Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಅಶ್ರು ಧಾರೆ..!!

April 18, 2008 - 10:14pm — yuvapremi

ಹೃದಯ ಮಿಡಿತವೆ ಅಳದಿರು,ಒಡಳ ಸಿಡಿತವೆ ಅಳದಿರು
ನಯನ ಧಾರೆಯೆ ಅಳದಿರು,ಮನದ ಮೌನವೆ ಅಳದಿರು
ಗೆಳತಿ ನನ್ನ ತೊರೆಯಲು, ನೀವು ಬಳಲಿ ಅಳದಿರಿ
ನೀವು ಬಳಲೀ ಅಳದಿರಿ..!!


ಪ್ರೇಮ ಪತ್ರವೆ ಅಳದಿರು,ಪ್ರಣಯ ಕವಿತೆಯೆ ಅಳದಿರು
ಭಾವ ಜೀವವೆ ಅಳದಿರು,ವಿರಹ ರಾಗವೆ ಅಳದಿರು
ಅವಳು ನನ್ನ ಮರೆಯಲು, ನೀವು ಮರುಗಿ ಅಳದಿರಿ
ನೀವು ಮರುಗೀ ಅಳದಿರಿ..!!


ವನದ ಹಸಿರೆ ಅಳದಿರು,ಸುಳಿವ ಗಾಳಿಯೆ ಅಳದಿರು
ಬಾನ ಮೆಘವೆ ಅಳದಿರು,ಹಾಡು ಹಕ್ಕಿಯೆ ಅಳದಿರು
ಅವಳು ಪರನ ವರಿಸಿಲು,ನೀವು ಶಪಿಸಿ ಅಳದಿರಿ
ನೀವು ಶಪಿಸೀ ಅಳದಿರಿ..!!


ಗುಡಿಯ ರಂಗನೆ ಅಳದಿರು,ಕೊಳಲ ಊದದೆ ಅಳದಿರು
ಉರಿವ ಧೊಪವೆ ಅಳದಿರು,ಬೆಳಗೊ ದೀಪವೆ ಅಳದಿರು
ನನ್ನ ಬಾಳು ಬಾವಿ ಸೇರಲು,ನೀವು ಬೆವತು ಅಳದಿರಿ
ನೀವು ಬೆವತೊ ಅಳದಿರಿ..!!

-ಯುವಪ್ರೇಮಿ

  • ಕಾವ್ಯ ಮತ್ತು ಕವನ
Ornamental seperator
  • Login or register to post comments
  • 488 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 19, 2008 - 5:34am — mahesha

ಉ: ಅಶ್ರು ಧಾರೆ..!!

mahesha's picture

ರೀ ಯುವಪ್ರೇಮಿಗಳೇ..

ತುಂಬಾ ಚನ್ನಾಗಿದೆ... ಕವನ ಮತ್ತು ಚಿತ್ರ................

ಒಡಳ ಅಲ್ಲ ಒಡಲ
ಮೆಘ ಅಲ್ಲ ಮೇಘ

"ನನ್ನ ಬಾಳು ಬಾವಿ ಸೇರಲು,ನೀವು ಬೆವತು ಅಳದಿರಿ
ನೀವು ಬೆವತೊ ಅಳದಿರಿ..!!"

ಇದು ಎಲ್ಲ ಜವ್ವನಿಗರಿಗೆ ಬರುವ ಮಾಮೂಲಿ ಯೋಚನೆ!!

[ ಪುರಂದರ ದಾಸ ಈ ಹಾಡು "ಆದದ್ದೆಲ್ಲ ಒಳಿತೇ ಆಯಿತು! ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು||]]

ಹೋದಳವಳು ಒಳಿತೇ ಆಯಿತು
ಹೊಸ ಹುಡುಗಿಯ ಹುಡುಕಲು ಇನ್ನೂ ಒಳ್ಳೇದಾಯಿತು || ಹೋದಳವಳು ಒಳಿತೇ ಆಯಿತು||

ಅವಳ ನೆನೆಪಲಿ ಯಾಕೆ ಕೊರಗು
ಅವಳ ಮೇಲೆ ಇನ್ಯಾಕೆ ಮರುಗು|| ಹೋದಳವಳು ಒಳಿತೇ ಆಯಿತು||

=====================================
ಮಾಯ್ಸ!

  • Login or register to post comments
  • link
  • Email this ಪ್ರತಿಕ್ರಿಯೆ
April 19, 2008 - 12:46pm — yuvapremi

ಉ: ಅಶ್ರು ಧಾರೆ..!!

yuvapremi's picture

ವಂದನೆಗಳು ಮಹೇಶ್ ರವರೆ,

ಹೌದು, ಕೆಲವು ತಪ್ಪುಗಳು ನನ್ನ ಗಮನಕ್ಕೆ ಬರಲಿಲ್ಲ.
ಆದರ ಅದನ್ನು ಸರಿಪಡಿಸುವ ಮುನ್ನ ಸಂಪದದಲ್ಲಿ ಸೇರಿಸಿ ಆಗಿತ್ತು.
ಆದ ಕಾರಣ ತಪ್ಪುಗಳನ್ನು ತಿದ್ದಲು ಆಗಲಿಲ್ಲ.

ನೀವು ಹೇಳಿದ್ದು ಅಪ್ಪಟ ಸತ್ಯ.

|| ಒಳಿತಾಯ್ತು ಅವಳು ಹೋಗಿ
ಇರಬಹುದು ಈಗ ನಾ ಹಾಯಾಗಿ
ಮಿಸ್ಸು ಕಾಲಿನ ಕಾಟವಿಲ್ಲ
ಮಿಸ್ಸು ಮಾಡುವ ಮಾತೊ ಇಲ್ಲ
ಒಳಿತಾಯ್ತು ಹೋಗಿ ಅವಳು
ಹೊಸತನ್ನು ಕೇಳಿದೆ ಈ ಕಂಗಳು ||

ಹೊಸದಾಗಿ ತಿದ್ದಿದ ಕವನ ಇಲ್ಲಿದೆ :

ಹೃದಯ ಮಿಡಿತವೆ ಅಳದಿರು,ಒಡಲ ಸಿಡಿತವೆ ಅಳದಿರು
ನಯನ ಧಾರೆಯೆ ಅಳದಿರು,ಮನದ ಮೌನವೆ ಅಳದಿರು
ಗೆಳತಿ ನನ್ನ ತೊರೆಯಲು, ನೀವು ಬಳಲಿ ಅಳದಿರಿ
ನೀವು ಬಳಲಿ ಅಳದಿರಿ..!!

ಪ್ರೇಮ ಪತ್ರವೆ ಅಳದಿರು,ಪ್ರಣಯ ಕವಿತೆಯೆ ಅಳದಿರು
ಭಾವ ಜೀವವೆ ಅಳದಿರು,ವಿರಹ ರಾಗವೆ ಅಳದಿರು
ಅವಳು ನನ್ನ ಮರೆಯಲು, ನೀವು ಮರುಗಿ ಅಳದಿರಿ
ನೀವು ಮರುಗಿ ಅಳದಿರಿ..!!

ವನದ ಹಸಿರೆ ಅಳದಿರು,ಸುಳಿವ ಗಾಳಿಯೆ ಅಳದಿರು
ಬಾನ ಮೇಘವೆ ಅಳದಿರು,ಹಾಡು ಹಕ್ಕಿಯೆ ಅಳದಿರು
ಅವಳು ಪರನ ವರಿಸಿಲು,ನೀವು ಶಪಿಸಿ ಅಳದಿರಿ
ನೀವು ಶಪಿಸಿ ಅಳದಿರಿ..!!

ಗುಡಿಯ ರಂಗನೆ ಅಳದಿರು,ಕೊಳಲ ಊದದೆ ಅಳದಿರು
ಉರಿವ ಧೊಪವೆ ಅಳದಿರು,ಬೆಳಗೊ ದೀಪವೆ ಅಳದಿರು
ಎನ್ನ ಬಾಳು ಬಿರಿಯಲು,ನೀವು ಕೊರಗಿ ಅಳದಿರಿ
ನೀವು ಕೊರಗಿ ಅಳದಿರಿ..!!

-ಯುವಪ್ರೇಮಿ

  • Login or register to post comments
  • link
  • Email this ಪ್ರತಿಕ್ರಿಯೆ
April 19, 2008 - 9:14pm — mahesha

ಉ: ಅಶ್ರು ಧಾರೆ..!!

mahesha's picture

ಇರಲಿ ಬಿಡಿ..

ನಿಂಮ ಬ್ಲಾಗಲ್ಲಿ ಹಾಕಿಕೊಂಡರೆ ತಿದ್ದಬೋದು
=====================================
ಮಾಯ್ಸ!

  • Login or register to post comments
  • link
  • Email this ಪ್ರತಿಕ್ರಿಯೆ
May 4, 2008 - 3:29pm — deepu.mk

ಉ: ಅಶ್ರು ಧಾರೆ..!!

deepu.mk's picture

ಯುವಪ್ರೆಮಿಗಳೇ...

ಒಳಿತಾಯ್ತು ಅವಳು ಹೋಗಿ
ಇರಬಹುದು ಈಗ ನಾ ಹಾಯಾಗಿ
ಮಿಸ್ಸು ಕಾಲಿನ ಕಾಟವಿಲ್ಲ
ಮಿಸ್ಸು ಮಾಡುವ ಮಾತೊ ಇಲ್ಲ
ಒಳಿತಾಯ್ತು ಹೋಗಿ ಅವಳು
ಹೊಸತನ್ನು ಕೇಳಿದೆ ಈ ಕಂಗಳು ||

ಎಂತಹ ಆತ್ಮವಾಂಚನೆ ನಿಮ್ಮದು.
ಮಹೇಶ್ ರವರ ಪ್ರತಿಕ್ರಿಯೆಗೆ ಮತ್ತ್ಯಾವುದೋ ವಚನಕೆ ಕರಗಿ ಬದಲಾಗುವ ಪ್ರೀತಿ ನಿಮ್ಮದಾಗಿದ್ದರೆ
ನಿಮ್ಮಲ್ಲಿ ಅಂತಹ ಭಾವ ತೀವ್ರತೆಯ ಕಾವ್ಯ ಸ್ಪುರಿಸುತ್ತಿರಲ್ಲಿಲ್ಲ.
ಹಾಗಿದ್ದರೆ ಹೇಳಿ...
ಎಸ್ಟು ಹುಡುಗಿಯರಿಗೆ ಮಿಸ್ ಕಾಲ್ ಕೊಟ್ಟಿದ್ದೀರಿ....
ನಿಮ್ಮ ಹುಡುಗಿಗೆ..ಮೆಸ್ಸೇಜು , ಮಿಸ್ಸಕಾಲ್ ಮಾಡ್ಬಹುದಿತ್ತು ಆನ್ನಿಸಿಲ್ವಾ...
ಆ ಭಾವನೆಯೇ...ನಿಮ್ಮನ್ನು ನಿಮ್ಮ ಪ್ರೇಮದಲ್ಲಿ..ತೋಯಿಸಿಲ್ಲಾವಾ...
ಮನುಷ್ಯನು ತನ್ನ ತೋರಿಕೆಯನ್ನು....ನಗ್ನ ಗೊಳಿಸಲು...
ಅಂತರಂಗವನ್ನು..ಅನಾವರನಗೊಳಿಸಲು...
ಆಹಂಕಾರವನ್ನು ತೊರೆದು ಶರಣಾಗಿ ಮಗುವಾಗಲು ...
ಆತ್ಮಾವಲೊಕನದ ಸಮಯದಲಿ ಸುರಿಯುವ ಮನಸಿನ ಆಂದೋಲನದ ವೇಗೊತ್ಕರ್ಶಕ್ಕೆ ಕಡಿವಾಣ ಹಾಕಿ ಶಾಂತಗೊಲಿಸುಲು ಪ್ರೀತಿಯಿಂದ ಮಾತ್ರ ಸಾದ್ಯ.
ಹಾಗೆ ನಿಮಗೆ ಮತ್ತೊಂದು ಸಲಹೆ. ಪ್ರೀತಿಗೆ ವಯಸ್ಸಾಗುವುದಿಲ್ಲ. ಹಾಗಾಗಿ ಯುವಪ್ರೆಮಿ...ಮುದುಕಪ್ರೆಮಿ ಎಂಬುದೆಲ್ಲ ಸುಳ್ಳು.

  • Login or register to post comments
  • link
  • Email this ಪ್ರತಿಕ್ರಿಯೆ
May 5, 2008 - 8:55am — mahesha

ಉ: ಅಶ್ರು ಧಾರೆ..!!

mahesha's picture

ದೀಪು ಹುಡುಗೀನ ಹುಡುಗಾನ?

=====================================
ಮಾಯ್ಸ!

  • Login or register to post comments
  • link
  • Email this ಪ್ರತಿಕ್ರಿಯೆ
May 5, 2008 - 11:51am — deepu.mk

ಉ: ಅಶ್ರು ಧಾರೆ..!!

deepu.mk's picture

ಅಲೋಚನೆ..ವಿವೇಚನೆ.... ಸ0ವೇದನೆಗಳಿರುವ ವ್ಯಕ್ತಿ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೈ ಕೊಟ್ಟ ಸಖಿ
  • ಶಾಪ..!
  • ಕನವರಿಕೆಯೊಳು ಕಂಡೆ ಕಳವಳವ..!!
  • ಬಾ ತಬ್ಬಿಕೋ :-)
  • ಮೊದಲ ಅನುಭವ
Syndicate content

ಲೇಖಕರು

yuvapremi's picture

ಪರಿಚಯ

ಮನದ ಮೌನವ ಮೆಲ್ಲನೆ ಸವಿಯೆ...!!
ಮೊಗದ ನಗೆಯನು ಹಂಚಿದರೆ ರುಚಿಯೆ..
ಮಾತದು ಮಲ್ಲಿಗೆಯ ನೆನೆಸುವಂತಿರಬೇಕು...!!
ಸ್ನೆಹದ ಸುಧೆಯನು ಸಧಾ ಸುರಿಸುತಿರಬೇಕು...
ನೋಟದ ಹಸಿ ನುಣುಪದು ಮನ ನಾಟಬೇಕು...
ಈ ಎಲ್ಲದರ ಒಡೆಯ ನಾನಾಗಬೇಕು...!!
-ಯುವಪ್ರೇಮಿ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !
  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 16 ಅತಿಥಿಗಳು ಆನ್ಲೈನ್ ಇರುವರು.

ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

— ಮ್ಯಾಥ್ಯೂ ಅರ್ನಾಲ್ಡ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator