ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಬಹಳ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
ವಿಶ್ವದೆಲ್ಲೆಡೆ ಸಂಭವಿಸುತ್ತಿರುವ ಆಹಾರದ ಬೆಲೆ ಏರಿಕೆಯಿಂದ ಭಾರತದಲ್ಲಿರುವ ೧.೫ ಮಿಲಿಯನ್ ಗಿಂತಲೂ ಹೆಚ್ಚು ಮಕ್ಕಳಿಗೆ ಬಹಳ ತೊಂದರೆಯಾಗಲಿದೆ ಎಂದು ಯೂನಿಸೆಫ್ ಎಚ್ಚರ ನೀಡಿರುವ ಬಗ್ಗೆ ಬಿಬಿಸಿ ವರದಿ ಮಾಡಿದೆ.
ಸಿಟಿಗಳಲ್ಲಿರುವವರಿಗೆ ಬಹುಶಃ ಬೆಲೆ ಏರಿಕೆಯ ಹಬೆ ಇನ್ನೂ ಅಷ್ಟಾಗಿ ತಟ್ಟುತ್ತಿರುವಂತೆ ಕಾಣುತ್ತಿಲ್ಲ. ದಿನಗೂಲಿ ಅಥವ ಕಡಿಮೆ ಸಂಬಳದ ನೌಕರಿಗಳಲ್ಲಿರುವ ಸಂಸಾರಗಳಿಗೆ ಬಹುಶಃ ವ್ಯತ್ಯಾಸ ಹೆಚ್ಚು ಗೊತ್ತಾಗಬಹುದು.
ಬಿಬಿಸಿ ವರದಿಯಲ್ಲಿ ಪಟ್ಟಿ ಮಾಡಿರುವ ಕೆಲವು ಅಂಶಗಳು:
• ಇಡಿಯ ವಿಶ್ವದಲ್ಲಿ ಆಗಲೇ ಸರಿಯಾಗಿ ಆಹಾರ ಲಭ್ಯವಾಗದ ಮಕ್ಕಳ ಸಂಖ್ಯೆ ಭಾರತದಲ್ಲಿಯೇ ಹೆಚ್ಚು.
• ಈಗಿನ ತೊಂದರೆಗಿಂತ ಮುಂಚೆಯೇ ಅರ್ಧಕ್ಕರ್ಧ ಭಾರತದ ಮಕ್ಕಳಲ್ಲಿ ಕುಂಟಿತ ಬೆಳವಣಿಗೆ ಕಂಡುಬಂದಿದೆ.
• ಬಡತನದಲ್ಲಿರುವ ಮಂದಿ ಎಂದಿನಂತೆ ಹೆಚ್ಚು. ಬೆಲೆ ಮಾತ್ರ ಇಮ್ಮಡಿಯಾಗಿದೆ.
• ಐದು ವರ್ಷಕ್ಕಿಂತ ಕೆಳಗಿನವರಲ್ಲಿ ೪೮% ಮಕ್ಕಳಿಗೆ ಸರಿಯಾದ ಆಹಾರ ಲಭ್ಯವಾಗುತ್ತಿಲ್ಲ. (ಪಾಕಿಸ್ತಾನದಲ್ಲಿ ಇದು ೩೭%, ಬಾಂಗ್ಲಾದೇಶದಲ್ಲಿ ೪೩% - ಎರಡೂ ಭಾರತಕ್ಕಿಂತ ಕಡಿಮೆ!)
• ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಬೇಕಿದೆ. (ಕೇವಲ ರಾಷ್ಟ್ರದ ಬಜೆಟ್ಟಿನ ೨.೨% ಅಂಶ ಮಾತ್ರ ಕೃಷಿಗೆ ಹೋಗುತ್ತಿದೆ)
• ಬಡತನದಿಂದ ಮಾತ್ರವಲ್ಲ ಸರಿಯಾದ ಕ್ವಾಲಿಟಿ ಆಹಾರ ಸಿಗದೆ ಕೂಡ ತೊಂದರೆ.

- Login or register to post comments
- 334 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
ಈ ಸಂಗತಿಗಳು ದಿಟಕ್ಕೂ ದಿಗಿಲು ಮೂಡಿಸುವಂತಿವೆ.
*೫ ವರುಶದ ಕೆಳಗಿನ ಮಕ್ಕಳಲ್ಲಿ ನೂರರಲ್ಲಿ ೪೮ ಮಕ್ಕಳು malnutrition ಇಂದಾಗಿ ಕುಂಟಿತ ಬೆಳವಣಿಗೆಯವರಾಗಿದ್ದಾರಂತೆ. ಅಂದರೆ ಹೆಚ್ಚು-ಕಡಿಮೆ ಯಾವುದೇ ಇಬ್ಬರು ಮಕ್ಕಳಲ್ಲಿ ಒಬ್ಬ ಕುಂಟಿತ ಬೆಳವಣಿಗೆಯವ.
*ನೂರರಲ್ಲಿ ಮುವತ್ತು ಮಕ್ಕಳು ಕಡಿಮೆ ತೂಕದವರಾಗಿ ಹುಟ್ಟುತ್ತಾರೆ.
*ಈಗ ಕೂಳು ದಿನಿಸು ತುಟ್ಟಿ ಆಗಿರುವದರಿಂದ, ಇನ್ನೂ ೧.೫ ರಿಂದ ೧.೮ ಮಿಲಿಯನ್ ಅಂದರೆ ೧೫ ರಿಂದ ೧೮ ಲಕ್ಷ ಮಕ್ಕಳು(ಈಗಾಗಲೇ ಐವತ್ತು ಮಿಲಿಯನ್ ಅಂದರೆ ೫ ಕೋಟಿ ಮಕ್ಕಳು malnutrition ಅಂದರೆ ಕುಂಟಿತ ಬೆಳವಣಿಗೆಯ ತೊಂದರೆಯಿಂದ ಬಳಲುತ್ತಿದ್ದಾರೆ!!!) ಕುಂಟಿತ ಬೆಳವಣಿಗೆಯ ತೊಂದರೆಯಿಂದ ಬಳಲಿದ್ದಾರೆ.
*ಬಡವರು ಊಟದ ಸಂಕೆಗಳನ್ನು ಕಡಿಮೆಗೊಳಿಸಿಕೊಳ್ಳುತ್ತಿದ್ದಾರಂತೆ. ಮೂರು ಹೊತ್ತು ತಿನ್ನುತ್ತಿದ್ದವರು ಎರಡು ಹೊತ್ತಿಗೆ, ಎರಡು ಹೊತ್ತಿನವರು ಒಂದು ಹೊತ್ತಿಗೆ ಹಿಂಬಡತಿ ಹೊಂದುತ್ತಿದ್ದಾರೆ.
*ಮುನ್ನೂರು ಮಿಲಿಯನ್ ಅಂದರೆ ಮುವತ್ತು ಕೋಟಿ ಮಂದಿ ದಿನಕ್ಕೆ ಒಂದು ಡಾಲರಿಗಿಂತ ಕಡಿಮೆ ಹಣದಲ್ಲಿ ಬದುಕುತ್ತಿದ್ದಾರೆ.
*ಇದರಿಂದ ಸಾಲೆಯಿಂದ ಹೊರಬರುವ ಮಕ್ಕಳ ಸಂಕೆ ಹೆಚ್ಚಲಿದೆ.
*industrialization ಮತ್ತು outsourcing services ಮೇಲೆ ಹೆಚ್ಚಿಗೆ ಹಣ ಸರಕಾರ ಹೂಡುತ್ತಿದೆ. ರೈತಕಿ(ಬೇಸಾಯ) ಮೇಲೆ national budget ನ 2.2% ಅಸ್ಟೇ ಹೂಡಲಾಗುತ್ತಿದೆ.
*ರೈತರು ಕೂಳು ಕಾಳುಗಳನ್ನು ಹೆಚ್ಚು ಬೆಳೆಯಬೇಕಿದೆ.
*ಕೂಳು ಕಡಿಮೆ ಬಿದ್ದಾಗ ಹೊರಗಿನಿಂದ ತರಿಸಲಾಗುತ್ತದೆ, ಅದರ ಬದಲು ಒಳ್ಳೆ ಬೆಂಬಲ ಬೆಲೆ ಕೊಟ್ಟು ಕೂಳು ದಿನಿಸು ಬೆಳೆಯಲು ರೈತರನ್ನು ಸರಕಾರ ಹುರುದುಂಬಿಸಬೇಕು.
*ರೈತರಿಂದ ಹಿಡಿದು ಎಲ್ಲರೂ ಇಂಡಸ್ಟ್ರಿಯಲೈಜೇಶನ್ಗೇ ಹೆಚ್ಚಿನ ಒತ್ತು ಕೊಡುತ್ತ ಹೊಂಟಿದ್ದಾರೆ. ಇದು ಸರಿ ಅಲ್ಲ. ರೈತರಲ್ಲೂ ಕೂಳು ದಿನಿಸು ಹೆಚ್ಚಿನ ಲಾಬ ತರದೆಂಬ ಅನಿಸಿಕೆ ಇದೆ, ಅದಕ್ಕೆ ಕಬ್ಬು, ಅಡಕೆ, ಮುಂತಾದ ವಾಣಿಜ್ಯ ಬೆಳೆಗಳನ್ನೇ ಹೆಚ್ಚಾಗಿ ಬೆಳೆಯುತ್ತಿದ್ದಾರೆ.
*ಒಟ್ಟಿನಲ್ಲಿ ಇಂಡಿಯನ್ಸ್ ಅಗ್ರಿಕಲ್ಚರ್ಗೆ ಅದರಲ್ಲೂ ಕೂಳು ದಿನಿಸು ಬೆಳೆಯುವಂತೆ ಹೆಚ್ಚು ಒತ್ತು ಕೊಡಬೇಕಿದೆ. ಅದೊಂದೇ ಇದಕ್ಕೇ ಮದ್ದು.
ಉ: ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
ಒಟ್ಟಿನಲ್ಲಿ ಇಂಡಿಯದವರು ಅಂದರೆ ನಾವು ರೈತಾಕಿಗೆ(ಅಗ್ರಿಕಲ್ಚರ್ಗೆ) ಅದರಲ್ಲೂ ಕೂಳು ದಿನಿಸು ಬೆಳೆಯುವಂತೆ ಹೆಚ್ಚು ಒತ್ತು ಕೊಡಬೇಕಿದೆ. ಅದೊಂದೇ ಇದಕ್ಕೆ ಮದ್ದು.**