ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?

April 19, 2008 - 4:39pm — Narayana

೨೦೦೧ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಕನ್ನಡಿಗರ ಸಂಖ್ಯೆ ಎಷ್ಟು ಗೊತ್ತಿದೆಯೇ?

ಒಟ್ಟು ಜನಸಂಖ್ಯೆ ೫.೨೮ ಕೋಟಿ

ಕನ್ನಡಿಗರು ೩.೪೮ ಕೋಟಿ (೬೬%)

ಉರ್ದು ಭಾಷಿಕರು ೫೫.೩೯ ಲಕ್ಷ

ತೆಲುಗರು ೩೬.೯೮ ಲಕ್ಷ

ಮರಾಠಿಗರು ೧೮.೯೨ ಲಕ್ಷ

ತಮಿಳರು ೧೮.೭೪ ಲಕ್ಷ

ಹಿಂದಿ ಭಾಷಿಕರು ೧೩.೪೪ ಲಕ್ಷ

ಮಲಯಾಳಿಗಳು ೭.೦೧ ಲಕ್ಷ

ಗುಜರಾತಿಗಳು ೧.೦೨ ಲಕ್ಷ

ಬೆಂಗಾಲಿಗಳು ೪೧,೨೫೬

ಒರಿಯಾ ಭಾಷಿಕರು ೧೬,೫೨೮

ಪಂಜಾಬಿ ೧೫,೫೭೨

ಸಿಂಧಿ ೧೪,೬೯೪

ಕರ್ನಾಟಕದವರೇ ಆಗಿದ್ದು ಬೇರೆ ಭಾಷೆ ಆಡುವವರು

ತುಳು ಭಾಷಿಕರು ೧೭ ಲಕ್ಷ

ಕೊಂಕಣಿ ಭಾಷಿಕರು ೭.೬೮ ಲಕ್ಷ

 

ನೆರೆ ರಾಜ್ಯಗಳಲ್ಲಿ ಕನ್ನಡಿಗರ ಜನಸಂಖ್ಯೆ

ಮಹಾರಾಷ್ಟ್ರ  ೧೨.೫೪ ಲಕ್ಷ

ತಮಿಳುನಾಡು ೧೦.೪೫ ಲಕ್ಷ

ಗೋವಾ ೭೪,೬೧೫

ದೆಹಲಿ ೧೦,೫೨೫

ಲಕ್ಷದ್ವೀಪ  ೩೯

 

ಆಧಾರ : Times Of India (ಮುಂಬಯಿ ಆವೃತ್ತಿ ) ಏಪ್ರಿಲ್ ೧೭,೨೦೦೮

 

  • ಭಾಷೆ-ಕನ್ನಡ
~.~
  • Login or register to post comments
  • 645 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 20, 2008 - 4:11pm — chiramshi

ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?

chiramshi's picture

ತುಂಬಾ ಉಪಯುಕ್ತ ಮಾಹಿತಿ ರೀ...
ಬಹುಶಃ ಬೆರೆ ಯಾವ ರಾಜ್ಯದಲ್ಲೂ ಇಸ್ಟೋಂದು ವೈವಿಧ್ಯತೆ ಇಲ್ಲ ಅಂದ್ಕೋತೀನಿ...

ಚಿ.ರಂ.ಶಿ.
------------------------------------------------------
ನೀನು ಅವನ ಸ್ಥಾನದಲ್ಲಿ ಯೋಚಿಸಿದರೆ, ಜಗಳಕ್ಕೆಲ್ಲಿದೆ ಜಾಗ???

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 21, 2008 - 1:36am — mahesha

ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?

mahesha's picture

Smiling

ತಮಿಳು ನಾಡಿನ ಮುಸ್ಲೀಮರು ತಮಿಳರೆಂದೇ ಗುರುತಿಸಿಕೊಳ್ಳೋದು, ಹಾಗೆ ಕೇರಳದವರು ಕೂಡ.. ಆದರೆ ಅವರು ಉರ್ದು ಬೆರೆಸಿದ ತಮಿಳು, ಮಳಯಾಳಿಯನ್ನೇ ಆಡುವುದು..

ಇನ್ನು ಕರ್ನಾಟಕದ ಮುಸ್ಲಿಮರ ಉರ್ದು, ಹಯಿದರಾಬಾದಿನ ಉರ್ದುಗಿಂತ ಎಶ್ಟು ಬೇರೆಯಾಗಿದೆ..

ಇನ್ನು ಕಾಸರಗೋಡಿನಲ್ಲಿ ಕನ್ನಡಿಗರು ಎಮ್ಮೆಲ್ಯೆಗಳಾಗಿ, ಕನ್ನಡದಲ್ಲಿ ಆಣೆ ತಗೊಳ್ತಾರೆ. ಸೊಲ್ಲಪುರದಲ್ಲಿ ಕನ್ನಡಿಗರು ಎಲೆಕ್ಶನ್ ಗೆದ್ದಿದ್ದಾರೆ....

ಇನ್ನು ಅನಂತಪುರ, ಕರ್ನೂಲು, ಮಂತ್ರಾಲಯ( ಇಲ್ಲಂತೂ ಬರೀ ಕನ್ನಡ ಬೋರ್ಡು), ರಾಯದುರ್ಗ, ಆದೋನಿಗಳಲ್ಲಿ ಎಶ್ಟು ಕನ್ನಡಿಗರಿದ್ದಾರೆ....

ಮಹಾರಾಶ್ಟ್ರದಲ್ಲಿ ಮರಾಟಿ ಮಂದಿ ಈಗ ಎಶ್ಟು ಪರ್ಸೆಂಟು? ಅಲ್ಲೂ ದೊಡ್ಡ ಹಿಂದಿ ಮತ್ತು ಉರ್ದು ಮುಸ್ಲಿಮರಿದ್ದಾರಲ್ಲ!!

ಕರ್ನಾಟಕ ತೆಂಕಣ ಜಿಲ್ಲೆಗಳಲ್ಲಿ ಕನ್ನಡಿಗರ ಸಂಕೆ ಹೆಚ್ಚು ಮಂಡ್ಯದಲ್ಲಿ ೯೬%. ಇನ್ನು ಬಾಗಲಕೋಟೆ, ಗದಗ, ಕೊಪ್ಪಳಗಳಲ್ಲಿ ಕನ್ನಡಿಗರು ತುಂಬಾ ಹೆಚ್ಚಿದ್ದಾರೆ ಎಂದು ನನ್ನ ಎಣಿಕೆ.. ಬರೀ ಗಡಿ ಜಿಲ್ಲೆಗಳಲ್ಲಿ ಬೇರೆ ನುಡಿಗರು ವಲಸೆ ಬಂದಿದ್ದಾರೆ..

ಅವರು ಬಂದು ಅಲ್ಲಿ ನೆಲೆಸಲು, ನಮ್ಮ ಹಿಸ್ಟರಿಯೇ ಓಸುಗರ.

ಬೆಳಗಾವಿ ಹಿಂದೆ ದೊಡ್ಡ ಪಟ್ಟಣ, ಅದಕ್ಕೆ ಹಲವು ನೆಲಗಳಿಂದ ವ್ಯಾಪಾರಿಗಳು, ಕೆಲಸಗಾರರು ಬಂದು ನೆಲೆಸಿದರು, ಹೀಗೆ ಬಳ್ಳಾರಿ(ಹಂಪೆ), ಬೀದರ( ನಿಜಾಮರ ಕಾಲದಲ್ಲಿ ದೊಡ್ಡ ಊರು), ಬಿಜಾಪುರ, ಬೆಂಗಳೂರು, ಮಂಗಳೂರು.... ಕಾರವಾರ ಕೂಡ( ಇದರ ಹೆಸರು ಇಜಿಪ್ಟಲ್ಲಿ ಸಿಕ್ಕಿದೆ ಅಲ್ವ)

ಹಿಂದಿನಿಂದಲೂ ಕನ್ನಡನೆಲದಲ್ಲಿ ಪೊೞಲು/ಹೊಳಲು/ಪಟ್ಟಣಗಳು ಹೆಚ್ಚು. ಪಟ್ಟಣಗಳೆಂದರೆ ಅಲ್ಲಿ ಬೇರೆ ನುಡಿಗಾರರು ಬಂದು ನೆಲೆಸಿರ್ತಾರೆ..
ಮಾದರಿಗೆ ಚನ್ನಯ್-ಅಲ್ಲಿ ತೆಲುಗರು ಹೆಚ್ಚು. ಹಯಿದರಾಬಾದಲ್ಲಿ ಉರ್ದು ಹೆಚ್ಚು.

ಕಂನಡಿಗರು ಇನ್ನು ಹೆಚ್ಚಾಗಬೇಕು.. ಕಂನಡಿಗರು ಹೆಚ್ಚು ಮಕ್ಕಳನ್ನು ಹಡೆಯಬೇಕು ಎಂಬ ಸಾರು ಏನ್ಗುರು ಬ್ಲಾಗು ಓದಿದ ನೆನೆಪು

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 21, 2008 - 5:17pm — vikashegde

ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?

vikashegde's picture

"ಹಿಸ್ಟರಿಯೇ ಓಸುಗರ" ಅಂದ್ರೆ ಏನು? ಅದೇನೋ ರೋಗವಿದೆಯಲ್ಲಾ ಹಿಸ್ಟೀರಿಯಾ ಅಂತ ಅದರ ಬಗ್ಗೆ ಹೇಳುತ್ತಿದ್ದೀರಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 21, 2008 - 8:55pm — Narayana

ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?

Narayana's picture

ಕರ್ನಾಟಕದಲ್ಲಿ ಇತೆರ ಭಾಷೆಗಳವರು ಇರುವುದಕ್ಕೆ ಕೆಲ ಐತಿಹಾಸಿಕ ಕಾರಣಗಳು ಇಂತಿವೆ:

ಮುಸ್ಲಿಮ್ ದೊರೆಗಳ ಆಡಳಿತ ( ದಕ್ಷಿಣದಲ್ಲಿ ಹೈದರಾಲಿ, ಟಿಪ್ಪುಸುಲ್ತಾನ್, ಅತ್ತ ಉತ್ತರದಲ್ಲಿ ಆದಿಲ್ಶಾಹಿ, ಬಹಮನಿ ನಂತರ ಹೈದರಾಬಾದಿನ ನಿಜಾಮ) - ಇದರಿಂದ ಉರ್ದು ಭಾಷಿಕರು ಜಾಸ್ತಿಯಾಗಿರಲಬಹುದು.

ಹಳೆಯ ಮೈಸೂರಿನಲ್ಲಿ ತಮಿಳರು - ಇದು ಮೈಸೂರು ಒಡೆಯರ ಕಾಲದಿಂದ ಆದದ್ದು. ದಿವಾನ್ ಶೇಷಾದ್ರಿ ಅಯ್ಯರ್‍ ಕಾಲದಿಂದ ಶುರುವಾಯಿತು ಅನ್ನುತ್ತಾರೆ. ಆಮೇಲೆ ತಮಿಳು ವಿರೋಧಿ ಹೊಗೆ ಶುರುವಾಗಿ Mysore for Mysorians ಅಂತ ಗಲಾಟೆ ಆಗಿತ್ತು ಅಂತ ಎಲ್ಲೋ ಓದಿದ್ದು.

ಉತ್ತರ ಕನಾಟಕದಲ್ಲಿ ಮರಾಠಿಗರು - ಉತ್ತರ ಕರ್ನಾಟಕದ ಒಂದು ಭಾಗ ಬ್ರಿಟಿಷರ ಕಾಲದಲ್ಲಿ ಮುಂಬಯಿ ಪ್ರೆಸಿಡೆನ್ಸಿಗೆ ಸೇರಿತ್ತು. ಆ ಕಾಲದಲ್ಲಿ ಮರಾಠಿಗರು ಬೇಕಾದಷ್ಟು ಜನ ಇಲ್ಲಿಗೆ ಬಂದಿರಬೇಕು. ( ಹಾಗೇ ಇಲ್ಲಿಂದ ನಮ್ಮವರು ಮುಂಬಯಿ ಸೇರಲಿಕ್ಕೂ ಬಹುಷಃ ಅದೇ ಕಾರಣ)

ಆಂಧ್ರ ಗಡಿಯಲ್ಲಿ ತೆಲುಗರು - ವಿಜಯನಗರದ ರಾಜರು ಕನ್ನಡ , ತೆಲುಗು ಎರಡನ್ನೂ ಪೋಷಿಸಿದರು. ಹಾಗಾಗಿ ಆ ಕಾಲದಲ್ಲಿ ತೆಲುಗರು , ಕನ್ನಡಿಗರು ಪರಸ್ಪರರ ನಾಡಿನಿಂದ ಅತ್ತಿತ್ತ ಹೋಗಿರಬಹುದು. ಅದಕ್ಕೇ ಬಳ್ಳಾರಿಯಲ್ಲಿ ತೆಲುಗರಿದ್ದರೆ ಆದೋನಿ , ಮಂತ್ರಾಲಯಗಳಲ್ಲಿ ಕನ್ನಡಿಗರಿದ್ದಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 21, 2008 - 9:37pm — hamsanandi

ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?

hamsanandi's picture

ಹಳೆಯ ಮೈಸೂರಿನ ತಮಿಳರ ಸಂಖ್ಯೆ ಮೈಸೂರಿನ ದಿವಾನರ ಕಾಲದಲ್ಲಿ ಹೆಚ್ಚಿದ್ದಿರಬಹುದಾದರೂ - ಸುಮಾರು ಅದಕ್ಕಿಂತ ಮೊದಲೇ (ರಾಮಾನುಜಾಚಾರ್ಯರ ಕಾಲದಿಂದಲೂ) ಇರಬಹುದಾದವರ ಸಂಖ್ಯೆಯೂ ಬಹಳಷ್ಟಿದೆ.

ಇವರಲ್ಲಿ ಹಲವರು ಮನೆಮಾತು ತಮಿಳು/ತಮಿಳಿನ ಉಪಭಾಷೆ ಆಗಿದ್ದರೂ, ನನಗೆ ತಿಳಿದಂತೆ, ತಮ್ಮನ್ನು ಕನ್ನಡಿಗರು ಎಂದುಕೊಳ್ಳುವುದೇ ಹೆಚ್ಚು.

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 21, 2008 - 11:13pm — Narayana

ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?

Narayana's picture

ನೀವು ಹೇಳಿದ್ದೂ ಸರಿ. ಉದಾಹರಣೆಗೆ ಸಂಕೇತಿಗಳು.

ಒಟ್ಟಿನಲ್ಲಿ ಕರ್ನಾಟಕದ ವಿವಿಧ ಭಾಷಿಕರ ಮೂಲವನ್ನು ಹುಡುಕಿ ಹೊರಟರೆ ಬಹಳ ಕುತೂಹಲಕಾರಿಯಾಗಿರಬಹುದು. Smiling

ನಾನು ಈ ಲೇಖನದಲ್ಲಿ ಉದ್ಧರಿಸಿದ TOI ಸುದ್ದಿಯ ಪ್ರಕಾರ ಭಾರತದ ಸಂವಿಧಾನದಲ್ಲಿ scheduled (ಮಾನ್ಯತೆ ನೀಡಿರುವ?) ೨೨ ಭಾಷೆಗಳನ್ನೂ ಆಡುವವರು ಕರ್ನಾಟಕದಲ್ಲಿದ್ದಾರಂತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 21, 2008 - 11:36pm — mahesha

ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?

mahesha's picture

Smiling ಹಂಸಾನಂದಿಗಳು ಸಂಕೇತಿಗಳೇ...

ಸಂಕೇತಿಗಳಿಗಿಂತ ಅಯ್ಯಂಗಾರೂ ಹೆಚ್ಚು ಅಂತ ನಂನ ಅನಿಸಿಕೆ..

ಸಂಕೇತಿಗಳು ಬರೀ ಹಾಸನದಲ್ಲಿ ಹೆಚ್ಚಿ ಇದ್ರೆ, ಅಯ್ಯಂಗಾರರು ಹಾಸನ, ಮಯಿಸೂರು, ಮಂಡ್ಯ, ಬೆಂಗಳೂರುಗಳಲ್ಲೀ ಇದ್ದಾರೆ(ಇದ್ದರು)
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 21, 2008 - 10:25pm — mahesha

ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?

mahesha's picture

ಒಪ್ಪತಕ್ಕ ಮಾತು!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 21, 2008 - 8:33pm — ವೈಭವ

ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?

ವೈಭವ's picture

ಹಾಗೇನಿಲ್ಲ. ಬೇರೆ ರಾಜ್ಯಗಳಲ್ಲೂ ಕನ್ನಡಿಗರು ಇದ್ದಾರೆ.

ಅದು ಹಾಗಿರಲಿ,
ನಾನು ಹಿಂದೊಮ್ಮೆ ಲೇಕ್ ಟಹೊ(ಕಾಲಿಪೋರ್ನಿಯಾ)ಗೆ ಹೋಗಿದ್ದಾಗ ಏಸೊ ಮಂದಿ ಕನ್ನಡದಲ್ಲಿ(ಕನ್ನಡಿಗರು) ಮಾತಾಡೋದನ್ನ ಕೇಳಿದ್ದೆ.
ಕಾಲಿಪೋರ್ನಿಯಾದಾಗೆ ಸುಮಾರು ಏಸ್ ಮಂದಿ ಕನ್ನಡಿಗರು ಇರಬಹುದು?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 21, 2008 - 9:34pm — hamsanandi

ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?

hamsanandi's picture

ಬೇ ಏರಿಯಾ ( ಸ್ಯಾನ್ ಹೊಸೆ, ಸ್ಯಾನ್ ಫ್ರಾನ್ಸಿಸ್ಕೋ ಪ್ರದೇಶ) ದಲ್ಲಿ ಸುಮಾರು ಐದರಿಂದ ಎಂಟು ಸಾವಿರ ಕನ್ನಡಿಗರಿರಬಹುದು ಅನ್ನುವುದು ನನ್ನ ಅಂದಾಜು.

ಸಾಂಟಾ ಕ್ಲಾರಾ ಕೌಂಟಿಯಲ್ಲಿ ಸುಮಾರು ೮೦೦೦೦ ಭಾರತ ಮೂಲದವರಿದ್ದಾರೆ - ಅದರ ೧೦% ಆದರೂ ಕನ್ನಡದವರಿರಬಹುದು ಎನ್ನಿಸುತ್ತೆ. ಆಗ, ನನ್ನ ಎಂಟು ಸಾವಿರ ಅಂದಾಜೂ ಸ್ವಲ್ಪ ಕಮ್ಮಿ ಇರಬಹುದು.

ಅಲ್ಲದೆ, ಉತ್ತರ ಕ್ಯಾಲಿಫೋರ್ನಿಯ ಕನ್ನಡಕೂಟದ ( ಹೆಸರು ಉತ್ತರ ಕ್ಯಾಲಿಫೋರ್ನಿಯ ಅಂತಿದ್ದರೂ, ಇದು ಕೊಲ್ಲಿ ಪ್ರದೇಶಕ್ಕೇ ಸೀಮಿತ ಎನ್ನಬಹುದು) ಕಾರ್ಯಕ್ರಮಗಳಲ್ಲಿ ೧೦೦೦-೧೨೦೦ ಜನ ಭಾಗವಹಿಸುವುದು ಮಾಮೂಲು. ಅಲ್ಲದೆ, ನನ್ನ ಪರಿಚಿತರಲ್ಲಿ ಸುಮಾರು ೪ ಜನ ಕನ್ನಡಿಗರಲ್ಲಿ ಒಬ್ಬರು ಎನ್ನುವ ಹಾಗೇ ಕನ್ನಡಕೂಟದಲ್ಲಿ ಬರುವುದು. ಆ ರೀತಿಯಾಗಿ ನೋಡಿದರೂ, ಕಡಿಮೆ ಎಂದರೆ ೫೦೦೦ ಕನ್ನಡಿಗರಿರಬೇಕು.

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್‍ಕಾಸ್ಟ್ ಗಳು - http://hamsanandi.mypodcast.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೆಂಗಳೂರು ರಿಯಲ್ ಎಸ್ಟೇಟ್ - ಸುದ್ದಿ-ಗುದ್ದು
  • ಉತ್ತರ ಕನ್ನಡದ ೩ ತಾಲೂಕು ಗೋವಾ ಪಾಲಾಗುವುದೇ?
  • ಶಾಕ್ ನೀಡಿ ಸಾಯಿಸಿದ ಬಿಲ್ವಿದ್ಯುತ್ ಇಲಾಖೆ
  • ಸುಲಭವಲ್ಲವೋ ಮಹದಾನಂದ ...
  • ಚಾಮುಂಡಿ ಬೆಟ್ಟ ಹಿಮಾಲಯಕ್ಕಿಂತ ಹಳೆಯದೇ ?
Syndicate content

ಲೇಖಕರು

Narayana's picture

ಪೂರ್ಣ ಹೆಸರು
Narayana

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಯಾರ ಮುಡಿಗೆ ಸೌಂದರ್ಯ ಕಿರೀಟ...
  • ರಸ್ತೆ ನೀರಿನಿಂದ ಮಸ್ತ್ ಬೆಳೆ
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ‘ಇರುವೆ’ (ನೀ ಎಲ್ಲೆಲ್ಲೂ ಇರುವೆ)ಗಳು ಅಂತರ್ಜಲ ಮಟ್ಟ ಹೆಚ್ಚಿಸುವ ‘ಬ್ಯಾಂಕರ್’ಗಳು!
  • ‘ಸಂತೆ’ ಎಂಬ ವ್ಯಾವಹಾರಿಕ ಚೌಕಾಶಿಯ ‘ನಾಟಕ’!

ಇತ್ತೀಚಿನ ಪ್ರತಿಕ್ರಿಯೆಗಳು

  • sathishcv
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 8:40pm
  • ಮನಹ್ಪಠಲ
    ಉ: ಎಂ ಪಿ ಶಂಕರ್ - ಟಾಟಾ
    July 20, 2008 - 5:47pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:45pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:32pm
  • rasheedgm
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 4:49pm
  • anil.ramesh
    ಉ: ಧಾರವಾಡದ ನವಿಲೂರ ಕೆರೆಯಲ್ಲಿ ಆಹಾರ ಹೆಕ್ಕುತ್ತಿರುವ ಶಾಪಗ್ರಸ್ಥ ! ಟಿಟ್ಟಿಭ ಹಕ್ಕಿ ಕುಟುಂಬ. ಚಿತ್ರ: ಹರ್ಷವರ್ಧನ ಶೀಲವಂತ.
    July 20, 2008 - 11:49am
  • ASHOKKUMAR
    ಉ: ನನ್ನಜ್ಜನ ಬೆಚ್ಚಗಿನ ನೆನಪುಗಳು
    July 20, 2008 - 11:32am
  • Ananth.R
    ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
    July 20, 2008 - 11:22am
  • ರೇಖಾ
    ಉ: ಒ೦ದು ಬೆಚ್ಚನೆಯ ನೆನಪು..
    July 20, 2008 - 9:45am
  • Jayalaxmi.Patil
    ಉ: ಕತ್ತಲೆಯಿಂದ ಹೊರ ಬಂದ ಖಾದಿ
    July 19, 2008 - 11:01pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 42 ಅತಿಥಿಗಳು ಆನ್ಲೈನ್ ಇರುವರು.


ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator