Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಕಾರಂತರ ಜೀವಂತ ಪಾತ್ರಗಳು -೫ (೩)

April 5, 2008 - 7:43am — csomsekraiah

ಇಷ್ಟಲ್ಲದೆ ’ ನಂಬಿದವರ ನಾಕ ನರಕ’ ದ ಎಲ್ಲ ಪಾತ್ರಗಳು ಜೀವದುಂಬಿ ನಿಲ್ಲುತ್ತವೆ .ವಾಗ್ದೇವಿಯ ತಂದೆ - ಬಡತನವೇ ಸಾಕಾರವೆತ್ತಂತಿರುವ ಶಂಕರಯ್ಯ ,ಸತ್ಯಭಾಮೆಯ ತಂದೆ ಸೋಮೇಶ್ವರಯ್ಯ, ಶಂಕರಯ್ಯನ ನೊಂದಸಂಸಾರಕ್ಕೆ ಅನನ್ಯವಾಗಿ ನೆರವಾಗಿ, ಅವನ ಬಡ ಮಕ್ಕಳನ್ನೂ ಮನೆ ತುಂಬಿಸಿಕೊಳ್ಳುವ ಎಂಭತ್ತರ ವೃದ್ದೆ ಸಿಂಗಾರಮ್ಮ , ಅತ್ಯಂತ ವಿಚಾರಶೀಲ ಮನಸ್ಸಿನ ಸತ್ಯಳ ಅಣ್ಣ ರಾಮಕೄಷ್ಣ , ಹೀಗೆ ಒಂದೊಂದೂ ಸಹ ಮರೆಯಲಾಗದ ಮನುಷ್ಯತ್ವದಿಂದ ಮೈದುಂಬಿರುವ ಪಾತ್ರಗಳು . ಇಡೀ ಕಾದಂಬರಿ ಓದುಗನ ಮನಸ್ಸನ್ನೇ ಮೃದುವಾಗಿಸಿ , ಸಂಸ್ಕರಿಸುವ ಗುಣವನ್ನು ಹೊಂದಿದೆ .

’ಧರ್ಮರಾಯನ ಸಂಸಾರ ’ ಹೆಣ್ಣಿನ ಸಂಕಷ್ಟಗಳ ಇನ್ನೊಂದು ರೂಪವನ್ನು ಅನನ್ಯವಾಗಿ ಚಿತ್ರಿಸುತ್ತದೆ .ಇಲ್ಲಿಯೂ ವಿಷಮ ದಾಂಪತ್ಯದ ಪರಿಣಾಮಗಳು ; ಗಂಡಿನ ಪಾಳೇಗಾರಿಕೆಯ ಮನೋಭಾವದಿಂದಾಗಿ ಅಸಹಾಯಕಳಾದ ಹೆಣ್ಣು ಚಿತ್ತವಿಕಾರಕ್ಕೊಳಗಾಗುವುದು , ಮುಂತಾದ ದಾಂಪತ್ಯದ ಸಮಸ್ಯೆಗಳ ಸರಮಾಲೆಯೇ ಇದೆ .

ನಾರಾಯಣ ಹೆಬ್ಬಾರರು ಶ್ರೀಮಂತರು ಮಾತ್ರವಲ್ಲ ನಿಷ್ಟುರ ವ್ಯವಹಾರಿ ,ವ್ಯವಹಾರದ ವಿಷಯದಲ್ಲಿ ಹೆಣ್ಣು ತಲೆಹಾಕುವುದಿರಲಿ ; ಇಣುಕಿ ನೋಡುವುದನ್ನೂ ಸಹಿಸದ ಊಳಿಗಮಾನ್ಯದ ಪಳೆಯುಳಿಕೆ ಅವರು .ಅವರ ಜೀವನದಲ್ಲಿ ಒನಪು ಒಯ್ಯಾರಗಳನ್ನು ತುಂಬಿದ ಚಂದು ಸಹ ಅವರ ನಿಷ್ಟುರತೆಗೆ ಹೆದರಿ ನಡುಗುತ್ತಾಳೆ .ಇನ್ನು ಕೈ ಹಿಡಿದ ಹೆಂಡತಿ ಮಹಾಲಕ್ಷ್ಮಿಯನ್ನು ಕೇಳುವವರಿ ಯಾರು ? ಎಷ್ಟೆಂದರೂ ನಾಲ್ಕು ಗೋಡೆಯ ನಡುವಣ ತೊತ್ತು ತಾನೇ ಕೈ ಹಿಡಿದವಳು . ಇಲ್ಲಿ ಚಂದು ಸಾಮಾನ್ಯ ಬೆಲೆವೆಣ್ಣಲ್ಲ; ಅವಳ ಮನಸ್ಸು ಬಹಳೇ ಎತ್ತರದ್ದು . ಅವಳ ಪಾಲಿಗೆ ಮಹಾಲಕ್ಷ್ಮಿಯಮ್ಮ ಅವಳ ಒಡಹುಟ್ಟಿದಳಿಗಿಂತ ಹೆಚ್ಚು . ಮಹಾಲಕ್ಷ್ಮಿಯಾದರೂ ಚಂದುವಿನ ಅಂತರಂಗವನ್ನು ಸರಿಯಾಗಿ ಗ್ರಹಿಸಿದವಳು . ಆದುದರಿಂದ ಈ ಎರಡು ಹೆಣ್ಣು ಜೀವಗಳ ನಿಷ್ಕಳಂಕ ಸ್ನೇಹ ವಿಶೇಷ ಅನುಭೂತಿಯಿಂದ ಕೂಡಿದುದು .

ನಾಯಕಸಾನಿಯಾದ ಚಂದುವಿಗೆ ಗೃಹಿಣಿಯಾದ ಮಹಾಲಕ್ಷ್ಮಿಯಂತಹವರ ಗಮನಕ್ಕೆ ಬಾರದ ಹೊರ ಜಗತ್ತಿನ ಅನೇಕ ವಿಷಯಗಳು ಗೊತ್ತಿರುತ್ತವೆ .ಆದುದರಿಂದಲೇ ಮಹಾಲಕ್ಶ್ಮಿಯ ಮುದ್ದಿನ ಮಗಳು ಸರಸ್ವತಿಯ ಮದುವೆ ಮಹಾಬಲನೊಡನೆ ಎಂದು ಗೊತ್ತಾಗುತ್ತಲೇ ಚಂದು ಮಮ್ಮಲ ಮರುಗತೊಡಗುತ್ತಾಳೆ . ಚಂದುವಿನ ಹತ್ತಿರದವರೂ ಚಂದುವಿನ ಕುಲದವರೂ ಆದ ಲಕ್ಷ್ಮಿ ಮತ್ತು ರಮಣಿಯರು , ಮಹಾಬಲನ ಪುರಾಣವನ್ನು ಬಿಚ್ಚಿಟ್ಟಾಗ ಅಂತಹ ಹದ್ದಿನ ಕೈಗೆ ಗಿಳಿಯಂತಹ ಸರಸ್ವತಿಯನ್ನು ಒಪ್ಪಿಸುವುದು ಅವಳ ಪಾಲಿಗೆ ಬೇಗುದಿಯ ಕೆಲಸವಾಗುತ್ತದೆ . ಆದರೆ ನಾರಾಯಣ ಹೆಬ್ಬಾರರಲ್ಲಿ ಈ ವಿಷಯವನ್ನು ತಿಳಿಸಿದರೆ ನಡೆಯುವ ಪರಿಣಾಮಗಳ ಬಗ್ಗೆ ಭಯಗ್ರಸ್ತೆಯಾಗುತ್ತಾಳೆ . ಆದರೂ ಮನಸ್ಸು ತಡೆಯದೆ ಮಹಾಲಕ್ಷ್ಮಿಯಮ್ಮನವರ ಮುಂದೆ ವಿಷಯವನ್ನು ತಿಳಿಸಿ ಹೇಗಾದರೂ ಮದುವೆಯನ್ನು ತಡೆಯಲು ಸೂಚಿಸುತ್ತಾಳೆ . ವಿಷಯವನ್ನು ತಿಳಿದು ಹೌಹಾರಿದ ಮಹಾಲಕ್ಷ್ಮಿ ಗಂಡನೊಡನೆ ಸೂಕ್ಷ್ಮವಾಗಿ ವಿಷಯವನ್ನು ತಿಳಿಸಲು ಪ್ರಯತ್ನಿಸಿದರೆ ಅದಕ್ಕೆ ಸಿಗುವ ಉತ್ತರ ಮಾತ್ರ " ಹೆಣ್ಣು ಅವಳ ಜಾಗದಲ್ಲಿ ಮಾತ್ರ ಅವಳು ಇರಬೇಕು , ಇಲ್ಲದ ಸಲ್ಲದ ಉಪದ್ವ್ಯಾಪ ಮಾಡುವುದಕ್ಕಲ್ಲ " ಎಂಬ ಉದ್ದಟ ಉತ್ತರ . ಹೆತ್ತ ಮಗಳ ಮದುವೆಯಂತಹ ಮುಖ್ಯ ಸಂದರ್ಭಗಳಲ್ಲೂ ಮಾತಾಡಲು ಬಾಯಿಲ್ಲದ ಹೆಣ್ಣು ಜನ್ಮಕ್ಕೆ ಮಹಾಲಕ್ಷ್ಮಿ ಮನಸ್ಸಿನಲಿಯೇ ಧಿಕ್ಕಾರ ಹಾಕುತ್ತಾಳೆ .ಪರಿಣಾಮ ಮಹಾಲಕ್ಷ್ಮಿಯ ಮೈಮೇಲೆ ಜಕ್ಕಣಿ ಬರುವುದು . ಆಗ ಮಾತ್ರ ಮಹಾಲಕ್ಷ್ಮಿಗೆ ಯಾರೆಂದರೆ ಯಾರೂ ಲೆಕ್ಕವಲ್ಲ . ನಾರಾಯಣ ಹೆಬ್ಬಾರರೂ ಹೆದರಿ ನಡುಗತಕ್ಕದ್ದೇ .

ಅತ್ಯಂತ ಮುಗ್ಧಳಾಗಿ ತಾಯಿಯ ನೆರಳಲ್ಲಿ ಬೆಳೆದ ಸರಸ್ವತಿಗೆ ತಾನು ಬಂದು ಸೇರಿದ ಜಾಗ ಮಾತ್ರ ಹುಲಿಯ ಗುಹೆ ಎಂಬುದು ತಿಳಿಯಲು ತಡವಾಗಲಿಲ್ಲ .ತಾನು ಸೇರಿರುವ ಜಾಗ , ಜನ ವಿದೂರವಾದ ದಟ್ಟಡವಿ ಎಂಬುದು ಅವಳ ಭಯ ಬೆಳೆಯಲು ಕಾರಣವಾಗುತ್ತದೆ .ಮದುವೆಯಾಗಿ ಕೈ ಹಿಡಿದ ಗಂಡನ ವಿಕೃತ ಮನಸ್ಸು ಅವಳಲ್ಲಿ ಅಸಹ್ಯ ಹುಟ್ಟಿಸುತ್ತದೆ ; ಅವನ ಕ್ರೌರ್ಯ ಅವಳನ್ನು ಭೀತಿಯಿಂದ ತತ್ತರಿಸುವಂತೆ ಮಾಡುತ್ತದೆ . ನಡೆಯುವ ಒಂದೊಂದು ಘಟನೆಗಳು - ನಾಗಿಯ ಸಾವು ,ಪಶುಗಳ ಮೇಲಿನ ಹಿಂಸೆ , ನಾಯಿಯ ಮೈಗೆ ಮತಾಪು ಕಟ್ಟಿ ಬೆಂಕಿ ತಗುಲಿಸಿ , ಭಯದಿಂದ ಚೀರಾಡುವ , ಅದರ ಆಕ್ರಂದನದಲ್ಲಿ ಸಂತೋಷ ಕಾಣುವ ಗಂಡನ ಕಿರಾತ ಪ್ರವೃತ್ತಿ - ಎಲ್ಲವೂ ಆಕೆಯನ್ನು ದಿಙ್ಮೂಢಳನ್ನಾಗಿಸುತ್ತವೆ .ಒಂದು ದಿನ ನನ್ನನ್ನೂ ಈ ನಾಯಿಯನ್ನು ಕೊಂದಂತೆ ಕೊಲ್ಲಲು ಹೇಸುವ ಜನ ಇವರಲ್ಲ, ಎಂದು ಎಣಿಸಿ ನಡುಗಿ ಹೋಗುತ್ತಾಳೆ .ತನ್ನ ಕಣ್ಣೆದುರಿನಲ್ಲಿಯೇ ಬೆಲೆವೆಣ್ಣನ್ನು ಕರೆ ತಂದು ನಾಯಿಯಂತೆ ನೆರೆಯುವ ಗಂಡನ ನಡತೆಗೆ , ಮನಸ್ಸು ತಿರಸ್ಕಾರದ ಅಗ್ನಿ ಕುಂಡವಾಗುತ್ತದೆ . ಇದೆಲ್ಲದರ ಪರಿಣಾಮ ಗಂಡ ಹೆಂಡತಿಯರು ಎಂದೂ ಸಂಧಿಸದ ಸಮಾನಾಂತರ ರೇಖೆಯಾಗುತ್ತಾರೆ . ಇವಳಂತಹ ಹೆಣ್ಣಿನ ರೂಪದ ಕಲ್ಲನ್ನು ಮಹಾಬಲ ಕಡೆಗಣಿಸಿಯೇಬಿಡುತ್ತಾನೆ .ಅವಳ ಪಾಲಿಗೆ ಅದೊಂದು ಮಹಾ ವಿಮೋಚನೆ .

ಇಂಥಲ್ಲಿಗೆ ಬಂದು ಸೇರುವವನು ನಾಗಪ್ಪಯ್ಯ . ಅದು ತನ್ನ ಮನೆತನದ ಮತ್ತು ದುರ್ಗತಿಗೆ ಕಾರಣನಾದ ಕ್ರೂರಿ , ನಾರಾಯಣ ಹೆಬ್ಬಾರರ ಮಗಳ ಮನೆ !ಎಂಬುದು ತಿಳಿದಾಗ , ಅವನ ಮನಸ್ಸು ಸೇಡಿಗೆ ಹಾತೊರೆಯುತ್ತದೆ . ಪ್ರತಿ ಕ್ಷಣದಲ್ಲಿ ಅವನ ಮನಸ್ಸು ಹಂಬಲಿಸುವುದು ಸೇಡನ್ನು .

  • ವಿಮರ್ಶೆ
Ornamental seperator
  • Login or register to post comments
  • 151 hits
  • Email this page
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾರಂತರ ಜೀವಂತ ಪಾತ್ರಗಳು -೫ (೨)
  • ಕಾರಂತರ ಜೀವಂತ ಪಾತ್ರಗಳು - ೫ (೪)
  • ವಚನ ಚಿಂತನ: ೬: ಮನಸ್ಸು ಕೋತಿ
  • ಕಾರಂತರ ಜೀವಂತ ಪಾತ್ರಗಳು ೨ (ಮುಂದುವರಿದುದು)
  • ಕಾರಂತರ ಜೀವಂತ ಪಾತ್ರಗಳು ೨ (ಮತ್ತೂ ಮುಂದುವರೆದುದು)
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 16 ಅತಿಥಿಗಳು ಆನ್ಲೈನ್ ಇರುವರು.

ಆದರ್ಶವನ್ನು ತೀರಾ ಕೆಳಗಿರಿಸುವುದು ಅಪರಾಧ. ಆದರ್ಶವನ್ನೇ ಕೆಳಗಿಳಿಸಿ ಜಯಗಳಿಸುವುದಕ್ಕಿಂತ ಉಚ್ಚ ಆದರ್ಶವನ್ನಿರಿಸಿಕೊಂಡು ಅಸಫಲಗೊಳ್ಳುವುದೇ ಮನುಷ್ಯನಿಗೆ ಶೋಭದಾಯಕ

— ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator