ಕಾರಂತರ ಜೀವಂತ ಪಾತ್ರಗಳು - ೫ (೪)
( ವಿದ್ಯುತ್ ಪೂರೈಕೆಯ ಕಡಿತದಿಂದ ಅಪೂರ್ಣವಾಗಿದ್ದ ಲೇಖನದ ಉಳಿದ ಭಾಗವನ್ನು ಇಲ್ಲಿ ಸೇರಿಸಿದೆ )
ಒಂದು ವಿಚಿತ್ರ ಸನ್ನಿವೇಶದಲ್ಲಿ , ಹೊಳೆಯಲ್ಲಿ ಮೀಯುತ್ತಿದ್ದ ಸರಸ್ವತಿಯನ್ನು ಕಂಡು , ಅದೇ ಹೊಳೆಯಲ್ಲಿ ಅವಳನ್ನು ಮುಳುಗಿಸಿ ಕೊಲ್ಲಲು , ಈ ನಾಗಪ್ಪಯ್ಯ ಹೊಂಚು ಹಾಕುತ್ತಾನೆ .ಅದೂ ಸಂಜೆಯ ಸಂಧ್ಯೆಯ ಸೂರ್ಯನ ಹೊನ್ನ ಕಿರಣಗಳು , ತೊಯ್ದ ಸರಸ್ವತಿಯ ಕಾಂತಿಯನ್ನು ಇಮ್ಮಡಿಸಿದ ಸಮಯದಲ್ಲಿ . ಕೊಲ್ಲಲು ಮನಸ್ಸು ಹಿಂದೇಟು ಹಾಕುತ್ತಿದ್ದಾಗಲೇ ; ಹೊರಳಿ ನೋಡಿದ ಅವಳಿಗೆ ಇವನು ಬಂದು , ಮಾರು ದೂರದಲ್ಲಿ ನಿಂತಿರುವುದು ಗೊತ್ತಾಗುತ್ತದೆ. ವಿಸ್ಮಿತಳಾಗಿ ಅವನ ಬಗ್ಗೆ ವಿಚಾರಿಸಿದಾಗ ,ಅವನು ಸತ್ಯವನ್ನೇ ಹೇಳುತ್ತಾನೆ .ತನ್ನ ಅಪ್ಪನಿಂದ ಅವನ ಕುಟುಂಬಕ್ಕಾದ ಅನ್ಯಾಯಕ್ಕೆ ನೊಂದ ಅವಳು , ತನ್ನನ್ನು ಕೊಲ್ಲಲು ಆಹ್ವಾನಿಸುತ್ತಾಳೆ ." ತಾನು ಸತ್ತು ಹತ್ತಾರು ವರ್ಷಗಳೇ ಆದವು ,, ಎನ್ನುತ್ತಾಳೆ . ತನಗೂ ಅಪ್ಪನ ಬಗ್ಗೆ ಇರುವ ದ್ವೇಷವನ್ನು ಬಹಿರಂಗ ಪಡಿಸುತ್ತಾಳೆ . ಸಮಾನ ದುಃಖಿಗಳಾದ ಎರಡು ಜೀವಗಳು ಭಾವ ಬಂಧುರತೆಯಲ್ಲಿ ಏಕವಾಗುತ್ತವೆ . "ಇಂದಿನಿಂದ ನಿನಗೆ ನಾನು , ನನಗೆ ನೀನು ರಕ್ಷೆ ,, ಎನ್ನುತ್ತಾಳೆ ಸರಸ್ವತಿ. ಈ ವಿಚಿತ್ರ ಸನ್ನಿವೇಶ ; ವಿಚಿತ್ರ ರೀತಿಯಲ್ಲಿ ಎರಡು ಮನಸ್ಸುಗಳನ್ನು ಎರಕವಾಗಿಸುತ್ತದೆ .
ಇಲ್ಲಿ ಯಾವುದು ದಾಂಪತ್ಯ ? ಅಬ್ಬರದಿಂದ ಗರ್ನಾಲು ಸಿಡಿಸಿ , ಲೋಕಕ್ಕೆಲ್ಲಾ ಕೇಳಿಸುವಂತೆ ಅಬ್ಬರದ ಬೊಬ್ಬೆ ಹೊಡೆದು , ಮನಸ್ಸನ್ನು ಬೇರಿರಿಸಿ ನಡೆಸಿದ ಬಣ್ಣದ ಮದುವೆಯೋ ? ತಣ್ಣಗೆ ಪ್ರಕೃತಿಯ ಶಿಶುಗಳಾಗಿ ಅದರ ಆಣತಿಯಂತೆ , ಸದ್ದಿಲ್ಲದೆ ಮನಸ್ಸು ಬೆಸೆದು ಜೀವನದಲ್ಲಿ ಜೊತೆಯಾಗಿ ಕಷ್ಟ ಸುಖಗಳನ್ನು ಎದುರಿಸುವ ಮನಸ್ಸು ಮಾಡಿದ ಸಹಜ ನಡೆಯೋ ? ಎನ್ನುವುದು ’ ’ಧರ್ಮರಾಯನ ಸಂಸಾರ’ ದ ಪ್ರಶ್ನೆ

- Login or register to post comments
- 160 hits
- Email this page





RSS: