Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಭಾರತದ ಜ್ಞಾನಾವತಾರ

May 10, 2008 - 2:30am — thewiseant

ಸ್ವಾಮಿ ಶ್ರೀ ಯುಕ್ತೇಶ್ವರ ಗಿರಿ (೧೦ ಮೇ ೧೯೫೫-೭ ಮಾರ್ಚ್ ೧೯೩೬)

ಸ್ವಾಮಿ ಶ್ರೀ ಯುಕ್ತೇಶ್ವರ ಗಿರಿ
(೧೦ ಮೇ ೧೯೫೫-೭ ಮಾರ್ಚ್ ೧೯೩೬)

ಇಂದು ಭಾರತದ ಜ್ಞಾನಾವತಾರವೆಂದು ಹೇಳಲಾದ ಸ್ವಾಮಿ ಶ್ರೀ ಯುಕ್ತೇಶ್ವರರ ಜಯಂತಿ. ಇವರ ಬಗ್ಗೆ ಬರೆಯಲು ಹೊರಟರೆ ದೊಡ್ಡ ಪುಸ್ತಕವೇ ಆಗುವುದು.
ಈ ಮಹಾತ್ಮರ ಬಗ್ಗೆ ತಿಳಿಯಬಯಸುವವರು ಪರಮಹಂಸ ಯೋಗಾನಂದರ "ಯೋಗಿಯ ಆತ್ಮ ಕಥೆ" (ಇಂಗ್ಲಿಷ್ ನಲ್ಲಿ "Autobiography of a Yogi" ಪುಸ್ತಕವನ್ನು ಓದಬಹುದು.
ಈ ಲೇಖನದಲ್ಲಿ ಅವರ ಬಗ್ಗೆ ಹೇಳಲಾದ ಕೆಲವು ಮಾತುಗಳನ್ನಷ್ಟೇ ಉಲ್ಲೇಖಿಸಿರುವೆ.

ಶ್ರೀಗಳು ಮೊದಲ ಬಾರಿಗೆ ತಮ್ಮ ಆಶ್ರಮಕ್ಕೆ ಬಂದ ತಮ್ಮ ಪ್ರಿಯ ಶಿಷ್ಯ ಪರಮಹಂಸ ಯೋಗಾನಂದರು ತಮ್ಮ ಜೀವನದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ " ನನ್ನ ವಂಶದ ಹೆಸರು ಪ್ರಿಯನಾಥ್ ಕರಾರ್. ಈ ಸಿರಾಂಪುರದಲ್ಲಿ ಹುಟ್ಟಿದೆ. ತಂದೆ ಶ್ರೀಮಂತ ವ್ಯಾಪಾರಿ. ಈಗ ನನ್ನ ಆಶ್ರಮವಾಗಿರುವ ಈ ಅನುವಂಶಿಕ ಭವನವನ್ನು ನನಗೆ ಬಿಟ್ಟು ಹೋದರು. ನನ್ನ ಸಾಂಪ್ರದಾಯಿಕವಾದ ಶಾಲಾಶಿಕ್ಷಣ ಬಹಳ ಕಡಿಮೆ. ನನ್ನ ಪಾಲಿಗೆ ಅದು ಮಂದಗತಿಯದೂ ಆಳವಿಲ್ಲದುದೂ ಆಗಿತ್ತು. ಯೌವನದ ಪ್ರಾರಂಭದಲ್ಲೇ ಗೃಹಸ್ಥನ ಹೊಣೆಗಾರಿಕೆಯನ್ನು ಹೊತ್ತೆ; ಒಬ್ಬಳು ಮಗಳಿದ್ದಾಳೆ, ಈಗ ಅವಳಿಗೆ ಮದುವೆಯಾಗಿದೆ. ನನ್ನ ನಡುಹರೆಯದ ಜೀವನ ವಾರಣಾಸಿಯ ಯೋಗಾವತಾರ ಶ್ರೀ ಲಾಹಿರಿ ಮಹಾಶಯರ ನೇತೃತ್ವದಿಂದ ಅನುಗ್ರಹೀತವಾಯಿತು. ನನ್ನ ಪತ್ನಿ ತೀರಿಕೊಂಡ ಮೇಲೆ ನಾನು ಸಂನ್ಯಾಸವನ್ನು ಸ್ವೀಕರಿಸಿದೆ. ಶ್ರೀ ಯುಕ್ತೇಶ್ವರ ಗಿರಿ ಎಂದು ನನಗೆ ಹೊಸ ನಾಮಕಾರಣವಾಯಿತು. ಇದೇ ನನ್ನ ಸರಳ ವೃತ್ತಾಂತ."
ಎಲ್ಲ ಜೀವನ ಚರಿತ್ರೆಗಳ ರೂಪರೇಷೆಗಳಂತೆಯೇ ಅವರ ಮಾತುಗಳು ಒಳಗಿನ ವ್ಯಕ್ತಿತ್ವವನ್ನು ತೋರದೆ ಹೊರಗಿನ ಸಂಗತಿಗಳನ್ನು ಮಾತ್ರ ಕೊಟ್ಟಿವೆ.

ಶ್ರೀ ಯುಕ್ತೇಶ್ವರರ ಮಹಾಸಮಾಧಿಯ ಸಂದರ್ಭದಲ್ಲಿ ಕೊಲ್ಕತಾದ ಪ್ರಮುಖ ದಿನಪತ್ರಿಕೆಯಾದ "ಅಮೃತ್ ಬಜಾರ್ ಪತ್ರಿಕಾ" ಅವರಿಗೆ ಶ್ರದ್ದಾಂಜಲಿ ಸಲ್ಲಿಸುತ್ತಾ "ಭಗವದ್ಗೀತೆಯ ಸುಪ್ರಸಿದ್ದ ವ್ಯಾಖ್ಯಾನಕಾರರಲ್ಲಿ ಒಬ್ಬರಾದ ಸ್ವಾಮೀಜಿಯವರು ವಾರಣಾಸಿಯ ಯೋಗಿರಾಜ ಶ್ರೀ ಶ್ಯಾಮ ಚರಣ ಲಾಹಿರಿ ಮಹಾಶಯರ ಶಿಷ್ಯರು. ಭಾರತದಲ್ಲಿ ಹಲವು ಯೋಗದಾ ಸತ್ಸಂಗ ಕೇಂದ್ರಗಳ ಸ್ಥಾಪಕರೂ , ತಮ್ಮ ಪ್ರಮುಖ ಶಿಷ್ಯರೂ ಆದ ಪರಮಹಂಸ ಯೋಗಾನಂದರು ಪಶ್ಚಿಮಕ್ಕೆ ಒಯ್ದ ಯೌಗಿಕ ಕಾರ್ಯಚಟುವಟಿಕೆಗಳಿಗೆ ಹಿನ್ನೆಲೆಯಲ್ಲಿ ಮಹಾಪ್ರೇರಕ ಶಕ್ತಿಯಾಗಿದ್ದವರೂ ಸ್ವಾಮೀಜಿಯವರೇ. ಶ್ರೀ ಯುಕ್ತೇಶ್ವರರ ಭವಿಷ್ಯ ನಿರ್ಮಾಣಶಕ್ತಿ ಹಾಗೂ ಗಾಢವಾದ ಸಿದ್ಧಿಯೇ ಸ್ವಾಮಿ ಯೋಗಾನಂದರನ್ನು ಪ್ರೇರಿಸಿ ಸಮುದ್ರಗಳನ್ನು ದಾಟಿ ಹೋಗಿ ಅಮೇರಿಕಾದಲ್ಲಿ ಭಾರತದ ಸಂತರ ಸಂದೇಶವನ್ನು ಪ್ರಚುರಪಡಿಸುವಂತೆ ಮಾಡಿದುದು.
"ಭಗವದ್ಗೀತೆ ಮತ್ತಿತರ ಧರ್ಮಗ್ರಂಥಗಳ ಮೇಲೆ ಅವರು ಬರೆದಿರುವ ವ್ಯಾಖ್ಯಾನವನ್ನು ನೋಡಿದರೆ ಪೌರಾತ್ಯ ಹಾಗೂ ಪಾಶ್ಚ್ಯಾತ್ಯ ದರ್ಶನದ ಮೇಲೆ ಶ್ರೀ ಯುಕ್ತೇಶ್ವರರು ಎಂಥಹಾ ಗಾಢವಾದ ಅಧಿಕಾರವನ್ನು ಪಡೆದಿದ್ದರೆಂದು ಪ್ರಮಾಣಿತವಾಗುತ್ತದೆ. ಅಲ್ಲದೆ ಪೂರ್ವ ಪಶ್ಚಿಮಗಳನ್ನು ಬೆಸೆಯಲು ಬಯಸುವವರಿಗೆ ಇದು ಕಣ್ಣು ತೆರೆಸಿದಂತಾದೀತು. ಎಲ್ಲಾ ಧಾರ್ಮಿಕ ಪಂಥಗಳನ್ನು ಒಟ್ಟುಗೂಡಿಸಬೇಕೆಂದು ಬಯಸುತ್ತಿದ್ದುದರಿಂದ ಶ್ರೀ ಯುಕ್ತೇಶ್ವರರು ಧರ್ಮದಲ್ಲಿ ವೈಜ್ಞಾನಿಕ ಧೋರಣೆಯನ್ನು ಬೋಧಿಸಲು ಅನುಕೂಲವಾಗುವಂತೆ ಎಲ್ಲಾ ಪಂಥಗಳ ಮುಖ್ಯಸ್ಥರ ಸಹಕಾರವನ್ನು ಪಡೆದು 'ಸಾಧು ಸಭಾ 'ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ತಮ್ಮ ದೇಹತ್ಯಾಗದ ಸಮಯದಲ್ಲಿ ತಮ್ಮ ಸ್ಥಾನದಲ್ಲಿ ಪರಮಹಂಸ ಯೋಗಾನಂದರನ್ನು ಸಾಧು ಸಭೆಯ ಅಧ್ಯಕ್ಷರನ್ನಾಗಿ ನಾಮಕರಣ ಮಾಡಿದರು..."

ಈ ಮಹಾತ್ಮರ ಜೀವನದ ವಿವರಗಳು ಇಂಗ್ಲಿಷ್ ಬಾಷೆಯಲ್ಲಿರುವ ಈ ಕೊಂಡಿಯಲ್ಲಿ ಉಚಿತವಾಗಿ ಲಭ್ಯವಿದೆ
http://www.anandaindia.org/inspiration/books/ay/index.html

  • ಅಧ್ಯಾತ್ಮ
Ornamental seperator
  • Login or register to post comments
  • 180 hits
  • Email this page
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಯೋಗಿಯ ಆತ್ಮ ಕಥೆ
  • ನನ್ನ ಮೆಚ್ಚಿನ ಪುಸ್ತಕ
  • ವಿಶ್ವ ಗೋ ಸಮ್ಮೇಳನ -ಶ್ರೀ ರಾಮಚ೦ದ್ರಾಪುರ ಮಠ, ಹೊಸನಗರ,ಶಿವಮೊಗ್ಗ ಜಿಲ್ಲೆ
  • ಮಹಾತ್ಮಾ ಗಾಂಧಿಯವರ ಜ್ಞಾಪಕಾರ್ಥ
  • ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ
Syndicate content

ಲೇಖಕರು

thewiseant's picture

ಪೂರ್ಣ ಹೆಸರು
ಎನ್. ಅಂಜನ್ ಕುಮಾರ್

ಪರಿಚಯ

ಯೋಗ, ಆಧ್ಯಾತ್ಮ , ಗಾಂಧೀವಾದ, ಓದು, ಬರವಣಿಗೆ, ಮಕ್ಕಳ ಸಾಹಿತ್ಯ , ಇಂಟರ್‍ನೆಟ್ ಮುಂತಾದುವು ನನ್ನ ಆಸಕ್ತಿಯ ವಿಷಯಗಳು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅನನ್ಯ ಅಲ್ಲಮ - ೮
  • ಜನಪದ ಕಥೆ
  • ಅಮ್ಮಜಿಖಷೆಸ್ಸ ಖನಮ ಒಜಿ
  • ಅಂತಿಮ ಸಂಸ್ಕಾರ:ಹೊಸ ವಿಧಾನ
  • ದಾವೂದ್ ಇಬ್ರಾಹಿಂ ಬಂಧನ......ನಂತರ
  • ಪ್ರತ್ಯಕ್ಷ ನೋಡಿದರೂ...
  • ನಶಿಸುತ್ತಿರುವ ಶಬ್ದ ಬಳಕೆ

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿಧಿ
    ಉ: ಅಡುಗೆಯ ಸಂಭ್ರಮ
    May 14, 2008 - 11:32am
  • ಶ್ರೀನಿಧಿ
    ಉ: ಕಟಪಯಾದಿ ಸೂತ್ರ
    May 14, 2008 - 11:18am
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 14, 2008 - 11:03am
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 14, 2008 - 10:59am
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 14, 2008 - 10:51am
  • sanket
    ಉ: ಕಟಪಯಾದಿ ಸೂತ್ರ
    May 14, 2008 - 9:58am
  • Sunil Jayaprakash
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 14, 2008 - 8:32am
  • kalpana
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 14, 2008 - 5:05am
  • kalpana
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 14, 2008 - 2:30am
  • ಗಣೇಶ
    ಉ: ಅಡುಗೆಯ ಸಂಭ್ರಮ
    May 13, 2008 - 11:54pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 15 ಅತಿಥಿಗಳು ಆನ್ಲೈನ್ ಇರುವರು.

ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator