ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !

May 17, 2008 - 5:32am — venkatesh

ಇದು ಕನ್ನಡಿಗರಿಗೆಲ್ಲಾ ಬೇಳೆ ಹೋಳಿಗೆ, ಪಾಯಸ ತಿಂದಷ್ಟು ಸಂತಸದ ಸುದ್ದಿಯಲ್ಲವೇ ? ಸುನಿಲ್ ಮಲ್ಲೇನ ಹಳ್ಳಿಯವರ ದನಿಗೆ ಜೊತೆಗೂಡಿಸೋಣ ! ಅಂದಿನಿಂದ ಮೊದಲಿನಂತೆ ವಿಮಾನಗಳೆಲ್ಲಾ ಮುಂಬೈನಗರಕ್ಕೆ ಬಂದು ಅಲ್ಲಿಂದ ಮತ್ತೆ ಡೊಮೆಸ್ಟಿಕ್ ವಿಮಾನಯಾನವನ್ನು ಮುಂದುವರೆಸದೆ, ನೇರವಾಗಿ ಬೆಂಗಳೂರಿನಲ್ಲಿ ಬಂದಿಳಿಯುವ ಸನ್ನಿವೇಷವನ್ನು ಊಹಿಸಲೂ ಅಸಾಧ್ಯ !

ಮೇ 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ. ಅಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂಬ ಕೂಗಿಗೆ ಇನ್ನೂ ಪ್ರತಿಧ್ವನಿ ಬಂದಿಲ್ಲ. ಇದಕ್ಕೆ ಉತ್ತರವೂ ಭವಿಷ್ಯದಲ್ಲಿ ಸಿಗಲಿದೆ. ಈ ನಡುವೆ, ಇಲ್ಲಿಂದ ಹಾರಾಡುವ ವಿಮಾನಗಳಲ್ಲಿಯೂ ಕನ್ನಡದ ಇಂಪು, ಕಂಪು ಬೀರಲಿ ಎಂಬುದು ಈ ಲೇಖನದ ಲೇಖಕರ ಆಶಯ.

* ಸುನಿಲ್ ಮಲ್ಲೇನಹಳ್ಳಿ

ಇನ್ನು ಬೆರೆಳೆಣಿಕೆಯ ದಿನಗಳಲ್ಲಿ ಬೆಂಗಳೂರಿನ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ ಎಂಬುದು ನಮಗೆ ತಿಳಿದಿರುವ ವಿಚಾರ. ಅದರಂತೆ ಮುಂದಿನ ದಿನಗಳಲ್ಲಿ ನಮ್ಮ ಈ ವಿಮಾನ ನಿಲ್ದಾಣದಿಂದ ನಾನಾ ದೇಶಗಳ ನಾನಾ ನಗರಗಳಿಗೆ ದಿನನಿತ್ಯ ಒಂದರ ಹಿಂದೆ ಒಂದರಂತೆ ವಿಮಾನಗಳು ಹಾರಾಡುತ್ತಲೇ ಇರುತ್ತವೆ. ಇದು ಕನ್ನಡಿಗರಿಗಂತೂ ಸಂತಸ ತರುವ ವಿಷಯವೇನೋ ಸರಿ. ಆದರೆ ದಿನನಿತ್ಯ ಹಾರಾಡುವ ಈ ವಿಮಾನಗಳಲ್ಲಿ ಕನ್ನಡದವರ ಆಚಾರ-ವಿಚಾರಗಳಿಗೆ, ಕನ್ನಡ ಭಾಷೆಗೆ ಯಾವ ರೀತಿಯ ಸ್ಥಾನಮಾನ ಕೊಟ್ಟು ಗೌರವಿಸುತ್ತಾರೆಂಬುದು ನಮ್ಮ ಎದುರಿಗಿರುವ ಬೆಲೆ ಕಟ್ಟಲಾರದ ಪ್ರಶ್ನೆ! "ಗಿಡವಾಗಿ ಬಗ್ಗದ್ದು..ಮರವಾಗಿ ಬಗ್ಗೀತೇ"ಎನ್ನುವಂತೆ ಈ ಆರಂಭದ ದಿನಗಳಲ್ಲೇ ಕೆಲವೊಂದು ನಿರ್ಣಯದ ವಿಚಾರಗಳನ್ನು BIAL(ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಆಡಳಿತ ಮಂಡಳಿಯವರೊಂದಿಗೆ ಹಾಗೂ ವಿಮಾನಗಳ ಸಂಸ್ಥೆಗಳೊಂದಿಗೆ (ಉದಾ: ಏರ್ ಇಂಡಿಯಾ, ಬ್ರಿಟಿಷ್ ಏರವೇಸ್, ಸಿಂಗಾಪೂರ್ ಏರಲೈನ್ಸ್, ಇತ್ಯಾದಿ) ನೀತಿ ನಿಯಮಗಳ ಚೌಕಟ್ಟಿನಲ್ಲಿ ಕುಳಿತು ಪ್ರಸ್ತಾವನೆಯನ್ನು ನಾವುಗಳು ಮಾಡಲೇಬೇಕಿದೆ, ಆಗಸದಂಚಿನಲ್ಲಿ ಕನ್ನಡ ಪದಗಳ ಲಹರಿ ಹರಿಸಲೇಬೇಕಿದೆ.

ನಮಗೆ ತಿಳಿದ ಹಾಗೆ ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರುವ ಬಹುತೇಕ ವಿಮಾನಗಳಲ್ಲಿ ತಮಿಳು ಸಿನಿಮಾಗಳನ್ನು ಹಾಕುವುದು ಸರ್ವೇಸಾಮಾನ್ಯದ ಸಂಗತಿ. ಈಗ ನಮ್ಮ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರುವ ವಿಮಾನಗಳಲ್ಲಿ ಕರುನಾಡಿನ ಕಲೆ, ಸಾಹಿತ್ಯ, ಆಚಾರ ವಿಚಾರಗಳನ್ನು ಹಾಗೂ ಕನ್ನಡದ ಸಿನಿಮಾಗಳನ್ನು ಮನಃಪೂರ್ವಕವಾಗಿ ಒಪ್ಪಿ ಹಾಕುತ್ತಾರೋ ಇಲ್ಲವೋ ಅದು ಅವರಿಗೆ ಬಿಟ್ಟ ವಿಚಾರ. ಆದರೆ ಹಾಕುವಂತೆ ನ್ಯಾಯ ಸಮ್ಮತವಾದ ಒತ್ತಡ ತರುವುದು ನಮಗೆ ಬಿಟ್ಟ ವಿಚಾರ.

ಈಗ ಮೈ ಮರೆತು ಅನಂತರ ಕನ್ನಡಕ್ಕೆ ಹೀಗಾಗೋಯಿತು..ಹಾಗಾಗೋಯಿತು ಎಂದು ಪರಿತಪಿಸುವುದರಲ್ಲಿ ಎಳ್ಳಷ್ಟೂ ಅರ್ಥವಿರುವುದಿಲ್ಲ. ಅದಕ್ಕೇ ಎಲ್ಲರೂ ಚರ್ಚೆಮಾಡಿ ಕನ್ನಡ ಭಾಷೆಗೆ ಬೆಲೆತರುವ ಒಂದು ನಿರ್ಧಾರವನ್ನು ಕೈಗೊಳ್ಳೋಣ.

ವಿಮಾನಗಳಲ್ಲಿ ಊಟೋಪಚಾರಕ್ಕೆ ಸಂಬಂಧಿಸಿದಂತೆ, ನಮ್ಮ ಕರ್ನಾಟಕದ ಊಟಗಳೆಂದು ಪ್ರಸಿದ್ಧಿ ಪಡೆದಿರುವ ಮುದ್ದೆ, ಸೊಪ್ಪಿನ ಸಾರು, ಜೋಳದ ರೊಟ್ಟಿ ಹಾಗೂ ನಾನಾ ವಿಧದ ಪಲ್ಯ..ಇತ್ಯಾದಿಗಳ ಊಟ ಸಿಗುವ ಹಾಗೆ ಮತ್ತು ವಿವಿಧ ರೀತಿಯ ತಿಂಡಿ, ತಿನಿಸುಗಳನ್ನು ಮೆನುವಿನಲ್ಲಿ ಕನ್ನಡದಲ್ಲಿ ಮುದ್ರಿಸುವಂತೆ ವಿಮಾನಗಳ ಸಂಸ್ಥೆಯವರಿಗೆ (ಉದಾ: ಏರ್ ಇಂಡಿಯಾ, ಬ್ರಿಟಿಷ್ ಏರವೇಸ್, ಸಿಂಗಾಪೂರ್ ಏರಲೈನ್ಸ್, ಇತ್ಯಾದಿ)ಮನದಟ್ಟು ಮಾಡಿಕೊಡಬೇಕು.

ಗಗನ ಸಖಿಯೊಬ್ಬಳು ನಿಮ್ಮ ಬಳಿಬಂದು, ಸಾರ್ ನಿಮಗೆ ಕುಡಿಯುವುದಕ್ಕೆ ಲಿಂಬೆಹಣ್ಣಿನ ಪಾನಕ ಬೇಕೋ..? ಅಥವಾ ಮಸಾಲ ಮಜ್ಜಿಗೆ ಬೇಕೋ..? ಹಾಗೂ ಊಟಕ್ಕೆ ಸೊಪ್ಪಿನ ಸಾರು ಮುದ್ದೆ ಬೇಕೋ..? ಅಥವಾ ಜೋಳದ ರೊಟ್ಟಿ ಎಣ್ಣೆಗಾಯಿ ಪಲ್ಯ ಬೇಕೋ..? ಎಂದೂ ಅಚ್ಚಕನ್ನಡ ಭಾಷೆಯಲ್ಲಿ ಆಕೆ ನಿಮ್ಮನ್ನು ಕೇಳಿದಾಗ, ನಿಮ್ಮ ಮನದಲ್ಲಿ ಉದಯಿಸುವ ಮುಗಿಲೆತ್ತರದ ಸಂತಸದ ಅಲೆಗಳಿಗೆ ಅಣ್ಣೆಕಟ್ಟು ಕಟ್ಟಲಾದಿತೇ..? ಎಲ್ಲಾ ಕನ್ನಡಮಯವಾಗಿದ್ದರೆ ಏಷ್ಟು ಸೊಗಸು ಅಲ್ಲವೇ ?

ನಾ ಇವರೆಗೂ ಹೇಳಿದ್ದು ಕನಸಿನ ವಿಚಾರವೆಂದು ತಿಳಿಯದಿರಿ, ಏಕೆಂದರೆ ನಾವು ಕನ್ನಡಿಗರು ಐದು ಕೋಟಿ ಜನರಿದ್ದೇವೆ. ಬದಲಾವಣೆ ತರಲೇಬೇಕೆಂದು ಒಂದು ಅತಿಸಣ್ಣ ಪ್ರಯತ್ನ ಮಾಡಿದರೆ ಯಾವುದೂ ಅಸಾಧ್ಯವಲ್ಲ. ಈಗಾಲೇ ಸಿದ್ಧರಾಗಿ ಜನ್ಮಭೂಮಿಗೆ..ಮಾತೃ ಭಾಷೆಗೆ ಅಲ್ಪವಾದರೂ ಒಳಿತು ಮಾಡೋಣ.

-ದಟ್ಸ್ ಕನ್ನಡ ಇ-ಪತ್ರಿಕೆಯ ಕ್ಷಮೆಬೇಡಿ. ಅದರಲ್ಲಿ ಹೇಗಿದೆಯೋ ಹಾಗೆ ಪ್ರತಿಮಾಡಿದ್ದೇನೆ.

  • ಪ್ರಚಲಿತ
~.~
  • Login or register to post comments
  • 287 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 18, 2008 - 8:31pm — ahankari

ಉ: ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !

ahankari's picture

ತುಂಬಾ ಉತ್ತಮವಾದ ಸಲಹೆ .ಹಾಗೆ ಸ್ಕಾಚ್ ವಿಸ್ಕಿ ಬದಲು ಕಳ್ಳು ಮತ್ತು ನೀರಾ ದೊರೆಯುವಂತಾಗ ಬೇಕು. ಜೊತೆಗೆ ಉಪ್ಪಿನ ಕಾಯಿ ಮತ್ತು ಕಡಲೆ ಕಾಯಿ ಕಡ್ದಾಯವಾಗಿ ದೊರೆಯುವಂತಾಗ ಬೇಕು. ಈ ಬಗ್ಗೆ ಸರಕಾರ ಆದಷ್ತು ಬೇಗನೆ ಆದೇಶ ಹೊರಡಿಸಬೇಕೆಂದು ನಾಡಿನಾದ್ಯಂತ ಚಳುವಳಿ ಹೂಡಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 18, 2008 - 11:36pm — Arunjavgal

ಉ: ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !

Arunjavgal's picture

ವಿಮಾನ ನಿಲ್ದಾಣದಲ್ಲಿ ಕನ್ನಡಕ್ಕೆ ಆದ್ಯತೆ ಮತ್ತು ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆಗಾಗಿ ಕರವೇ ನವರು ಪ್ರತಿಭಟನಾ ಜಾಥ ನಡೆಸ್ತಿದ್ದಾರೆ
http://www.karnatakarakshanavedike.org/modes/view/69/vimana-nildanadalli...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 19, 2008 - 5:04am — venkatesh

ಉ: ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !

venkatesh's picture

ಒಟ್ಟಿನಲ್ಲಿ ನಾವು ಇನ್ನೆಲ್ಲೊ ಇಲ್ಲ. ಬಂದಿಳಿದಿರುವುದು ಕರ್ಣಾಟಕದ ರಾಜಧಾನಿ ಬೆಂಗಳೂರಿನಲ್ಲಿ ಎನ್ನುವ ಭಾವನೆ ಬರುವ ಜೊತೆಗೆ, ಕನ್ನಡ ಭಾಷೆಯ ಮಾತುಕತೆಗಳು ಕೇಳಿಸಬೇಕು. ಮುಖ್ಯವಾಗಿ ನಮ್ಮವರೂ ಸಾಧ್ಯವಾದಷ್ಟು ಕನ್ನಡದಲ್ಲೇ ಮಾತನಾಡಲು ಕಳಕಳಿಯ ಕೋರಿಕೆ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೆಂಗಳೂರು ಅಂತರಾಷ್ಹ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು ಹೋರಾಟ.
  • ಬೆಂಗಳೂರು ವಿಮಾನ ನಿಲ್ದಾಣ
  • ಬೆಂ.ಅಂ.ವಿ.ನಿ
  • ನೀಗಿಸಲು ವಿದ್ಯುತ್ ಬರ, ಏರಿತು ಜನರೇಟರ್ ಮತ್ತಷ್ಟು ಎತ್ತರ!
  • ಒಂದು ಜೋಕ್ಸ (??????)
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್
  • ಹರತಾಳಗಳ 'ತಾಳ'ಕ್ಕೆ ಕುಣಿಯುತ್ತಿರುವ ಕೇರಳ!
  • ವಿಧ್ಯಾಭ್ಯಾಸ ಮತ್ತು ಕಾಲೇಜು

ಇತ್ತೀಚಿನ ಪ್ರತಿಕ್ರಿಯೆಗಳು

  • nagesamrat
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 4:08pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 3:42pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 2:31pm
  • ವೈಭವ
    ಉ: ನಿಮಗೆ ಕನ್ನಡ ಬರುತ್ತಾ?
    July 5, 2008 - 1:30pm
  • harshavardhan v...
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 5, 2008 - 1:13pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:11pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:05pm
  • hpn
    ಉ: ದಿನಕ್ಕೊಂದು ಪದ
    July 5, 2008 - 12:51pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 12:43pm
  • kannadakanda
    ಉ: SSLC 'ಕನ್ನಡ' question paper ಅಲ್ಲಿ ಮತ್ತು model answerಗಳು ತಪ್ಪು ತಪ್ಪು!!!
    July 5, 2008 - 12:42pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 35 ಅತಿಥಿಗಳು ಆನ್ಲೈನ್ ಇರುವರು.


ಮುಕ್ತ ಮನಸ್ಸು ಖಾಲಿ ಆಕಾಶದಂತೆ. ಹೊರಗಡೆ ವಿಶಾಲ ಮತ್ತು ಒಳಗಡೆ ಶೂನ್ಯ. ಅದರಲ್ಲಿ ಅಂಟುತನ ಇಲ್ಲವೇ ಇಲ್ಲ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator