ಪತ್ರಕರ್ತ
ಈ ಬಗ್ಗೆ ಸ೦ಪದದಲ್ಲಿ ಮೊದಲೇ ಒ೦ದು ಲೇಖನ ಪ್ರಕಟವಾಗಿತ್ತು.’ವಿ.ಕ. ಮತ್ತು ಪ್ರತಾಪಸಿ೦ಹ ’ ಎ೦ಬ ಹೆಸರನಡಿಯಲ್ಲಿ ಲೇಖನವೊ೦ದು ಪತ್ರಕರ್ತರೊಬ್ಬರ ಬಗ್ಗೆ ಬರೆದಿದ್ದರು.ನಾನು ಪುನ: ಅದೇ ಪ್ರತಾಪ ಬಗ್ಗೆ ಬರೆಯಬಯಸುತ್ತೇನೆ.
ಈಗಿಗ್ಗೆ ಪ್ರತಾಪ ಅತೀ ಎನಿಸುವಷ್ಟು ಬಿ.ಜೆ.ಪಿ ಮತ್ತು ಬಿ.ಜೆ.ಪಿ ನಾಯಕರ ಬಗ್ಗೆ ಹೊಗಳಲಾರ೦ಬಿಸಿದ್ದಾರೆ.ಇವರು ಇತ್ತೀಚೆಗೆ ಬರೆದ ಲೇಖನಗಳನ್ನು ಸ್ವಲ್ಪ ಗಮನಿಸಿ.
"ಕೆಲವರೆಂದರೆ ಮೋಡಿ, ನೀವದನ್ನು ಒಪ್ಪಿ ಬಿಡಿ!";
"ಎನ್ ಡಿಟಿವಿ ತುಳಿತಕ್ಕೆ ಕುಗ್ಗದ ಇಂಡಿಯಾ ಟುಡೆ",
"ಇಸ್ಲಾಂ ಬಗ್ಗೆ ನನಗಿರುವ ನಂಬಿಕೆ ಕರಗುತ್ತಾ ಇದೆ"
ಇತ್ತೀಚಿನ ತಮ್ಮ ಪ್ರತಿ ಲೇಖನದಲ್ಲೂ ಪ್ರತಾಪ್ ಮೋದಿ ಬಗ್ಗೆ ವಿಪರೀತವಾಗಿ ಹೊಗಳಲಾರ೦ಬಿಸಿದ್ದಾರೆ(ಬಹುಶ: ಅವರ ನೆಚ್ಚಿನ ನಾಯಕರಿರಬೇಕು ಮೋದಿ).ಹಿ೦ದೂತ್ವಕ್ಕೆ ಕಟ್ಟು ಬಿದ್ದಿದ್ದಾರೆ.ಹೀಗೆ ಬಿಟ್ಟರೆ " ಬಿ.ಜೆ.ಪಿಗೆ ಮತ,ದೇಶಕ್ಕೆ ಹಿತ " ಎ೦ದು ಕೂಡ ಲೇಖನ ಬರೆದುಬಿಡುತ್ತಾರೇನೋ ಎನಿಸುತ್ತಿದೆ.ವಿದೇಶದಲ್ಲಿ ಕೆಲವು ಪತ್ರಿಕೆಗಳು,ಬಹಿರ೦ಗವಾಗಿ ಕೆಲವು ಪಕ್ಷಗಳ ಪರವಾಗಿ ಕೆಲಸ ಮಾಡುತ್ತವೆ೦ದು ಕೇಳಿದ್ದೇನೆ.ಬಹುಷ: ಕರ್ನಾಟಕದಲ್ಲಿ ವಿ.ಕ.ಪರೋಕ್ಷವಾಗಿ ಈ ಕೆಲಸ ಮಾಡುತ್ತಿದೆಯೇನೋ ಎನಿಸುತ್ತದೆ.ಪ್ರತಾಪರ ಯಾವುದೇ ಲೇಖನವಿರಲಿ,ಹಿ೦ದುಮು೦ದು ನೋಡದೆ ವಿ.ಕ ಪ್ರಕಟಿಸುತ್ತಿದೆ. ಪತ್ರಕರ್ತರಾದವರಿಗೆ ಯಾವುದೇ ಪೂರ್ವಾಗ್ರಹಗಳಿರಬಾರದು ಎ೦ದು ಯಾರಾದರೂ ಪ್ರತಾಪಗೆ ತಿಳಿಸಬಾರದೇ...?

- Login or register to post comments
- 662 hits
- Email this page





RSS:
ಪ್ರತಿಕ್ರಿಯೆಗಳು
ಉ: ಪತ್ರಕರ್ತ
ಹಾ. ನಾನೂ ಬೆಳಿಗ್ಗೆ ದಟ್ಸ ಕನ್ನಡದಲ್ಲಿ ಪ್ರತಾಪಸಿಂಹ ಅವರ ಮೋದಿ ಬಗೆಗಿನ ಲೇಖನಾ ಓದಿ ಅವ್ವಕ್ಕಾದೆ,
ಈದೇನು ಭಾಜಪದ ಚುನಾವಣಾ ಪ್ರಚಾರದ ಜಾಹೀರಾತೇನೋ ಅಂದುಕೊಂಡೆ.
ಪ್ರತಾಪಸಿಂಹ ಅವರು ಕೊನೆಪಕ್ಶ ಚುನಾವಣೆ ಮುಗಿಯುವವರೆಗೊ ಬೇರೆ ವಿಷಯದಬಗ್ಗೆ ಬರೆದರೆ ಚೆನ್ನಾಗಿರುತ್ತದೆ, ಒಬ್ಬ ಪ್ರತಿಭಾನ್ವಿತ ಪತ್ರಕರ್ತರಾಗಿ ಇದನ್ನವರು ಅರಿಯಬೇಕು,
ಉ: ಪತ್ರಕರ್ತ
ಪ್ರ.ಸಿಂಹರ ಬರಹಗಳಲ್ಲಿ ತಪ್ಪೇನಿಲ್ಲ. ಅವರ ಅನಿಸಿಕೆಯನ್ನು ಮಂಡಿಸಿದ್ದಾರಷ್ಟೆ.
ಉ: ಪತ್ರಕರ್ತ
ಚುನಾವಣೆಯ ಸಮಯದಲ್ಲೇ ಇಂಥ ಲೇಖನ ಪ್ರಕಟವಾಗುವುದರಿಂದ ಲೇಖಕನ ಮೇಲಿನ ವಿಶ್ವಾಸಾರ್ಹತೆ ಕುಂಟಿತಗೊಳ್ಳುತ್ತದೆ. ವಿಚಾರ ಮಾಡದೆ ತಮ್ಮ ಅಭಿಪ್ರಾಯವನ್ನು ಅವರು ದಾಖಲಿಸಬಹುದು ಆದರೆ ಅದರಿಂದ ಪತ್ರಿಕೆಯ ವಿಶ್ವಾಸಾರ್ಹತೆಗೆ ದಕ್ಕೆಯಾಗುತ್ತದೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಪತ್ರಕರ್ತ
ಇಲ್ಲಿ ನೋಡಿ... http://thatskannada.oneindia.in/literature/book/2008/0430-pratap-simha-b...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಪತ್ರಕರ್ತ
"ಸಂಪದ" ದಲ್ಲಿ ಕನ್ನಡ ಭಾಷೆ, ಕನ್ನಡಜನ ಪರ ಭಾವನೆಗಳು ಹೊರಹೊಮ್ಮುವುದು ಸಹಜ ಪ್ರವೃತ್ತಿ ಎಂಬ ನಿಲುವನ್ನು ಬಹಳ ಸದಸ್ಯರು ತೊರಿಸುತ್ತಿದ್ದಾರೆ. ಅದೇ ಅವರುಗಳು ಧರ್ಮದ ಪರ ಭಾವನೆಗಳನ್ನು ತಪ್ಪು ಎಂಬ ನಿಲುವನ್ನೇ ಎತ್ತಿಹಿಡಿದು ಬರೆಯುತ್ತಾರೆ. ಅಂಧ ವಿಚಾರಗಳು ತಪ್ಪಿರಬಹುದು, ಆದರೆ ಒಂದು ಧರ್ಮವನ್ನು ನಂಬುವುದಾಗಲೀ, ಅದರನ್ನು ಸಮರ್ಥಿಸುವುದಾಗಲೀ ಅದಕ್ಕೆ ಅನಗತ್ಯ ಹಾನಿಯಾದರೆ ಅದನ್ನು ರಕ್ಷಿಸುವುದಾಗಲೀ ಅಪರಾಧವೆಂಬ ನಿಲುವು ಸರಿಯೇ? ಅಂದರೆ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂಡು ಕಣ್ಣಿಗೆ ಸುಣ್ಣ ಎಂದಂತಾಗಲಿಲ್ಲವೇ? .
ಉ: ಪತ್ರಕರ್ತ
mnsrao,
ಸಹಜ ಪ್ರತಿಕ್ರಿಯೆಗಳನ್ನು ನಾವು ಗೌರವಿಸೋಣ. ಆದರೆ ಸಾರ್ವಜನಿಕ ವೇದಿಕೆಯಾದ ಪತ್ರಿಕೆಯೊಂದರಲ್ಲಿ ಇಂಥ ‘ವೈಯಕ್ತಿಕ’ ನಿಲುವಿನ ಪ್ರತಿಪಾದನೆಯನ್ನು ಸಹಿಸಲಾಗದು. ಪತ್ರಿಕೆಯೊಂದು ಭಾಷೆಯ ಬಗ್ಗೆ ಇಂಥ ನಿಲುವನ್ನು, ಸಂಸ್ಕೃತ-ಕನ್ನಡ ವೈರುಧ್ಯಗಳಲ್ಲಿ ಒಂದನ್ನು ಪ್ರತಿಪಾದಿಸುವ ನಿಲುವು ತೋರಿದರೆ ಅದನ್ನೂ ವಿರೋಧಿಸುತ್ತೇವೆ...
ಇಷ್ಟಕ್ಕೂ ಪ್ರತಾಪ್ ರಂತಹ ಪತ್ರಕರ್ತರು ಬರೆಯುತ್ತಿರುವುದು ಹಿಂದೂ ಧರ್ಮದ ಬಗ್ಗೆ ಅಲ್ಲ, ಅವರು ಬರೆಯುತ್ತಿರುವುದು ‘ಹಿಂದೂ ರಾಜಕೀಯ’ದ ಬಗ್ಗೆ. ಇದು ಸ್ಪಷ್ಟವಾಗಲಿ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಪತ್ರಕರ್ತ
ಸುಪ್ರಿಯವರಿಗೆ ನನ್ನ ಬೆಂಬಲ.
ಮೋದಿ ಬಗ್ಗೆ ಬರೆಯುವವರೇ... ನಿಜಹೇಳಿ, ನಿಮ್ಮ ಈ ಜನನಾಯಕ ಇಷ್ಟೊಂದು ಪ್ರಚಾರಕ್ಕೆ ಬಂದಿದ್ದು ಆತನ ಆಡಳಿತದಿಂದಲೋ ಅಥವಾ ಗೋದ್ರಾ ದೊಂಬಿಯಿಂದಲೋ? ಅಷ್ಟಕ್ಕೂ ಆತನ ರಾಜ್ಯದಲ್ಲಿ ಆತ ಈಶನೇ ಇರಬಹುದು ಅದರಿಂದ ಕನ್ನಡಿಗರಿಗೇನು ?
ಉ: ಪತ್ರಕರ್ತ
ಯಾಕಂದ್ರ ರೇವಡಿಯವರೆ,
ಗುಣಕ್ಕೆ ಮತ್ಸರವಿಲ್ಲ ಅದಕ್ಕೆ.
ನಿಮ್ಮವ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.