ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಶ್ರೀ ಶ್ರೀ ದತ್ತ ಗೋವಿಂದನಿಗೆ ಜಯವಾಗಲಿ!

June 1, 2008 - 1:03am — karihaida

ನಮ್ಮೂರಲ್ಲಿ ಈಗ ದೊಡ್ಡದೊಂದು ಸಮಾರಾಧನೆ ನಡೀತಿದೆ. ಅದೊಂದು ಸಾಂಸ್ಕೃತಿಕ ಹಬ್ಬ. ಪ್ರತಿ ವರ್ಷ ನಡೆಯುತ್ತೆ, ಈ ವೇಳೆಗೆ. ಸಂಗೀತ ದಿಗ್ಗಜರೆಲ್ಲಾ ಬರ್ತಾರೆ. ಹಾಡ್ತಾರೆ. ಸನ್ಮಾನಿತಗೊಳ್ತಾರೆ. ಈ ವೇದಿಕೆಯನ್ನ ಹೊಗಳ್ತಾರೆ. ಆದರೆ ಮುಂದಿನ ವರ್ಷ ನಡಿಯತ್ತೋ ಇಲ್ಲವೋ, ಅನುಮಾನ.

ನಮ್ಮೂರು ಮೈಸೂರು. ಈ ಸಂಗೀತೋತ್ಸವ ನಮ್ಮೂರಿನ ಶ್ರೀ ದತ್ತಾತ್ರೇಯ ಗಣಪತಿ ಸಚ್ಚಿದಾನಂದ ಸ್ವಾಮಿಗಳ ಹುಟ್ಟುಹಬ್ಬದ ಪ್ರಯುಕ್ತ ಆಚರಿಸಲಾಗತ್ತೆ. ಇದು ಅವರ ಆಶ್ರಮದಲ್ಲಿ ದಶಕದ ಹಿಂದೆಯೇ ಸ್ಥಾಪಿಸಲಾದ ನಾದಮಂಟಪದಲ್ಲಿ ನಡೆಯುತ್ತೆ. ಈ ವೇದಿಕೆಯಲ್ಲಿ ಹಲವಾರು ಸಂಗೀತ ಲೋಕದ ಘಟಾನುಘಟಿಗಳು ಬಂದು ಕಚೇರಿ ನಡೆಸಿದ್ದಾರೆ. ಕಲೆಗಳ ಆಗರವಾಗಿದ್ದು ಇತ್ತೀಚೆಗೆ ನೆನೆಗುದಿಗೆ ಬಿದ್ದಿದ್ದ ಕಲಾರಸಿಕತೆಯನ್ನ  ಮೈಸೂರಿನ ಜನರಲ್ಲಿ ಮತ್ತೊಮ್ಮೆ ಎಚ್ಚರಿಸಲು ಈ ನಾದಮಂಟಪ ಹಾಗು ಸಚ್ಚಿದಾನಂದ ಸ್ವಾಮಿಗಳ ಪಾತ್ರ ಅಪ್ರತಿಮವಾದದ್ದು. ದಿನವಿಡೀ ಕೆಲಸ ಮಾಡಿ, ಸಂಜೆ ಆಯಾಸ ತಣಿಯಲು ಹಾಗು ವೇಂಕಟೇಶ್ವರನ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಜನ ಈ ಆಶ್ರಮಕ್ಕೆ ಬರುತ್ತಾರೆ. ಇದಷ್ಟೇ ಅಲ್ಲದೇ ಈ ಸ್ವಾಮಿಗಳು ಗಿಡಮರಗಳನ್ನು ಬೊನ್ಸಾಯ್ ರೂಪದಲ್ಲಿ ಬೆಳೆಸುವಲ್ಲಿ ನಿಷ್ಣಾತರು. ಅವರ ಬೊನ್ಸಾಯ್ ಪಾರ್ಕ್ ಜಗತ್ತಿನ ಈ ಭಾಗದಲ್ಲಿ ಅತ್ಯಂತ ವಿರಳ.

ಆದರೆ ಶ್ರೀ ಗಣಪತಿ ಸಚ್ಚಿದಾನಂದರು ದತ್ತಾತ್ರೇಯನ ಅನುಗ್ರಹದಿಂದ ಇಷ್ಟೆಲ್ಲಾ ಒಳ್ಳೆ ಕಾರ್ಯಗಳನ್ನು ಮಾಡುತ್ತ, ಬದಿಯಲ್ಲಿ ಸರ್ಕಾರಕ್ಕೆ ಸೇರಿದ್ದ ಹಾಗು ಡಾ|| ಅನಿಲ್ ಕುಮಾರ್ ಎಂಬುವವರಿಗೆ ಸೇರಿದ್ದ ಒಂದಷ್ಟು ಜಾಗವನ್ನೂ ಆಶ್ರಮದ ಹೆಸರಲ್ಲಿ ಒತ್ತುವರಿ ಮಾಡಿದ್ದಾರಂತೆ. ಇದೇ ವಿಷಯಕ್ಕೆ ಕಳೆದ ಭಾನುವಾರ ಅವರನ್ನು ಆರಕ್ಷಕರು ಬಂಧಿಸಿ ಜಾಮೀನಿನ ಮೇಲೆ ಬಿಟ್ಟಿದ್ದಾರೆ. ಇದಾದ ಮೇಲೆ ಹೊರಗೆ ಬಂದಿರುವ ಮಾಹಿತಿಗಳ ಪ್ರಕಾರ, ಒತ್ತುವರಿಯಾಗಿರುವುದು ಸಾಬೀತಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಜಿಲ್ಲಾ ಕಮಿಷನರ್ರು ಆರಕ್ಷರಿಗೆ ಪತ್ರ ಬರೆದು ಈ ವಿಷಯಗಳನ್ನು ತಿಳಿಸಿದ್ದಾರೆ.

ಇಷ್ಟೆಲ್ಲಾ ಪುರಾವೆಗಳು ಹಾಗು ನಮ್ಮೂರಿನಲ್ಲಿ ಈಗಿರುವ ನಿಷ್ಠಾವಂತ ಮತ್ತು ಹುಮ್ಮಸ್ಸಿನ ಅಧಿಕಾರಗಳ ಕೈಚಳಕದಿಂದ ಸ್ವಾಮಿ ಗಣಪತಿ ಸಚ್ಚಿದಾನಂದರು ಶ್ರೀ ಕೃಷ್ಣನ ಜನ್ಮಸ್ಥಳದಲ್ಲಿ ಹಲವು ತಿಂಗಳು/ವರ್ಷಗಳನ್ನೇ ಕಳೆದರೆ ಆಶ್ಚರ್ಯ ಪಡಬೇಕಿಲ್ಲ.

ಇದರಿಂದ ಉಂಟಾಗುವ ಒಳ್ಳೆ ಸಂಗತಿಗಳು:
ಯಾರೇ ಆದರು ಕಾನೂನು ಬಾಹಿರ ಕೆಲಸ ಮಾಡಿದರೆ ಶಿಕ್ಷಿಸಲಾಗುವುದು ಅನ್ನೋ ಸಂದೇಶ ತಲುಪಿಸುವುದು, ಸ್ವಾಮಿಗಳನ್ನೇ ಬಿಡದವರು ರಾಜಕಾರಣಿಗಳು, ಅಧಿಕಾರಿಗಳನ್ನು ಬಿಡದಿರುವುದಕ್ಕೆ ಒಳ್ಳೆಯ ಉದಾಹರಣೆಯಾಗುವುದು.

ಇದರಿಂದ ಉಂಟಾಗುವ ನಕಾರಾತ್ಮಕ ಸಂಗತಿಗಳು:
ಇತ್ತೀಚಿನ ದಿನಗಳಲ್ಲಿ ಕರ್ಣಾಟಕ/ಹಿಂದೂಸ್ತಾನಿ ಸಂಗೀತಕ್ಕೆ, ಸಂಗೀತಗಾರರಿಗೆ ಎಲ್ಲೂ ಸಿಗದ ಮನ್ನಣೆ ಇಲ್ಲಿ ಸಿಗುತ್ತಿತ್ತು. ಇದಕ್ಕೆ ಕುತ್ತು ಬರಬಹುದು, ಮೈಸೂರಿನ ಜನತೆಗೆ ಒಂದು ಒಳ್ಳೆ ಜಾಗ ಮರೆಯಾಗುವುದು.

ಹಾಗಾಗಿ, ಮೇಲ್ನೋಟಕ್ಕೆ ಸ್ವಾಮಿಗಳು ಹಾಗು ಆಶ್ರಮದವರು ಅತಿಕ್ರಮಣ ಮಾಡಿದ್ದಾರೆ. ಅವರಿಗೆ ಶಿಕ್ಷೆಯಾಗಬೇಕು. ಆದರೆ, ಆಶ್ರಮದಲ್ಲಿ ನಡೆಯುತ್ತಿದ್ದ ಒಳ್ಳೆಯ ಕಾರ್ಯಗಳು ಸ್ವಾಮಿಗಳ ಅನುಪಸ್ಥಿತಿಯಲ್ಲೂ ಮುಂದುವರಿಯಬೇಕು.

ನೀವೇನಂತೀರಿ ?

  • ಪ್ರಚಲಿತ
~.~
  • Login or register to post comments
  • 206 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಕ್ಕಳಿಗೆ ಮೊಬೈಲ್ ಫೋನ್ ಮಾರುವ ಜಾಹೀರಾತುಗಳಿಗೆ ಕೊನೆಗೂ ಕಡಿವಾಣ
  • 365 ದಿನಗಳು
  • ಹತ್ತು ಮುತ್ತುಗಳು: ರಾಗ ಕಲ್ಯಾಣಿ - ಭಾಗ ೨
  • ನಮ್ಮ ಭಾರತದ ಡೈನೊಸಾರ್ ಗಳು ಹುಲ್ಲು ತಿನ್ನುತ್ತಿದ್ದವಂತೆ!
  • ಶ್ರೀ ರಾಮ ನವಮಿ ದಿನಾಚರಣೆ
Syndicate content

ಲೇಖಕರು

karihaida's picture

ಪೂರ್ಣ ಹೆಸರು
**********************

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು
  • ಕೊಲಂಬಿಯ ಪಟ್ಟಣದ ಸಂತೆ !
  • ವಾರಾಂತ್ಯ ಹೇಗಿತ್ತು?
  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:23pm
  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
  • ASHOKKUMAR
    ಉ: ವಾರಾಂತ್ಯ ಹೇಗಿತ್ತು?
    September 8, 2008 - 8:10pm
  • ishwar.shastri
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:00pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:54pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:52pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:51pm
  • csomsekraiah
    ಉ: ಕೊಲಂಬಿಯ ಪಟ್ಟಣದ ಸಂತೆ !
    September 8, 2008 - 7:28pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 153 ಅತಿಥಿಗಳು ಆನ್ಲೈನ್ ಇರುವರು.


ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator