ನ ಪ್ರಕಾರ ಭಾರತದ ಪ್ರಜೆಗಳಾದ ನಾವು ನಿಜವಾಗಲೂ ಆಚರಿಸ ಬೇಕಾದ ದಿನ ಎಪ್ರಿಲ್ ಫುಲ್,,
ಅಗಶ್ಟ್ ಹದಿನೈದು , ರಿಪಬ್ಲಿಕ್ ಡೇ ಇವೆಲ್ಲದರ ಬದಲಾಗಿ - ಎಪ್ರಿಲ್ ಫುಲ್ ಡೇ ಮಾಡೋದೆ ವಾಸಿ.
ಮುರಳಿ,
ಉ: "ಸಂಪದ"ದ ಕೊನೆಯ ದಿನಗಳು
ಇನ್ನೊಂದು ಅಪ್ಪಾ ಪೋಲಿ ಸುದ್ಧಿ
ಉ: "ಸಂಪದ"ದ ಕೊನೆಯ ದಿನಗಳು
ಗುಱುಱಾಜ
ಹಾ..ಹಾ....ಸಕತ್ತ್ ಆಗಿದೆ ನನಗ೦ತೂ ಓದಿದ ತಕ್ಷಣ ಸಿಟ್ಟಿನಿ೦ದ ರಕ್ತ ಕುದಿಯತೊಡಗಿತ್ತು.faithfreedom ನ೦ತಹ ಸೈಟುಗಳೇ ದೇಶದಲ್ಲಿ ಚಾಲ್ತಿಯಲ್ಲಿರುವಾಗ ಇದೇನಿದು ಎ೦ದೆಲ್ಲಾ ಅನಿಸತೊಡಗಿತ್ತು.
ಧನ್ಯವಾದಗಳು
ಉ: "ಸಂಪದ"ದ ಕೊನೆಯ ದಿನಗಳು
ಹರಿಪ್ರಸಾದ್
ಏಪ್ರಿಲ್ ಒಂದರ ಹಾಸ್ಯದಲ್ಲೂ ಸಾವಿನ ಅಥವಾ ಈ ರೀತಿಯ ಸುದ್ದಿಗಳನ್ನು ಹಾಕುವುದು ನಮ್ಮ ಸಂಸ್ಕೃತಿಯಲ್ಲಿ ತಕ್ಕದ್ದಲ್ಲ ಅನ್ನುವುದನ್ನು ನೀವು ಮರೆತುಬಿಟ್ಟಿರಲ್ಲ!!??
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ಉ: "ಸಂಪದ"ದ ಕೊನೆಯ ದಿನಗಳು
ಐಡಿಯ ಸುದರ್ಶನರದ್ದು
ಒಂದಷ್ಟು ತಮಾಷೆ, ಒಂದಷ್ಟು ರಿಯಾಲಿಟಿ ಚೆಕ್ - ನಾವು ಬರೆಯೋದನ್ನ ಎಷ್ಟು ಜನ ಸೀರಿಯಸ್ ಆಗಿ ತಗೋತಾರೆ ಅಂತ ಸೀರಿಯಸ್ ಆಗಿ ತಗೊಳ್ಳಲಾಗದ ದಿನ ಬರೆದು ಚೆಕ್ ಮಾಡಬಹುದಲ್ವೆ? ಇದನ್ನು ಬರೆದ ಒಂದು ಗಂಟೆಯಲ್ಲೇ ಬಂದ ಹತ್ತು ಪ್ರತಿಕ್ರಿಯೆಗಳು ಸಂಪದವನ್ನು ಪ್ರತಿನಿಧಿಸುತ್ತ ಪ್ರತಿಧ್ವನಿಸುತ್ತದಲ್ವೆ. ಅದು ಖುಷಿ.
ಸೋಮಶೇಖರರೆ, ದಯವಿಟ್ಟು ಈ ತರಲೆ ಪೋಸ್ಟನ್ನು ಮನ್ನಿಸಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: "ಸಂಪದ"ದ ಕೊನೆಯ ದಿನಗಳು
ಓದಿದೊಡನೆ ಗೊತ್ತಾಯಿತು..ಅದರೂ ಸಂಪದದಲ್ಲಿ ಇದನ್ನು ನಿರೀಕ್ಷಿಸಿರಲಿಲ್ಲ..
ರಾಜ್ಯ ಚುನಾವಣಾ ದಿನಾಂಕ ಪ್ರಕಟಣೆ, ಕೇಂದ್ರ ಸರಕಾರಿ ನೌಕರರಿಗೆ ಆರನೇ ವೇತನ ಆಯೋಗ ಶಿಫಾರಸು ಮಾಡಿದ ವೇತನ ಇಂತಹ ಸುದ್ದಿಗಳನ್ನು ನಿರೀಕ್ಷಿಸಿದೆ...
ಕೆಲವರು ಮೋಸ ಹೋದದ್ದು ತಿಳಿದು ಖುಷಿಯಾಯಿತು..ಅದರಲ್ಲೂ ಮಹೇಶ ಬೇಸ್ತು ಬಿದ್ದದ್ದು ನಂಬೋಕಾಗದು
*ಅಶೋಕ್
ಉ: "ಸಂಪದ"ದ ಕೊನೆಯ ದಿನಗಳು
ಅಶೋಕ್ ಕುಮಾರ್, ಸಂಪದವನ್ನು ನಿಮ್ಮ ನಿರೀಕ್ಷೆಗೆ ತಕ್ಕುದಾದಂತೆ ಮಾಡುವುದು ನಿಮ್ಮ ಕೈಲೇ ಇದೆ. ಅದಕ್ಕೆ ಬೇಕಾದ ತಾಂತ್ರಿಕ ಸೌಲಭ್ಯ ಒದಗಿಸಿಕೊಡುವ ಜವಾಬ್ದಾರಿ ನಮ್ಮದು. ಒಂದು ಮೇಯ್ಲ್ ಹಾಕಿ.
ಮಹೇಶ ಮೋಸ ಹೋದಂತೆ ಕಾಣಲಿಲ್ಲ ನನಗೆ. ಅವ ಮತ್ತೊಂದು ಕಾಮೆಂಟ್ ಹಾಕಿದ ಕೂಡ್ಲೆ ತಿಳಿಯುತ್ತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: "ಸಂಪದ"ದ ಕೊನೆಯ ದಿನಗಳು
ನಂಗೆ ಈ ಅಯಿಡಿಯವನ್ನ ನೀನೇ ಪೋನಿ ಹೇಳಿದ್ದೆ.. ಮರೆತುಬಿಟ್ಟಿದ್ದೀಯ..
ಸಂಪದ ಮುಚ್ಚಿದ್ರೆ.. ನಾವ್ ಸುಮ್ನಿರ್ತಿದ್ವಾ?
ಇಶ್ಟುವೊತ್ತಿಗೆ.. TV೯ ಸುದ್ದಿ ಆಗಿರ್ತಿತ್ತು
ಉ: "ಸಂಪದ"ದ ಕೊನೆಯ ದಿನಗಳು
ಹಂಸಾನಂದಿಯವರೇ,ನಿಜ. ತಮಾಷೆಗೂ ಕೆಟ್ಟದನ್ನು ಬಯಸುವುದು ನಮ್ಮ ಸಂಸ್ಕೃತಿಯಲ್ಲ.
ಕೆಲವು ವರ್ಷದ ಹಿಂದೆ ಏಪ್ರಿಲ್ ೧ನೆ ತಾರೀಖು , ಒಬ್ಬ ನಟಿಯ ತಾಯಿ ( ಕ್ಲೂ - ಈಕೆಯೂ ನಟಿ, ಪ್ರಶಸ್ತಿ ವಿಜೇತೆ ) ಪತ್ರಕರ್ತರನ್ನು ಫೂಲ್ ಮಾಡಲೆಂದು ತನ್ನ ಮಗಳು ಸತ್ತು ಹೋದಳು ಎಂದು ಸುದ್ದಿ ಹಬ್ಬಿಸಿದ್ದರು. ನಿಜ ತಿಳಿದ ಪತ್ರಕರ್ತರು ನಗುವ ಬದಲು ತಾಯಿ, ಮಗಳಿಗೆ ಬುದ್ಧಿ ಹೇಳಿ, ಬೈದು ಬರೆದಿದ್ದರು.
ಆದರೂ ಒಳ್ಳೆ ಪ್ರಯತ್ನವನ್ನೇ ಮಾಡಿದ್ದೀರಿ. ಶಹಬ್ಬಾಷ್!
ಉ: "ಸಂಪದ"ದ ಕೊನೆಯ ದಿನಗಳು
ನಿಮ್ಗೇ ಬಿ.ಪಿ. ಹೆಚ್ಚು ಮಾಡಿದ ಈ ನಾಡಿಗ್ ಗೆ ಸ್ವಲ್ಪ ತಿಳವಳಿಕೆ ಕಡಿಮೆ
ವಯಸ್ಸಾದವರೂ ಇರುತ್ತಾರೆ ಅನ್ನುವ ಪರಿವಿಲ್ಲದೇ ಈ ರೀತಿ ಮಾಡಿದ್ದಾನೆ.
ಉ: "ಸಂಪದ"ದ ಕೊನೆಯ ದಿನಗಳು
ಎಪ್ಪಾ ಏನಿದು ಸುದ್ದಿ ಅಂತ ಒಂದ ಸಮ ಸಿಟ್ಟು ನೆತ್ತಿಗೇರಿತ್ತು. ಯಾಕಂದ್ರ ನನಗಿರುದು ಈಗ ಸಂಪದ ಮತ್ತು ದ್ಯಾಟ್ಸಕನ್ನಡ ಎರಡೇ ಆಸರೆ ಉಳದೆಲ್ಲ ವೆಬ್ಸೈಟ್ಗಗಳನ್ನು ಬಂದ ಮಾಡ್ಯಾರ,ಈಗ ಇದೂ ಹೋದರ ಏನಪಾ ಅಂತ ತಲೆಬಿಸಿ ಮಾಡಿಕೊಂಡ್ಯ; ಮುಂದ ನಾಕು ಕಮೆಂಟು ಓದಿದ ಮ್ಯಾಲ ಮನಸ್ಸು ತಿಳಿ ಆತು. ಒಳ್ಳೆ ಮೂಢನ್ನ ಮಾಡಿದ್ರಿ.
ನಿಮ್ಮ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.
ಉ: "ಸಂಪದ"ದ ಕೊನೆಯ ದಿನಗಳು
ಚಟುವಟಿಕೆಯ ಚಿಲುಮೆಯಂತೆ ಸಂಪದದಲ್ಲಿ ಬರೆಯುತ್ತಿರುವ ಹಿರಿಯರಿಗೆ ವಯಸ್ಸಾದವರು ಅಂತ ಹೇಳೋದು, ಅನ್ಕೊಳ್ಳೋದು ಕಷ್ಟ ಮಾರಾಯ!
ಹಿರಿಯರು ನಿಜ, "ವಯಸ್ಸಾದವರು" ಖಂಡಿತ ಅಲ್ಲ!
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: "ಸಂಪದ"ದ ಕೊನೆಯ ದಿನಗಳು
ಸುದ್ದಿ ಓದಿದಾಕ್ಷಣ ನೆತ್ತಿಯಮೇಲೆ ಮೊಳೆ ಗುದ್ದಿದಂತೆ (ಹಿಟ್ಟಿಂಗ್ ದ ನೈಲ್ ಆನ್ ದ ಹೆಡ್) ಪ್ರತಿಕ್ರಿಯಿಸಿದ, ನನ್ನ ಪ್ರತಿಕ್ರಿಯೆ ನೋಡಿ ನಿಮ್ಮ ಫೂಲಾಟವನ್ನು ಅರಿತು ಪ್ರತಿಕ್ರಿಯಿಸಿದ ಇನ್ನಿತರರ ಹಾಗು ನಿಮ್ಮ ಒಂದು ಥ್ಯಾಂಕ್ಸೂ ಇಲ್ಲವಾ? ಇರಲಿ ಬಿಡಿ, ಮುಂದಿನ ವರ್ಷ ನೋಡೋಣವಂತೆ
ಉ: "ಸಂಪದ"ದ ಕೊನೆಯ ದಿನಗಳು
ಸರಿ, ಮುಂದಿನ ವರ್ಷ ನಿಮ್ಮನ್ನೂ ಫೂಲ್ ಮಾಡೋಕೆ ಮಾಸ್ಟರ್ ಪ್ಲಾನ್ ಹಾಕೋಣಂತೆ
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: "ಸಂಪದ"ದ ಕೊನೆಯ ದಿನಗಳು
ವಿಜಯೀ ಭವ
ಉ: "ಸಂಪದ"ದ ಕೊನೆಯ ದಿನಗಳು
ಅಯ್ಯೋ! ನನ್ನ "ವಿಕಟಮತಿ"ಗೆ ನನಗೇ ಮುಜುಗರವಾಗುತ್ತಿದೆ. ಆದರೆ ಕೀಟಲೆ ಒಂದಿಷ್ಟಾದರೂ ಅಲುಗಾಡಿಸದಿದ್ದರೆ ಹೇಗೆ ಎಂದೂ ಅನಿಸುತ್ತಿದೆ. ಇದರಿಂದ ಯಾರಾದರೂ ತುಂಬಾ ಬೇಸರಮಾಡಿಕೊಂಡಿದ್ದರೆ ಮನ್ನಿಸುವಿರೆಂಬ ಆಶಯವೂ ಇದೆ.
ಇದರಿಂದ ಹರಿಗಂತೂ ತುಂಬಾ ಪೀಕಲಾಟ ಆಗಿರುವಂತಿದೆ...
ಉ: "ಸಂಪದ"ದ ಕೊನೆಯ ದಿನಗಳು
ಅನಿವಾಸಿಯವರೆ,
ಮುಜುಗರ ಪಡ್ಬೇಡಿ - (ಟಿಪ್ಪಣಿಗಳನ್ನೂ) ಸ್ವಲ್ಪ ಹಗುರವಾಗಿ ತೊಗೊಳಿ
:)
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ಉ: "ಸಂಪದ"ದ ಕೊನೆಯ ದಿನಗಳು
ನಾನು ನಂಬಿ ಬಿಟ್ಟೆ.
ಒಂದ್ ಸತಿ ತಲೆ ಒಳಗೆ ಸಂಗೊಳ್ಳಿ ರಾಯಣ್ಣ ಬಂದು ಹೊದ.
ಉ: "ಸಂಪದ"ದ ಕೊನೆಯ ದಿನಗಳು
ಏಪ್ರಿಲ್ ಫೂಲ್ ನ್ ಹೀಗೆ ಮಾಡೋದಾ???. ನಂಗೆ ಒಂದ್ಸಲ ಏನು ಅಂತ ಗೊತ್ತಾಗಲಿಲ್ಲ.
ಚೇತರಿಸಿ ಕೊಳ್ಳಕೆ ಸ್ವಲ್ಪ ವೇಳೆ ಬೇಕಾಯ್ತು.
ದಯವಿಟ್ಟು ಈ ತರಹದ ಸುದ್ದಿನ ಕನಸಿನಲ್ಲೂ ಎಣಿಸೋಲ್ಲ.
ವಂದನೆಗಳೊಂದಿಗೆ,
ಸುಧೀಂದ್ರ
ಉ: "ಸಂಪದ"ದ ಕೊನೆಯ ದಿನಗಳು
ಪ್ರೀತಿಯ ಹರಿ , ತಕ್ಷಣ ವ್ಯವಸ್ಥೆಯ ಮೇಲೆ ಕೋಪ ಬಂದದ್ದು ನಿಜ , ಈ ಚುನಾವಣೆಯ ದಿನಗಳಲ್ಲಿ ಏನೆಲ್ಲಾ ಅವಾಂತರಗಳು ಜರುಗಬಹುದಲ್ಲವೇ ಎಂದು , ಆಮೇಲೆ ರೂಪಾರವರು ಬರೆದಾಗಲೇ ಇವತ್ತು ನಾನು ಫೂಲ್ ಆಗಿದ್ದು ಗೊತ್ತಾಯಿತು . ಆಮೇಲೆ ನಗು ಬಂತು , ಇರಲಿ ಬಿಡಿ, ಮನ್ನಿಸುವಂತಹ ತಪ್ಪನ್ನೇನೂ ಯಾರೂ ಮಾಡಿಲ್ಲ . ಸಂಪದ ಜೀವಂತವಾಗಿರುವುದರಿಂದ ಇಂತವೆಲ್ಲಾ ನಡೆಯುತ್ತಿರುತ್ತವೆ , ನಡೆಯಬೇಕು . ಈಗ ಎಲ್ಲರೂ ಸಂತಸ ಪಡೋಣ .
ಉ: "ಸಂಪದ"ದ ಕೊನೆಯ ದಿನಗಳು
ಕನ್ನಡಕ್ಕೆ ಸೇವೆಸಲ್ಲಿಸುತ್ತಿರುವ ಸಂಪದ ಮುಚ್ಚಿದರೆ, ಮಾತಾಡುವ ಕನ್ನಡ ಮನಸ್ಸುಗಳನ್ನು ಬಾಯಿಗಳನ್ನು ಮುಚ್ಚಿದಂತೆ. ಇದು ಎಷ್ಟರಮಟ್ಟಿಗೆ ಹಿತಕರ ?
ಇಂದೇನಾದರೂ ಗೂಗಲ್ ನಲ್ಲಿ ಒಮ್ಮೆ ಕ್ಲಿಕ್ಕಿಸಿದರೆ, ಹಿಂದಿ, ಬಂಗಾಳಿ, ತಮಿಳು, ತೆಲುಗು, ಮರಾಠಿ ಸೈಟ್ ಗಳು ನಮ್ಮಮೇಲೆ ದಾಳಿಮಾಡುತ್ತವೆ. ಆದರೆ ಇಂದಿಗೂ ಕನ್ನಡ ದ ಮಾಹಿತಿ ಸಂಗ್ರಹಕ್ಕೆ ನಾವು ಹರಸಾಹಸ ಮಾಡಬೇಕಾಗಿದೆ. ಬಹುಶಃ ನಮ್ಮ ಯುವಗೆಳೆಯ, ಹರಿಪ್ರಸಾದ್ ನಾಡಿಗ್ ರವರ, ಅವಿಶ್ರಾಂತ ದುಡಿಮೆಯಿಂದ ಮಾತ್ರ ಸಾಧ್ಯವಾಗಿದೆ. ಕನ್ನಡ ವಿಕಿಪೇಡಿಯದಲ್ಲೂ ನಾವು ೫೦೦೦ ಕ್ಕೂ ಹೆಚ್ಚು ಕನ್ನಡ ಲೇಖನಗಳನ್ನು ನೋಡಲು ಸಾಧ್ಯವಾಗಿದೆ. ಯೋಚಿಸಿ. ಖಂಡಿತಾ ಬಂದ್ ಮಾಡಬೇಡಿ. ಇದು ಅನ್ಯಾಯ ! ಕನ್ನಡ-ನುಡಿಗೆ ಮೋಸ !
ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ.
ವೆಂಕಟೇಶ್,
ಉ: "ಸಂಪದ"ದ ಕೊನೆಯ ದಿನಗಳು
ವೆಂಕಟೇಶರೆ, ಬಹುಶಃ ನೀವೂ ಕಾಮೆಂಟುಗಳನ್ನು ಓದಲಿಲ್ಲ ಅನ್ಸತ್ತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: "ಸಂಪದ"ದ ಕೊನೆಯ ದಿನಗಳು
ಹರಿಯವರೆ,
ಈಗ ನೆಮ್ಮದಿ ಆಯಿತು. ಎದೆ ಡವ-ಡವ ಹೊಡೆದುಕೊಳ್ಳುತ್ತಿತ್ತು. ಮಾರಾಯ್ರೆ. ಇಷ್ಟು ಕಷ್ಟ ಪಟ್ಟೀದಿರಿ. ಏನ್ ತಮಾಷೇನೆ ?
ನಿಜಕ್ಕೂ ಏಪ್ರಿಲ್ ಫೂಲಾಗಿದ್ದೆ. ಆದ್ರೆ. ಅದರಿಂದ ನಿಜವಾದ ಪ್ರೀತಿ ಇಮ್ಮಡಿಸಿದೆ. ಅಲ್ಲವೇ ?
ಉ: "ಸಂಪದ"ದ ಕೊನೆಯ ದಿನಗಳು
MNS Rao
ನಾನು " "ಸಂಪದ"ದ ಕೊನೆಯ ದಿನಗಳು " ತಡವಾಗಿ ನೋಡಿದೆ. ಪ್ರತಿಕ್ರಿಯೆಗಳಿಂದ ಇದು ಏಪ್ರಿಲ್ ೧ ರ ಜೋಕ್ ಎಂದು ತಿಳಿದು ಸಮಾಧಾನದ ಉಸಿರು ಎಳೆದೆ.
ಒಂದು ಸಾರಿ ಯೋಚಿಸಿದರೆ ಸರಕಾರ ಹೀಗೆ ಮಾಡಲೂ ಸಾಧ್ಯ. ಆಗ ಇಂಥಹ ಸದುದ್ದೇಶದ ವೆಬ್-ಸೈಟ್ಗಳ ಗತಿ ಏನು!