Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಜಯನಗರದ ಬೀದಿಗಳು

May 7, 2008 - 5:49pm — ರವಿಶಂಕರ

ಜಯನಗರದ ಬೀದಿಗಳಲ್ಲಿ
ಈಗ,
ಹೀಗೇ ಸುಮ್ಮನೆ
ಅಂಡಲೆಯಲು ಸಾಧ್ಯವಿಲ್ಲ.

ಇಕ್ಕಟ್ಟು ರಸ್ತೆಗಳಲ್ಲಿ,
ಭಾನುವಾರದ ನಡಿಗೆಯ ನಡುವೆಯೂ,
ಅಕಸ್ಮಾತ್ತಾಗಿ,
ಪ್ರಜ್ನೆಗೆ
ಅನಾಥವಾಗಲು ಬಿಡುವಾಗುವುದಿಲ್ಲ.

ಬೆಂಬಿಡದೆ ಭಯೋತ್ಪಾದಿಸುವ,
ಬಿಲ್ ಬೋರ್ಡಿನ ಹೊಸ ಸೆಲ್-ಫ಼ೋನು,
ತಿರುವಿನಲ್ಲಿ ತೆರೆದ ಹೊಸ
ಚಿನ್ನದಂಗಡಿ,
(ಮಧ್ಯೆ ಸರಕ್ಕನೆ ಬಂದು
ಎರಡು ಪಲ್ಟಿ ಹೊಡೆದು ಕೈಯೊಡ್ಡುವ
ಗಿಡ್ಡ ದೊಂಬರಾಟದ ಹುಡುಗಿ),
ಇರದ ಹಸಿವನು ಇಂಗಿಸುತ್ತ
ಕಾಲ ದೂಡುವ ಸಮೂಹಗಳು,
ಮತ್ತೆ, ನಡುನಡುವೆ,
ಸೆಕ್ಸಿ-ಗುರುವಿನ ಗುರುಕುಲದ ಜಬರ್ದಸ್ತು ಪೋಸ್ಟರು.

ಇಲ್ಲ, ಇಲ್ಲಿ ಸಾಧ್ಯವಿಲ್ಲ,
ದು:ಖ ಪಡಲು,
ಪಡುವ ದು:ಖದ ಕಹಿಯ
ಸಿಹಿ ಅಮಲಿನಲ್ಲಿ ತೇಲಲು,
ಹಠಾತ್ ವಿಷಾದ ಯೋಗ ಸ್ವೀಕರಿಸಲು.

(ಕೆರೆವ ಕಾಲಿನ ಪುಟ್ಟ ಗಾಯವ
ತುರಿಸಿ ಸುಖಪಡಲೂ).

ರಸ್ತೆಗಳೆಲ್ಲ ಇಕ್ಕಟ್ಟು. ಎಲ್ಲ
ರಸ್ತೆಗಳೂ ಒಂದೇ ಹದ.

ಇಲ್ಲ, ಇಲ್ಲಿ ಸಾಧ್ಯವಿಲ್ಲ,
ಎಲ್ಲೂ ನಿಂತು
ಒಂದರೆಘಳಿಗೆ
ಮರೆತು -
ಕಾರುಗಳ ಹಾರನ್ನು,
ಬೈಕುಗಳ ರೇಸು,
ಬಸ್ಸುಗಳ ಭಯ,
ಹೆಂಡತಿಯ ಕೋರಿಕೆ,
ನಿನ್ನೆ ಓದಿದ ಆಧ್ಯಾತ್ಮದ ಅರ್ಥ,
ಬರೆಯಲು ಹೊರಗೆ ಬಾರದೆ
ಕಾಡುತಿರುವ ಕಮ್ಮರದೇಗು ಕವನ,
ಕೊಳ್ಳಲೇ ಬೇಕಿಲ್ಲದ ಹೊಸ ಕಾರು,
ಗುದ್ದಲಿ, ಸನಿಕೆ, ಗಡಾರಿ ಹಾರೆಗಳ
ಹೊತ್ತು ಮಾರ್ಚ್ ಪಾಸ್ಟ್ ಮಾಡುತ್ತ ಹಾಯ್ದುಹೋಗುವ
ಮನುಷ್ಯರ ಗುಂಗುಂಗಾನ-
ಎಲ್ಲವನು,
ಒಂದೊಳದಾರಿಯ ಹೆಸರಿಲ್ಲದ
ಗಲ್ಲಿಯ ಅನಾಮಧೇಯತ್ವಕ್ಕೆ
ಶರಣಾಗಲು.

-- ರವಿಶಂಕರ

ಫ಼ೆಬ್ ೦೮

  • ಕಾವ್ಯ ಮತ್ತು ಕವನ
Ornamental seperator
  • Login or register to post comments
  • 136 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 8, 2008 - 9:36pm — hpn

ಉ: ಜಯನಗರದ ಬೀದಿಗಳು

hpn's picture

ಸಿಕ್ಕಾಪಟ್ಟೆ ಚೆನ್ನಾಗಿದೆ Smiling

ಇತ್ತೀಚೆಗೆ ದಿ ಹಿಂದೂ ಪತ್ರಿಕೆಯಲ್ಲಿ ವಿಶ್ವೇಶ್ವರಯ್ಯನವರು ಡಿಸೈನ್ ಮಾಡಿದ ಜಯನಗರದ ನಕ್ಷೆ ಹಾಗೂ ಮತ್ತಷ್ಟು ಮಾಹಿತಿ ಇತ್ತು. ಅವರುಗಳಿಗೂ ಕನಸು ಮನಸಿನಲ್ಲಿ ಇದು ಹೀಗಾಗುವುದೆಂದು ಅನಿಸಿರಲಿಕ್ಕಿಲ್ಲ!
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
May 9, 2008 - 2:24am — anivaasi

ಉ: ಜಯನಗರದ ಬೀದಿಗಳು

anivaasi's picture

ರವಿಶಂಕರರೆ,
ಉದ್ಗರಿಸುತ್ತಲೇ ಚಿಂತೆಗೆ ಹಚ್ಚಿಸುವ ನಿಮ್ಮ ಪರಿ ಚೆನ್ನಾಗಿದೆ.
ಏಷಿಯಾಕ್ಕೇ ಒಂದು ಕಾಲದಲ್ಲಿ ಮಾದರಿಯಾಗಿದೆ ಎನಿಸಿಕೊಂಡಿದ್ದ ಜಯನಗರದ ಕತೆ, ಪ್ರತಿಮೆ ನಮ್ಮ ಎಷ್ಟೋ ಉಳಿದ ಸಂಗತಿಗಳ ಮೇಲೂ ನೆರಳು ಚಾಚುತ್ತದೆ.
ಜಯನಗರದ ಅಗಲದ ಬೀದಿಗಳಲ್ಲಿ ಪುಟ್ಟವನಾಗಿದ್ದಾಗ ಭರಾಕನೆ ಓಡಿದ್ದು ನೆನಪಾಯಿತು. ಥ್ಯಾಂಕ್ಸ್...

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಾಹನ ದಟ್ಟಣೆ ಮತ್ತು ಮಾನವೀಯ ಮೌಲ್ಯ
  • ಪಾಬ್ಲೊ ಪಿಕಾಸೊ - ೧೬
  • ’ಆವರಣ’ದ ಬಗ್ಗೆ ವೀಕೆಂಡ್ ಕಾರ್ಯಕ್ರಮ : ಭೈರಪ್ಪ ಬೆಂಗಳೂರಿನಲ್ಲಿ !
  • ಯಾವುದ ಓದಲಿ? ಯಾವುದ ಕೇಳಲಿ?
  • ಪ್ರೀತಿ
Syndicate content

ಲೇಖಕರು

ರವಿಶಂಕರ's picture

ಪೂರ್ಣ ಹೆಸರು
ರವಿಶಂಕರ ರಾಮನಾಥ

ಪರಿಚಯ

ಭಾಷೆ, ಸಂಸ್ಕೃತಿ, ಸಾಹಿತ್ಯ ಮತ್ತು ಪ್ರಪಂಚದ ಬಗ್ಗೆ ತೀವ್ರ ಕುತೂಹಲ... ಮತ್ತು ಆ ಕಾರಣ ಉಂಟಾಗುವ ತಾತ್ಕಾಲಿಕ ಹುಚ್ಚು ಮತ್ತು ಪೆಚ್ಚು..

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಮ್ಮಜಿಖಷೆಸ್ಸ ಖನಮ ಒಜಿ
  • ಅಂತಿಮ ಸಂಸ್ಕಾರ:ಹೊಸ ವಿಧಾನ
  • ದಾವೂದ್ ಇಬ್ರಾಹಿಂ ಬಂಧನ......ನಂತರ
  • ಪ್ರತ್ಯಕ್ಷ ನೋಡಿದರೂ...
  • ನಶಿಸುತ್ತಿರುವ ಶಬ್ದ ಬಳಕೆ
  • ಎಚ್ಚರ! ಡ್ಯೂಪ್ಲಿಕೇಟ್ Volvo ಸೇವೆ ಲಭ್ಯವಿದೆ
  • ಭಾರತದ ಜ್ಞಾನಾವತಾರ

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ನಾಸ್ತಿಕ ಯಾರು? ಹೇಗೆ?
    May 13, 2008 - 5:05pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 13, 2008 - 4:05pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 13, 2008 - 3:47pm
  • anivaasi
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 13, 2008 - 3:44pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 13, 2008 - 3:32pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 13, 2008 - 3:29pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 13, 2008 - 3:24pm
  • roopablrao
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 13, 2008 - 3:23pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 13, 2008 - 3:18pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 13, 2008 - 3:14pm
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

ಸತ್ತೆನೆಂದೆನಬೇಡ; ಸೋತೆನೆಂದೆನಬೇಡ ।
ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ।।
ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು ।
ಮತ್ತೆ ತೋರ್ಪುದು ನಾಳೆ -- ಮಂಕುತಿಮ್ಮ ।।

— ಡಿ.ವಿ.ಜಿ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator