Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ದಾವೂದ್ ಇಬ್ರಾಹಿಂ ಬಂಧನ......ನಂತರ

May 12, 2008 - 9:18am — csomsekraiah

ಪಾಕಿಸ್ಥಾನದ ನಾಯಕರು ತಲೆ ರೋಸಿ ಹೋಗಿದ್ದರು ,ರಾಷ್ಟ್ರದಲ್ಲಿ ದಿನ ನಿತ್ಯವೆನ್ನುವಂತೆ ಬಾಂಬು ದಾಳಿಗಳು , ಮಾದಕ ದ್ರವ್ಯಗಳ , ಆಯುಧಗಳ , ಅಳತೆ ಇಲ್ಲದ ಕಳ್ಳ ಸಾಗಾಣಿಕೆ ಇದು ಹೀಗೆಯೇ ಮುಂದುವರಿದರೆ ರಾಷ್ಟ್ರವೂ ಉಳಿಯುವುದಿಲ್ಲ ,ಪ್ರಪಂಚದ ದೃಷ್ಟಿಯಲ್ಲಿ ದೇಶದ ಘನತೆಯೂ ಮಣ್ಣೂಗೂಡುತ್ತದೆ , ಎಂಬುದು ಅವರಿಗೆ ಸ್ಪಷ್ಟವಾಯಿತು .

ಇದೆಲ್ಲದರ ಮೂಲವನ್ನು ಪತ್ತೆ ಹಚ್ಚಲು ಅವರು ಒಂದು ರಹಸ್ಯ ತನಿಖೆ ಆರಂಭಿಸಿದರು ,ಫಲಿತಾಂಶ ಅವರನ್ನು ದಂಗುಬಡಿಸಿತ್ತು ,ಈ ವಿದ್ರೋಹಿ ಚಟುವಟಿಕೆಗಳಲ್ಲಿ ಪಾಕೀಸ್ಥಾನೀ ರಾಷ್ಟ್ರೀಯರ ಸಂಖ್ಯೆ ತುಂಬಾ ಕಡಿಮೆ ಇತ್ತು . ಬಹುತೇಕರು ಪಾಕೀಸ್ಥಾನದಲ್ಲಿ ಆಶ್ರಯ ಪಡೆದಿದ್ದ ವಿದೇಶೀಯರೇ ಆಗಿದ್ದರು .ಅದರಲ್ಲೂ ದಾವೂದ್ ಇಬ್ರಾಹಿಂ ಎಂಬ ಭಾರತೀಯ ಮೂಲದ ವ್ಯಕ್ತಿಯದೇ ಕಾನೂನು ಬಾಹಿರ ಚಟುವಟಿಕೆಗಳ ಸಿಂಹ ಪಾಲು ಇರುವುದು ಅವರಿಗೆ ಮನವರಿಕೆಯಾಯಿತು .

ಇದನ್ನು ಪರಿಹರಿಸಿಕೊಳ್ಳಲು ಅವರು ಧೃಢ ನಿರ್ಧಾರ ಮಾಡಿದರು ದಾವೂದ್ ನನ್ನು ಬಂಧಿಸಿ ಜೈಲಿನಲ್ಲಿಟ್ಟರು .ಮಾಮೂಲಿನಂತೆ ಅಲ್ಲಲ್ಲಿ ಗಲಭೆಕೋರರ , ಗೂಂಡಾಗಳ ಗಲಾಟೆಗಳು ನಡೆದವಾದರೂ ಸರ್ಕಾರ ಅದಕ್ಕೆ ಸೊಪ್ಪು ಹಾಕಲಿಲ್ಲ . ಅವರಲ್ಲಿ ಬುದ್ದಿವಂತ ಮುತ್ಸದ್ದಿಯೊಬ್ಬ , ಈ ತಲೆ ನೋವನ್ನು ತಾವು ಅನುಭವಿಸುವುದಕ್ಕಿಂತಾ ಭಾರತಕ್ಕೇ ವರ್ಗಾಯಿಸುವುದು ಬುದ್ದಿವಂತಿಕೆ ಎಂದು ಸಲಹೆ ನೀಡಿದ .

’ಹೀಗೆ ಹೀಗೆ ದಾವೂದ್ ನನ್ನು ಬಂಧಿಸಿದ್ದೇವೆ , ಕೋರ್ಟಿಗೆ ಹಾಜರು ಪಡಿಸಲು ನಮ್ಮ ನೆಲದಲ್ಲಿ ಅವನ ಅಪರಾಧಗಳು ಕಾಣಿಸುತ್ತಿಲ್ಲ ,ಭಾರತದಲ್ಲಿ ಅವನ ವಿರುದ್ದ ಉಗ್ರ ಸ್ವರೂಪದ ಅಪರಾಧದ ದಾಖಲೆಗಳಿವೆಯೆಂದು ತಿಳಿದು ಬಂದಿದೆ, ಭಾರತ ಕೋರುವುದಾದರೆ ಭಾರತಕ್ಕೆ ಅವನನ್ನು ಹಸ್ತಾಂತರಿಸುತ್ತೇವೆ ’ಎಂಬ ಅರ್ಥದ ಸಂದೇಶ ಭಾರತೀಯ ವಿದೇಶಾಂಗ ಇಲಾಖೆಗೆ ಬಂದು ತಲುಪಿದಾಗ , ಇಡೀ ದೇಶ ಕುಣಿದು ಕುಪ್ಪಳೀಸುವುದೊಂದೇ ಬಾಕಿ ಇತ್ತು .ನೆರೆಯ ರಾಷ್ಟ್ರಕ್ಕೆ ಇಂತಹ ಸದ್ಬುದ್ದಿಯನ್ನು ಕೊಟ್ಟ ಆ ಭಗವಂತನನ್ನು ಎಷ್ಟು ಕೊಂಡಾಡಿದರೂ ತೀರದಾಗಿತ್ತು .

ಸತತ ಸಂಪರ್ಕದ ನಂತರ ದಾವೂದನ ಹಸ್ತಾಂತರದ ದಿನ ನಿಗದಿಯಾಗಿಯೇ ಬಿಟ್ಟಿತು , ಅವನನ್ನು ವಿಶೇಷ ವಿಮಾನದಲ್ಲಿ ಭಾರತಕ್ಕೆ ಕರೆತಂದ ಪಾಕಿಸ್ಥಾನದ ಭದ್ರತಾ ಅಧಿಕಾರಿಗಳು , ವಿದ್ಯುಕ್ತವಾಗಿ ಅವನನ್ನು ಭಾರತೀಯ ಅಪರಾಧ ತನಿಖಾ ದಳಕ್ಕೆ ಹಸ್ತಾಂತರ ಮಾಡಿ, ಅವನನ್ನು ಒಪ್ಪಿಸಿದ ದಾಖಲೆಗಳಿಗೆ ಸಹಿ ಪಡೆದು ಹೋದರು .

ಅತ್ಯಂತ ಬಿಗಿ ಭದ್ರತೆಯೊಡನೆ ಅವನನ್ನು ದೆಹಲಿಯ ಜೈಲಿನಲ್ಲಿಡಲಾಯಿತು . ಮಹಾ ರಾಷ್ಟ್ರ ಪೋಲೀಸರು ಮುಂಬಯಿಯಲ್ಲಿಯೇ ಅವನ ಪಾತಕ ಜಗತ್ತು ವಿಸ್ತೃತವಾಗಿರುವುದರಿಂದ ಮುಂಬೈ ಪೋಲೀಸರ ವಶಕ್ಕೆ ಅವನನ್ನು ನೀಡಲು ಕೋರಿಕೆ ಸಲ್ಲಿಸಿದರು . ನಂತರ ಅನೇಕ ರಾಜ್ಯಗಳು ತನಿಖೆಗಾಗಿ ಅವನನ್ನು ವಶಕ್ಕೆ ಪಡೆಯಲು ಅರ್ಜಿಗಳನ್ನು ಸಲ್ಲಿಸಿದವು . ಅವನ ಬಂಧನ ಮಾನವ ಹಕ್ಕುಗಳಿಗನುಗುಣವಾಗಿ ನಡೆದಿದೆಯೇ? ಜೈಲಿನಲ್ಲಿ ಅವನನ್ನು ನಡೆಸಿಕೊಳ್ಳುತ್ತಿರುವ ರೀತಿ ಸಮರ್ಪಕವಾಗಿದೆಯೇ ? ಎಂದೆಲ್ಲಾ ಭಾರತೀಯ ಒಳ್ಳೆಯ ಮನಸ್ಸುಗಳು ತನಿಖೆಯನ್ನು ಆರಂಭಿಸಿದವು, ಇದೆಲ್ಲದರಿಂದ ತಲೆ ಚಿಟ್ಟು ಹಿಡಿದ ಕೇಂದ್ರ ಸರ್ಕಾರ ಅವನಿಗಾಗಿ ಒಂದು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿ , ಎಲ್ಲರ ಅಹವಾಲುಗಳನ್ನು ಆ ನ್ಯಾಯಲಯಕ್ಕೆ ಸಲ್ಲಿಸುವಂತೆ ಸೂಚಿಸಿ ಕೈ ತೊಳೆದುಕೊಂಡಿತು . ಅಷ್ಟರಲ್ಲಿ ರಾಷ್ಟ್ರದ ಸುಪ್ರಸಿದ್ದ ವಕೀಲರೊಬ್ಬರು ಅವನ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರು , ಯಥಾ ಪ್ರಕಾರ ಭಾರತೀಯ ತನಿಖಾ ಸಂಸ್ಥೆಗಳು ಇದನ್ನು ಬಲವಾಗಿ ವಿರೋಧಿಸಿ ವಾದ ಮಂಡಿಸಿದರು .

ಎಲ್ಲವನ್ನೂ ಆಲಿಸಿದ ನ್ಯಾಯಾಲಯ ದಾವೂದ್ ಇಬ್ರಾಹಿಮ್ ನ ಅಪರಾಧಗಳು ಮೇಲು ನೋಟಕ್ಕೆ ಸಾಬೀತಾಗಿರುವುದರಿಂದ , ಅವನ ಕೃತ್ಯಗಳು ರಾಷ್ಟ್ರ ವಿದ್ರೋಹದ ಪರಿಧಿಯಲ್ಲಿ ಬರುವುದರಿಂದ ಜಾಮೀನು ಸಾಧ್ಯವಿಲ್ಲವೆಂದು ತೀರ್ಪು ನೀಡಿತು .

ನಂತರ ಅವನ ಅಂತಸ್ತಿಗನುಗುಣವಾಗಿ , ವಿಶೇಷ ಜೈಲನ್ನು ನಿರ್ಮಿಸಿ , ಎಲ್ಲಾ ವಿಧವಾದ ಸಕಲ ಸವಲತ್ತುಗಳೊಡನೆ ಅವನ ಜೈಲಿನ ದಿನಗಳು ಕಳೆದು ಹೋಗಲು ಎಲ್ಲಾ ಏರ್ಪಾಟುಗಳೂ ನಡೆದವು . ವರ್ಷಾನುಗಟ್ಟಲೆ ಕೇಸು ನಡೆದರೂ ತನಿಖಾ ಸಂಸ್ಥೆಗಳಿಗೆ ಅವನ ಮೇಲಿನ ಆರೋಪಗಳನ್ನು ಸಾಬೀತುಪಡಿಸಲು ದಾಖಲೆಗಳ ಅಭಾವದಿಂದ ಆರೋಪ ಪಟ್ಟಿ ಸಲ್ಲಿಸಲು ಅವರು ವಿಫಲರಾದರು .ಕೆಲವು ಉತ್ಸಾಹಿ ಯುವ ಅಧಿಕಾರಿಗಳು ಅವನ ಮೇಲೆ ದಾಖಲಾಗಿದ್ದ ಅಪರಾಧಗಳಿಗೆ ಸಂಬಂಧಪಟ್ಟ ಫೈಲುಗಳನ್ನು ಪಡೆಯಲು ಅನೇಕ ಕಛೇರಿಗಳಿಗೆ ಎಡತಾಕಿದರಾದರೂ ಆಶ್ಚರ್ಯಕಾರಕವಾಗಿ ಅನೇಕ ಫೈಲುಗಳು ಕಾಣೆಯಾಗಿದ್ದುದು ಅವರ ಉತ್ಸಾಹಕ್ಕೆ ತಣ್ಣೀರು ಬೀಳಲು ಕಾರಣವಾಯಿತು .

ಈ ವೇಳೆಗೆ ಅನವಶ್ಯಕವಾಗಿ ವ್ಯಕ್ತಿಯೊಬ್ಬನನ್ನು ಬಂಧನದಲ್ಲಿ ಮುಂದುವರಿಸುವುದನ್ನು ಪ್ರತಿಭಟಿಸಿದ ಭಾರತೀಯ ಚಿಂತನಶೀಲ ಮನಸ್ಸುಗಳು , ಅವನ ಬಿಡುಗಡೆಗೆ ಗಲಭೆ ಶುರು ಮಾಡಿದವು . ಕೋರ್ಟುಗಳು ತನಿಖಾಧಿಕಾರಿಗಳಿಗೆ ಛೀಮಾರಿ ಹಾಕಿದ್ದೇ ಬಂತು ,ಅಧಿಕಾರಿಗಳು ನ್ಯಾಯಾಲಯದಿಂದ ಉಗಿಸಿಕೊಂಡು ,ಏನೂ ಆಗಿಲ್ಲವೆಂಬಂತೆ ಹೊರ ಬಂದು ಮುಗುಳ್ನಕ್ಕರು . ಯಥಾ ಪ್ರಕಾರ ಅಪರಾಧ ಸಾಬೀತು ಪಡಿಸಲು ವಿಫಲರಾದ ಅಧಿಕಾರಶಾಹಿಯನ್ನು ತೆಗಳಿದ ನ್ಯಾಯಾಲಯ ಆಪಾದನೆಗಳು ಸ್ಥಿರಪಡದ ಕಾರಣವನ್ನು ಕೊಟ್ಟು ದಾವೂದನನ್ನು ಬಿಡುಗಡೆ ಮಾಡಿತು .

ಅವನು ಜೈಲಿನಿಂದ ಹೊರ ಬರುವ ದಿನ ಸಾವಿರಾರು ಅಭಿಮಾನಿಗಳು ಹಾರ ತುರಾಯಿಯೊಂದಿಗೆ ಅವನನ್ನು ಸ್ವಾಗತಿಸಲು ಕಾದಿದ್ದರು , ಮುಂದೆ ಯಥಾ ಪ್ರಕಾರ ಭಾರತೀಯ ಪ್ರಜೆಯಾಗಿದ್ದ ಇಬ್ರಾಹಿಂ ಸಾಹೇಬರು ಚುನಾವಣೆಗೂ ನಿಂತು ಗೆದ್ದೂ ಬಂದರು; ಕೇಂದ್ರದಲ್ಲಿ ಮಂತ್ರಿಯೂ ಆದರು . ಅವರ ಮೊದಲಿನ ಎಲ್ಲ ದಂಧೆಗಳೂ ಈಗ ಗೌರವಯುತವಾಗಿ, ನಿರಾತಂಕವಾಗಿ ಝಡ್ + ಭದ್ರತೆಯೊಡನೆ ಸಾಗುತ್ತಲೇ ಇವೆ, ಇಬ್ರಾಹಿಂ ಸಾಹೇಬರು ಮೀಸೆಯ ಆಡಿಯಲ್ಲಿ ನಗುತ್ತಲೇ ಇದ್ದಾರೆ . ( ಈ ಲೇಖನ ಸಿದ್ದವಾಗಿ ಒಂದು ವಾರವಾಗಿತ್ತು , ಅಪ್ ಲೋಡ್ ಮಾಡಲು ಸಮಯ ದೊರಕಿರಲಿಲ್ಲ . ಇಂದಿನ ಪ್ರಜಾವಾಣಿಯಲ್ಲಿ ದಾವೂದನ ಬಗ್ಗೆ ಪಾಕೀಸ್ಥಾನದ ನಿಲುವಿನಲ್ಲಾದ ಬದಲಾವಣೆಯ ವರದಿಯನ್ನು ನೋಡಿ ನಗು ಬಂತು )

  • ಲಲಿತ ಪ್ರಬಂಧ, ಹಾಸ್ಯ
Ornamental seperator
  • Login or register to post comments
  • 553 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 12, 2008 - 2:12pm — ಗಣೇಶ

ಉ: ದಾವೂದ್ ಇಬ್ರಾಹಿಂ ಬಂಧನ......ನಂತರ

ಗಣೇಶ's picture

ಸೋಮಣ್ಣನವರೆ,

ನೂರಕ್ಕೆ ನೂರು- ನೀವು ಬರೆದಂತೆ ನಡೆಯುತಿತ್ತು.

ವೀರಪ್ಪನ್ ಅನ್ನು ಜೀವಂತ ಹಿಡಿದಿರುತ್ತಿದ್ದರೆ, ಈ ಚುನಾವಣೆಯಲ್ಲಿ ೩ ಪಕ್ಷದವರೂ ಅವನನ್ನು ಸೇರಿಸಲು ನಾ ಮುಂದು ತಾ ಮುಂದು ಎಂದು ಪ್ರಯತ್ನಿಸುತ್ತಿದ್ದರು.ಹೇಗೂ ಕೋಟಿಗಟ್ಟಲೆ ಹಣ ಅವನ ಬಳಿ ಇತ್ತು.

ಜೈಲಿನಿಂದಲೇ ಇಲಕ್ಶನ್ ಗೆ ನಿಂತು, ಮುಂದಿನ ಸಂಪುಟದಲ್ಲಿ ಅರಣ್ಯ ಮಂತ್ರಿ/ಗೃಹ ಮಂತ್ರಿ/ಮುಖ್ಯಮಂತ್ರಿ(!?) ಆಗುತ್ತಿದ್ದನೋ ಏನೋ..

-ಗಣೇಶ.

  • Login or register to post comments
  • link
  • Email this ಪ್ರತಿಕ್ರಿಯೆ
May 13, 2008 - 10:08pm — csomsekraiah

ಉ: ದಾವೂದ್ ಇಬ್ರಾಹಿಂ ಬಂಧನ......ನಂತರ

csomsekraiah's picture

ಪ್ರೀತಿಯ ಗಣೇಶ್ ’ನಡೆಯುತ್ತಿತ್ತು ’ ಅಲ್ಲ ’ನಡೆದೀತು ಮುಂದೆ’ ಯೋಚಿಸಬೇಡಿ , ನಾವಿರುವ ಭಾರತದಲ್ಲಿ ಯಾವುದೂ ಅಸಂಭವವಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪಟಾಕಿ ಸಿಡಿಸಿದ್ದಕ್ಕೆ ಪಾತಕಿ ಪಟ್ಟವೇ?!
  • ರಾಜ ಮುದ್ದು ರಾಜ
  • ಭಾರತೀಯ ಪ್ರಜಾಸತ್ತೆ
  • ಹೊಳಲ್ಕೆರೆಗೆ ಪ್ರಥಮಸ್ಥಾನ ; ಚಂದ್ರಶೇಖರನ ಅಖಂಡವಿಜಯ !
  • ಸಂತಸದ ಗುಟ್ಟು
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:37pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:30pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:29pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:23pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 16 ಅತಿಥಿಗಳು ಆನ್ಲೈನ್ ಇರುವರು.

ದೊಡ್ಡ ಕಂಪನಿಯೊಂದಕ್ಕೆ ಕೆಲಸ ಮಾಡುವುದೆಂದರೆ ರೈಲು ಪ್ರಯಾಣಮಾಡಿದಂತೆ. ನೀವು ಅರವತ್ತು ಮೈಲು ವೇಗದಲ್ಲಿದ್ದರೂ ಅಥವಾ ರೈಲು ಅರವತ್ತು ಮೈಲು ವೇಗದಲ್ಲಿದ್ದರೂ, ನೀವು ಮಾತ್ರ ಕುಳಿತಿರಲೇ ಬೇಕು.

— ಜೆ. ಪಾಲ್ ಗೆಟ್ಟಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator