ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಕಾರಂತರ ಜೀವಂತ ಪಾತ್ರಗಳು ೭ (೧)

June 9, 2008 - 5:30pm — csomsekraiah

ಅಪಾರ ವಿಸ್ತಾರವಾದ , ಆಕಾಶವೆಂಬ ಅವಕಾಶದಲ್ಲಿ ಸಚರಾಚರಗಳನ್ನು ಸೃಷ್ಟಿಸಿಕೊಂಡ ಶಕ್ತಿ ಯಾವುದೋ ? ಅದೆಂತಹ ಶಕ್ತಿ ಎಂಬುದನ್ನು ಬಲ್ಲವರು ಯಾರೂ ಇಲ್ಲ . ಅದರ ಬಗೆಗೆಗಿನ ತಿಳುವಳಿಕೆಗಾಗಿ ಇದುವರೆಗೆ ನಡೆದಿರುವ ತತ್ವ ಜಿಜ್ಞಾಸೆಗಳು ಯಾವುವೂ ದಡ ಮುಟ್ಟಿಸಿಲ್ಲ ; ಬಹುಶಃ ಮುಟ್ಟಿಸುವುದೂ ಇಲ್ಲ .ಕೊನೆಗೆ ಆ ಬಗೆಯ ಶಕ್ತಿಯನ್ನು , ತರ್ಕಾತೀತವೆಂದು ಪ್ರಾಜ್ಞರು ಕೈ ತೊಳೆದುಕೊಂಡಿದ್ದಾರೆ . ಇಂತಹ ಅದರ ರಚನೆಗಳಲ್ಲಿ , ಅತ್ಯಂತ ಕುತೂಹಲಭರಿತ ಮಾತ್ರವಲ್ಲ , ಸುಂದರ ಸಜೀವ ಗ್ರಹವೆಂಬ ಹೆಗ್ಗಳಿಕೆ ಈ ಭೂಮಿಯದು . ಭೂಮಿಯಂತಹ ಇನ್ನೊಂದು ಗ್ರಹ ಇರುವ ಬಗ್ಗೆ ಕೂಡಾ ಸರಿಯಾದ ಮಾಹಿತಿ ಇದುವರೆಗೆ ಗೊತ್ತಿಲ್ಲ .

ಈ ಜೀವ ಇಲ್ಲಿ ಮೊಳೆತುದು ಆಕಸ್ಮಿಕವೋ ? ಪೂರ್ವ ಯೋಜಿತವೋ ? ಅಥವಾ ಎರಡೂ ಅಲ್ಲವೋ ? ಪೂರ್ವ ಯೋಜಿತವೇ ಆಗಿದ್ದಲ್ಲಿ ಯಾರು ಅದರ ಪ್ರೇರಕರು ? ಇದೂ ಕೂಡಾ ಯಾರಿಗೂ ಗೊತ್ತಿಲ್ಲ ! ಈ ಗೊತ್ತಿಲ್ಲಗಳ ಸಂತೆಯಲ್ಲಿಯೇ ಇಲ್ಲಿ ನೆಲೆಯೂರಿದ ಜೀವ ಪಡೆದುಕೊಂಡ ವೈವಿಧ್ಯಕ್ಕೆ ಕೊನೆ ಎಂಬುದಿದೆಯೇ ? ಸಸ್ಯ ಪ್ರಾಣಿಗಳೆಂಬ ಮುಖ್ಯ ವಿಭಾಗಗಳಿಂದ ಹೊರ ಹೊಮ್ಮಿರುವ ಅಪಾರ ಪ್ರಭೇದಗಳು . ಈ ಅಪರಿಮಿತ ಜೀವ ಜಾಲದ ನಡುವೆ ಮನುಷ್ಯ ಜೀವಿ ಯಾವಾಗಲೋ ಪದಾರ್ಪಣೆ ಮಾಡಿ ಆಗಿತ್ತು .

ಈ ಭುವಿಯ ಅನೇಕ ಶಕ್ತಿಶಾಲಿ ಜೀವಿಗಳ ಮಧ್ಯೆ ಅತ್ಯಂತ ದುರ್ಬಲ ಜೀವಿಯಾಗಿ ಮೈದಳೆದ ಮನುಷ್ಯ , ಅವುಗಳ ನಡುವೆ ಅನೇಕ ಲಕ್ಷ ವರ್ಷಗಳ ಸೆಣಸಿನಲ್ಲಿ ಉಳಿದುದೆಂಬುದೇ ಆಶ್ಚರ್ಯಗಳಲ್ಲಿ ಆಶ್ಚರ್ಯ ! ಆಗೆಲ್ಲಾ ಅವನನ್ನು ಕಾಪಾಡಿದ್ದು , ಜೀವ ಜಗತ್ತಿನಲ್ಲಿ ಅವನದೇ ವಿಶಿಷ್ಟ ಅಸ್ತ್ರವಾದ ಬುದ್ದಿ ಶಕ್ತಿ ಎನ್ನುತ್ತಾರೆ ಜೀವ ವಿಜ್ಞಾನಿಗಳು .

ನಲವತ್ತು ಲಕ್ಷ ವರ್ಷಗಳ ಪ್ರಾಣಿ ಜೀವನದಲ್ಲಿ ಅವುಗಳೊಡನೆ ಸೆಣಸಿ ಉಳಿದು , ಪ್ರಕೃತಿಯ ಸುದೀರ್ಘ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ,ನಾಗರಿಕತೆಯ ಹತ್ತಿರಕ್ಕೆ ಬಂದುದು , ( ಅದೂ ನಾಗರಿಕತೆಯ , ಉಷೆಯಲ್ಲದ ಇನ್ನೂ ಬೆಳ್ಳಿ ಮೂಡುವ ಕಾಲವೆನ್ನಬಹುದೇನೋ ?) ಆ ಕಾಲ ಹದಿನೈದು ಸಾವಿರ ವರ್ಷಗಳಿಗೂ ಹಿಂದಿನದಿರಬಹುದೆನ್ನುತ್ತಾರೆ .

ಇತ್ತ ನಾಗರಿಕ ಜೀವನಕ್ಕೆ ತೇರ್ಗಡೆಯೂ ಅಲ್ಲ ; ಅತ್ತ ಪ್ರಾಣಿ ಜೀವನದಿಂದ ಬಿಡುಗಡೆಯೂ ಅಲ್ಲ ಎನ್ನುವ ಆ ಸಂಧಿ ಕಾಲದಲ್ಲಿ ಕೆಲವಾದರೂ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಪ್ರಮೇಯಗಳು ಈ ವಿಚಿತ್ರ ಜೀವಿಗೆ ಪ್ರಾಪ್ತಿಸಿರಬಹುದು . ಕೆಲವಾದರೂ ; ತೆಳುವಾದರೂ , ಅನಿವಾರ್ಯವಾದ , ’ಇದನ್ನು ಮಾಡು, ಇದನ್ನು ಬಿಡು’ ಎನ್ನುವ ವಿಧಿ ನಿಷೇಧಗಳೆನ್ನಬಹುದಾದ ಅಂಕಿತಕ್ಕೆ ತನ್ನ ಉಳಿವಿಗಾಗಿ ಮನುಷ್ಯ ಕುಲ ಒಳಪಟ್ಟಿರಬಹುದು . ಆಗಿನ್ನೂ ಯಾವ ಧರ್ಮ ಶಾಸ್ತ್ರಕಾರನೂ ಕಣ್ಣು ತೆರೆದಿರಲಿಲ್ಲವಲ್ಲ . ಮನುಷ್ಯ ಕುಲವನ್ನು ಜಾತಿ,ಮತ , ಪಂಥ , ಸಿದ್ದಾಂತಗಳ ಆಧಾರದಲ್ಲಿ ವಿಂಗಡಿಸಲು ಕಾರಣ ಕರ್ತರಾದ ಮಾನವ ಜನಾಂಗದ ಮಾರ್ಗದರ್ಶಕ ಕಂದಮ್ಮಗಳು , ಇನ್ನೂ ಅವರವರ ತಾಯಂದಿರ ಉಡೀಗಳಲ್ಲಿ ಆಡುವ ಕಾಲ ಕೂಡಾ ಮುಂದೆಲ್ಲೋ ಬಲು ದೂರದ , ಕಾಲ ಗರ್ಭದ , ಮಹಾನ್ ಅಂಧಕಾರದಲ್ಲಿನ ಅನಂತ ಭವಿಷ್ಯತ್ತಿನಲ್ಲಿ ಅಡಗಿ ಹೋಗಿತ್ತು .

ಮತ್ತೆನಕ್ಕಲ್ಲದಿದ್ದರೂ ಮನುಷ್ಯರ ನಡುವೆ ವೈಮನಸ್ಯಕ್ಕೆ ಆರಂಭಿಕ ಕಾರಣಗಳಾಗಬಹುದಾಗಿದ್ದ , ಗಂಡು ಹೆಣ್ಣುಗಳ ನಡುವಣ ಸಂಬಂಧದ ಸೀಮಾವಲಯದ ಗಡಿಯ ನಿರ್ಧಾರದ ಅಗತ್ಯಗಳಿದ್ದವು .ಮಣ್ಣು ಎಂದು ಕರೆಯಲಾಗದಿದ್ದರೂ ಇರುವಿಕೆಗೆ ಅಗತ್ಯವಾದ ನೆಲದ ಹಂಚಿಕೆಯ ವಿಷಯದಲ್ಲಿ ಮೊದಲ ಕಟ್ಟುಪಾಡುಗಳು ಮಸುಕಾಗಿ ಆರಂಭವಾಗತೊಡಗಿರಬಹುದು . ಗಂಡು ಗಂಡನ ರೂಪಕ್ಕೆ ; ಹೆಣ್ಣು ಹೆಂಡತಿ ರೂಪಕ್ಕೆ ಬರಲು ಇನ್ನೂ ಹತ್ತಾರು ಸಾವಿರ ವರ್ಷಗಳ ಕಾಲ ಪರಿಪಕ್ವತೆಯ ಸನ್ನಿವೇಶವೇ ಇದ್ದರೂ , ಆರಂಭಿಕ ಯುಕ್ತಾಯುಕ್ತತೆಯ ರೂಪ ರೇಷೆಗಳು ಮಸುಕು ಮಸುಕಾಗಿ ಮೂಡತೊಡಗಿರಬಹುದು . ಕನಿಷ್ಟ ಬುಡಕಟ್ಟಿನೊಳಗಣ ಸಂಬಂಧಗಳ ಕಟ್ಟುಪಾಡುಗಳು ಮೊಳೆಯತೊಡಗಿರಬಹುದು ; ಇಲ್ಲಿಯೂ ಸಹ ಕಾಡಿನ ನ್ಯಾಯ ಇದ್ದೇ ಇದ್ದಿರಬಹುದು .

ಇಂತಹ ವಿಷಯಗಳನ್ನು ತೆಗೆದುಕೊಂಡೇ ’ ಮೂಕಜ್ಜಿಯ ಕನಸು’ ಗಳಲ್ಲಿನ ಆದಿ ಮಾನವನ ಜೀವನವನ್ನು ಕಟ್ಟಿ ಕೊಡಲು ಕಾರಂತರು ಪ್ರಯತ್ನಿಸುತ್ತಾರೆ . ಅಲ್ಲಿ ಬರುವ ಗುಹಾ ವಾಸಿ ಮಾನವನ ಜೀವನ ಚಿತ್ರಣವೆಂಬುದು ಇಂತಹದೇ ಪರಿಕಲ್ಪನೆ . ಕಾದಂಬರಿಯಲ್ಲಿ ಬರುವ ವಿಭಿನ್ನ ಧರ್ಮಗಳ ಕಾಲಘಟ್ಟಗಳನ್ನು ಸೂಚಿಸುವುದೂ ಸಹ , ಮನುಷ್ಯ ನಡೆದು ಬಂದ ದಾರಿಯ ಹುಡುಕಾಟದ ಒಂದು ಭಾಗ . ಮನುಷ್ಯನ ಜೈವಿಕ ವಲಯದಲ್ಲಿ ಸಂಕೀರ್ಣವಾಗಿ ಮೇಳೈಸಿ , ಅವನ ಜೀವನ ವಿಧಾನದಲ್ಲಿ ಆಕ್ರಮಕ ರೂಪದಲ್ಲಿ ವ್ಯಾಪಿಸಿರುವ , ಲೈಂಗಿಕ ವ್ಯಾಪಾರಗಳ ನಿರೂಪಣೆಯೇ ಕಾದಂಬರಿಯ ಕೇಂದ್ರ ತಿರುಳು . ಇನ್ನು ಜನರ ಜೀವನ ಕ್ರಮದಲ್ಲಿ ಅಪಾರ ಪ್ರಭಾವ ಬೀರಿರುವ ನಂಬಿಕೆಗಳಲ್ಲಿ , ಧರ್ಮದ ಪಾತ್ರ ಪ್ರಾಧಾನವಾದುದು . ಈ ಧರ್ಮವೆಂಬುದೂ ಸಹ ಕಾಲದಿಂದ ಕಾಲಕ್ಕೆ ಬದಲಾವಣೆ ಹೊಂದುವ ; ಪ್ರಭುತ್ವ ಶಕ್ತಿಯ ಸಂಪರ್ಕದಿಂದ ಪಡೆದುಕೊಳ್ಳುವ ಪ್ರಬಲ ಆಯಾಮಗಳ ಚಿತ್ರಣ ಸಹ ’ಮೂಕಜ್ಜಿಯ ಕನಸುಗಳಲ್ಲಿ’ ಬಿಂಬಿತವಾಗುವ ಮುಖ್ಯ ವಿಷಯ .

ಧರ್ಮದ ಬಗೆಗಿನ ಸಂವಾದ , ಕಾರಂತರ ಕಾದಂಬರಿಗಳಲ್ಲಿ ಎಡೆಬಿಡದೆ ವ್ಯಾಪಕವಾಗಿರುವ ಒಂದು ಸೂತ್ರ .ಧರ್ಮದ ಕುರುಡು ನಂಬಿಕೆಗಳ ಮೊತ್ತವನ್ನು ಚುಚ್ಚಿ ಒಡೆದು ಹಾಕುತ್ತಲೇ ಅದರ ನೆಲೆಗಟ್ಟನ್ನು ಅನ್ವೇಷಿಸತೊಡಗುವುದು ; ಮನುಷ್ಯನ ಜೀವನದಲ್ಲಿ ಓತಪ್ರೋತವಾಗಿ ಹಬ್ಬಿರುವ , ಅವನ ಮನೋಮಯ ಕ್ಷೇತ್ರದಲ್ಲಿ ಒಂದು ನವಿರಾದ ತೆರೆಯಂತೆ ವ್ಯಾಪಿಸಿರುವ , ಅಲ್ಲಿಂದಲೇ ಕ್ಷೀಣವಾದ ಆದರೂ ಪ್ರಬಲವಾದ ತರಂಗಗಳನ್ನು ಪ್ರಸರಿಸುತ್ತಲೇ , ಅವನ ಜೀವನವನ್ನು ಪ್ರಭಾವಿಸುತ್ತಿರುವ ವಿಚಿತ್ರ ಶಕ್ತಿಯಾದ ಈ ಧಾರ್ಮಿಕ ಪ್ರಭಾವಲಯವನ್ನು ವಿಶ್ಲೇಷಿಸುವುದು ಅವರ ಸಾಹಿತ್ಯದಲ್ಲಿ ಇಷ್ಟವಾದ ನಡೆ . ಅದೂ ಸಹ ತಮ್ಮ ಅರಿವಿಗೆ ಬರುವಷ್ಟನ್ನೇ ಬಳಸಿ , ಉಳಿದುದು ತಿಳಿದಿಲ್ಲವೆನ್ನುವ ಪ್ರಾಮಾಣಿಕ ನೆಲೆಗಟ್ಟಿನ ಮೇಲೆ ಕಟ್ಟಿರುವ ತಾತ್ವಿಕ ದರ್ಶನ .

  • ವಿಮರ್ಶೆ
~.~
  • Login or register to post comments
  • 203 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾರಂತರ ಜೀವಂತ ಪಾತ್ರಗಳು -೫ (೧)
  • ಕಾರಂತರ ಜೀವಂತ ಪಾತ್ರಗಳು ೯ (೧)
  • ಕಾರಂತರ ಜೀವಂತ ಪಾತ್ರಗಳು ೮ (೧)
  • ಕಾರಂತರ ಜೀವಂತ ಪಾತ್ರಗಳು ೬ (೨)
  • ಕಾರಂತರ ಜೀವಂತ ಪಾತ್ರಗಳು ೬ (೧)
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕಾಡುಕೋಳಿಯ ಜಾಡು ಹಿಡಿದು...
  • ಅನ್ ಸೈಕ್ಲೋಪೀಡಿಯಾ - (ವಿಷಯ)ಮುಕ್ತ ವಿಶ್ವಕೋಶ
  • ಕೋಸಿ-ಬಿಹಾರದ ಕಣ್ಣೀರು
  • ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
  • ಬೂದಿಕೋಟೆ
  • ಅಬ್ಬ, ರಾಷ್ತ್ರಕ್ಕೇ ಅವಮಾನ!
  • ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
  • kishoreyc
    ಉ: ಚೈನಾ ೧೦೦ ನಾವು ೦
    August 29, 2008 - 10:02pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 24 ಅತಿಥಿಗಳು ಆನ್ಲೈನ್ ಇರುವರು.


ನನಗೆ ಯಾರೂ ಶತ್ರುಗಳಿಲ್ಲ. ಅವರೆಲ್ಲರೂ ಈಗಾಗಲೇ ಸತ್ತಿದ್ದಾರೆ

— ವಿನ್ ಸ್ಟನ್ ಚರ್ಚಿಲ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator