Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಇಂದಿನ ಸುದ್ದಿ...!

April 29, 2008 - 9:48am — sprasad

ಇವತ್ತು ಬೆಳಗ್ಗೆ ಗಂಟೆ ಎಂಟು ಕಾಲಾದರೂ ನ್ಯೂಸ್ ಪೇಪರ್ ಬಂದಿರಲಿಲ್ಲಾ. ಈ ಮೊದಲು ಒಂದೆರಡು ಬಾರಿ ಹೀಗೆಯೆ ಪೇಪರ್ ತಪ್ಪಿಸಿದ್ದರಿಂದ ಈ ಮನುಷ್ಯ ಎಲ್ಲಿ ಹೋದನಪ್ಪಾ ಅಂದು ಕೊಳ್ಳುತ್ತಾ ಆತನ ನಂಬರಿಗೆ ಫೋನಾಯಿಸಿದೆ. ಅತ್ತಕಡೆಯಿಂದ ಚಿಕ್ಕ ಹುಡುಗನೊಬ್ಬನ "ಹಲೋ" ಕೇಳಿಸಿತು. "ಲೋಂಡೆ(ಪೇಪರ್ ಹಾಕುವವನು) ಇದ್ದಾರ? " ಎಂದು ಸ್ವಲ್ಪ ಜೋರಿನಲ್ಲಿ ಕೇಳಿದೆ, ಆತ ಸ್ವಲ್ಪ ಅನುಮಾನಿಸಿ, "ಹೂಂ ಹೇಳಿ, ಏನಾಗಬೇಕಿತ್ತು" ಅಂದ. "ನನ್ನ ಹೆಸರು ಶಂಕರ್ ಅಂತಾ, ನನ್ನ ಮನೆಗಿನ್ನೂ ಪೇಪರ್ ಬಂದಿಲ್ಲಾ, ಎಷ್ಟೊತ್ತಿಗ್ರೀ ಪೇಪರ್ ಹಾಕೋದು, ಇವತ್ತು ಬರುತ್ತೋ ಇಲ್ವೋ" ಎಂದು ದಬಾಯಿಸಿದೆ. ಆ ಕಡೆಯಿಂದ ಇನ್ನಷ್ಟು ಕ್ಷೀಣ ಸ್ವರದಲ್ಲಿ "ಇವತ್ತು ಮತ್ತೆ ನಾಳೆ ಪೇಪರ್ ಬರೋದಿಲ್ಲ" ಎಂದ. ನಾನು ಇನ್ನೂ ಸ್ವಲ್ಪ ಏರಿದ ಸ್ವರದಲ್ಲಿ "ಅದೇ ಯಾಕೋ ಬರೋಲ್ಲ ಅಂತಾ" ಎಂದು ಕೇಳಿದೆ. ಆಗ ಆತ ನಿಸ್ತೇಜವಾದ ಧ್ವನಿಯಲ್ಲಿ"ನನ್ನ ಅಪ್ಪ ಇವತ್ತು ತೀರಿ ಹೋದರು" ಎಂದ. ಮುಂದೆ ನನಗೆ ಮಾತೇ ಹೊರಡಲಿಲ್ಲ. "ಓಹ್ ಐ ಯಾಮ್ ಸಾರಿ!" ಎಂದು ಹೇಳಿ ಮುಂದೆ ಏನು ಹೇಳಬೇಕೆಂದು ತೋಚದೆ ಫೋನ್ ಕಟ್ ಮಾಡಿದೆ.

ಪೇಪರ್ ಬಂದಿರಲಿಲ್ಲಾ ಆದರೆ ಸುದ್ದಿ ಬಂದಿತ್ತು...!

  • ಚುಟುಕು ಲೇಖನ
Ornamental seperator
  • Login or register to post comments
  • 450 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 29, 2008 - 12:09pm — girish.rajanal

ಉ: ಇಂದಿನ ಸುದ್ದಿ...!

girish.rajanal's picture

ಮನೆಗೆ ದಿನಾಲು ಪೇಪರ್‍ ಹಾಕೋರು, ಹಾಲು ಕೊಡೋರು, ಹೋಮ್ ಡೆಲಿವರಿ ಮಾಡೋ(ಪಿಜ್ಜಾ, ಕೋಕ್, ಹೊಟೇಲುಗಳ ಡೆಲಿವರಿ ಬಾಯ್ಸ ಅಲ್ಲ) ಹುಡುಗರನ್ನ ಕೇಳೋರು ಯಾರು ಹೇಳಿ?

ನಿಮ್ಮವ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.

  • Login or register to post comments
  • link
  • Email this ಪ್ರತಿಕ್ರಿಯೆ
April 29, 2008 - 12:17pm — roopablrao

ಉ: ಇಂದಿನ ಸುದ್ದಿ...!

roopablrao's picture

ಈ ಪೇಪರ್ ಹಾಕೊ ಹುಡುಗರೇನೂ ಕಡಿಮೆ ಇಲ್ಲ ಜಂಭದಲ್ಲಿ.
ನಮ್ಮ ಮನೆಗೆ ಪೇಪರ್ ಹಾಕೋದೆ ೮ ಘಂಟೆಗೆ
ಯಾಕಪ್ಪ ಲೇಟ್ ಅಂದರೆ
ನಿಮ್ಮೊಬ್ಬರದೇ ಮನೆ ಅಲ್ಲ ಮೇಡಮ್ ಎಲ್ಲಾ ಮನೆಗೆ ಹಾಕಿ ಬರ್ಬೇಕಲ್ವಾ ಅಂತಾರೆ

ಯಾಕಪ್ಪ ನೆನ್ನೆ ಸುಧಾ ಹಾಕಿಲ್ಲ ಅಂದ್ರೆ " ನನ್ನೇನು ಕೇಳ್ತೀರಾ ನಮ್ಮ ಓನರ್‌ನ್ ಕೇಳಿ ಅಂತಾರೆ.

ಆ ಪೇಪರ್ ಡೀಲರ್‌ನ ಕೇಳಿದರೆ. ಸಧ್ಯ ಪೇಪರ್ ಹಾಕೋಕೆ ಹುಡುಗರು ಸಿಕ್ಕಿರೋದೆ ಪುಣ್ಯ ಮೇಡಮ್. ಇನ್ನು ಅವರಿಗೆ ಏನಾದರೂ ಅಂದ್ರೆ ಅಷ್ಟೆ ಮುಂದಿನದಿನದಿಂದ ಅವರು ಬರಲ್ಲ. ಅವರೇ ಓನರ್ ನಾನೆ ಕೆಲಸ ಮಾಡೋನು ಅಂತಾಗಿದೆ ಅಂತ ಅತ್ಕೋತಾನೆ
ಹೇಗಾಗಿದೆ ನೋಡಿ ಕಾಲ

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • Email this ಪ್ರತಿಕ್ರಿಯೆ
April 29, 2008 - 5:48pm — uniquesupri

ಉ: ಇಂದಿನ ಸುದ್ದಿ...!

uniquesupri's picture

ಇಂಥಾ ಕಥೆಗಳು ನಮ್ಮ ಎದೆಯಲ್ಲಿ ಚುರುಕ್ ಎಂಬ ಅನುಭವವನ್ನು ಉಂಟು ಮಾಡುತ್ತವಲ್ಲಾ, ಬಹುಶಃ ಅದಕ್ಕಾಗಿಯೇ ನಾವು ಇಂಥವುಗಳಿಗೆ ಗಂಟುಬೀಳುವುದು ಅನ್ನಿಸುತ್ತದೆ. ಇಲ್ಲಿ ತಪ್ಪು ಸರಿ, ಅಪರಾಧ, ಕ್ಷಮೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೈಟೊ ಕಾಫಿ !!! - ೧
  • ಬೋಧನೆಯ ವರಸೆ - ಮತ್ತು ಇತರ ಕಥೆಗಳು
  • ಝೆನ ಕಥೆ ೩೬: ಛತ್ರ
  • ನಾಳೆ ನೀವೂ ಮಾಯ.............
  • ಮುಕ್ತಾಯ
Syndicate content

ಲೇಖಕರು

sprasad's picture

ಪೂರ್ಣ ಹೆಸರು
ಶಂಕರ್ ಪ್ರಸಾದ್

ಪರಿಚಯ

ಎಲ್ಲರಿಗೂ ನಮಸ್ಕಾರ!
ನಾನೊಬ್ಬ ಕನ್ನಡ ಸಾಹಿತ್ಯ ಪ್ರೇಮಿ! ಕನ್ನಡದಲ್ಲಿರುವ ವಿಫುಲ ಸಾಹಿತ್ಯ ಸಂಪತ್ತನ್ನೆಲ್ಲಾ ಅರೆದು ಕುಡಿಯ ಬೇಕೆಂಬುದು ನನ್ನ ಹಿರಿಯಾಸೆ!
ಆಗೀಗ ಕವನವನ್ನು ಸಹ ಗೀಚುತ್ತಿರುತ್ತೇನೆ! ಇವೆಲ್ಲವುಗಳ ಜೊತೆಯಲ್ಲಿ ಓಪನ್ ಸೋರ್ಸಿನಲ್ಲೂ ಸಹ ಒಂದಿನಿತು ಆಸಕ್ತಿ ಇದ್ದು, ಒಂದಿಷ್ಟು ಓಪನ್‍ಸೋರ್ಸ್ ತಂತ್ರಾಂಶಗಳನ್ನು ಕನ್ನಡಕ್ಕೆ ತರುವಲ್ಲಿ ನನ್ನ ಅಳಿಲು ಸೇವೆಯನ್ನೂ ಸಹ ಸಲ್ಲಿಸಿದ್ದೇನೆ..

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !
  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
    May 17, 2008 - 4:53pm
  • ಸಂಗನಗೌಡ
    ಉ: ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
    May 17, 2008 - 4:38pm
  • Narayana
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 17, 2008 - 2:00pm
  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 15 ಅತಿಥಿಗಳು ಆನ್ಲೈನ್ ಇರುವರು.

ದುರ್ಬಲರಿಗೆ ಕ್ಷಮಿಸುವ ಹಕ್ಕಿಲ್ಲ, ಕ್ಷಮಿಸುವ ಶಕ್ತಿ ಮತ್ತು ಹಕ್ಕಿರುವುದು ಬಲಿಷ್ಠರಿಗೆ ಮಾತ್ರ.

— ಮಹಾತ್ಮ ಗಾಂಧಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator