ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಮೈಸೂರು ರಮಾನಂದರ ’ನಾನಿನ್ನೂ ಸತ್ತಿಲ್ಲ’ ದ್ವಿತೀನ ನಾಟಕ ಪುಸ್ತಕದ ಬಿಡುಗಡೆ

April 7, 2008 - 1:05pm — agilenag
ನಾನಿನ್ನೂ ಸತ್ತಿಲ್ಲ - ಸಾಮಾಜಿಕ ಕಳಕಳಿಯ ನಾಟಕ ಪುಸ್ತಕ

ಇತ್ತೀಚೆಗೆ ಅಂದರೆ ೦೪-೦೪-೨೦೦೮ರಂದು ಮೈಸೂರಿನಲ್ಲಿ ಮೈಸೂರು ರಮಾನಂದ್ ಮತ್ತು ಮೈಸೂರಿನ ವಿ. ಉದಯಕುಮಾರ್ ಅವರ ಜಂಟಿ ಲೇಖನದಲ್ಲಿ ತಯಾರಾಗಿರುವ ’ನಾನಿನ್ನೂ ಸತ್ತಿಲ್ಲ’ ಎಂಬ ಸಾಮಾಜಿಕ ಕಳಕಳಿಯ ನಾಟಕದ ಪುಸ್ತಕದ ಬಿಡುಗಡೆಯಾಯಿತು. ೧೯೮೪ರಲ್ಲಿ ಮೊದಲು ಪ್ರದರ್ಶನ ಕಂಡ ಈ ಸ್ವಯಂ ರಚನೆಯ ನಾಟಕವನ್ನು ಇದುವರೆಗೂ ಸಾವಿರದ ಮೇಲೆ ಪ್ರದರ್ಶನ ನೀಡಿರುವ ಈ ಇಬ್ಬರು ನಟರು ೨೫ವರ್ಷದ ನಂತರ ನಾಟಕವನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ತತ್ಸಂಬಂಧವಾಗಿ ಮೈಸೂರಿನ ಕಲಾಮಂದಿರ, ಇಲ್ಲಿ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ಡಾ. ಹಾಲತಿ ಸೋಮಶೇಖರ್, ಸಹಾಯಕ ನಿರ್ದೇಶಕರು, ಕ ಮತ್ತು ಸಂ ಇಲಾಖೆ ಇವರು ವಹಿಸಿದ್ದರು. ಡಾ|| ಎನ್.ಎನ್. ಪ್ರಹ್ಲಾದ್, ಹಿರಿಯ ಉಪನ್ಯಾಸಕರು, ರೀಜನಲ್ ಇನ್ಸ್ ಟಿಟ್ಯೂಟ್ ಆಫ಼್ ಎಜುಕೇಷನ್, ಮೈಸೂರು ಇವರು ನಡೆಸಿಕೊಟ್ಟರು. ಎ.ವಿ. ನಾಗರಾಜು, ವಿಶ್ರಾಂತ ಬ್ಯಾಂಕ್ ವರಿಷ್ಠಾಧಿಕಾರಿ, ಲೇಖಕರು, ಸಾಮಾಜಿಕ ಸಾಹಿತ್ಯಿಕ ಚಿಂತಕರು ಇವರು ಪುಸ್ತಕ ಪರಿಚಯವನ್ನು ವಿಶಿಷ್ಠರೀತಿಯಲ್ಲಿ ಮಾಡಿಕೊಟ್ಟರು. ಪ್ರೊ. ಹೆಚ್.ಎಸ್. ಉಮೇಶ್, ಪ್ರಾಂಶುಪಾಲರು, ಶಾರದಾವಿಲಾಸ ಕಾಲೇಜು ಮತ್ತು ರಂಗ ಕರ್ಮಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪುಸ್ತಕ ಪರಿಚಯದ ವಿಶಿಷ್ಠತೆ ಎಂದರೆ, ಪರಿಚಯವನ್ನು ಪದ್ಯರೂಪದಲ್ಲಿ ಮಾಡಿಕೊಟ್ತುದು. ನೀವೇ ಓದಿ ನೋಡಿ:

"ನಾನಿನ್ನೂ ಸತ್ತಿಲ್ಲ"ವೆಂಬೀ ನಾಟಕ ಪುಸ್ತಕ
ಹೊತ್ತಿದೆ ಇಪ್ಪತ್ತೈದು ವರುಷಗಳ ಅನುಭವದ ಮಸ್ತಕ
ಎಂಬತ್ನಾಕರಲ್ಲಿ ಕಂಡ ಮೊದಲ ಪ್ರದರ್ಶನ
ಇಂದಿಗೂ ಪ್ರಸ್ತುತತೆ ಕಳೆದುಕೊಂಡಿಲ್ಲದಿರುವುದಕ್ಕಿದು ನಿದರ್ಶನ

ಈ ಪುಸ್ತಕದಿ ಹಲವು ವಿಶೇಷಗಳೂ ಉಂಟು
ಇದಕೆ ಒಬ್ಬರಲ್ಲ, ಇಬ್ಬರು ಲೇಖಕರ ನಂಟು
ಮೈಸೂರಿಗರೇ ಅದ ಉದಯಕುಮಾರ್ ಮತ್ತು ರಮಾನಂದ
ಸಾವಿರ ಮಿರಿದ ಪ್ರದರ್ಶನ ನೀಡಿರುವುದೇ ಪ್ರೇಕ್ಷಕರಿಗೆ ಮಹದಾನಂದ

ಈರಯ್ಯನೆಂಬ ಬಡ ರೈತನೇ ಈ ನಾಟಕದ ನಾಯಕ
ತುತ್ತಿನ ಚೀಲವ ತುಂಬಲು ಅಹನ್ಯಹನಿ ಗೈಮೆಯೇ ಆತನ ಕಾಯಕ
ಮಂಕನಹಳ್ಳಿ ಅವನೂರು, ಅವನಿಗಿದ್ದ ಆಸೆಯು ಕೇವಲ ಒಂಚೂರು
ಪಿತ್ರಾರ್ಜಿತ ಭೂಮಿಯ ಒಡೆತನವು ಬದಲಾಗಲಿ ತನ್ಹೆಸರಿಗೆ ಮಂಜೂರು

ಎಡತಾಕುವನು ಸರಕಾರಿ ಕಚೇರಿಯ ಬಾಗಿಲುಗಳನು
ಎಣಿಸದೆ ದಿನಗಳನು, ಶಪಿಸದೆ ಅಧಿಕಾರಿಗಳನು
ಲಂಚದ ಮುಷ್ಥಿಗೆ ಸಿಲುಕಿದ ಬಡ ರೈತ, ಖಡತದಲ್ಲಿ ಸತ್ತ
ಭೂಮಿಯ ಒಡೆತನ ತನ್ಹೆಸರಿಗೆ ಬದಲಾಗದೆ ಕೊನೆಗೂ ಸೋತ

ನಾಟಕ ತೋರುವುದು ಅಧಿಕಾರಶಾಹಿಯ ಕ್ರೂರತೆ
ಕಚೇರಿಗಳ ಮೂಲೆ ಮೂಲೆಗಳಲ್ಲೂ ಹೊಕ್ಕಿಹ ಬ್ರಷ್ಟತೆ
ಬದುಕಿಹ ಬಡರೈತ ಈರಯ್ಯನ ಸಾವಿನ ಪತ್ರಿಕೆ
ತೋರುವುದು ಜಗಕೆ ನಮ್ಮಾಡಳಿತ ವ್ಯವಸ್ತೆಯ ಬಡಿವಾರಿಕೆ

ಪುಸ್ತಕದ ಭಾಷೆ ಇಹುದು ಸರಳ, ಸುಂದರ ಮತ್ತು ನೇರ
ಅಪಶಬ್ಧ ಯಾ ದ್ವಂದ್ವಾರ್ಥಕೆ ಬಲು ದೂರ
ನಗೆಯ ಲೇಪದ ಝಲುಕಿದ್ದರೂ ಕೂಡ
ಮನಸನು ಚಿಂತನೆಗೆ ಹಚ್ಚುವುದು ನೋಡ

ನಾಟಕ ಪ್ರಿಯರೆ, ಪ್ರೇಕ್ಷಕ ಬಂಧುಗಳೆ
ಕೊಳ್ಳಿರಿ, ಓದಿರಿ "ನಾನಿನ್ನೂ ಸತ್ತಿಲ್ಲ" ಪುಸ್ತಕವ
ಪುಸ್ತಕ ಕೊಂಡರೆ, ಅದು ಪುನರ್ಮುದ್ರಣ ಕಂಡರೆ
ಹೆಚ್ಚಿಸುವುದು ನಟ, ನಾಟಕಕಾರ ಉದಯಕುಮಾರ್, ರಮಾನಂದರ ಉತ್ಸಾಹವ

ಪುಸ್ತಕ ಬಿಡುಗಡೆಯ ನಂತರ ಮೈಸೂರು ವಿ. ಉದಯಕುಮಾರ್ ರಚಿತ "ಯಮಪಾಶ" ಎಂಬ ಪರಿಸರ ಪ್ರಜ್ಝೆಯನ್ನು ಉದ್ದೀಪನಗೊಳಿಸುವ ಸಾಮಾಜಿಕ ಕಳಕಳಿಯ ನಾಟಕವನ್ನು ಪ್ರಸ್ತುತ ಪಡಿಸಲಾಯಿತು.

  • ಮಾಹಿತಿ ಫಲಕ
~.~
  • Login or register to post comments
  • 215 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾನಿನ್ನೂ ಸತ್ತಿಲ್ಲ - ಸಾಮಾಜಿಕ ಕಳಕಳಿಯ ನಾಟಕ ಪುಸ್ತಕ
  • ಮೈಸೂರು ರಮಾನಂದರ ಕಾಣೆಯಾಗಿದ್ದಾನೆ ನಾಟಕ ಪುಸ್ತಕ
  • ಗೆಜ್ಜೆ ಹೆಜ್ಜೆ- ರಂಗಭೂಮಿ ಪತ್ರಿಕೆ - ರಘೋತ್ತಮ್ ಕೊಪ್ಪರ
  • ಪಂಡಿತ್ ಡಿ.ಎಸ್.ಗರೂಡರ ಪುಸ್ತಕ ಬಿಡುಗಡೆ
  • ಚಿಕಾಗೋ ದಲ್ಲಿ "ವಸಂತ ಸಾಹಿತ್ಯೋತ್ಸವ" - ಹಾಸ್ಯಹೊನಲಿನ ಕಾರ್ಯಕ್ರಮ.
Syndicate content

ಲೇಖಕರು

agilenag's picture

ಪೂರ್ಣ ಹೆಸರು
A.V. Nagaraju

ಪರಿಚಯ

I am a retired (VRS) Bank Officer. I have a flair for writing in Kannada as well as English.

Recently, I along with the help of my family members released a book on Family Tree of our family, commencing from 1700 AD. The book was acclaimed by many well known historians and writers like Prof. Suryanatha Kamath, Horeyala Doreswamy and Babu Krishnamurthy. Late Mathighatta Krishnamurthy who has given foreword to the book has called it as a unique contribution to Kannada literary world.

Another achievement is renovation of a 1200 year old Udbhava Kalleshwara Temple at Belavadi, Chikkamagalur Dist, Karnataka and that too was appreciated many luminaries like Sri Gowrishankar, Administrator, Shringeri Sharada and the like.

I am working presently on the Editorial Board of GEJJEHEJJE Monthly Theatre Magazine.

I also undertake translation of legal, technical and literary works from Kannada to English and vice-versa.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 39 ಅತಿಥಿಗಳು ಆನ್ಲೈನ್ ಇರುವರು.


ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator