ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಮೈಸೂರು ರಮಾನಂದರ ಹೊಸ ನಾಟಕ ಕೃತಿ - ಕಾಣೆಯಾಗಿದ್ದಾನೆ

April 17, 2008 - 9:05pm — agilenag
ಮೈಸೂರು ರಮಾನಂದರ ಕಾಣೆಯಾಗಿದ್ದಾನೆ ನಾಟಕ ಪುಸ್ತಕ

ಮೈಸೂರು ರಮಾನಂದರು ಕಳೆದ ೨೫ ವರ್ಷಗಳಿಂದ ನಾಟಕ ರಂಗದಲ್ಲಿ ಚಟುವಟಿಕೆಯಿಂದಿದ್ದಾರೆ. ಅವರ "ಗೆಜ್ಜೆಹೆಜ್ಜೆ ರಂಗತಂಡ" ರಮಾನಂದರ ಕೃತಿಗಳು ಹಾಗು ಇನ್ನಿತರ ಲೇಖಕರ ನಾಟಕಗಳನ್ನು ರಂಗದಮೇಲೆ ತಂದು ಮೈಸೂರು ಮತ್ತು ಬೆಂಗಳೂರು ನಗರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಇತ್ತೀಚೆಗೆ ಅವರು ಗದಗ-ಬೆಟಗೇರಿ ಅವಳಿ ನಗರಗಳಿಗೂ ಲಗ್ಗೆ ಹಾಕಿ, ಹತ್ತು ದಿನಗಳ ಕಾಲ ಸತತವಾಗಿ ನಾಟಕಗಳನ್ನು ಪ್ರದರ್ಶಿಸಿ ರಂಗಪ್ರಿಯರ ಪ್ರಿಯರಾಗಿದ್ದಾರೆ.

ಮೈಸೂರು ರಮಾನಂದರು ತಮ್ಮದೇ ಕೃತಿಯಾಗಿರಲಿ, ಇತರರದೇ ಆಗಿರಲಿ, ನಾಟಕದ ಉದ್ದೇಶ ಸಮಾಜ ಸೇವೆ. ಸಾಮಾಜಿಕ ಕಳಕಳಿ ಅವರ ಪ್ರತಿಯೊಂದು ಪ್ರದರ್ಶನದಲ್ಲಿಯೂ ತಪ್ಪದೆ ಕಾಣಸಿಗುತ್ತದೆ. ಅವರ ಇತ್ತೀಚಿನ ಕೃತಿ "ಕಾಣೆಯಾಗಿದ್ದಾನೆ"ಯೂ ಇದಕ್ಕೆ ಹೊರತಾಗಿಲ್ಲ.

ನಾವು ದಿನಪತ್ರಿಕೆಗಳನ್ನು ನೋಡುತ್ತಿದ್ದರೆ ಕಡೇ ಪಕ್ಷ ವಾರಕ್ಕೆರಡು ಬಾರಿಯಾದರೂ ಯಾರಾದರೊಬ್ಬ ವ್ಯಕ್ತಿ ಕಾಣೆಯಾಗಿ ಹೋಗಿರುವ ಸುದ್ದಿಯನ್ನು ಓದಿಯೇ ತೀರುತ್ತೇವೆ. ಅದು ಗಂಡಸಾಗಿರಬಹುದು, ಹೆಣ್ಣಾಗಿರಬಹುದು, ಮಕ್ಕಳಾಗಿರಬಹುದು, ವಯಸ್ಕರಾಗಿರಬಹುದು ಅಥವಾ ವಯೋವೃದ್ಧರಾಗಿರಬಹುದು. ಹೀಗೆ ಕಾಣೆಯಾದವರು ಹೇಗೆ ಕಾಣೆಯಾದರು, ಕಾಣೆಯಾಗಿ ಎಲ್ಲಿ ಹೋದರು ಎಂಬುದು ಸಂಶೋಧನಾತ್ಮಕವಾದ ವಿಚಾರವೂ, ವಿಚಾರ ಪ್ರಚೋದಕವೂ ಹೌದು.

ವ್ಯಕ್ತಿಯೊಬ್ಬರು ಕಾಣೆಯಾಗಿ ಹೋಗಲು ಹಲವಾರು ಕಾರಣಗಳಿರುತ್ತವೆ.

ಮನೆಯಲ್ಲಿ ಶಾಂತಿ ಸಿಗದೆ, ಯರಿಗೂ ಬೇಡವೆನ್ನಿಸಿಕೊಂಡ ವ್ಯಕ್ತಿ ರೋಸಿಹೋಗಿ ಸಂಸಾರದ ಜಂಜಾಟವೇ ಬೇಡವೆಂದು ಯಾರಿಗೂ ಹೇಳದ ದೂರದ ಸ್ಥಳಕ್ಕೆ ಹೊರಟು ಹೋಗಬಹುದು.

ಕೆಟ್ಟ ಸ್ನೇಹವನ್ನು ಬೆಳೆಸಿ, ಕಲಿಯಬಾರದ್ದನ್ನು ಕಲಿತು, ಮನೆಯವರಿಗೆ ತಲೆನೋವಾಗಿ ಪರಿಣಮಿಸಿ, ಕೊನೆಗೆ ಏನನ್ನೋ ಸಾಧಿಸಲು ಹೊರಟವನಂತೆ ಕಾಣೆಯಾಗಿ ಹೋಗಬಹುದು.

ಮನೆಯಲ್ಲಿ ದೊರಕುವ ಪ್ರೀತಿ ವಿಶ್ವಾಸಗಳು ಸರಿ ಹೊಂದಲಿಲ್ಲವೆಂದು ಹೊರಗಿನವರ ಪ್ರೀತಿಗೆ ಆಸೆ ಪಟ್ಟು, ಅವರೊಂದಿಗೆ ಯಾರಿಗೂ ತಿಳಿಯದ ಸ್ಥಳಕ್ಕೆ ಹೋಗಿ ತಮ್ಮ ಹೊಸ ಜೀವನ ನಡೆಸುವ ಆಸೆಯಿಂದ ಕಾಣೆಯಾಗಿ ಹೋಗಬಹುದು.

ಹೆಚ್ಚು ತಿಳುವಳಿಕೆ ಇಲ್ಲದ ಅಪ್ರಾಪ್ತರು, ಪುಟ್ಟ ಮಕ್ಕಳು ತಂದೆ ತಾಯಿಯರ ಅಥವಾ ಪೋಷಕರ ಅಜಾಗರೂಕತೆಯಿಂದಾಗಿ ಎಲ್ಲೋ ಕಳೆದು ಹೋಗಿ, ತಮ್ಮ ವಿಳಾಸವರಿಯದ್ದರಿಂದ ಕಾಣೆಯಾಗಿ ಹೋಗಬಹುದು.

ವೈಭವಯುತ ಜೀವನವನ್ನು ನಡೆಸುವ ವ್ಯಕ್ತಿಯನ್ನು ಗಮನಿಸಿದ ಸಮಾಜ ಕಂಟಕರು ಅವರಿಮ್ದ ಹಣ ಸೆಳೆಯುವ ಪ್ರಯತ್ನವೆಂದು ಅಂತಹ ವ್ಯಕ್ತಿಯನ್ನು ಅಪಹರಿಸಿ ಕಾಣೆಯಾಗಿಸಬಹುದು. ಹಣ ದೊರೆತರೂ ಸಹ ತಮ್ಮ ಕುರುಹು ತಿಳಿಯುತ್ತದೆಂದು ಅಥವಾ ಹಣ ದೊರಕದ ರೋಷದಿಂದ ಸೆರೆಹಿಡಿದು ತಂದ ವ್ಯಕ್ತಿಯನ್ನು ಕೊಲೆ ಮಾಡಿ ಕಾಣೆಯಾಗಿಸಬಹುದು.

ಮಿದುಳಿನ ಮೇಲಾಗುವ ಪರಿಣಾಮಗಳಿಂದ ವ್ಯಕ್ತಿಯ ಜ್ಞಾಪಕ ಶಕ್ತಿ ಕುಂದಿಹೋಗಿ ಎಲ್ಲಿಗೋ ಹೊರಟವರು ಹಿಂದಿರುಗಿ ಮನೆಗೆ ಬರಲಾಗದೆ ಕಾಣೆಯಾಗಿ ಹೋಗಬಹುದು.

ಈ ಎಲ್ಲಾ ಕಾಣೆಯಾಗಿ ಹೋಗಬಹುದಾದ ಪ್ರಸಂಗಗಳನ್ನು ಮೈಸೂರು ರಮಾನಂದರು ತಮ್ಮ ಇತ್ತೀಚಿನ ನಾಟಕ "ಕಾಣೆಯಾಗಿದ್ದಾನೆ"ಯಲ್ಲಿ ಅತ್ಯಂತ ಮನೋಜ್ಞವಾಗಿ ವಿಶ್ಲೇಷಿಸಿದ್ದಾರೆ. ಮೈಸೂರು ರಮಾನಂದರೆಂದರೆ ಕಾಮೆಡಿ, ಕಾಮೆಡಿಯೆಂದರೆ ಮೈಸೂರು ರಮಾನಂದ ಆಗಿರುವುದರಿಂದ, ಈ ನಾಟಕದುದ್ದಕ್ಕೂ ಹಾಸ್ಯದ ಝಳುಕು ಇದ್ದದ್ದೇ. ಆದರೆ ಅದು ಎಲ್ಲೂ ಅತಿರೇಕಕ್ಕೆ ಹೋಗದೆ, ವಿಷಯಕ್ಕೆ ನವಿರಾದ ನಗೆಲೇಪವನ್ನು ಹಚ್ಚಿರುವುದು ಈ ನಾಟಕದ ವಿಶೇಷತೆ.

ಮೈಸೂರು ರಮಾನಂದರ ಸಾಮಾಜಿಕ ಕಳಕಳಿ ಅವರ ಎಲ್ಲಾ ನಾಟಕಗಳಲ್ಲಿಯೂ ಹಾಸುಹೊಕ್ಕಾಗಿ ಮೂಡಿ ಬಂದಿದ್ದು, ಈ ನಾಟಕವೂ ಅದಕ್ಕೆ ಹೊರತಾಗಿಲ್ಲ. ಹಾಗಾಗಿ, ಅವರು ಕೇವಲ ವ್ಯಕ್ತಿಗಳು ಕಾಣೆಯಾಗಿರುವುದನ್ನು ಮಾತ್ರ ತಮ್ಮ ನಾಟಕದಲ್ಲಿ ಉದ್ದೇಶಿಸಿಲ್ಲದೆ, ಸಾಮಾಜಿಕವಾಗಿ ಮಾನವರಲ್ಲಿರಬೇಕಾದ ಹಲವಾರು ಗುಣಗಳು ಮಾಯವಾಗುತ್ತಿರುವುದನ್ನೂ ಸೂಕ್ಷ್ಮವಾಗಿ ತಿಳಿಸಿಕೊಟ್ಟು, ನೋಡುಗರನ್ನು ಚಿಂತನೆಗೆ ಹಚ್ಚಿದ್ದಾರೆ.

ಉದಾಹರಣೆಗೆ, ಇಂದಿನ ಸಮಾಜದಲ್ಲಿ ಹಿರಿಯರಿಗೆ ನೀಡಬೇಕಾದ ಗೌರವಾದರಗಳು ಕಿರಿಯರಲ್ಲಿ ಕಾಣೆಯಾಗಿರುವುದು, ಕಿರಿಯರನ್ನು ಕಂಡರೆ ಪ್ರೀತಿ ವಿಶ್ವಾಸಗಳು ಹಿರಿಯರಲ್ಲಿ ಕಾಣೆಯಾಗಿರುವುದು, ಪರೋಪಕಾರ ಮನೋಭಾವ ಕಾಣೆಯಾಗಿರುವುದು, ಕೆಲಸ ಕಾರ್ಯಗಳಲ್ಲಿ ಶ್ರದ್ಧೆ, ನಿಷ್ಠೆ ಕಾಣೆಯಾಗಿರುವುದು, ಅನ್ನದಾತನಲ್ಲಿರಬೇಕಾದ ನಿಷ್ಠೆ, ಗೌರವ, ಆಭಾರಿತನಗಳು ಕಾಣೆಯಾಗಿರುವುದು, ಗಂಡ ಹೆಂಡತಿಯಮೇಲೆ, ಹೆಂಡತಿ ಗಂಡನೆಮೇಲೆ ಇಡಬೇಕಾದ ನಂಬಿಕೆ ಕಾಣೆಯಾಗಿರುವುದು . . . ಹೀಗೆ ಕಾಣೆಯಾಗಿರುವುದರ ಪಟ್ಟಿ ನಾಟಕದುದ್ದಕ್ಕೂ ನೋಡುಗರ ಬೆನ್ನು ಬಿಡದೆ ಹಿಂಬಾಲಿಸುತ್ತದೆ.

ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸುಭಾಶ್ ಚಂದ್ರಬೋಸರು ಕಾಣೆಯಾಗಿರುವುದು, ಕಲ್ಕತ್ತಾದ ಮ್ಯೂಸಿಯಂನಿಂದ ಗುರುದೇವ ರವೀಂದ್ರನಾಠ ಠಾಗೂರರಿಗೆ ದೊರಕಿದ ನೊಬೆಲ್ ಪ್ರಶಸ್ತಿಯೇ ಕಾಣೆಯಾಗಿರುವುದು, ಮುನಿಸಿಪಾಲಿಟಿಯವರು ಹಣ ಖರ್ಚುಮಾಡಿ ಹಾಕಿಸಿದ ರಸ್ತೆಯೇ ಕಾಣೆಯಾಗಿರುವುದು . . . ಹೀಗೆ ಇಂದಿನ ರಾಜಕಾರಣದ ವ್ಯಥೆಯ ಕಥೆಯನ್ನೂ ವ್ಯಂಗ್ಯವಾಗಿ ತಿಳಿಸಿಕೊಟ್ಟಿರುವುದು, ನಮ್ಮದೇಶದ ಆಡಳಿತ ವ್ಯವಸ್ಥೆಯಲ್ಲಿರುವ ಲೋಪದೋಶಗಳನ್ನು ಎತ್ತಿ ತೋರಿಸಿ, ಎಚ್ಚರಿಕೆ ನೀಡುತ್ತಿರುವುದೂ ಈ ನಾಟಕದ ವಿಶೇಷತೆಯೇ ಸರಿ.

೧೫-೦೪-೨೦೦೮ನೇ ಮಂಗಳವಾರ ಸಂಜೆ ೬.೦೦ ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಕೃತಿಯ ಬಿಡುಗಡೆಯಾಯಿತು. ಸಿನೆಮಾ, ರಂಗಭೂಮಿ, ಕಿರಿತೆರೆಗಳ ಖ್ಯಾತ ನಗೆ ನಟ ಡಿಂಗ್ರಿ ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ತಮ್ಮ ಚಿಕ್ಕ ಚೊಕ್ಕ ಭಾಷಣದಲ್ಲಿ ಅವರು ರಂಗಭೂಮಿಯ ಕಲಾವಿದರ ಹಿತಕ್ಕಾಗಿ ಸರಕಾರ ಹಾಗು ಇನ್ನಿತರ ಸಂಘ ಸಂಸ್ಥೆಗಳು ತೆಗೆದುಕೊಳ್ಳಬೇಕಾದ ಕಾರ್ಯಕ್ರಮಗಳಬಗ್ಗೆ ತಿಳಿಸಿಕೊಟ್ಟರು. ವಿಶೇಷ ಅತಿಥಿಯಾಗಿ ಆಗಮಿಸಿದ್ದ ಅಂತರರಾಷ್ಟ್ರೀಯ ರಂಗ ಬೆಳಕು ತಜ್ಞ ವಿ. ರಾಮಮೂರ್ತಿಯವರು ನಾಟಕದ ಬಗ್ಗೆ ಮೈಸೂರು ರಮಾನಂದರು ತಮ್ಮೊಡನೆ ಚರ್ಚಿಸಿದ್ದು, ತಾವು ಥೀಮಿನ ಬಗ್ಗೆ ಆಕರ್ಶಿತವಾಗಿದ್ದನ್ನು ನೆನಪಿಸಿಕೊಂಡರು.

ನಂತರ ನಾಟಕದ ರಂಗಪ್ರಯೋಗವೂ ಯಶಸ್ವಿಯಾಗಿ ನಡೆಯಿತು. ಪ್ರೇಕ್ಷರೆಲ್ಲರ ಮೆಚ್ಚುಗೆಯಾದ ನಾಟಕ ಮುಗಿಯುವ ಹೊತ್ತಿಗೆ ರಾತ್ರಿ ೯.೦೦ ಗಂಟೆಯಾದದ್ದು ಯಾರಗಮನಕ್ಕೂ ಬರಲೇ ಇಲ್ಲ. ಹಲವಾರು ರಂಗಗಣ್ಯರು ಪ್ರೇಕ್ಷಕರ ಗುಂಪಿನಲ್ಲಿದ್ದು, ನಾಟಕದಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದರು.

ವರದಿ - ಎ.ವಿ. ನಾಗರಾಜು

  • ಮಾಹಿತಿ ಫಲಕ
~.~
  • Login or register to post comments
  • 832 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 17, 2008 - 9:09pm — agilenag

ಉ: ಮೈಸೂರು ರಮಾನಂದರ ಹೊಸ ನಾಟಕ ಕೃತಿ - ಕಾಣೆಯಾಗಿದ್ದಾನೆ

agilenag's picture

ಕಾಣೆಯಾಗಿದ್ದಾನೆ ನಾಟಕ ಪುಸ್ತಕದ ಪ್ರಕಾಶಕರು: ಮೈಸೂರು ರಮಾನಂದ್, ಗೆಜ್ಜೆಹೆಜ್ಜೆ ಪ್ರಕಾಶನ, ನಂ. ೬೫೦, ೧೦ನೆ ಎ ಕ್ರಾಸ್, ೩ನೇ ಮುಖ್ಯರಸ್ತೆ, ಮಹಾಲಕ್ಷ್ಮಿಪುರ, ೨ನೇ ಸ್ಟೇಜ್, ಬೆಂಗಳೂರು ೫೬೦ ೦೮೬ (ಮೊಬೈಲ್ ೯೪೪೮೦೭೦೪೮೪). ಪುಟಗಳು ೭೫+೪, ಬೆಲೆ ರೂ.೬೦/-
ಎ.ವಿ. ನಾಗರಾಜು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೈಸೂರು ರಮಾನಂದರ ಹೊಸ ಸಾಮಾಜಿಕ ನಾಟಕ - ಕಾಣೆಯಾಗಿದ್ದಾನೆ - ಒಂದು ವಿಶ್ಲೇಷಣೆ
  • ಮೈಸೂರು ರಮಾನಂದರ ಕಾಣೆಯಾಗಿದ್ದಾನೆ ನಾಟಕ ಪುಸ್ತಕ
  • ಮೈಸೂರು ರಮಾನಂದರ ’ನಾನಿನ್ನೂ ಸತ್ತಿಲ್ಲ’ ದ್ವಿತೀನ ನಾಟಕ ಪುಸ್ತಕದ ಬಿಡುಗಡೆ
  • ಗೆಜ್ಜೆ ಹೆಜ್ಜೆ- ರಂಗಭೂಮಿ ಪತ್ರಿಕೆ - ರಘೋತ್ತಮ್ ಕೊಪ್ಪರ
  • ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ-ಮೈಸೂರು ಉದ್ಘಾಟನೆ ಮತ್ತು ‘ಸಲ್ಲಾಪ’ ಪ್ರಕಾಶನದ ಪುಸ್ತಕಗಳ ಬಿಡುಗಡೆ ಸಮಾರಂಭ
Syndicate content

ಲೇಖಕರು

agilenag's picture

ಪೂರ್ಣ ಹೆಸರು
A.V. Nagaraju

ಪರಿಚಯ

I am a retired (VRS) Bank Officer. I have a flair for writing in Kannada as well as English.

Recently, I along with the help of my family members released a book on Family Tree of our family, commencing from 1700 AD. The book was acclaimed by many well known historians and writers like Prof. Suryanatha Kamath, Horeyala Doreswamy and Babu Krishnamurthy. Late Mathighatta Krishnamurthy who has given foreword to the book has called it as a unique contribution to Kannada literary world.

Another achievement is renovation of a 1200 year old Udbhava Kalleshwara Temple at Belavadi, Chikkamagalur Dist, Karnataka and that too was appreciated many luminaries like Sri Gowrishankar, Administrator, Shringeri Sharada and the like.

I am working presently on the Editorial Board of GEJJEHEJJE Monthly Theatre Magazine.

I also undertake translation of legal, technical and literary works from Kannada to English and vice-versa.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಯಾರ ಮುಡಿಗೆ ಸೌಂದರ್ಯ ಕಿರೀಟ...
  • ರಸ್ತೆ ನೀರಿನಿಂದ ಮಸ್ತ್ ಬೆಳೆ
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ‘ಇರುವೆ’ (ನೀ ಎಲ್ಲೆಲ್ಲೂ ಇರುವೆ)ಗಳು ಅಂತರ್ಜಲ ಮಟ್ಟ ಹೆಚ್ಚಿಸುವ ‘ಬ್ಯಾಂಕರ್’ಗಳು!
  • ‘ಸಂತೆ’ ಎಂಬ ವ್ಯಾವಹಾರಿಕ ಚೌಕಾಶಿಯ ‘ನಾಟಕ’!

ಇತ್ತೀಚಿನ ಪ್ರತಿಕ್ರಿಯೆಗಳು

  • sathishcv
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 8:40pm
  • ಮನಹ್ಪಠಲ
    ಉ: ಎಂ ಪಿ ಶಂಕರ್ - ಟಾಟಾ
    July 20, 2008 - 5:47pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:45pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:32pm
  • rasheedgm
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 4:49pm
  • anil.ramesh
    ಉ: ಧಾರವಾಡದ ನವಿಲೂರ ಕೆರೆಯಲ್ಲಿ ಆಹಾರ ಹೆಕ್ಕುತ್ತಿರುವ ಶಾಪಗ್ರಸ್ಥ ! ಟಿಟ್ಟಿಭ ಹಕ್ಕಿ ಕುಟುಂಬ. ಚಿತ್ರ: ಹರ್ಷವರ್ಧನ ಶೀಲವಂತ.
    July 20, 2008 - 11:49am
  • ASHOKKUMAR
    ಉ: ನನ್ನಜ್ಜನ ಬೆಚ್ಚಗಿನ ನೆನಪುಗಳು
    July 20, 2008 - 11:32am
  • Ananth.R
    ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
    July 20, 2008 - 11:22am
  • ರೇಖಾ
    ಉ: ಒ೦ದು ಬೆಚ್ಚನೆಯ ನೆನಪು..
    July 20, 2008 - 9:45am
  • Jayalaxmi.Patil
    ಉ: ಕತ್ತಲೆಯಿಂದ ಹೊರ ಬಂದ ಖಾದಿ
    July 19, 2008 - 11:01pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 35 ಅತಿಥಿಗಳು ಆನ್ಲೈನ್ ಇರುವರು.


"ಎಂಥ ನಾಡಿದು ಯೆಂಥ ಕಾಡಾಯಿತೋ"

— ರಂ. ಶ್ರೀ. ಮುಗಳಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator