ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಅನನ್ಯ ಅಲ್ಲಮ - ೮

May 13, 2008 - 8:07pm — csomsekraiah

ಅಲ್ಲಮನ ವ್ಯಕ್ತ ಜೀವನದಲ್ಲಿ ಅತ್ಯಂತ ಗೋಜಲಾದ ಸಂಗತಿಯೆಂದರೆ , ವಿಕಳ ಸ್ಥಿತಿಯಲ್ಲಿದ್ದ ಅಲ್ಲಮನಿಗೆ , ಅನಿಮಿಷ ದೇವರು ಇಷ್ಟಲಿಂಗವನ್ನು ಪ್ರಸಾದಿಸಿ , ಅವನನ್ನು ಅನುಗ್ರಹಿಸಿದ ಸಂದರ್ಭ . ಇದನ್ನು ಐತಿಹಾಸಿಕವಾಗಿ ನಿಷ್ಕರ್ಷಿಸುವುದು ಅತ್ಯಂತ ಕಠಿಣ ಸವಾಲು .

ಅನಿಮಿಷನಿಗೂ ಬಸವಣ್ಣನೇ ಲಿಂಗವನ್ನು ಪ್ರಸಾದಿಸಿದ ಎನ್ನುವುದನ್ನು ಸಮರ್ಥಿಸುವ ವಚನಗಳು , ಯಾವ ತಾರ್ಕಿಕ ನಿಲುವಿಗೆ ಬರಲೂ ಸಹಕಾರಿಯಾಗುವುದಿಲ್ಲ .ಪ್ರಭು ಲಿಂಗ ಲೀಲೆಯಲ್ಲಿ ,ಪ್ರಭು ದೇವರ ರಗಳೆಯಲ್ಲಿ ಅನಿಮಿಷನೊಡನೆ ಅಲ್ಲಮನ ಸಮರಸ ಭಾವದ ವಿಷಯದಲ್ಲಿ ಭಿನ್ನ ದೃಷ್ಟಿಕೋನಗಳಿದ್ದರೂ ; ಅಲ್ಲಮನಿಗೆ ಅನಿಮಿಷನ ಸಂದರ್ಶನ ಭಾಗ್ಯವೊದಗುವುದು ಮಾತ್ರ ಮಾನವ ಮಾತ್ರರಿಗೆ ದುರ್ಲಭವಾದ ನೆಲದ ಅಂತರಾಳದಲ್ಲಿ . ಎನ್ನುವ ವಿಚಾರದಲ್ಲಿ ಏಕಾಭಿಪ್ರಾಯವಿದೆ .

ಹೀಗೆ ಜಗತ್ತಿನ ಅವಗಾಹನೆಯಿಂದ ಇಡಿಯ ಒಂದು ಮಂದಿರವೇ ಮರೆಯಾಗಿ ಹೋಗಲು ಶತಮಾನಗಳೇ ಬೇಕು!ಈ ಶತಮಾನಗಳ ಮುನ್ನಿನ ಅನಿಮಿಷನಿಗೆ , ಮಂಗಳವೇಢೆಯಲ್ಲಿ , ಕಲ್ಯಾಣದಲ್ಲಿ ಎರಡು ಮೂರು ದಶಕಗಳ ಅವಧಿಯಲ್ಲಿ ಕಾರ್ಯಾಚರಣೆ ನಡೆಸಿದ ಬಸವಣ್ಣನೇ ಗುರು ಎಂಬ ಮಾತು , ಅಭಿಮಾನದ ದೃಷ್ಟಿಯಿಂದ ಸರಿ ಎನಿಸಬಹುದಾದರೂ ತಾರ್ಕಿಕವಾಗಿ ನಿಲ್ಲುವುದಿಲ್ಲ.

ಐತಿಹಾಸಿಕವಾಗಿ ಹನ್ನೆರಡನೆಯ ಶತಮಾನದಲ್ಲಿ ಅಲ್ಲಮನಿಂದ ಲೋಕದ ಕಣ್ಣಿಗೆ ಬಿದ್ದ ಆ ದೇವ ಮಂದಿರವಾದರೂ ಯಾವುದು? ಅದು ಬನವಸೆಯಲ್ಲಿದ್ದಿತೇ? ಬಳ್ಳಿಗಾವೆಯಲ್ಲಿದ್ದಿತೇ? ಅಥವಾ ಬೇರೆಲ್ಲಾದರೂ ಇದ್ದಿತೇ ? ಎಂಬ ಬಗ್ಗೆ ಯಾವುದೇ ವಿವರಗಳಿಲ್ಲ . ಕಳೆದ ಸಾವಿರಾರು ವರ್ಷಗಳ ಅನೇಕ ಪುಣ್ಯ ಸ್ಥಳಗಳು ಭಾರತದ ಎಲ್ಲ ಕಡೆ ಗುರುತಿಸಲ್ಪಡುತ್ತಿದ್ದರೂ, ಕರ್ನಾಟಕದಲ್ಲಿ ಅಘಟನಾ ಘಟನೆಯೊಂದು ನಡೆದುದರ ಸ್ಮಾರಕವಾಗಿ ಅಂತಹ ದೇವ ಮಂದಿರವೊಂದು ಎಲ್ಲಿಯೂ ಪೌರಾಣಿಕ ಸಾಕ್ಷಿಯಾಗಿಯಾದರೂ ಉಳಿದಿಲ್ಲ.

ಹಾಗಾದರೆ ಭೌತಿಕವಾಗಿ ಅಲ್ಲಮನ ಜೀವನದಲ್ಲಿ ಘಟಿಸಿತೆಂದು ನಂಬಲಾದ ಪವಿತ್ರ ಸ್ಥಳವೊಂದು ಯಾವ ಕಾರಣಕ್ಕೆ ಅಗೋಚರವಾಯಿತು? ಆರೀತಿಯ ಅನುಭಾವ ಜನ್ಯ ಸ್ಮೃತಿಯೊಂದು ಭೌತಿಕವಾಗಿ ಘಟೀಸಿತೇ ? ಅಥವಾ ಅದೊಂದು ಅನುಭೂತಿಯೇ? ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಲು ಪ್ರಶಸ್ತವಾದ ಸ್ಥಳ ಅಲ್ಲಮನವೇ ವಚನಗಳು .

ಪೃಥ್ವಿಯ ಎಲ್ಲರಂತೆ ಸಂಸಾರದಲ್ಲಿ ತಲ್ಲೀನನಾದ ಅಲ್ಲಮನಿಗೆ ,ಅವನ ಸ್ಥಾನ ಅದಲ್ಲವೆಂದು ಮನವರಿಕೆ ಮಾಡಲು ,ಅದಾವ ಮಾಯೆ ಅಲ್ಲಮನಿಂದ ಅವನ ಮನದನ್ನೆಯನ್ನು ಸೆಳೆದೊಯ್ಯಿತೋ? ಅದರ ಮರ್ಮ ತಕ್ಷಣ ತಾಗದೆ , ವಿಚಲಿತನಾಗಿ , ವಿರಹಿಯಾಗಿ ,ದಿಕ್ಕು ದೆಸೆಗಳ ಪರಿವೆ ಇಲ್ಲದೆ ಅವಳಿಗಾಗಿ ಹಂಬಲಿಸಿ ಮುಂದೆಂದೂ ಕಾಣಲಾರದ ಅವಳ ಭೌತಿಕ ಕಾಯಕ್ಕಾಗಿ ಪರಿತಪಿಸುತ್ತಿದ್ದ , ಅಲ್ಲಮನ ವಿಕಳ ಸ್ಥಿತಿಯಿಂದ ಅವನನ್ನು ಪಾರು ಮಾಡಿದ್ದು ಅವನಲ್ಲೇ ಸುಪ್ತವಾಗಿದ್ದ ಅವನ ಯೌಗಿಕ ಪಾರುಗಾಣ್ಕೆ .

ಸತತ ಬದಲಾವಣೆಯಿಂದ , ಅನಿತ್ಯವಾದ ಜಗತ್ತಿನಲ್ಲಿ ಇರಬಹುದಾದ ಯಾವುದೋ ಒಂದು ನಿತ್ಯ ಸತ್ಯದ ದರ್ಶನ , ಅಲ್ಲಮನಿಗೆ ದೊರಕಿದ್ದು ಅವನದೇ ಪುಣ್ಯದ ಫಲದಿಂದ . ಅವನಲ್ಲಿಯೇ ,ಅವನೊಡನೆಯೇ ಸತತವಾಗಿದ್ದ ಅವನ ಗುಹೇಶ್ವರನನ್ನು ಮರೆ ಮಾಡಿದ್ದ ಮಾಯೆಯೇ ಮಣ್ಣಿನ ಹೊರಳಿ , ಸ್ಮೃತಿ ರಹಿತ ಸ್ಥಿತಿಯಿಂದ , ಸ್ಮೃತಿಯತ್ತ ನಡೆದ ಪಯಣವೇ ಮಣ್ಣಿನ ಹೊರಳಿಯನ್ನು ಸರಿಸಿದ ಪ್ರಯತ್ನ . ಅಲ್ಲಿ ಕಂಡ ಮಂದಿರವೇ ಪ್ರಾಣಮಯ ಜಗತ್ತು . ಅದರೊಳಗೆ ಪ್ರವೇಶಿಸಿ ,ಅನಿಮಿಷನಾಗಿ ದೃಷ್ಟಿಯನ್ನು ಕೀಲಿಸಿದುದೇ , ಅವನರಿವೇ ಅವನ ಗುರುವಾದ ಅನಿಮಿಷ ಯೋಗಿಯ ಮನೋಮಯ ಜಗತ್ತು . ಅಲ್ಲಿ ದೊರಕಿದ ಗುಹೇಶ್ವರ ಲಿಂಗವೇ ಜ್ಞಾನಮಯ ಜಗತ್ತು .ಅದರಿಂದ ದೊರಕಿದ ಜ್ಞಾನವೇ ವಿಜ್ಞಾನಮಯ ಜಗತ್ತು .ಇದಕ್ಕೆ ಸಾಕ್ಷಿಯಾಗಿ ಅಲ್ಲಮನ ನೂರಾರು ವಚನಗಳಿವೆ .

ಉಪಾಧಿಕ ಮನವು , ಉಪಾಧಿ ರಹಿತ ಮನವು
ನಿಂದಲ್ಲಿಯೇ ನಿವಾತವಾಯಿತ್ತು
ಆನಂದ ಭಾವವು ಬಿಂದು ತಾನುಳಿದು
ನಿಂದಲ್ಲಿಯೇ ನಿವಾತವಾಯಿತ್ತು
ಲಿಂಗ ಉದಯ ಪ್ರಜ್ವಲಿಸುತಿದೆ
ಗುಹೇಶ್ವರನೆಂಬ ಲಿಂಗ ತಾನೆಯಾಗಿ

ಮನದ ಕೊನೆಯ ಮೊನೆಯ ಮೇಲೆ
ನೆನೆದ ನೆನಹು ಜನನ ಮರಣವ ನಿಲಿಸಿತ್ತು
ಜ್ಞಾನ ಜ್ಯೋತಿಯ ಉದಯ ಭಾನು ಕೋಟಿಯ ಮೀರಿ
ಸ್ವಾನುಭವದ ಉದಯ
ಜ್ಞಾನ ಶೂನ್ಯದಲಡಗಿದ ಘನವನೇನೆಂಬೆ ಗುಹೇಶ್ವರ

ತುಂಬಿ ಪರಿಮಳವನುಂಡಿತೋ !
ಪರಿಮಳ ತುಂಬಿಯನುಂಡಿತೋ!
ಲಿಂಗ ಪ್ರಾಣವಾಯಿತೋ !
ಪ್ರಾಣ ಲಿಂಗವಾಯಿತೋ !
ಗುಹೇಶ್ವರ ಈ ಉಭಯ ಭೇದವ ನೀನೇ ಬಲ್ಲೆ

ಬೆಳಕು ಕತ್ತಲೆಯ ನುಂಗಿ
ಒಳಗೆ ತಾನೊಬ್ಬನೆಯಾಗಿ
ಕಾಬ ಕತ್ತಲೆಯ ಕೆಳೆದುಳಿದು
ನಿಮಗಾನು ಗುರಿಯಾದೆ ಗುಹೇಶ್ವರಾ

ಸತ್ಯವನೊಳಕೊಂಡ ಮಿಥ್ಯಕ್ಕೆ ಭಂಗ
ಮಿಥ್ಯವನೊಳಕೊಂಡ ಸತ್ಯಕ್ಕೆ ಭಂಗ
ಸತ್ಯ ಮಿಥ್ಯವನೊಳಕೊಂಡ ಮನಕ್ಕೆ ಭಂಗ
ಮನವನೊಳಕೊಂಡ ಜ್ಞಾನಕ್ಕೆ ಭಂಗ
ಜ್ಞಾನವನೊಳಕೊಂಡ ನಿಜಕ್ಕೆ ಭಂಗವುಂಟೇ ಗುಹೇಶ್ವರ

ತನುವಿಲ್ಲದ ಕಂಡು ಕಂಡು ನಿಂದೆ
ಬೆರಗಿಲ್ಲದ ಕಂಡು ಕಂಡು ಬೆರಗಾದೆ
ರೂಹಿಲ್ಲದೆ ಕಂಡರಿದೆ ಗುಹೇಶ್ವರನೆಂಬ ಲಿಂಗವ

  • ಜ್ಞಾನವಾಹಿನಿ
~.~
  • Login or register to post comments
  • 324 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 17, 2008 - 5:25pm — ಸಂಗನಗೌಡ

ಉ: ಅನನ್ಯ ಅಲ್ಲಮ - ೮

ಸಂಗನಗೌಡ's picture

ಆ ಗುಹೇಶ್ವರ ಲಿಂಗ ಎಲ್ಲೋ ಒಂದು ಕಡೆ ಇದ್ದಿರಲೇಬೇಕೆಂದು ನನಗನಿಸುತ್ತದೆ. ವಚನಕಾರರೆಲ್ಲರು ಯಾವುದೋ ಒಂದು ದೇಗುಲದ ದೇವರನ್ನು ತಮ್ಮ ಮನದ ಗುಡಿಯಲ್ಲಿರಿಸಿಕೊಂಡು, ಅವನಿಗೆ ಹೇಳುವಂತೆ ವಚನಗಳನ್ನು ಬರೆದಿದ್ದಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 18, 2008 - 8:11pm — ವೈಭವ

ಉ: ಅನನ್ಯ ಅಲ್ಲಮ - ೮

ವೈಭವ's picture

ಸಂಗನ,
ನನಗೆ ಹಾಗನಿಸುವುದಿಲ್ಲ. ಅಲ್ಲಮ ಸೊನ್ನೆ ಸಂಪಾದನೆಯ ಬಗ್ಗೆ ಮಾತಾಡಿದ್ದಾನೆ. ಗುಹೆ=ಗವಿ ==> ಕತ್ತಲೆ ಅಂದರೆ ಎನೂ ಕಾಣದಿರುವುದು. ಅಂದರೆ ಮನ-ಮಿದುಳುಗಳನ್ನು ಕತ್ತಲೆ ತರ ಕಾಲಿ ಮಾಡಿಕೊಳ್ಳುವುದು. ಹಾಗಾಗಿ ಅಲ್ಲಮ 'ಗುಹೇಶ್ವರ' ಬಳಸಿದ್ದಾನೆ ಅಂತ ನನ್ನ ಊಹೆ.(ನಿಕ್ಕುವ ಗುಹೇಶ್ವರ ಯಾಕೆ ಬಳಸಿದ್ದಾನೆ ಅಂತ ನನಗೆ ಗೊತ್ತಿಲ್ಲ).
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಚನ ಚಿಂತನೆ: ಅಲ್ಲಮ: ನಾಲ್ಕು ದ್ವೀಪಗಳು
  • ಅನನ್ಯ ಅಲ್ಲಮ (೫)
  • ಅನನ್ಯ ಅಲ್ಲಮ ೭
  • ಅನನ್ಯ ಅಲ್ಲಮ (೬)
  • ಅಮರನಾಥದ ಕಪಟ-ಲಿಂಗ
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು
  • ಕೊಲಂಬಿಯ ಪಟ್ಟಣದ ಸಂತೆ !
  • ವಾರಾಂತ್ಯ ಹೇಗಿತ್ತು?
  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ

ಇತ್ತೀಚಿನ ಪ್ರತಿಕ್ರಿಯೆಗಳು

  • anamadheya
    ಉ: ವಾರಾಂತ್ಯ ಹೇಗಿತ್ತು?
    September 8, 2008 - 10:41pm
  • sudhimail
    ಉ: ಏನಿದೇನಿದು?
    September 8, 2008 - 10:12pm
  • hamsanandi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:41pm
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:37pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:35pm
  • smurthygr
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:32pm
  • hamsanandi
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:23pm
  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 129 ಅತಿಥಿಗಳು ಆನ್ಲೈನ್ ಇರುವರು.


ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator