ಪರಸ್ಪರ ಮೂರ್ಖರನ್ನು ಮಾಡುವಾಟ ಎಷ್ಟು ಸರಿ?
ಪರಸ್ಪರರಿಗೆ ಬಣ್ಣದೋಕುಳಿಯನ್ನೆರಚಿ ಸಂತೋಷವನ್ನು ಹಂಚಿಕೊಳ್ಳುವುದೇನೋ ದ್ವಾಪರದಿಂದ ಬಂದ ಭಾರತೀಯ ಹಬ್ಬ ಪರಂಪರೆ ಎಂದು ಹೇಳಬಹುದು. ಆದರೆ, ಈ ಪರಸ್ಪರರನ್ನು ಸುಳ್ಳಿನ ಕಂತೆ ಹೊಸೆದು ನಮ್ಮ ಅಚ್ಚುಮೆಚ್ಚಿನ ಗೆಳೆಯರು, ಸಂಬಂಧಿಕರನ್ನೇ ಕ್ಷಣ ಮಾತ್ರ ಮೂರ್ಖರನ್ನಾಗಿಸಿ ಆನಂದಿಸುವುದು ಎಷ್ಟು ಸರಿ? ನಮ್ಮಂತಹ ಹಬ್ಬ ಹರಿದಿನಗಳಿಲ್ಲದ, ವಿಶ್ವ ಬಂಧುತ್ವದ ವಿವೇಚನೆ ಇಲ್ಲದ ಪಾಶ್ಚಾತ್ಯರ ಈ ಮೂರ್ಖರಾಟವನ್ನು ನಾವೂ ಅನುಸರಿಸಿ ಆನಂದಿಸುವುದು ಎಷ್ಟು ಹಿತ ಮತ್ತು ಸರಿ? ಮೂರ್ಖರಾಗಲು ಏಪ್ರಿಲ್ ಒಂದನೇ ದಿನವೇ ಬೇಕೆ? ಬೇರೆ ದಿನಗಳಲ್ಲಿ ಯಾರೂ ಮೂರ್ಖರಾಗುವುದಿಲ್ಲವೆ? ಮೂರ್ಖರಾದವರ ಮನಸ್ಥಿತಿ ಕ್ಷಣದ ಮಟ್ಟಿಗಾದರೂ ಎಷ್ಟು ಪರಿತಪಿಸಿರಬಹುದೆಂಬ ವಿವೇಚನೆ ಮೂರ್ಖರನ್ನಾಗಿಸಿದವರಿಗಿರುತ್ತದೆಯೇ? ಇದು ನಂಬಿಕೆ ದ್ರೋಹವೂ ಆಗುವುದಿಲ್ಲವೆ? ಇನ್ನೊಬ್ಬರನ್ನು ಪೇಚಿಗೆ ಸಿಲುಕಿಸಿ ನಾವು ಸಂತೋಷ ಪಡುವುದು ಬಾಲಿಶವೆನಿಸುವುದಿಲ್ಲವೆ? ಸಂಪದದ ಓದುಗರು ಉತ್ತರವಿತ್ತಾರೇ?
ಇಂದಿನ ಯುವಜನಾಂಗ ನಮ್ಮ ಹಬ್ಬ ಹರಿದಿನಗಳನ್ನು ಬದಿಗೊತ್ತಿ, ಪ್ರೇಮದ ದಿನ, ಮೂರ್ಖರ ದಿನ, ಅಪ್ಪನ ದಿನ, ಅಮ್ಮನ ದಿನ ಹೀಗೆ ವಿವಿಧ ಬಗೆಯ ದಿನ (ಎಂದರೆ ತಿಥಿ - ಶ್ರಾದ್ಧ) ಆಚರಿಸುವುದನ್ನು ನೋಡಿದಾಗ ಮನಸ್ಸು ಕಸಿವಿಸಿಯಾಗುವುದಿಲ್ಲವೇ?
ಎ.ವಿ. ನಾಗರಾಜು.

- Login or register to post comments
- 398 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಪರಸ್ಪರ ಮೂರ್ಖರನ್ನು ಮಾಡುವಾಟ ಎಷ್ಟು ಸರಿ?
ಯಾಕಾಗ್ಬಾರ್ದು? ಯಾರಿಗೂ ಮೈ-ಕೈ ನೋವಾಗದಂತೆ ಸ್ವಲ್ಪ ಹಾಸ್ಯ ಮಾಡಿ ಮಜ ತಗೊಂಡರೆ ಏನು ತಪ್ಪು? ಏಲ್ಲದಕ್ಕೂ ನಮ್ಮ ಪರಂಪರೆ ಹಾಗಲ್ಲ-ಹೀಗಲ್ಲ ಅಂತ ಬೇಲಿ ಕಟ್ಟಿಕೊಳ್ಳುವುದು ಯಾಕೆ?
ಅಷ್ಟಕ್ಕೂ ಈ ರೀತಿ ತಮಾಷೆ ಎಲ್ಲಾನಮ್ಮ ಪರಂಪರೆ ಅಲ್ಲ ಎಂದರೆ ನಿಮಗೆ ತೆನಾಲಿ ರಾಮ, "ನಗೆಗಾರ" ನಯಸೇನ ಮುಂತಾದವರು ಗೊತ್ತಿಲ್ಲ್ ಎಂದೇ ಹೇಳಬೇಕು.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಪರಸ್ಪರ ಮೂರ್ಖರನ್ನು ಮಾಡುವಾಟ ಎಷ್ಟು ಸರಿ?
ಹೌದಲ್ವ
ಅಲ್ಲದೆ ತೆನಾಲಿರಾಮ ಏಪ್ರಿಲ್ ೧ ರವರೆಗೂ ಕಾದಿರುತ್ತಿದ್ದಂತಿಲ್ಲ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಪರಸ್ಪರ ಮೂರ್ಖರನ್ನು ಮಾಡುವಾಟ ಎಷ್ಟು ಸರಿ?
ತಾವು ದಿನಾ ಟಿ.ವಿ.ಯಲ್ಲಿ ಬರುವ 'ಕುರಿಗಳು ಸಾರ್ ಕುರಿಗಳು', ಮಕ್ಮಲ್ ಟೋಪಿ ಇತ್ಯಾದಿ ಸೀರಿಯಲ್ಗಳನ್ನು ನೋಡಿಲ್ಲ ಕಾಣುತ್ತದೆ.
ಎಲ್ಲಾ ಸೀರಿಯಲ್ ಗಳೂ ನಮ್ಮನ್ನು ಖ ಖ ಖ ಮಾಡುವವೇ.
ಎಲ್ಲಾ ರಾಜಕಾರಣಿಗಳೂ " " "
ಎಲ್ಲಾ ವ್ಯಾಪಾರಿಗಳೂ " " "
ಎಲ್ಲಾರು ದಿನಾ ಖಖಖ ಮಾಡುತ್ತಿದ್ದಾರೆ ಸಾರ್.
ಆದರೆ ಎಪ್ರಿಲ್ ೧ ಹಾಗಲ್ಲ. ಎಲ್ಲರೂ ಜಾಗರೂಕರಾಗಿದ್ದಾಗಲೂ ಅವರನ್ನು(ತಮ್ಮವರನ್ನೇ) ಪೇಚಿಗೆ ಸಿಲುಕಿಸುವುದರ ಮಜವೇ ಬೇರೆ. ಆ ಕ್ಷಣಕ್ಕೆ ಬೇಸರವಾದರೂ ನಂತರ ಆಗಾಗ ನೆನೆಸಿ ಖುಷಿ ಪಡುವರು.
ಅದು ಕುರಿಗಳು,ಮಕ್ಮಲ್ ಟೋಪಿ ತರಹ ಜನಕ್ಕೆ ಹಿಂಸೆ ಆಗಬಾರದು ಅಷ್ಟೆ.
ಟಿ.ವಿ ೯ ನಲ್ಲಿ- ಕೃಷ್ಣ ಮುಖ್ಯಮಂತ್ರಿ ಅಭ್ಯರ್ಥಿ,ಧರ್ಮಸಿಂಗ್ ಜಮ್ಮು ಕಾಶ್ಮೀರದ ರಾಜ್ಯಪಾಲ..ಇತ್ಯಾದಿ ನ್ಯೂಸ್ ನೋಡಿ ನಕ್ಕೂ ನಕ್ಕೂ ಸುಸ್ತಾಯ್ತು. ಎಂದಾದರೂ ನ್ಯೂಸ್ ಗೆ ನಗುವ ಚಾನ್ಸ್ ಸಿಗುವುದಾ?
ಇದೇ ರೀತಿ 'ಸಂಪದದ ಕೊನೆಯ ದಿನಗಳು' ಒಳ್ಳೆ ಐಡಿಯ.ನಿಮ್ಮ ಪ್ರತಿಕ್ರಿಯೆಯೂ ಚೆನ್ನಾಗಿತ್ತು.
ಒಂದು ದಿನವಾದರೂ ನಮ್ಮಂತಹ ಖಖಖರಿಗೆ ಮೀಸಲಿರಲಿ.
ಗಣೇಶ.
ಉ: ಪರಸ್ಪರ ಮೂರ್ಖರನ್ನು ಮಾಡುವಾಟ ಎಷ್ಟು ಸರಿ?
ನೀವೆಲ್ಲ ಹೇಳುವುದರಲ್ಲೂ ನಿಜದ ತುಣುಕಿದೆ. ಆದರೆ ನಾಗರಾಜು ಅವರ ಮಾತಿನಲ್ಲಿರುವ ಗಂಭೀರ ತಧ್ಯವನ್ನು ಕಡೆಗಣಿಸುವಂತಿಲ್ಲ. ಯಾವ ತಮಾಷೆ ಯಾರನ್ನು ಎಷ್ಟು ಕಲಕಬಹುದು ಎಂಬ ಅರಿವಿಲ್ಲದೆ ವರ್ತಿಸುವುದರ ಬಗ್ಗೆ ನಾವು ಯೋಚಿಸಬೇಕು. ಇಂಥದ್ದೇ ವರ್ತನೆಯ ಮತ್ತೊಂದು ಮುಖ ನೋಡಿ!! ನಿನ್ನೆ ನನಗೆ ಪರಿಚಿತರಿಂದ ಬೆಳಿಗ್ಗೆ ತಿಂಡಿಯ ಹೊತ್ತಿನಲ್ಲಿ ಒಂದು ಎಸ್.ಎಂ.ಎಸ್. ಬಂತು. ಅದರಲ್ಲಿ "ವಾಜಪೇಯಿಯವರು ತೀರಿಕೊಂಡಿದ್ದಾರೆಂದು ತಿಳಿಸಲು ವಿಷಾದಿಸುತ್ತೇವೆ. ವಿವರ ಸುದ್ದಿಗಾಗಿ ಟಿ.ವಿ. ನೋಡಿ" ಎಂದಿತ್ತು. ನಮ್ಮ ಮನೆಯವರು ಇದು ಏಪ್ರಿಲ್ ಕುಚೇಷ್ಟೆ ಇರಬಹುದು ಎಂದು ಹೇಳಿದರೂ ದೇಶವಾಳಿದ ಹಿರಿಯರೊಬ್ಬರ ವಿಷಯದಲ್ಲಿ ಯಾರೂ ತಮಾಷೆ ಮಾಡಲಾರರು ಎಂದು ತಿಳಿದು ಟಿ.ವಿ. ಹಾಕಿದೆ. ನಮ್ಮ ಮನೆಯವರ ಅನುಮಾನ ಪೂರ್ತಿ ನಿಜವಾಗಿತ್ತು. ವಾಜಪೇಯಿಯವರು ಬದುಕಿರುವುದಕ್ಕೆ ಸಂತೋಷವಾದರೂ (ನಾನು ಬಿ.ಜೆ.ಪಿಯವನೂ ಅಲ್ಲ ಮತ್ತವರ ಅಭಿಮಾನಿಯೂ ಅಲ್ಲ) ಇಂಥ ತಮಾಷೆಗಳ ಉದ್ದೇಶದ ಬಗ್ಗೆ ಗಂಭೀರವಾಗಿ ಯೋಚಿಸುವಂತಾಯಿತು. ಕಹಿ ಸತ್ಯ ಹೇಳಿರುವುದಕ್ಕಾಗಿ ನಾಗರಾಜು ಅವರಿಗೆ ಧನ್ಯವಾದಗಳು.
ಉ: ಪರಸ್ಪರ ಮೂರ್ಖರನ್ನು ಮಾಡುವಾಟ ಎಷ್ಟು ಸರಿ?
ನನ್ನ ಅನಿಸಿಕೆಗಳಿಗೆ ಪ್ರತಿಕ್ರಿಯಿಸಿರುವುದಕ್ಕೆ ಧನ್ಯವಾದಗಳು. ನನಗೆ ತಿಳಿದಂತೆ ತೆನಾಲಿ ರಾಮಕೃಷ್ಣ, ನಯಸೇನ, ಬೀರಬಲ್ ಇವರೆಲ್ಲರೂ ಬುದ್ದಿವಂತರು. ವಿನಾಕಾರಣ ಯಾರನ್ನೂ ತಮಾಶಿ ಮಾಡಿ ಮಜ ತೆಗೆದುಕೊಂಡವರಲ್ಲ. ಯಾರಾದರೂ ತಮ್ಮನ್ನಾಗಲೀ, ತಮ್ಮನ್ನಾಳುತ್ತಿದ್ದ ರಾಜರನ್ನಾಗಲೀ ಮೂರ್ಖರನ್ನಾಗಿಸಲು ಬಂದರೆ, ಅದಕ್ಕೆ ಮಾರುತ್ತರವನ್ನು ಅದೇ ವರಸೆಯಲ್ಲಿ ನೀಡುತ್ತಿದ್ದರು. ತಮ್ಮ ದೊರೆಯೇ ಮೂರ್ಖತನವನ್ನು ತೋರಿದಾಗ, ಅದಕ್ಕೂ ಅವರು ಜಾಣ್ಮೆಯ ಉತ್ತರ ನೀಡಿ, ದೊರೆಯ ಅಜ್ಞಾನವನ್ನು ಹೋಗಲಾಡಿಸುತ್ತಿದ್ದರು. ಅವರು ನಡೆಸುತ್ತಿದ್ದುದು ಒಂದು ರೀತಿಯ ಮಾರಲ್ ಟೀಚಿಂಗ್. ಅವರಾಗಿಯೇ ಎಂದೂ ಯಾರನ್ನೂ ಮೂರ್ಖರನ್ನಾಗಿಸಿದ ಕಥೆಯನ್ನು ನಾನೆಲ್ಲೂ ಓದಿಲ್ಲ, ಕೇಳಿಲ್ಲ. ತಮ್ಮಲ್ಲಿ ಯಾರಿಗಾದರೂ ಈ ನನ್ನ ಅನಿಸಿಕೆಗಳಿಗೆ ವಿರುದ್ದವಾದ ಕಥೆಯೊಂದಾದರೂ ಗೊತ್ತಿದ್ದರೆ, ದಯವಿಟ್ಟು ತಿಳಿಸಿ.
ಅಲ್ಲದೆ, ಈ ಮೂರ್ಖರ ದಿನ ಹಾಗು ಇನ್ನಿತರ ದಿನಗಳು ಪಾಶ್ಚಿಮಾತ್ಯರ ಅಂಧಾನುಕರಣೆ ಎಂದೇ ನನ್ನ ಅನಿಸಿಕೆ. ವಿಶ್ವಕ್ಕೇ ನಾಗರಿಕತೆಯ ವಿಶ್ವವಿದ್ಯಾಲಯವಾಗಬಲ್ಲ ಭಾರತಕ್ಕೆ ಇವೆಲ್ಲಾ ಬೇಕೆ?
ಎ.ವಿ. ನಾಗರಾಜು
ಉ: ಪರಸ್ಪರ ಮೂರ್ಖರನ್ನು ಮಾಡುವಾಟ ಎಷ್ಟು ಸರಿ?
ಅಗಿಲೆನಾಗ್ ರ ಅಭಿಪ್ರಾಯ ನನಗೂ ಸರಿ ಎನ್ನಿಸಿತು. ನಾವೇಕೆ ಎಲ್ಲದರಲ್ಲೂ ಪಾಶ್ಚಾತ್ಯರನ್ನನುಸರಿಸುತ್ತೇವೆ? ಗುಲಾಮಗಿರಿಯ ಸಂಕೇತವೇ?ಇನ್ನೊಬ್ಬನನ್ನು ಮಂಗ ಮಾಡಿ ಮಜ ತೆಗೆದುಕೊಳ್ಲುವುದು ಎಷ್ಟು ಸರಿ? ಇವೆಲ್ಲಾ ವ್ಯರ್ಥಕಾಲಕ್ಷೇಪಗಳಷ್ಟೇ !
ಉ: ಪರಸ್ಪರ ಮೂರ್ಖರನ್ನು ಮಾಡುವಾಟ ಎಷ್ಟು ಸರಿ?
ಎ.ವಿ.ನಾಗರಾಜು ರವರ ಅಭಿಪ್ರಾಯಕ್ಕೆ ನನ್ನದೂ ಸಹಮತವಿದೆ. ಏಪ್ರಿಲ್ ಒಂದು ಮೂರ್ಖರ ದಿನ ಎಂದು ಬಾಲಿಶವಾದ ತಂತ್ರಗಳನ್ನು ಮಾಡುತ್ತಾ ಇತರರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುವವರೇ ನಿಜವಾದ ಮೂರ್ಖರು. ಮೂರ್ಖರ ದಿನ ಹೇಗೆ ರೂಢಿಗೆ ಬಂತು ಎಂದು ತಿಳಿದುಕೊಳ್ಳದಿರುವ ಮೂರ್ಖರು ಸುಮ್ಮನೇ ಅಂಧಾನುಕರಣೆ ಮಾಡಿ ಮೂರ್ಖರಾಗುತ್ತಿರುವುದನ್ನು ನೋಡಬಹುದು.