ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಶ್ವಾನ ಮಹಾಸಭೆಗೆ ಕರೆಯೋಲೆ

April 8, 2008 - 9:17pm — agilenag
ಶ್ವಾನ ಸಮಾವೇಶ

ನಮ್ಮದು ಬನಶಂಕರಿ ಮೂರನೆ ಹಂತದ ಶ್ವಾನ ಕ್ಷೇಮಾಭಿವೃದ್ಧಿ ಸಂಘ. ನಾವಿಲ್ಲಿ ಬಹಳ ವರ್ಷಗಳಿಂದ ವಾಸವಾಗಿದ್ದು, ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಅದನ್ನು ವಿವರವಾಗಿ ಚರ್ಚಿಸಿ ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಲು ಈ ಸಭೆಯನ್ನು ಕರೆದಿದ್ದೇವೆ.
ಸಮಯ: ಮಧ್ಯರಾತ್ರಿ, ಎಂದರೆ ಸುಮಾರು ಹನ್ನೆರಡು ಗಂಟೆ
ಸ್ಥಳ: ಬನಶಂಕರಿ ಮೂರನೆ ಹಂತದ ಯಾವುದಾದರೊಂದು ಬೀದಿ
ಕಾರ್ಯಕ್ರಮ ವಿವರ: ಮೊಟ್ಟ ಮೊದಲಾಗಿ ನಮ್ಮ ಅತಿ ಚಿಕ್ಕ ಸದಸ್ಯರೊಬ್ಬರಿಂದ ಪ್ರಾರ್ಥನಾ ಗೀತೆ. (ಸದಸ್ಯರು ಅತಿ ಆರೋಹಣದಲ್ಲಿ ಹಾಡಿ ಪೊಲೀಸರನ್ನು ಆಕರ್ಶಿಸುವ ಪ್ರಯತ್ನ ಮಾಡಬಾರದೆಂದು ಈ ಮೂಲಕ ಕೋರಲಾಗಿದೆ. ಏಕೆಂದರೆ ಅದು ನಮ್ಮ ಮುಂದಿನ ಕಾರ್ಯಕ್ರಮಗಳ ಮೇಲೆ ವಿರುದ್ಧ ಪರಿಣಾಮ ಬೀರಬಹುದು)
ಎರಡನೆಯದಾಗಿ ನಮ್ಮ ನಾಯಿಕರಿಂದ ಎಂದರೆ ಮಿ. ಗಡವರಿಂದ ಸ್ವಾಗತ ಭಾಷಣ. ಇವರು ಹೆಚ್ಚು ಸಮಯ ತೆಗೆದುಕೊಳ್ಳದೆ ಎಲ್ಲರನ್ನೂ ಸ್ವಾಗತಿಸುವರು. ಅಕ್ಕ ಪಕ್ಕದ ಬಡಾವಣೆಯ ಶ್ವಾನ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಿಗೂ ಆಹ್ವಾನವನ್ನು ಈಗಾಗಲೇ ಕಳುಹಿಸಲಾಗಿದೆ. ಅತಿ ಹೆಚ್ಚು ಸದಸ್ಯರು ಸಕಾಲಕ್ಕೆ ಆಗಮಿಸಿ ಸಭೆಗೆ ಕಳೆಯನ್ನು ತರಬೇಕೆಂದು ಪ್ರಾರ್ಥನೆ.
ಮೂರನೆಯದಾಗಿ ನಮ್ಮ ಮುಂದಿರುವ ತೊಂದರೆಗಳ ಬಗ್ಗೆ ವಿವರವಾದ ಚರ್ಚೆ, ನಿವಾರಣೆಗೆ ಸೂಕ್ತ ನಿರ್ಧಾರಗಳು. ತೊಂದರೆಗಳು -
(೧)ನಮಗೆ ನಮ್ಮದೆ ಆದ ಸ್ಥಳಾವಕಾಶವಿಲ್ಲ. ಬೆಳಗಿನ ಹೊತ್ತು ನಾವು ತಲೆ ಎತ್ತಿ ತಿರುಗಲಾಗುತ್ತಿಲ್ಲ. ರಾತ್ರಿಯಲ್ಲಿ ಪೊಲೀಸರ ಕಾಟ. ಚಿಕ್ಕವರು ದೊಡ್ಡವರೆನ್ನದೆ ನಮ್ಮ ಸದಸ್ಯರುಗಳಿಗೆ ಒದೆತ ಬೀಳುತ್ತಿರುವುದನ್ನು ನಾವುಗಳು ತೀವ್ರವಾಗಿ ಖಂಡಿಸಬೆಕು.
(೨) ಯಾವುದೇ ಭೀತಿ ಇಲ್ಲದೆ ನಡು ಮಧ್ಯಾನ್ಹದಲ್ಲಿಯೂ ಹೆಣ್ಣು ನಾಯಿ ತಲೆ ಎತ್ತಿ ತಿರುಗುವಂತಾಗಬೇಕು. ಇದಕ್ಕಾಗಿ ನಾವು ನಮ್ಮ ಬದ್ಧ ದ್ವೇಶಿಗಳಾದ ಎಸ್.ಪಿ.ಸಿ.ಎ, ಕೃಪಾ ಇತ್ಯಾದಿ ಸರಕಾರೇತರ ಸಂಸ್ಥೆಗಳ ವಿರುದ್ಧ ಹೋರಾಡಬೇಕು.
(೩) ಬಡಾವಣೆಯ ಉದ್ದಾರದ ಹೆಸರಿನಲ್ಲಿ ನಮಗೆ ಸಿಕ್ಕುತ್ತಿದ್ದ ಅನ್ನಕ್ಕೆ ಕಲ್ಲು ಹಾಕುತ್ತಿರುವುದನ್ನು ಖಂಡಿಸಬೇಕು. ಬೆಂಗಳೂರು ಮಹಾನಗರ ಪಾಲಿಕೆಯವರು ನಡೆಸುತ್ತಿರುವ ಮನೆ ಮನೆ ಬಾಗಿಲಿಂದ ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯವನ್ನು ವಿರೋಧಿಸಬೇಕು. ಮನೆಯ ಹೆಂಗಸರು ಮನೆಯ ಕಸ ಕಡ್ಡಿಗಳನ್ನು ಬೀದಿ ಬದಿಯಲ್ಲಿ ಎಸೆಯಲು ಪ್ರೋತ್ಸಾಹಿಸಬೇಕು. ಮಕ್ಕಳು ಮನೆಯೊಳಗಿನ ಟಾಯ್ಲೆಟ್ಟಿಗೆ ಹೋಗದೆ ಬೀದಿ ಬದಿಯಲ್ಲಿ ತಮ್ಮ ಕೆಲಸ ಮುಗಿಸಲು ಹೆಚ್ಚು ಹೆಚ್ಚು ಪ್ರೋತ್ಸಾಹಿಸಬೇಕು. ಇದಕ್ಕೆ ಕೊಳಚೆ ಪ್ರದೇಶಗಳಲ್ಲಿ ನಮ್ಮ ಸದಸ್ಯರು ಹೆಚ್ಚು ಹೆಚ್ಚಾಗಿ ತಿರುಗಿ ಅರಿವು ಮೂಡಿಸಬೇಕು. ಮಕ್ಕಳ ಮೈ ನೆಕ್ಕಿ ಪ್ರೀತಿ ಗಳಿಸಬೇಕು.
(೪) ನಮ್ಮ ಸದಸ್ಯ ಸಂಖ್ಯೆಯ ಬೆಳವಣಿಗೆಯಾಗಬೇಕಾದರೆ, ಸಂತಾನೋತ್ಪತ್ತಿಯತ್ತ ನಮ್ಮ ಸದಸ್ಯರುಗಳು ಹೆಚ್ಚಿನ ಗಮನ ಹರಿಸಬೇಕು. ನಮ್ಮ ಸಂತಾನ ಹರಣ ನಡೆಸಿ, ಕಿವಿ ಕೊಚ್ಚುವ ಕಾರ್ಯವನ್ನು ತೀವ್ರವಾಗಿ ವಿರೋಧಿಸಬೇಕು. ಸಾಧ್ಯವಾದಲ್ಲಿ ಈ ಬಗ್ಗೆ ಸುಪ್ರೀಮ್ ಕೋರ್ಟಿಗೂ ಹೋಗುವ ತಯಾರಿ ನಡೆಸಬೇಕು.
(೫) ಇನ್ನೂ ಯಾವುದಾದರೂ ವಿಷಯವಿದ್ದರೆ, ಅಧ್ಯಕ್ಷರ ಅಪ್ಪಣೆಯ ಮೇರೆಗೆ ಚರ್ಚಿಸಬಹುದು.
ನೀವೂ ಬನ್ನಿ, ನಿಮ್ಮ ಸ್ನೇಹಿತರನ್ನೂ ಕರೆತನ್ನಿ.

  • ಲಲಿತ ಪ್ರಬಂಧ, ಹಾಸ್ಯ
~.~
  • Login or register to post comments
  • 720 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 8, 2008 - 9:45pm — ಶ್ರೀನಿಧಿ

ಉ: ಶ್ವಾನ ಮಹಾಸಭೆಗೆ ಕರೆಯೋಲೆ

ಶ್ರೀನಿಧಿ's picture

ಯಾಕೋ ನಿಮ್ಮ "ಹಾಸ್ಯ - ಲಲಿತ ಪ್ರಬಂಧ" ನಗಿಸುವಂತೆ ತೋರುತ್ತಿಲ್ಲ. ಬೇಸರ ತರುವಂತಿದೆ

ತಾವೇ ಹಾಸ್ಯ- ಅಣಕ-ತರಲೆ ನಮ್ಮ ಪರಂಪರೆಗೆ ಹೇಳಿಸಿದ್ದಲ್ಲ ಎಂದದ್ದು ನನ್ನ ನೆನಪು!

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 8, 2008 - 11:44pm — ಗಣೇಶ

ಉ: ಶ್ವಾನ ಮಹಾಸಭೆಗೆ ಕರೆಯೋಲೆ

ಗಣೇಶ's picture

ತಮ್ಮ ಹಾಸ್ಯ ಬರಹ ಚೆನ್ನಾಗಿದೆ.ಪುನಃ ಪುನಃ ಓದಿ ಖುಷಿಪಟ್ಟೆ.
ಹಾಗೆಯೇ ಶ್ರೀನಿಧಿಯ ಪ್ರತಿಕ್ರಿಯೆ ಸಹ ಸಮಯೋಚಿತ.

ನಾಗರಾಜು,ಶ್ರೀನಿಧಿ ಇಬ್ಬರಿಗೂ ನನ್ನಿ.
ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 9, 2008 - 9:31am — agilenag

ಉ: ಶ್ವಾನ ಮಹಾಸಭೆಗೆ ಕರೆಯೋಲೆ

agilenag's picture

ಪ್ರಿಯ ಶ್ರೀನಿಧಿಯವರೆ,
ತಮ್ಮ ಅನಿಸಿಕೆಯನ್ನು ನೇರವಾಗಿ ಹೇಳಿದ್ದಕ್ಕೆ ಧನ್ಯವಾದಗಳು. ಹಾಸ್ಯ ನನ್ನ ಪ್ರಾಥಮಿಕ ವಿಷಯಗಳಲ್ಲೊಂದು. ಹಾಗಾಗಿ ನಾನು ಹಾಸ್ಯವನ್ನು ಎಂದೂ ವಿರೋಧಿಸಿಲ್ಲ. ನನ್ನದೇ ಕೆಲವು ಹಾಸ್ಯ ಲೇಖನಗಳು ಈಗಾಗಲೆ ಸಂಪದದಲ್ಲಿ ಬೆಳಕು ಕಂಡಿವೆ.
ಇನ್ನು ತಾವು ತಿಳಿಸಿರುವುದು ನಾನು ’ಏಪ್ರಿಲ್ ಒಂದರಂದು ಜನರನ್ನು ಮೂರ್ಖರನ್ನಾಗಿಸುವ ಆಟ’ವನ್ನು ವಿರೋಧಿಸಿರುವುದರ ಬಗ್ಗೆ ಎಂದು ಭಾವಿಸುತ್ತೇನೆ. ಅಲ್ಲಿ ನಾವು ಇನ್ನೊಬ್ಬರನ್ನು, ಅದರಲ್ಲಿಯೂ ನಮ್ಮ ಹತ್ತಿರದ ಸ್ನೇಹಿತರು, ಬಂಧುಗಳನ್ನು ಮೂರ್ಖರನಾಗಿಸುವಾಟವನ್ನು ವಿರೋಧಿಸಿದ್ದೆನೇ ಹೊರತು, ಹಾಸ್ಯವನ್ನಲ್ಲ. ಹಾಸ್ಯವೇ ಬೇರೆ, ಮೂರ್ಖರಾಟವೇ ಬೇರೆಯೆಂದು ನನ್ನ ಅನಿಸಿಕೆ.
ಈ ಲೇಖನವನ್ನು ನಾನು ಹಾಸ್ಯದ ಲೇಪವನ್ನು ಕೊಟ್ಟು ಬರೆದಿದ್ದೇನೆಯೇ ಹೊರತು, ಕೇವಲ ಮನರಂಜನೆಗಾಗಿ ಅಲ್ಲ. ಸಾಲುಗಳ ಒಳ ಹೊಕ್ಕು ಹೂರಣವನ್ನು ನೋಡಿದರೆ, ನಮ್ಮ ಬೆಂಗಳೂರಿನಲ್ಲಿ ಬೀದಿ ನಾಯಿಗಳಿಂದಾಗುತ್ತಿರುವ ಅನಾಹುತಗಳ, ಅವುಗಳ ಕಡೆಗೆ ಸಂಬಂಧಿತ ಅಧಿಕಾರಿಗಳ ನಿರ್ಲಕ್ಷ್ಯ ಇತ್ಯಾದಿಗಳು ಕಣ್ಣಿಗೆ ಬೀಳುತ್ತವೆ. ಈ ಲೇಖನವನ್ನು ಬರೆಯುವಾಗ, ಅನ್ಯ ಕಾರ್ಯಗಳ ಒತ್ತಡ ಬಂದು ಪೂರ್ಣಗೊಳಿಸಲಾಗಲಿಲ್ಲ. ಆನಂತರ, ನಾನು ಅದನ್ನು ಸಂಪದದ ಓದುಗರಿಂದಲೇ ಬರೆಯಿಸಿದರೆ ಹೇಗೆಂದು ಯೋಚಿಸಿದ್ದೆ. ಇರಲಿ, ಇದು ಸಂಪದದ ಓದುಗರಿಗೆ ಬೋರೆನಿಸಿದರೆ, ಅಂತಹ ಸಾಹಸಕ್ಕೆ ಖಂಡಿತಾ ಕೈ ಹಾಕುವುದಿಲ್ಲ.
ಧನ್ಯವಾದಗಳು.
ಎ.ವಿ. ನಾಗರಾಜು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 9, 2008 - 12:11pm — ASHOKKUMAR

ಉ: ಶ್ವಾನ ಮಹಾಸಭೆಗೆ ಕರೆಯೋಲೆ

ASHOKKUMAR's picture

ಚೆನ್ನಾಗಿದೆ..
Smiling
ಸಂಪದದ ಓದುಗರಿಂದ ಬರೆಸುವುದು ಅಂದರೆ?
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 9, 2008 - 9:12pm — ಶ್ರೀನಿಧಿ

ಉ: ಶ್ವಾನ ಮಹಾಸಭೆಗೆ ಕರೆಯೋಲೆ

ಶ್ರೀನಿಧಿ's picture

ನಾನು ಸಂಪದದ ಓದುಗರ ಪ್ರತಿನಿಧಿಯಾಗಲೀ, ಸಂಪದವಾಗಲೀ ಅಲ್ಲ. ಸಾಮಾನ್ಯ ಒಬ್ಬ ಓದುಗ. ನೀವು ಲೇಖನಗಳನ್ನು ಬರೆಯುವುದು ನಿಮ್ಮ ಸಂತೋಷಕ್ಕೆ. ನನಗಾಗಿಯಾಗಲೀ, ಬೇರೆಯವರಿಗಾಗಲೀ ಅಲ್ಲ. ಆದರೆ ನನಗೆ ಬೇಸರ ಆಗಿದ್ದಕ್ಕೆ ೨ ಕಾರಣಗಳಿವೆ.

೧. ಲೇಖನದ ಟೈಮಿಂಗು - ಬೇರೆ ಗಂಭೀರ ವಿಷಯದ ಕರೆಯೋಲೆಗಳು ಸಂಪದದಲ್ಲಿ ಇದ್ದಾವೆ. ಮೊದಲ ಬಾರಿ ನಿಮ್ಮ ಲೇಖನ ಓದಿದಾಗ ಆ ಕರೆಯೋಲೆಗಳ ಅಣಕ ಎನ್ನಿಸಿತು. (ಒಂದು ರೀತಿಯಲ್ಲಿ ಕೆಲವರನ್ನು ನಾಯಿಗಳಿಗೆ ಹೋಲಿಸಿದ ಹಾಗೆ) ನಿಮ್ಮ ಉದ್ದೇಶ ಅದಲ್ಲದಿದ್ದರೆ ಅರ್ಥ ಮಾಡಿಕೊಳ್ಳದ ತಪ್ಪು ನನ್ನದು.
೨. ಇದೇ ರೀತಿಯ ಬೇರೆ ಲೇಖನಗಳು (ಬೀದಿ ನಾಯಿಗಳ ಸಂಘ ಇತರೆ) ಕಾರ್ಟೂನ್ಗಳು ಹಿಂದೆ (ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದಾಗ) ಬಂದಿವೆ. ಹೊಸತೇನೂ ಕಾಣಿಸಲಿಲ್ಲ.

ನಾನು ಸ್ವಲ್ಪ ನೇರವಾಗಿ ಖಡಕ್ಕಾಗಿ ಬರೆದಿದ್ದ್ದು ನಿಮ್ಮ ಮನಸ್ಸಿಗೆ ನೋವಾಗಲೀ ಎಂದಲ್ಲ. ನನಗೆ ಹಿಡಿಸಲಿಲ್ಲ ಎಂದಷ್ಟೇ. ನಿಮ್ಮ ಬೇರೆ ಹಾಸ್ಯ ಲೇಖನಗಳು ನನಗೆ ಸಂತಸ ನೀಡಿದೆ. ಯಾವುದು ಹಾಸ್ಯ ಅಲ್ಲ ಯಾವುದು ಸರಿಯಾದ ಹಾಸ್ಯ ಅಲ್ಲ ಎನ್ನುವುದು ಬೇರೆ ವಿಚಾರ ಆಗುತ್ತದೆ ಅಲ್ಲವೇ? ಆದರೂ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಮನ್ನಿಸಿ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 9, 2008 - 2:26pm — yebbram

ಉ: ಶ್ವಾನ ಮಹಾಸಭೆಗೆ ಕರೆಯೋಲೆ

yebbram's picture

'ಬೌ ಬೌ ಬಿರ್ಯಾನಿ' ಎಂಬ ಖಾದ್ಯವನ್ನು ಮಾಡುವದನ್ನಗಲಿ ಸೇವಿಸುವದನ್ನಾಗಲಿ ಬ್ಯಾನ್ ಮಾಡಬೇಕು ಎಂಬ ಠರಾವನ್ನು ಪಾಸ್ ಮಾಡಿ ಠಸ್ಸೆ ಹಾಕಿ ಧ್ರೃಡಿಕರಿಸಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಪದದಲ್ಲೀಗ ೧೦೦ಕ್ಕೂ ಹೆಚ್ಚು ಸದಸ್ಯರು!
  • ಗೌರವವೆಂಬ ಬಯಕೆ!! ಗೌರವವಿಲ್ಲ ಎಂಬ ನೋವು
  • ಶಿವರಾತ್ರಿ
  • ಮಂದಿರೆಯ ಸೀರೆ!
  • ಬೆಂಗಳೂರು ಸುಧಾರಿಸಲು ಸಹಾಯ ಮಾಡಿ
Syndicate content

ಲೇಖಕರು

agilenag's picture

ಪೂರ್ಣ ಹೆಸರು
A.V. Nagaraju

ಪರಿಚಯ

I am a retired (VRS) Bank Officer. I have a flair for writing in Kannada as well as English.

Recently, I along with the help of my family members released a book on Family Tree of our family, commencing from 1700 AD. The book was acclaimed by many well known historians and writers like Prof. Suryanatha Kamath, Horeyala Doreswamy and Babu Krishnamurthy. Late Mathighatta Krishnamurthy who has given foreword to the book has called it as a unique contribution to Kannada literary world.

Another achievement is renovation of a 1200 year old Udbhava Kalleshwara Temple at Belavadi, Chikkamagalur Dist, Karnataka and that too was appreciated many luminaries like Sri Gowrishankar, Administrator, Shringeri Sharada and the like.

I am working presently on the Editorial Board of GEJJEHEJJE Monthly Theatre Magazine.

I also undertake translation of legal, technical and literary works from Kannada to English and vice-versa.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮುಂದೇನಾಗಬಹುದು ???
  • ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
  • ಕತೆಗಾರ್ತಿ ದೊಡ್ಡಮ್ಮ
  • ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!
  • ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!

ಇತ್ತೀಚಿನ ಪ್ರತಿಕ್ರಿಯೆಗಳು

  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
  • girish.rajanal
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 4:25pm
  • harshavardhan v...
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:24pm
  • shashikannada
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 4:20pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:17pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:15pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 34 ಅತಿಥಿಗಳು ಆನ್ಲೈನ್ ಇರುವರು.


ದೊಡ್ಡ ಕಂಪನಿಯೊಂದಕ್ಕೆ ಕೆಲಸ ಮಾಡುವುದೆಂದರೆ ರೈಲು ಪ್ರಯಾಣಮಾಡಿದಂತೆ. ನೀವು ಅರವತ್ತು ಮೈಲು ವೇಗದಲ್ಲಿದ್ದರೂ ಅಥವಾ ರೈಲು ಅರವತ್ತು ಮೈಲು ವೇಗದಲ್ಲಿದ್ದರೂ, ನೀವು ಮಾತ್ರ ಕುಳಿತಿರಲೇ ಬೇಕು.

— ಜೆ. ಪಾಲ್ ಗೆಟ್ಟಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator