ಸರ್ವರಿಗೂ, ’ಯುಗಾದಿ ’,”ಯುಗಾದಿ ಪಂಡುಗ ’, ’ ಗುಡಿಪಾಡ್ವ ’ ಹಬ್ಬದ ಶುಭಾಶಯಗಳು !
ಯುಗಾದಿ ಹಬ್ಬದ ಆಚರಣೆ :
ಚಾಂದ್ರಮಾನ ರೀತ್ಯ ಯುಗಾದಿಯನ್ನು ಆಚರಿಸುವವರು, ಚೈತ್ರ ಶುಕ್ಲ ಪ್ರತಿಪತ್ ತಾ. ೦೭-೦೪-೨೦೦೮ ನೆಯ ಸೋಮವಾರವೂ, ಹಾಗೂ ಸೌರಮಾನ ರೀತ್ಯ ಆಚರಿಸುವವರು, ಸೂರ್ಯನು ನಿರಯಣ ಮೇಷರಾಶಿ ಪ್ರವೇಶಿಸುವ ಪುಣ್ಯಕಾಲದ ದಿನ : ೧೩-೦೪-೨೦೦೮ ನೇ ರವಿವಾರ, ಯುಗಾದಿಹಬ್ಬವನ್ನು ಆಚರಿಸುತ್ತಾರೆ. ಆಂಧ್ರದವರೂ, ಸೋಮವಾರದಂದೇ ಯುಗಾದಿಯನ್ನು ಆಚರಿಸುತ್ತಾರೆ.
ಉಷಃಕಾಲದಲ್ಲಿ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ದೇವರ ಮಂಟಪವನ್ನು ಅಲಂಕರಿಸಿ, ಅಭ್ಯಂಜನವನ್ನು ಮಾಡಿ, ಸಂಧ್ಯಾವಂದನೆಗಳನ್ನು ನೆರವೇರಿಸಿ, ಶ್ರೀ ಮಹಾಗಣಪತಿ ಪೂಜಾ ಪೂರ್ವಕ, ನೂತನ ವರ್ಷದ ಪಂಚಾಂಗ ಸಹಿತ, ಕುಲದೇವತೆಯನ್ನು ಅರ್ಚಿಸಬೇಕು. ತದನಂತರ, ಬೇವು-ಬೆಲ್ಲಗಳನ್ನು ಭುಜಿಸಿ, ಸನ್ಮಿತ್ರರೊಡನೆಯೂ, ಸುಜನರುಗಳಳಿಂದ ಕೂಡಿರುವ ಸಭೆಯಲ್ಲಿ ದೈವಜ್ಞರು ಪಠನಮಾಡುವ "ಪಂಚಾಂಗ ಶ್ರವಣ," ವನ್ನು ಆಲಿಸಬೇಕು. ಬೇವು-ಬೆಲ್ಲವನ್ನು ಸಾಮಾನ್ಯವಾಗಿ ಮನೆಯ ಯಜಮಾನರು, ಮನೆಯವರಿಗೆಲ್ಲಾ ಕೊಡುವ ಪದ್ಧತಿ ಇದೆ. ಪರಿವಾರದವರು, ಪ್ರಸಾದವನ್ನು ಸೇವಿಸುವಾಗ, ಕೆಳಗಿನ ಶ್ಲೋಕವನ್ನು ಹೇಳಿ ಸೇವಿಸತಕ್ಕದ್ದು.
" ಶತಾಯುರ್ವತ್ರದೇಹಾಯ ಸರ್ವಸಂಪತ್ಕರಾಯಚ.
ಸರ್ವಾರಿಷ್ಠವಿನಾಶಾಯ ನಿಂಕಂದಳ ಭಕ್ಷಣಂ ".
ಅರ್ಥಾತ್, ನೂರು ವರ್ಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲಾರಿಷ್ಟನಿವಾರಣೆಗಾಗಿಯೂ ಬೇವು-ಬೆಲ್ಲ ಸೇವನೆ ಮಾಡುತ್ತೇನೆ. ಎಂದು ಹೇಳಿ ಸೇವಿಸಬೇಕು.
ಆಸ್ತಿಕರ ಗಮನಕ್ಕೆ :
ದೃಗ್ಗಣಿತ ಪಂಚಾಂಗ ರೀತ್ಯ ತಾ. ೦೬-೦೪-೨೦೦೮ ನೇ ರವಿವಾರ * ಅಮಾ. ೭-೪೫ (ಬೆ ೯-೨೫) ಉಪರಿ ಚೈತ್ರ ಶುಕ್ಲ ಪ್ರಥಮಾ ೫೧-೫೦ ( ಬೆ. ಝಾ. ೬-೦೯) ಬಂದಿರುವುದರಿಂದ ದೃಗ್ಗಣಿತ ರೀತ್ಯ ತಾ. ೦೬-೦೪-೨೦೦೮ ನೇ ಭಾನುವಾರ ಚಾಂದ್ರಮಾನ ಯುಗಾದಿಯಾಗುತ್ತದೆ. ಮಹಾರಾಷ್ಟ್ರದಲ್ಲಿ, " ಗುಡಿಪಾಡ್ವ," ಹಬ್ಬವನ್ನು ಭಾನುವಾರ, ಅಂದರೆ, ಈ ದಿನ, ೦೬-೦೪-೨೦೦೮ ರಂದು, ಆಚರಿಸುತ್ತಿದ್ದಾರೆ.
-ಪಂಚಾಂಗಕರ್ತರು : ಒಂಟಿಕೊಪ್ಪಲ್, ಪಂಚಾಂಗ ಮಂದಿರದ, ಮೈಸೂರು ಪಂಚಾಂಗ. [೧೨೨ ನೆಯ ವರ್ಷದ ಪ್ರಕಟಣೆ]

- Login or register to post comments
- 354 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಸೂರ್ಯ ಗ್ರಹಣ ಮತ್ತು ಯುಗಾದಿ ಹಬ್ಬ ತಾ|| ೧೯.೦೩.೨೦೦೭
- "ಚಾಂದ್ರಮಾನ ಉಗಾದಿಯ" ಶುಭಾರಂಭವಾಗಿದೆ.
- ಎಲ್ಲಾ ಸಂಪದಿಗರಿಗೂ ’ಶ್ರೀ ಸರ್ವಜಿತ್ ಸಂವತ್ಸರ” ದ ಹಾರ್ದಿಕ ಶುಭಾಶಯಗಳು !
- ಎಲ್ಲರಿಗೂ ವ್ಯಯ ಸಂವತ್ಸರದ 'ದೀಪಾವಳಿ'ಯ ಹಾರ್ದಿಕ ಶುಭಾಷಯಗಳು !
- ಯೂರೋಕಪ್ ಫುಟ್ಬಾಲ್ -೨೦೦೮ ರ ಗ್ರೂಪ್ ಮಟ್ಟದಲ್ಲಿನ (ನಾಕ್ ಔಟ್ ) ಪಂದ್ಯಗಳ ಫಲಿತಾಂಶಗಳು, ಹಾಗೂ ಮುಂದೆ ನಡೆಯಲಿರುವ ಸೆಮಿ-ಫೈನಲ್, ಮತ್ತು ಫೈನಲ್ !


RSS:
ಪ್ರತಿಕ್ರಿಯೆಗಳು
ಉ: ಸರ್ವರಿಗೂ, ’ಯುಗಾದಿ ’,”ಯುಗಾದಿ ಪಂಡುಗ ’, ’ ಗುಡಿಪಾಡ್ವ ’ ಹಬ್ಬದ ಶುಭಾಶಯಗಳು !
ವೆಂಕಟೇಶ್ ಅವರೆ,
ನಿಮ್ಮ ಲೇಖನದಲ್ಲಿ ನೀವು ಉದ್ಧರಿಸಿದ ಸಂಸ್ಕೃತಶ್ಲೋಕದಲ್ಲಿ ಸ್ವಲ್ಪ ತಪ್ಪಿದೆ. ಹೀಗೆ ತಿದ್ದುಕೊಳ್ಳಬಹುದು.
ಶತಾಯುರ್ವಜ್ರದೇಹಾಯ, ಸರ್ವಸಂಪತ್ಕರಾಯ ಚ|
ಸರ್ವಾರಿಷ್ಠವಿನಾಶಾಯ ನಿಂಬಕಂ ದಲಭಕ್ಷಣಮ್||
ಉ: ಸರ್ವರಿಗೂ, ’ಯುಗಾದಿ ’,”ಯುಗಾದಿ ಪಂಡುಗ ’, ’ ಗುಡಿಪಾಡ್ವ ’ ಹಬ್ಬದ ಶುಭಾಶಯಗಳು !
ಆತುರದಲ್ಲಿ, ಶತಾಯುರ್ವತ್ರದೇಹಾಯ, ಎಂದು ತಪ್ಪಾಗಿ ಟೈಪಿಸಿದ್ದೇನೆ.
" ಶತಾಯುರ್ವಜ್ರದೇಹಾಯ "
-ಎಂದಿರಬೇಕಾಗಿತ್ತು. ತಪ್ಪಿಗೆ ಕ್ಷಮೆಯಿರಲಿ.
ನಾನು ಕೇಳಿದಂತೆ, ಯುಗಾದಿ ಪಂಡುಗ ವಚ್ಚಿಂದಿ, ಎಂದು ನಮ್ಮಗೆಳೆಯರು ಹೇಳಿದ್ದನ್ನು ಕೇಳಿದ್ದೆ.
ವೆಂ.
ಉ: ಸರ್ವರಿಗೂ, ’ಯುಗಾದಿ ’,”ಯುಗಾದಿ ಪಂಡುಗ ’, ’ ಗುಡಿಪಾಡ್ವ ’ ಹಬ್ಬದ ಶುಭಾಶಯಗಳು !
ಪಂಡುಗ ಅಂದ್ರೆ ಹಬ್ಬ.. ತೆಲುಗರು ಸಾಮಾನ್ಯ ಉಗಾದಿ ಅಂತಾರೆ.
ಉಗಾದಿ ಹಬ್ಬದ ಸವಿಹಾರಯ್ಕೆಗಳನಿಬರಿಗೂ!
ಉ: ಸರ್ವರಿಗೂ, ’ಯುಗಾದಿ ’,”ಯುಗಾದಿ ಪಂಡುಗ ’, ’ ಗುಡಿಪಾಡ್ವ ’ ಹಬ್ಬದ ಶುಭಾಶಯಗಳು !
ಚಂದ್ರದರ್ಶನ :
ಯುಗಾದಿಯ ದಿನ ಸಾಯಂಕಾಲ ಸೂರ್ಯಾಸ್ತವಾದ ಮೇಲೆ, ಸ್ವಲ್ಪಹೊತ್ತಿಗೆ, ಬಿದಿಗೆ ಚಂದ್ರನ ದರ್ಶನ ಅತಿ ಪ್ರಶಸ್ತ್ಯವಾದ ಕಾರ್ಯಗಳಲ್ಲೊಂದು. ಚಂದ್ರನ ಒಂದು ರೇಖೆಮಾತ್ರ ಆದಿನ ಅವಲೋಕಿಸಲು, ಲಭ್ಯವಾಗುತ್ತದೆ. ಇದರ ತರಿವಾಯ ಮನೆಯ ಹಿರಿಯರಿಗೆ, ನಮಸ್ಕಾರಮಾಡಬೇಕು. ಒಂದು ವೇಳೆ ಗಣಪತಿಹಬ್ಬದ ದಿನ ಅಕಸ್ಮಾತ್ ಚಂದ್ರದರ್ಶನ ಮಾಡಿದ್ದರೆ, ಯುಗಾದಿಯ ದಿನದ ಚಂದ್ರದರ್ಶನದಿಂದ ಅದರ ನಿವಾರಣೆ ಯಾಗುತ್ತದೆ. ಇದು ಶಾಸ್ತ್ರ ಸಮ್ಮತವಾದ ಮಾತು.