Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಹೇಳಿಕೊಳ್ಳಲು ಒಂದೆರಡು ಹಾಡು, ಓದಿಕೊಳ್ಳಲು ಒಂದೆರಡು ಸಾಲು

May 1, 2008 - 2:50pm — Chamaraj

ನಾನು ನಿನ್ನನ್ನು ಏನೂ ಕೇಳುವುದಿಲ್ಲ ಬದುಕೇ.

ಯಾವುದನ್ನು ಇದುವರೆಗೆ ಸಾಮಾನ್ಯ ಜೀವನ ಅಂದುಕೊಂಡಿದ್ದೆನೋ, ಅದನ್ನು ಕೊಡ ಮಾಡಿದರೆ ಸಾಕು. ಒಂದಾರು ತಾಸು ನಿದ್ದೆ, ಎದ್ದಾಗ ಒಂದಿಷ್ಟು ಇನಿ ಬೆಳಕು, ರಾತ್ರಿಯಿಡೀ ಆರಿದ ಬಾಯಿಗೆ ಒಂದು ಲೋಟ ಸಿಹಿ ನೀರು, ಎಳೆದುಕೊಂಡರೆ ಪುಪ್ಫುಸ ತುಂಬುವ ಬೆಳಗಿನ ತಂಪು ಗಾಳಿ, ತಲೆ ಎತ್ತಿ ನೋಡಿದರೆ ಉದಯಿಸುವ ಸೂರ್ಯ, ಇಂದು ಯಾವ ಪಾಪಿಯ ಕುರಿತೂ ಮಾತನಾಡದ ನಿಗ್ರಹ, ಯಾರ ಮೇಲೂ ಕೋಪಿಸಿಕೊಳ್ಳದ ನಿಲುವು, ಸಾಕು.

ಯಾರಿಗೂ ನನ್ನ ಪ್ರತಿಭಾ ಪರಿಚಯ ಬೇಡ. ಯಾರಿಗೂ ನನ್ನ ನೋವಿನ ಪಡಿತರ ಬೇಡ. ಮನೆ ಬಿಡುವಾಗ ಒಂದು ಮುಗುಳ್ನಗುವಿರಲಿ. ಟ್ರಾಫಿಕ್ನಲ್ಲಿ ಅಸಹನೆ ಉಕ್ಕದಿರಲಿ. ಈ ಗಾಡಿ ನಲ್ವತ್ತು ಕಿಮೀ ಮೇಲೆ ಓಡದು ಎಂಬ ಬೇಸರ ಬೇಡ. ರಸ್ತೆಯಲ್ಲಿ ಕಡಿಮೆ ಗುಂಡಿಗಳಿದ್ದರೆ ಸಾಕು.

ದಾರಿಯುದ್ದಕೂ ನೂರಾರು ಗಾಡಿ. ಒಂದಕ್ಕಿಂತ ಒಂದು ಭಿನ್ನ. ಅದು ಹಾಗಿದ್ದರೇ ಚೆನ್ನ. ಎಲ್ಲೆಲ್ಲಿಂದಲೋ ಬಂದವರು ಎಲ್ಲೆಲ್ಲೋ ಹೊರಟಿದ್ದಾರೆ. ನನ್ನಂತೇ ಅವರು, ನೆಮ್ಮದಿ ಹುಡುಕುವವರು.

ಕಚೇರಿಗೆ ಎಲ್ಲರಿಗಿಂತ ಮುಂಚೆ ಬಂದೆ ಎಂಬ ಹಳಹಳಿ ಬೇಡ. ತಡವಾಯಿತು ಎಂಬ ಆತಂಕವೂ ಬೇಡ. ಲಿಫ್ಟ್ ಕೆಲಸ ಮಾಡದಿದ್ದರೆ ಏನಂತೆ, ಮೆಟ್ಟಿಲುಗಳಿವೆ ಎಂಬ ಸಮಾಧಾನ ಬರಲಿ. ಏರಲು ಕಾಲುಗಳು ಗಟ್ಟಿಯಾಗಿವೆ ಎಂಬ ಕೃತಜ್ಞತೆ ಇರಲಿ.

ನಾ ಕೂತ ಕಡೆ ತಂಪು ಗಾಳಿ ಇಲ್ಲ ಎಂದೇಕೆ ಕಿರಿಕ್ಕು? ಕನಸ ಹಂಚಿಕೊಳ್ಳಲು ಕಂಪ್ಯೂಟರ್ ಇದೆ ಎಂಬ ನೆಮ್ಮದಿ ಸಾಕು. ಅರ್ಥ ಮಾಡಿಕೊಳ್ಳುವವರು ಕಡಿಮೆ ಎಂಬ ತಗಾದೆಗಿಂತ, ಅರ್ಥ ಮಾಡಿಕೊಳ್ಳಲು ಕೆಲವರಾದರೂ ಇದ್ದಾರಲ್ಲ ಎಂಬ ಸಮಾಧಾನವಿರಲಿ.

ಎಲ್ಲವನ್ನೂ ಬಲ್ಲೆ ಎಂಬ ಬಿಂಕ ಇಳಿಯಲಿ. ಕಲಿಯುವುದು ಇನ್ನೂ ಇದೆ ಎಂಬ ವಿನಯ ಬೆಳೆಯಲಿ. ಬುದ್ಧಿವಂತಿಕೆ ಕಾಡಿನ ಹಸಿರಿನಂತೆ ಎಂಬ ಅರಿವು. ನಾನೊಬ್ಬನೇ ಮರ ಅಲ್ಲ ಎಂಬ ತಿಳಿವು.

ಟಿವಿ ಒಟಗುಟ್ಟುತ್ತದೆ. ಸಹೋದ್ಯೋಗಿಗಳು ಪಿಸುಗುಟ್ಟುತ್ತಾರೆ. ಎಲ್ಲರಿಗೂ ಎಲ್ಲದರ ಬಗ್ಗೆ ಮಾತನಾಡುವ ಹಂಬಲ. ಥ್ಯಾಂಕ್ಸ್ ಬದುಕೇ, ಕೇಳಿಸಿಕೊಳ್ಳಲು ಎರಡು ಕಿವಿ ಕೊಟ್ಟಿದ್ದಕ್ಕೆ.

ಬೆಳಿಗ್ಗೆ ಹೋಗಿ ಮಧ್ಯಾಹ್ನವಾಗುತ್ತದೆ. ಆರೋಗ್ಯವಂತನಿರಬೇಕು ನಾನು, ಅದಕ್ಕೇ ಹೊಟ್ಟೆ ಹಸಿಯುತ್ತೆ. ಒಬ್ಬನೇ ಉಣ್ಣಲು ಮತ್ತದೇ ಬೇಸರ. ಯಾರಾದರೂ ಜೊತೆ ಕೂರಲಿ ಎಂಬ ಕಾತರ.

ಊಟದ ನಂತರ ಮನಸ್ಸೇಕೋ ಮಂಕು. ಬ್ಲಾಗ್ ತೆರೆದರೆ ಅಲ್ಲಿ ಕನಸುಗಳದೇ ಇಂಕು. ಯಾರಾರೋ ಬಿಡಿಸಿದ ಮನಸುಗಳ ಚಿತ್ರ. ಅದರೊಂದಿಗೆ ಅಚ್ಚಾಗಲಿ ನನ್ನದೂ ಒಂದು ಪತ್ರ.

ನಿದ್ದೆ ಎಳೆವ ದೇಹಕ್ಕೆ ಬಿಸಿ ಬಿಸಿ ಚಹ. ಇನ್ನು ಕೆಲಸ ಮುಂದುವರೆಸಬೇಕೆಂಬ ತಹತಹ. ಬರೆದಷ್ಟೂ ಮುಗಿಯದು ಬರವಣಿಗೆಯ ಬಯಕೆ. ಇದು ಹೀಗೇ ಇರಲಿ ಎಂಬುದೊಂದೇ ಕೋರಿಕೆ.

ಸಂಜೆಯಾದಂತೆ ಸಹೋದ್ಯೋಗಿಗಳ ಸಡಗರ. ಸಂದರ್ಶನಕ್ಕೆ ಬಂದ ಹೊಸಬರಲ್ಲಿ ಮುಜುಗರ. ಎಲ್ಲವನ್ನೂ ನೋಡುತ್ತ ಕಾಯುತ್ತಿದ್ದಾರೆ ಕೆಲವರು. ಗಾಡಿ ತಂದವರ ಜೊತೆ ಹೋಗಲು ಕೂತಿದ್ದಾರೆ ಅವರು.

ಸೂರ್ಯನಿಗೂ ಸುಸ್ತಾಗಿರಬೇಕು, ಕೆಂಪಾಗಿದ್ದಾನೆ. ಸದ್ದಿಲ್ಲದೇ ಮನೆಗೆ ಮರಳುವ ಸಿದ್ಧತೆಯಲ್ಲಿದ್ದಾನೆ. ಸಂಜೆ ಸೊಗಸಿಗೆ ಸಮ ಯಾವುದಿದೆ? ಏಕೋ ಏನೋ ನನ್ನ ಮನಸ್ಸೂ ಮುದಗೊಂಡಿದೆ.

ಬಾಕಿ ಉಳಿದ ಕೆಲಸ ಮುಗಿಸಲು ಅವಸರಿಸುತ್ತೇನೆ. ತಿಂಡಿ ತಿಂದೇ ಇಲ್ಲ? ಎಂದು ಗೆಳೆಯ ಎಚ್ಚರಿಸುತ್ತಾನೆ. ’ಹಸಿವಿದ್ದು ಉಂಡರೆ ತಾನೆ ಸೊಗಸು? ಈ ತಿಂಡಿಯನ್ನೂ ನೀನೇ ಮುಗಿಸು.’

ಮಾನಿಟರ್ ಮುಂದೆ ಅಕ್ಷರಗಳ ಮಾಲೆ. ಹೊರಗೆ ಗಗನಚುಂಬಿಗಳಲ್ಲಿ ದೀಪಗಳ ಲೀಲೆ. ಕೊನೆಯ ಪ್ರಿಂಟ್ ಔಟ್ ನೋಡುತ್ತ ಎಂಥದೋ ಸಡಗರ. ಇವತ್ತಿನ ಕೆಲಸ ಮುಗಿಯಿತು ಹಗುರ.

ಬ್ಯಾಗೆತ್ತಿಕೊಳ್ಳುತ್ತ ಎಲ್ಲರಿಗೂ ಬೈ, ವಿದಾಯ. ಆಗಲೇ ಅರ್ಧಕ್ಕರ್ಧ ಕಚೇರಿಯೇ ಮಾಯ. ಇಳಿಯುವಾಗ ಲಿಫ್ಟ್ನ ಚಿಂತೆಯಿಲ್ಲ. ಮನೆಗೆ ಹೊರಟಾಗ ಅದರ ಅವಶ್ಯಕತೆಯೇ ಇಲ್ಲ.

ದಾರಿ ಕಾಯುತ್ತಿದೆ ನನ್ನ ಪುಟ್ಟ ಗಾಡಿ. ಬಿಸಿಲಿಗೇಕೋ ಬಾಡಿದಂತಿದೆ ಖೋಡಿ. ಸೀಟೊರಸಿ ಕೂತರೆ ಅದಕ್ಕೆ ಎಂಥದೋ ಪುಳಕ. ಭರ್ತಿಯಾದ ರಸ್ತೆಯೊಂದಿಗೆ ಹಾಕುತ್ತದೆ ತಳುಕ.

ಸಿಗ್ನಲ್ ಲೈಟ್ಗಳು ಕಣ್ಣಾಮುಚ್ಚಾಲೆ ಆಡುತ್ತವೆ. ಅವಕ್ಕೆ ತಕ್ಕಂತೆ ಟ್ರಾಫಿಕ್ ಪೊಲೀಸ್ ಪೀಪಿ ಊದುತ್ತಾನೆ. ನಾವೇನು ಕಡಿಮೆ ಎಂದು ವಾಹನಗಳು ಹಾರ್ನ್ ಹೊಡೆಯುತ್ತವೆ. ಹಸಿರು ದೀಪ ಕಾಣುತ್ತಲೇ ಗೂಳಿಯಂತೆ ನುಗ್ಗುತ್ತವೆ.

ಎಲ್ಲರಿಗೂ ಮನೆ ತಲುಪುವ ಆತುರ. ಆದರೆ, ಟ್ರಾಫಿಕ್ ಇರೋದೇ ಈ ಥರ. ಗಾಡಿ ಮೇಲೆ ಕೂತಿದ್ದರೂ ಎಲ್ಲರೂ ನಿಂತು ನಿಂತೇ ಹೋಗಬೇಕು. ದೀಪ ಬಿದ್ದಾಗೊಮ್ಮೆ ಕಂತು ಕಂತಾಗಿ ಸಾಗಬೇಕು.

ಮನೆ ತಲುಪಿದಾಗ ದೇಹಕ್ಕೆ ಸುಸ್ತು. ಆದರೆ, ಮನಸ್ಸು ಫ್ರೆಶ್ ಮತ್ತು ಮಸ್ತು. ಗೇಟಿಗೆ ನಿಂತ ದೊಡ್ಡ ಮಗಳು ಕೇಕೆ ಹಾಕುತ್ತಾಳೆ. ಅಮ್ಮನ ಕಂಕುಳಲ್ಲಿ ಕೂತ ಚಿಕ್ಕವಳು ಕೈ ಚಾಚುತ್ತಾಳೆ.

ಎಲ್ಲರನ್ನೂ ಮಾತನಾಡಿಸಿ ಮಕ್ಕಳಿಗೆ ಸಿಹಿ ಮುತ್ತು. ಹೆಂಡತಿಗೆ ಕೊಡಲು ಇನ್ನೂ ಇದೆ ಹೊತ್ತು. ಉಂಡು, ಆಡಿ, ದಣಿದ ಮಕ್ಕಳು ನಿದ್ರೆಗೆ ಜಾರುತ್ತವೆ. ಇಡೀ ದಿನದ ಬೆಳವಣಿಗೆಗಳು ಕಣ್ಣೆದುರು ಮೂಡುತ್ತವೆ.

ಬೆಳಿಗ್ಗೆ ನಾನು ಕೇಳಿಕೊಂಡಿದ್ದು ಇದನ್ನೇ ಅಲ್ಲವೆ? ಒಂದು ಸಾಮಾನ್ಯ ಬದುಕು ಕೊಡು ಎಂದು ತಾನೆ? ಅವಸರದಿಂದ ಓಡುವ ಜಗದಲ್ಲಿ ಆಸರೆಗೊಂದು ನೆರಳು. ಹೇಗಾದರೂ ಸರಿ, ಸರಿಯಾಗಲಿ ಮಗಳು.

ಮೌನವಾಗಿ ಕೂತ ಇವಳ ಮನದಲ್ಲೂ ಅದೇ ಯಾಚನೆ. ದೊಡ್ಡ ಮಗಳ ಭವಿಷ್ಯ ಬೆಳಗಲಿ ಎಂಬ ಪ್ರಾರ್ಥನೆ. ನಮಗಿಷ್ಟು ದಕ್ಕಿದರೆ ಸಾಕು ಬದುಕೇ. ಚಿಂತೆ ಮಾಡದೇ ಇದ್ದೇವು ನಾನು ಮತ್ತು ಈಕೆ.

ನಮ್ಮೆಲ್ಲ ಹಮ್ಮುಬಿಮ್ಮುಗಳು ಪಕ್ಕಕ್ಕೆ ಸರಿಯಲಿ. ಮನದ ತಿಳಿಗೊಳದಲ್ಲಿ ಒಂಚೂರು ನೆಮ್ಮದಿ ಮೀಯಲಿ. ಕಷ್ಟದಲ್ಲಿದ್ದವರಿಗೂ ಚಾಚಲಿ ನಮ್ಮ ಬೆರಳು. ಅವರಿಗೂ ದಕ್ಕಲಿ ನೆಮ್ಮದಿಯ ನೆರಳು.

- ಚಾಮರಾಜ ಸವಡಿ

Ornamental seperator
  • Login or register to post comments
  • 338 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 1, 2008 - 3:28pm — Shivakumar.Revadi

ಉ: ಹೇಳಿಕೊಳ್ಳಲು ಒಂದೆರಡು ಹಾಡು, ಓದಿಕೊಳ್ಳಲು ಒಂದೆರಡು ಸಾಲು

Shivakumar.Revadi's picture

ಸುಂದರ ಬರಹ.....ರಾಗ, ದ್ವೇಷ, ಮತ್ಸರ,,,ಏನನ್ನೂ...ಕೆರಳಿಸದೇ, ಮನಸ್ಸನ್ನು ಅರಳಿಸಿದ, ಸುಲಲಿತವಾಗಿ ಓದಿಸಿಕೊಂಡು ಹೋಗುವ ಬರಹ, ಈ ಕನಸು ನಿಮ್ಮದು, ನನ್ನದು, ಬಹುಶ ಎಲ್ಲರದು.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೇಳಿಕೊಳ್ಳಲು ಒಂದೆರಡು ಹಾಡು, ಓದಿಕೊಳ್ಳಲು ಒಂದೆರಡು ಸಾಲು
  • ಟೆಲಿವಿಷನ್ ರಿಲೇ ಮತ್ತು ಮದುವೆಮನೆ ಊಟದ ಎಲೆ
  • ನಾ ಕಂಡದ್ದು
  • ಹೃದಯವಂತಿಕೆ
  • ಜೇನು ತುಪ್ಪ ಆಹಾ - ರಘೋತ್ತಮ್ ಕೊಪ್ಪರ
Syndicate content

ಲೇಖಕರು

Chamaraj's picture

ಪೂರ್ಣ ಹೆಸರು
ಚಾಮರಾಜ ಸವಡಿ

ಪರಿಚಯ

See my blog: chamarajsavadi@blogspot.com

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:37pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:30pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:29pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:23pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:10pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:00pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 17 ಅತಿಥಿಗಳು ಆನ್ಲೈನ್ ಇರುವರು.

ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ ।
ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ।।
ಸೊಗಸಿನೆಳಸಿಕೆಗೊಂದು, ತನ್ನಾತ್ಮಕ್ಕಿನ್ನೊಂದು ।
ಬಗೆಯೆಷ್ಟೊ ಮೊಗವಷ್ಟು -- ಮಂಕುತಿಮ್ಮ ।।

— ಡಿ.ವಿ.ಜಿ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator