ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಅರ್ಪಣೆ

January 7, 2006 - 1:51pm — tvsrinivas41

ನಾ ನಿಮ್ಮ ಮರೆಯಲಾದೀತೇ
ಅಂದು ಅಪ್ಪ ಎಂದು ಕರೆಸಿಕೊಂಡ ಜೀವ
ಈ ಪುಟ್ಟ ಗಿಡವ ಮರವಾಗಿಸಿ
ಮನದಿ ತುಂಬಿಸಿದಿರಿ ಸ್ಪಂದಿಸುವ ಭಾವ

ನಿಮ್ಮ ಪಾದಗಳ ನೋಡಿ ನಡಿಗೆ ಕಲಿತೆ
ನಿಮ್ಮ ಮಾತುಗಳ ಕೇಳಿ ನುಡಿಯ ಕಲಿತೆ
ನಿಮ್ಮ ಹೆಜ್ಜೆಯಲಿ ಹೆಜ್ಜೆ ಇಡುವುದ ಕಲಿತೆ
ನಿಮ್ಮ ದಿಗ್ದರ್ಶನದಲಿ ಬಾಳುವೆ ಕಲಿತೆ

ಏಟನಿತ್ತು ತುಂಟುತನವ ಬಿಡಿಸಿದಿರಿ
ದು:ಖ ಉಮ್ಮಳಿಸೆ ತಲೆಯ ನೇವರಿಸಿದಿರಿ
ವಿದ್ಯೆ ಬುದ್ಧಿ ಕಲಿಸಿ ಕಾಲ ಮೇಲೆ ನಿಲಿಸಿದಿರಿ
ಸ್ನೇಹಿತನಾಗಿ ಸಮಾಜದಿ ಬೆರೆಯಲು ಕಲಿಸಿದಿರಿ

ಕೋಪದಲಿ ಇತ್ತ ಬೆತ್ತದ ಗಾಯ
ಕೈ ಮೈ ಸವರಲು ಮಾಸಿತು
ಮರಳಿ ಬರಲಾರದ ಆ ಜೀವ
ಮನದ ಗಾಯ ಹೇಗೆ ಮಾಸೀತು

ಇಂದು ನಾನಿರುವೆ ನಿಮ್ಮ ಸ್ಥಾನದಲಿ
ಅಂದಿನ ನನ್ನನು ಕಾಣುತಿಹೆ ಮಗನಲಿ
ಅವಗೆ ನಾ ಕಲಿಸುವೆ ನೀವು ಕಲಿಸಿದ ಪಾಠ
ಶ್ರದ್ಧೆಯಿಂದ ನಿಮಗೆ ಒಪ್ಪಿಸುತಿಹೆ ಮನೆ ಪಾಠ

ಈಗಲೂ ನೀವು ಬರಲು ನಾ ಕೂಸಾಗುವೆ
ಕೂಸುಮರಿ ಆಡಲು ನಿಮ್ಮ ಹೆಗಲೇರುವೆ
ತೀರಿಸಲಾರದ ಪಿತೃ ಋಣವ ತೀರಿಸುವೆ
ಬಾರದಿರೆ ಕೊರಗಿ ಕೊರಗಿ ಸೊರಗುವೆ

ಸುರಿಸಲಾರೆ ನಾ ಕಂಬನಿಯ ಧಾರೆ
ನೆನಪಲಿ ಮನವು ಸುರಿಸುತಿದೆ ವರ್ಷಾಧಾರೆ
ಪಿತೃ ಋಣವಾಗಿ ಅರ್ಪಿಸುತಿಹೆ ತಿಲಾಂಜಲಿ
ಜೊತೆಗೆ ಈ ನನ್ನ ಈ ಪುಟ್ಟ ಶ್ರದ್ಧಾಂಜಲಿ

  • ಕಾವ್ಯ ಮತ್ತು ಕವನ
~.~
  • Login or register to post comments
  • 656 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 7, 2006 - 10:20pm — Sunil Jayaprakash

ಸಂಸ್ಕೃತದ ಪದ್ಯದ ನೆನಪು.

Sunil Jayaprakash's picture

tvsrinivas41 wrote:
ಏಟನಿತ್ತು ತುಂಟುತನವ ಬಿಡಿಸಿದಿರಿ ದು:ಖ ಉಮ್ಮಳಿಸೆ ತಲೆಯ ನೇವರಿಸಿದಿರಿ ವಿದ್ಯೆ ಬುದ್ಧಿ ಕಲಿಸಿ ಕಾಲ ಮೇಲೆ ನಿಲಿಸಿದಿರಿ ಸ್ನೇಹಿತನಾಗಿ ಸಮಾಜದಿ ಬೆರೆಯಲು ಕಲಿಸಿದಿರಿ

ನಿಮ್ಮ ಸ್ನೇಹಿತನಾಗಿ ಸಮಾಜದಿ ಬೆರೆಯಲು ಕಲಿಸಿದಿರಿ ಸಾಲುಗಳು ನನಗೆ ಒಂದು ಸಂಸ್ಕೃತದ ಪದ್ಯ ನೆನಪಿಗೆ ಬಂತು.
ತಪ್ಪಿಗಳಿದ್ದಲಿ ಯಾರಾದರು ತಿಳಿಸಿ.

ಬಹಳ ಇಷ್ಟವಾಯಿತು ಈ ಸಾಲುಗಳು.

ಏಟನಿತ್ತು ತುಂಟುತನವ ಬಿಡಿಸಿದಿರಿ
ದು:ಖ ಉಮ್ಮಳಿಸೆ ತಲೆಯ ನೇವರಿಸಿದಿರಿ
ವಿದ್ಯೆ ಬುದ್ಧಿ ಕಲಿಸಿ ಕಾಲ ಮೇಲೆ ನಿಲಿಸಿದಿರಿ
ಸ್ನೇಹಿತನಾಗಿ ಸಮಾಜದಿ ಬೆರೆಯಲು ಕಲಿಸಿದಿರಿ

ಜನನಾದಾರಭ್ಯ ಷಡ್ ವರ್ಷ ಪರ್ಯಂತಂ ಪ್ರೀತ್ಯಾ ಪೋಷಯೇತ್,
ಷಡ್ ವರ್ಷಾದಾರಭ್ಯ ಷೋಡಷ ವರ್ಷ ಪರ್ಯಂತಂ ತಾಡಯೇತ್,
ಷೋಡಷ ವರ್ಷಾದಾರಭ್ಯ ಪುತ್ರಂ ಮಿತ್ರವದಾಚರೇತ್.

ಈ ನಿಮ್ಮ ಪದ್ಯ, ಕನ್ನಡ ಕವನಗಳೂ ಕೂಡ ಎಷ್ಟು ಪರಿಣಾಮಕಾರಿಯಾಗಬಹುದು ಎಂಬುದನ್ನು ನಿರೂಪಿಸುತ್ತಿದೆ ಎಂದು ಭಾವಿಸುವೆ. ಅಂದಹಾಗೆ ಭಾವನೆಗಳಿಗ ಭಾಷೆಯೇ ಬೇಕಿಲ್ಲವಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 8, 2006 - 7:47pm — hpn

ಸುಭಾಷಿತ

hpn's picture

ಲಾಲಯೇತ್ ಪಂಚವರ್ಷಾಣಿ ದಶವರ್ಷಾಣಿ ತಾಡಯೇತ್
ಪ್ರಾಪ್ತೇ ತು ಷೋಢಶೇ ವರ್ಷೇ ಪುತ್ರಂ ಮಿತ್ರವದಾಚರೇತ್

ಇದು ನನಗೆ ಜ್ಞಾಪಕವಿರುವ ಸಾಲುಗಳು. ತಪ್ಪುಗಳಿದ್ದಲ್ಲಿ ಸರಿಪಡಿಸಿ. Smiling

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 9, 2006 - 9:11am — Sunil Jayaprakash

ಪದ್ಯ ಮತ್ತು ತಾತ್ಪರ್ಯ

Sunil Jayaprakash's picture

ಹೌದು ನೀವು ಬರೆದದ್ಪು ಸರಿಯಾದ ಸುಭಾಷಿತ, ನಾನು ಬೇಕೆಂದೇ ಪದ್ಯವನ್ನು ಹಾಕಲಿಲ್ಲ. ಅದರ ತಾತ್ಪರ್ಯವನ್ನೇ(??) ಪದ್ಯದ ರೂಪದಲ್ಲಿ ಹಾಕಿದೆ.
ಅಂದ ಹಾಗೆ ನಾನು ಬರೆದುದರಲ್ಲೊಂದು ತಪ್ಪು ಸಹ ಇದೆ.
ಜನನಾದಾರಭ್ಯ ಪಂಚ ವರ್ಷ ಪರ್ಯಂತಂ ಪ್ರೀತ್ಯಾ ಪೋಷಯೇತ್,
ಈ ಸುಭಾಷಿತಗಳ ಬಗೆಗೊಂದು ಚರ್ಚೆ ಆರಂಭಿಸೋಣ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಣ್ಣಾವ್ರಿಗೊಂದು ನುಡಿನಮನ
  • ಬಂದುಬಿಡಿ , ನಿಮ್ಮ ಅವಶ್ಯಕತೆ ಇದೆ.
  • ನೀವು ಅಂಗವಿಕಲರಾಗಿದ್ದರೆ ನಿಮ್ಮ ಬೇಡಿಕೆಗಳು - ಕುಂದುಕೊರತೆಗಳೇನಾದರೂ ಇದ್ದಲ್ಲಿ ನಮಗೆ ತಿಳಿಸಿ... ಸಂಪರ್ಕಿಸಿ 0-98454 89452
  • ಅಪ್ಪನ ನೆನಪು
  • ಅಶ್ರು ಧಾರೆ..!!
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 36 ಅತಿಥಿಗಳು ಆನ್ಲೈನ್ ಇರುವರು.


ಶೋಧನ ಭೋಧನ ಮೋಧನ ಮಾರ್ಗದಿ
ಓದುಗ ಮನದಾರಾಧನಕೆ
ಪ್ರಾದುರ್ ಭವಿಸುತ ಕವಿವಾಕ್ ನಡೆವುದು
ನಾದ ಬ್ರಹ್ಮ ನಿಕೇತನಕೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator